<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss'><id>tag:blogger.com,1999:blog-5939841257923965225</id><updated>2009-11-15T00:12:04.668+05:30</updated><title type='text'>ಸಲ್ಲಾಪ</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://sallaap.blogspot.com/feeds/posts/default'/><link rel='self' type='application/atom+xml' href='http://www.blogger.com/feeds/5939841257923965225/posts/default'/><link rel='alternate' type='text/html' href='http://sallaap.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/5939841257923965225/posts/default?start-index=26&amp;max-results=25'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email></author><generator version='7.00' uri='http://www.blogger.com'>Blogger</generator><openSearch:totalResults>88</openSearch:totalResults><openSearch:startIndex>1</openSearch:startIndex><openSearch:itemsPerPage>25</openSearch:itemsPerPage><entry><id>tag:blogger.com,1999:blog-5939841257923965225.post-1079156332625102945</id><published>2009-11-08T19:14:00.003+05:30</published><updated>2009-11-08T21:14:32.076+05:30</updated><title type='text'>"ತಮಂಧದ ಕೇಡು"----ಲೇ: ಅಮರೇಶ ನುಗಡೋಣಿ</title><content type='html'>&lt;a href="http://3.bp.blogspot.com/_Y2fZto9Dv1Y/SvaZXbzF9CI/AAAAAAAAAIc/dpBJGfwkPIw/s1600-h/Literature.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://3.bp.blogspot.com/_Y2fZto9Dv1Y/SvaZXbzF9CI/AAAAAAAAAIc/dpBJGfwkPIw/s200/Literature.jpg" /&gt;&lt;/a&gt;ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ ೧೯೬೦ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.&lt;br /&gt;ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು.&lt;br /&gt;&lt;br /&gt;ಊಳಿಗಮಾನ್ಯಸಂಸ್ಕೃತಿಯ ಮೂಲರೂಪ ಅರ್ಥಾತ್ classical model of feudal structure ಇದರ ಮುಖ್ಯ ಗುಣವೆಂದರೆ, ಶೋಷಿತನು ತನ್ನ ತನು ಹಾಗು ಮನವನ್ನಷ್ಟೇ ಅಲ್ಲ, ತನ್ನ ಆತ್ಮವನ್ನೂ ಸಹ ತನ್ನ ಯಜಮಾನನ ಊಳಿಗಕ್ಕೆ ಬೇಶರತ್ತಾಗಿ ಒಪ್ಪಿಸಿಬಿಟ್ಟಿರುತ್ತಾನೆ. ಇದಕ್ಕೆ ಪ್ರತಿಯಾಗಿ ಯಜಮಾನನು ದರ್ಪ, ದಬ್ಬಾಳಿಕೆ ಹಾಗು ಸರ್ವಸ್ವಾಮಿತ್ವವನ್ನು ಪ್ರದರ್ಶಿಸುತ್ತಾನೆ. ಇಂತಹ ತಮಂಧದ ಕೇಡಿನಿಂದ ಹೊರಬರಬೇಕಾದರೆ ಶಿಕ್ಷಣದ ಬೆಳಕು ಬೇಕು. ಆದರೆ ಈ ವ್ಯವಸ್ಥೆಯು ಅಂತಹ ಶಿಕ್ಷಿತ ಪ್ರತಿಭಟನಾಕಾರರನ್ನೂ ಸಹ ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕಿ ಬಿಡುತ್ತದೆ.&lt;br /&gt;&lt;br /&gt;ನುಗಡೋಣಿಯವರ "ತಮಂಧದ ಕೇಡು" ಎನ್ನುವ ಕತೆಯಲ್ಲಿ ದುರುಗ ಎನ್ನುವ ಜೀತದಾಳಿನ ದುಃಸ್ವಪ್ನದೊಂದಿಗೆ ಕತೆ ಪ್ರಾರಂಭವಾಗುತ್ತದೆ. ತನ್ನ ಒಡೆಯನಾದ ಶಾಂತಗೌಡನ ಜಮೀನಿನಲ್ಲಿರುವ ಎರಡು ದೊಡ್ಡ ಮರಗಳ ನಡುವೆ ಜೋಪಡಿ&lt;br /&gt;ಹಾಕಿಕೊಂಡು, ದುರುಗ ತನ್ನ ಹೆಂಡತಿ ಚಂದವ್ವ ಹಾಗು ಜೋಳಿಗೆ ಕೂಸು ಚೆನ್ನಮಲ್ಲಪ್ಪನೊಂದಿಗೆ ಬದುಕು ಸಾಗಿಸುತ್ತಿದ್ದಾನೆ.&lt;br /&gt;ಒಡೆಯನಿಗೆ ನಿಷ್ಠೆಯಿಂದ ದುಡಿಯುವದರಿಂದ ದುರುಗ ಶಾಂತಗೌಡನ ನೆಚ್ಚಿನ ಆಳಾಗಿದ್ದಾನೆ. ಶಾಂತಗೌಡ ‘ದುರುಗಾ’ ಎಂದು ಕೂಗಿದಾಗ, ದುರುಗನಿಗೆ ಇದು ಪುಣ್ಯದ ಕರೆಯಂತೆ ಕೇಳಿಸುವಷ್ಟು ಈತ ಶಾಂತಗೌಡನ ದಾಸನಾಗಿದ್ದಾನೆ.&lt;br /&gt;&lt;br /&gt;ಇಂತಹ ದುರುಗನ ಚಂದದ ಹೆಂಡತಿ ಚಂದಮ್ಮನ ಮೇಲೆ ಶಾಂತಗೌಡನಿಗೆ ಮನಸ್ಸಾಗುತ್ತದೆ.&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/_Y2fZto9Dv1Y/SvagNCcjLGI/AAAAAAAAAIk/LNh5wFH61-w/s1600-h/Literature+016.jpg" imageanchor="1" style="margin-left: 1em; margin-right: 1em;"&gt;&lt;img border="0" height="337" src="http://4.bp.blogspot.com/_Y2fZto9Dv1Y/SvagNCcjLGI/AAAAAAAAAIk/LNh5wFH61-w/s640/Literature+016.jpg" width="403" /&gt;&lt;/a&gt;&lt;br /&gt;&lt;/div&gt;&lt;br /&gt;ಚಂದಮ್ಮ ತನ್ನ ದಣಿಗೆ ಪ್ರತಿಭಟನೆ ಇಲ್ಲದೆ ವಶವಾದಳು. ಆದರೆ ಈ ಕೆಂಡವನ್ನು ಮನದಲ್ಲಿಯೇ ಇಟ್ಟುಕೊಂಡಿರಲು ಅವಳಿಂದ ಸಾಧ್ಯವಾದೀತೆ? ಕೊನೆಗೊಮ್ಮೆ ತನ್ನ ಗಂಡ ದುರುಗನೆದುರಿಗೆ ಅವಳು ತನ್ನ ಸಂಕಟವನ್ನು ಬಿಚ್ಚಿಟ್ಟಳು. ದುರುಗನಾದರೋ ತನ್ನ ತನು, ಮನಗಳನ್ನು ತನ್ನ ದಣಿಗೆ ಒಪ್ಪಿಸಿಬಿಟ್ಟ ಊಳಿಗದಾಳು. ಆತ ಏನು ಮಾಡಿಯಾನು?&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_Y2fZto9Dv1Y/SvahkPXOMzI/AAAAAAAAAIs/hzWDlsuF3Hk/s1600-h/Literature+015.jpg" imageanchor="1" style="margin-left: 1em; margin-right: 1em;"&gt;&lt;img border="0" height="221" src="http://3.bp.blogspot.com/_Y2fZto9Dv1Y/SvahkPXOMzI/AAAAAAAAAIs/hzWDlsuF3Hk/s400/Literature+015.jpg" width="338" /&gt;&lt;/a&gt;&lt;br /&gt;&lt;/div&gt;ತಪ್ಪು ಮಾಡಿದವನು ದಣಿ. ಆದರೆ ದುರುಗನೇ ಆತನ ಕಾಲಿಗೆ ಬಿದ್ದು ಅತ್ತು ಬಿಡುತ್ತಾನೆ! ತನ್ನ ಹೆಂಡತಿಯನ್ನು ಮರಳಿ ಕರೆ ತರುತ್ತಾನೆ. ಶಾಂತಗೌಡ ದಣಿಯ ಹಕ್ಕನ್ನು ದುರುಗನ ಹೆಂಡತಿಯ ಮೇಲೆ ಮರುಸ್ಥಾಪಿಸುತ್ತಾನೆ. ಇಷ್ಟಾದರೂ ದುರುಗ ಆ ಹಳ್ಳಿಯನ್ನು ಬಿಟ್ಟು, ತನ್ನ ದಣಿಯನ್ನು ಬಿಟ್ಟು ಬೇರೆಲ್ಲೂ ಹೋಗುವದಿಲ್ಲ! ಯಾಕೆಂದರೆ ಆತ ತನ್ನ ದಾಸ್ಯತ್ವವನ್ನು ಕಾಯಾ, ವಾಚಾ, ಮನಸಾ ಒಪ್ಪಿಕೊಂಡು ಬಿಟ್ಟಿದ್ದಾನೆ.&lt;br /&gt;ಇತ್ತ ಚಂದಮ್ಮನೂ ಬಹಳ ದಿನ ಬದುಕುವದಿಲ್ಲ. ದುರುಗನ ಮಗ ಊರ ಮಗನಾಗಿ ಬೆಳೆದವನು ಹೆಚ್ಚಿನ ಕಲಿಕೆಗಾಗಿ ಶಹರಕ್ಕೆ ಹೋಗುತ್ತಾನೆ. ಯಜಮಾನ ಶಾಂತಗೌಡ ತನ್ನ ನೆಚ್ಚಿನ ಬಂಟನ ಮಗನ ಶಿಕ್ಷಣಕ್ಕೆ ಉದಾರವಾಗಿ ನೆರವು ನೀಡುತ್ತಾನೆ. ಚೆನ್ನಮಲ್ಲಪ್ಪ ಆ ಶಹರದ ಶಾಲೆಯಲ್ಲಿಯೇ ಶಿಕ್ಷಕನಾಗುತ್ತಾನೆ.&lt;br /&gt;&lt;br /&gt;ಶಾಂತಗೌಡನ ಒಬ್ಬಳೇ ಸಂತಾನವಾದ ಅಕ್ಕಮಹಾದೇವಿ ಕಲಿಯಲೆಂದು ಶಹರದಲ್ಲಿಯೇ ಇದ್ದವಳು ಚೆನ್ನಮಲ್ಲಪ್ಪನಲ್ಲಿ ಅನುರಕ್ತಳಾಗುತ್ತಾಳೆ. ಈ ಆಘಾತಕಾರಿ ಸುದ್ದಿ ತನಗೆ ಬಂದು ಮುಟ್ಟಿದೊಡನೆಯೆ ದುರುಗ ನಿರ್ವಿಣ್ಣನಾಗಿ ತನ್ನ ಮಗನಿಗೆ ಬುದ್ಧಿ ಹೇಳುತ್ತಾನೆ. ಆ ಬುದ್ಧಿಮಾತಿನಲ್ಲೂ ಸಹ ಆತನ ದಾಸ್ಯಭಾವ ಹೇಗೆ ಮೇಲುಗೈಯಾಗಿದೆಯೆನ್ನುವದನ್ನು ನೋಡಿರಿ:&lt;br /&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_Y2fZto9Dv1Y/Sva_6C5WRDI/AAAAAAAAAI0/sNa7kMUMxic/s1600-h/Literature+017.jpg" imageanchor="1" style="margin-left: 1em; margin-right: 1em;"&gt;&lt;img border="0" height="260" src="http://3.bp.blogspot.com/_Y2fZto9Dv1Y/Sva_6C5WRDI/AAAAAAAAAI0/sNa7kMUMxic/s320/Literature+017.jpg" width="337" /&gt;&lt;/a&gt;&lt;br /&gt;&lt;/div&gt;"ನನ್ಗ ಇಲ್ಲಿ ಬುಡಾದ ನಂಟದ" ಎಂದು ಹೇಳುವ ದುರುಗನಿಗೆ ಇರುವ ನಂಟು ಎಂತಹದು? ದುರುಗ ಇರುತ್ತಿದ್ದ ಮರಗಳ ನಡುವಿನ ಜೋಪಡಿ ಈಗಿಲ್ಲ. ಮರಮಟ್ಟುಗಳನ್ನು ಮಾಡಿಸಲು ಶಾಂತಗೌಡ ಆ ಮರಗಳನ್ನು ಕಡಿಸಿ ಹಾಕಿದ್ದಾನೆ. ದುರುಗನಿಗೆ ಹಾಗೂ ನೂರಾರು ಹಕ್ಕಿಗಳಿಗೆ ಆಸರೆಯಾಗಿದ್ದ ಆ ಮರಗಳು, ಯಜಮಾನಿಕೆಯ ಉಪಭೋಗಕ್ಕಾಗಿ ನಷ್ಟವಾಗಿವೆ. ದುರುಗ ಹಾಗು ಆ ಮರಗಳ ನಡುವೆ ಭಾವನಾತ್ಮಕ ಸಂಬಂಧವಿತ್ತು. ದುರುಗ ದೈನಾಸಪಡುತ್ತ ಆ ಮರಗಳನ್ನು ಉಳಿಸಲು ಶಾಂತಗೌಡನಿಗೆ ಬೇಡಿಕೊಳ್ಳುವದು ಹೀಗೆ:&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_Y2fZto9Dv1Y/SvbBxn7cefI/AAAAAAAAAI8/myNZjUwy6qQ/s1600-h/Literature+021.jpg" imageanchor="1" style="margin-left: 1em; margin-right: 1em;"&gt;&lt;img border="0" height="126" src="http://3.bp.blogspot.com/_Y2fZto9Dv1Y/SvbBxn7cefI/AAAAAAAAAI8/myNZjUwy6qQ/s320/Literature+021.jpg" width="388" /&gt;&lt;/a&gt;&lt;br /&gt;&lt;/div&gt;ಇದಕ್ಕೆ ಪ್ರತಿಯಾಗಿ ಶಾಂತಗೌಡನಲ್ಲಿರುವದು ದರ್ಪ ಹಾಗು ಸಿಟ್ಟಿನ ಸ್ವಭಾವ. ಎಲ್ಲವೂ ತನಗಾಗಿಯೇ, ತನ್ನ ಉಪಭೋಗಕ್ಕಾಗಿಯೇ ಇರುವದು ಎನ್ನುವ ಅಹಂಭಾವ. (‘ಶಾಂತಗೌಡ’ ಎನ್ನುವ ಹೆಸರಿನ ಅಸಂಗತತೆಯನ್ನು ಗಮನಿಸಿರಿ.) ದುರುಗನ ಮೇಲಿನ ತನ್ನ ಸಿಟ್ಟನ್ನು ಆತ ಇತರ ಆಳುಗಳ ಮೇಲೆ ಹಾಗು ಜಾನುವಾರುಗಳ ಮೇಲೆ ತಿರುಗಿಸುವದರ ವರ್ಣನೆ ಹೀಗಿದೆ:&lt;br /&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_Y2fZto9Dv1Y/SvbDmNd5PCI/AAAAAAAAAJM/vpoanE4TqJc/s1600-h/Literature+018.JPG" imageanchor="1" style="margin-left: 1em; margin-right: 1em;"&gt;&lt;img border="0" height="527" src="http://2.bp.blogspot.com/_Y2fZto9Dv1Y/SvbDmNd5PCI/AAAAAAAAAJM/vpoanE4TqJc/s320/Literature+018.JPG" width="430" /&gt;&lt;/a&gt;&lt;br /&gt;&lt;/div&gt;ಶಾಂತಗೌಡ ಹೊಳೆಯ ಈಚೆಯ ಹಳ್ಳಿಯಲ್ಲಿದ್ದರೆ, ಹೊಳೆಯ ಆಚೆಯ ಬದಿಯಲ್ಲಿ ಅವನ ಅಕ್ಕ ಇದ್ದಾಳೆ. ವಿಧವೆಯಾದ ಮೇಲೆ&lt;br /&gt;ತಾನೇ ಜಮೀನುದಾರಿಕೆಯನ್ನು ಗೌಡತಿಯ ಎಲ್ಲಾ ಗತ್ತಿನೊಂದಿಗೆ ನಡೆಯಿಸಿಕೊಂಡು ಹೋಗುತ್ತಿದ್ದಾಳೆ. ಸೇತುವೆ ಇಲ್ಲಿ ಇಲ್ಲದ್ದರಿಂದ ದುರುಗನೇ ಶಾಂತಗೌಡನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೊಳೆ ದಾಟಿಸುತ್ತಿದ್ದ.&lt;br /&gt;&lt;br /&gt;ಶಾಂತಗೌಡನ ಮಗಳನ್ನು ತನ್ನ ಸೊಸೆಯನ್ನಾಗಿ ಮಾಡಿಕೊಂಡರೆ, ತಮ್ಮನ ಆಸ್ತಿ ಎಲ್ಲ ತನಗೇ ಬರುವದೆನ್ನುವ ಒಳ ಆಸೆ ಈ ಅಕ್ಕನಿಗಿದೆ. ಆದರೆ ಅಕ್ಕಮಹಾದೇವಿ ಊಳಿಗದ ಆಳಾದ ದುರುಗನ ಮಗ ಚೆನ್ನಮಲ್ಲಪ್ಪನಲ್ಲಿ ಅನುರಕ್ತಳಾಗಿದ್ದಾಳೆ. ಶಾಂತಗೌಡನು ದುರುಗನ ಹೆಗಲ ಮೇಲೆ ಸವಾರಿ ಮಾಡಿಕೊಂಡು, ಹೊಳೆ ದಾಟಿ ತನ್ನ ಅಕ್ಕನಿದ್ದಲ್ಲಿಗೆ ಬಂದು ಅವಳೊಡನೆ ಈ ಸಮಸ್ಯೆಯ ಬಗೆಗೆ ಆಪ್ತಾಲೋಚನೆ ಮಾಡುತ್ತಾನೆ.&lt;br /&gt;&lt;br /&gt;ಯಜಮಾನಸಂಸ್ಕೃತಿಯ ಪಟ್ಟದಲ್ಲಿರುವ ವ್ಯಕ್ತಿಗೆ ತನ್ನ ಪಟ್ಟದ ಭದ್ರತೆಯೊಂದೇ ಮುಖ್ಯ. ಸ್ವಾರ್ಥಸಾಧನೆಯ ಕ್ರೌರ್ಯ ಈ ವ್ಯಕ್ತಿಯ ಅಂತರಾಳದಲ್ಲಿ ಲಿಂಗಭೇದವಿಲ್ಲದೇ ಹುದುಗಿರುತ್ತದೆ. ತನ್ನ ತಮ್ಮನಿಗೆ ಅವಳು ಕೊಡುವ ಸಲಹೆಯು ಅವಳ ತಮ್ಮನನ್ನೂ ಸಹ ಒಂದು ನಿಮಿಷ ನಡುಗಿಸಿ ಬಿಡುತ್ತದೆ:&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_Y2fZto9Dv1Y/SvbG8-IngBI/AAAAAAAAAJU/YiJGnLsXdUQ/s1600-h/Literature+013.jpg" imageanchor="1" style="margin-left: 1em; margin-right: 1em;"&gt;&lt;img border="0" height="203" src="http://3.bp.blogspot.com/_Y2fZto9Dv1Y/SvbG8-IngBI/AAAAAAAAAJU/YiJGnLsXdUQ/s400/Literature+013.jpg" width="325" /&gt;&lt;/a&gt;&lt;br /&gt;&lt;/div&gt;ಶಾಂತಗೌಡ ಹಳ್ಳಿಗೆ ಮರಳುವಾಗ ಮತ್ತೆ ದುರುಗನ ಮೇಲೆ ಸವಾರಿ ಮಾಡಿ ಹೊಳೆ ದಾಟಬೇಕು. ಹೊಳೆ ದಾಟುವಾಗ ತನ್ನ ದಣಿಯನ್ನು ಹೊಳೆಯಲ್ಲಿ ಮುಳುಗಿಸಿಬಿಡುವದು ದುರುಗನಿಗೆ ಸುಲಭವಾದ ಕೆಲಸ; ಆದರೆ ಸರಳವಾದ ಕೆಲಸವಲ್ಲ. ಯಾಕೆಂದರೆ ಜೀತದಾಳಾದ ಆತನು ತನ್ನ ಒಡೆಯನ ಕೇಡನ್ನು&amp;nbsp; ಕನಸುಮನಸಿನಲ್ಲೂ ಎಣಿಸಲಾರ. ದುರುಗನ ಮನದಲ್ಲಿ ನಡೆದ ತುಮುಲದ ವರ್ಣನೆಯನ್ನು ನುಗಡೋಣಿಯವರು ಈ ರೀತಿಯಾಗಿ ಮಾಡಿದ್ದಾರೆ:&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/_Y2fZto9Dv1Y/SvbIbX82_AI/AAAAAAAAAJc/hKf-lGh1-aU/s1600-h/Literature++020.JPG" imageanchor="1" style="margin-left: 1em; margin-right: 1em;"&gt;&lt;img border="0" height="707" src="http://4.bp.blogspot.com/_Y2fZto9Dv1Y/SvbIbX82_AI/AAAAAAAAAJc/hKf-lGh1-aU/s640/Literature++020.JPG" width="475" /&gt;&lt;/a&gt;&lt;br /&gt;&lt;/div&gt;ನುಗಡೋಣಿಯವರ ವೈಶಿಷ್ಟ್ಯವೆಂದರೆ, ಅವರು ಶೋಷಿತನ ಬವಣೆಯ ವರ್ಣನೆಗಿಂತ, ಶೋಷಣಾವ್ಯವಸ್ಥೆಯ ಚಿತ್ರಣಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಇಲ್ಲಿ ದರ್ಪವೇ ಮೂರ್ತಿವೆತ್ತ ಯಜಮಾನ ಹಾಗು ದಾಸ್ಯವೇ ಮೂರ್ತಿವೆತ್ತ ಊಳಿಗದಾಳನ್ನು ಕಾಣುತ್ತೇವೆ.&lt;br /&gt;ಈ ಶೋಷಣಾವ್ಯವಸ್ಥೆಯಲ್ಲಿ ಯಜಮಾನನ ಮನೆತನಕ್ಕೊಬ್ಬ ಹಿತಚಿಂತಕ ಗುರುಗಳೂ ಇರುತ್ತಾರೆ. ಆದರೆ ಬುದ್ಧಿ ಹೇಳುವ ಶಕ್ತಿ ಅವರಿಗಿರುವದಿಲ್ಲ. ಇಂತಹ ಕತೆಗಳ ಅನಿವಾರ್ಯ ದುರಂತವನ್ನು ನಿರ್ಲಿಪ್ತ ಶೈಲಿಯಲ್ಲಿ ಚಿತ್ರಿಸುವದು ನುಗಡೋಣಿಯವರ ಹೆಗ್ಗಳಿಕೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-1079156332625102945?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/1079156332625102945/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=1079156332625102945' title='23 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/1079156332625102945'/><link rel='self' type='application/atom+xml' href='http://www.blogger.com/feeds/5939841257923965225/posts/default/1079156332625102945'/><link rel='alternate' type='text/html' href='http://sallaap.blogspot.com/2009/11/blog-post.html' title='&quot;ತಮಂಧದ ಕೇಡು&quot;----ಲೇ: ಅಮರೇಶ ನುಗಡೋಣಿ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_Y2fZto9Dv1Y/SvaZXbzF9CI/AAAAAAAAAIc/dpBJGfwkPIw/s72-c/Literature.jpg' height='72' width='72'/><thr:total xmlns:thr='http://purl.org/syndication/thread/1.0'>23</thr:total></entry><entry><id>tag:blogger.com,1999:blog-5939841257923965225.post-2861375061313226924</id><published>2009-10-14T06:52:00.013+05:30</published><updated>2009-10-14T07:18:30.663+05:30</updated><title type='text'>ಪತ್ರಿಕಾಪ್ರದೂಷಣ</title><content type='html'>ಉತ್ತರ ಕರ್ನಾಟಕದಲ್ಲಿ&amp;nbsp; ರಾಜಕೀಯ ಹಾಗೂ ಸಾಮಾಜಿಕ ಜಾಗೃತಿಯ ಉದ್ದೇಶದಿಂದ ೧೯೩೩ನೆಯ ಇಸವಿಯಲ್ಲಿ , ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಬೆಳಗಾವಿಯಲ್ಲಿ ಪ್ರಾರಂಭವಾಯಿತು. ಅನೇಕ ವರ್ಷಗಳವರೆಗೆ ಈ ಪತ್ರಿಕೆಯು ತನ್ನ ಆದರ್ಶ ಮತ್ತು ಧ್ಯೇಯಗಳಿಗೆ ಅನುಸಾರವಾಗಿ ಅತ್ಯುತ್ತಮ ಕೆಲಸವನ್ನು ಮಾಡಿತು. ಈ ಪತ್ರಿಕೆಯ ಪೂರ್ವಕಾಲದ ಸಂಪಾದಕರಾದ ಮೊಹರೆ ಹಣಮಂತರಾಯರು, ಹ.ರಾ.ಪುರೋಹಿತರು ಹಾಗು ಸಂಪಾದಕವರ್ಗದಲ್ಲಿದ್ದ ಪಾ.ವೆಂ.ಆಚಾರ್ಯರು ಇವರೆಲ್ಲ ತಮ್ಮ ಶ್ರದ್ಧೆ ಹಾಗು ನಿಷ್ಠೆಯ ಪರಿಶ್ರಮದಿಂದ ಪತ್ರಿಕೆಯನ್ನು ಉನ್ನತ ಮಟ್ಟಕ್ಕೆ ತಲುಪಿಸಿದರು.&lt;br /&gt;&lt;br /&gt;ಕನ್ನಡದಲ್ಲಿ ಪತ್ರಿಕೆಗಳು ಬಳಸಬಹುದಾದ ಪ್ರಮಾಣಿತ ಪದಗಳು ಇನ್ನೂ ಇರದಂತಹ ಆ ಸಮಯದಲ್ಲಿ ‘ಸಂಯುಕ್ತ ಕರ್ನಾಟಕ’ವು ಇಂತಹ ಪತ್ರಿಕಾಪದಗಳನ್ನು ಅಂದರೆ standard journalistic terminologyಯನ್ನು ರೂಪಿಸಿತು. ಇದು ಪತ್ರಿಕಾಭಾಷೆಗೆ ‘ಸಂಯುಕ್ತ ಕರ್ನಾಟಕ’ವು ನೀಡಿದ ದೊಡ್ಡ ಕೊಡುಗೆಯಾಗಿದೆ.&lt;br /&gt;&lt;br /&gt;ಒಂದು ಕಾಲದಲ್ಲಿ ಪತ್ರಿಕೋದ್ಯಮವು ಲೋಕಶಿಕ್ಷಣದ ಸಾಧನವಾಗಿತ್ತು. ಇಂದು ಅದು ದೊಡ್ಡ ಉದ್ದಿಮೆಯಾಗಿದೆ. ಈ ಉದ್ದಿಮೆಯಲ್ಲಿ ಭಾಷೆಗೆ, ವ್ಯಾಕರಣಕ್ಕೆ ಅಥವಾ ಕಾಗುಣಿತಕ್ಕೆ ಏನೂ ಬೆಲೆ ಇಲ್ಲವೇನೋ ಎನ್ನುವ ಕಳವಳವು ‘ಸಂಯುಕ್ತ ಕರ್ನಾಟಕ’ದ ಓದುಗರನ್ನು ಬಾಧಿಸುತ್ತದೆ. ‘ಸಂಯುಕ್ತ ಕರ್ನಾಟಕ’ದ ನಿಯಮಿತ ಓದುಗನಾದ ನನಗೆ, ಈ ನನ್ನ ಪ್ರಿಯ ಪತ್ರಿಕೆಯಲ್ಲಿ ಐದು ನಮೂನೆಯ ತಪ್ಪುಗಳು ಕಂಡು ಬರುತ್ತಿವೆ. ಇವುಗಳನ್ನು ‘ಪತ್ರಿಕಾಪ್ರಪಂಚದ ಪಂಚ ಮಹಾಪಾತಕ’ಗಳು ಎಂದು ಕರೆದರೆ ತಪ್ಪಿಲ್ಲ. ಇದರಿಂದ ದುಃಖಿತನಾದ ನಾನು ನನ್ನ ಚಡಪಡಿಕೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನನ್ನ ತಿಳಿವಳಿಕೆಯಲ್ಲಿಯೇ ತಪ್ಪಿದ್ದರೆ, ದಯವಿಟ್ಟು ನನ್ನನ್ನು&amp;nbsp; ತಿದ್ದಲು ಕೋರಿಕೊಳ್ಳುತ್ತೇನೆ.&lt;br /&gt;&lt;br /&gt;(೧) ಕಾಗುಣಿತದ ತಪ್ಪುಗಳು:&lt;br /&gt;ಕಾಗುಣಿತದ ತಪ್ಪುಗಳು ಅತ್ಯಂತ ಪ್ರಾಥಮಿಕ ತಪ್ಪುಗಳು. ಅಚ್ಚುಮೊಳೆಗಳನ್ನು ಜೋಡಿಸಿ ಪತ್ರಿಕೆಗಳನ್ನು ಮುದ್ರಿಸುವ ಕಾಲವೊಂದಿತ್ತು. ಅಂತಹ ಸಮಯದಲ್ಲಿಯೂ ಸಹ ಮುದ್ರಣದೋಷಗಳು ವಿರಳವಾಗಿದ್ದವು. ಗಣಕಯಂತ್ರದ ಬಳಕೆ ಮಾಡುವ ಈ ಕಾಲದಲ್ಲಿ ಕಾಗುಣಿತದ ತಪ್ಪುಗಳು ಹೇರಳವಾಗಿ ಕಂಡುಬರುವದು ಆಘಾತಕರವಾಗಿದೆ. ಒಂದು ಪರಿಚ್ಛೇದದಲ್ಲಿ ಅಥವಾ ಒಂದು ಪುಟದಲ್ಲಿ ಕಾಗುಣಿತದ ಎಷ್ಟು ತಪ್ಪುಗಳು ಕಂಡು ಬರಬಹುದು? ‘ಸಂಯುಕ್ತ ಕರ್ನಾಟಕ’ದ ಒಂದೇ ಪುಟದಲ್ಲಿ ನಾನು ಸ್ವೈಚ್ಛಿಕ ಅವಲೋಕನ ಮಾಡಿದಾಗ ಹನ್ನೊಂದು ತಪ್ಪುಗಳು ಕಂಡು ಬಂದವು. ಇವು ಅಚ್ಚಿನ ದೋಷಗಳಲ್ಲ ; ಆದರೆ ಕಾಗುಣಿತದ ತಪ್ಪುಗಳು ಎನ್ನುವ ಸಂಗತಿಯನ್ನು ನಾನು ವಿಷಾದಪೂರ್ವಕವಾಗಿ ನಿಮ್ಮ ಗಮನಕ್ಕೆ ತರಬಯಸುತ್ತೇನೆ. ನಾನು ತಿಳಿದಂತಹ ಕೆಲವು ತಪ್ಪುಗಳನ್ನು ಉದಾಹರಣೆಗೆಂದು ನಿಮ್ಮ ಮುಂದೆ ಇಡುತ್ತಿದ್ದೇನೆ. Standard News Paper ಎಂದು ಭಾವಿಸಲಾದ ಪತ್ರಿಕೆಯಲ್ಲಿ ಇಷ್ಟು ತಪ್ಪುಗಳು ಕಾಣಬಾರದು, ಅಲ್ಲವೆ?&lt;br /&gt;&lt;br /&gt;&lt;b&gt;ದಿನಾಂಕ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ತಪ್ಪು&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಒಪ್ಪು&lt;/b&gt;&lt;br /&gt;೨೩--೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಸ್ಕೈಐವಿಂಗ್&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &amp;nbsp;&amp;nbsp; ಸ್ಕೈಡೈವಿಂಗ್&lt;br /&gt;೨೩--೯-೦೯&amp;nbsp;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp;&amp;nbsp; ಶೀಖರ&lt;b&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;/b&gt;ಶಿಖರ&lt;br /&gt;೨೬-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ವಿಶಿಷ್ಠ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ವಿಶಿಷ್ಟ&lt;br /&gt;೨೬-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ದಿಕ್ಷಿತಲು&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ದೀಕ್ಷಿತರು&lt;br /&gt;೨೬-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಪ್ರೀಟಿ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ಪ್ರೀತಿ&lt;br /&gt;೨೬-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ನಿಗಧಿತ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ನಿಗದಿತ &lt;br /&gt;೨೬-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಸ್ಕಂಧ್&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಸ್ಕಂದ&lt;br /&gt;೨೬-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಮಾಲಿದ್ದಾರೆ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ಮಾಡಲಿದ್ದಾರೆ&lt;br /&gt;೨೬-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಎದು &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಎಂದು&lt;br /&gt;೨೬-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಪ್ರೊಬೆಷನರಿ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಪ್ರೊಬೇಷನರಿ&lt;br /&gt;೨೬-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ಪರಿಶಿಷ್ಠ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ಪರಿಶಿಷ್ಟ &lt;br /&gt;೨೭-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ದಿಗ್ಭಂದನ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ದಿಗ್ಬಂಧನ&lt;br /&gt;೨೭-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಹಲ್ಯೆಯನ್ನು&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಹಲ್ಲೆಯನ್ನು&lt;br /&gt;೨೭-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಪರೀಶಿಲಿಸಿ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಪರಿಶೀಲಿಸಿ&lt;br /&gt;೨೭-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಘಂಟೇಪ್ಪನವರ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಘಂಟೆಪ್ಪನವರ&lt;br /&gt;೨೭-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅದಿಕಾರಿಗಳಲ್ಲಿ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅಧಿಕಾರಿಗಳಲ್ಲಿ&lt;br /&gt;೨೭-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ವಿಶ್ವಬ್ಯಾಂಕನಂಥ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ವಿಶ್ವಬ್ಯಾಂಕನಂತಹ&lt;br /&gt;೨೯-೯-೦೯ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ಬ್ರೀಜ್ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಬ್ರಿಜ್&lt;b&gt; &lt;/b&gt;&lt;br /&gt;೨೯-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮಥ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೃತ&lt;br /&gt;೨೯-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಹರ್ಷೋದ್ಘಾರ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಹರ್ಷೋದ್ಗಾರ&lt;br /&gt;೨೯-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಸ್ತಬ್ದ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಸ್ತಬ್ಧ&lt;br /&gt;೨೯-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಕೈಗೂಳ್ಳುವದಾಗಿ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಕೈಗೊಳ್ಳುವದಾಗಿ&lt;br /&gt;೨೯-೯-೦೯&amp;nbsp;&amp;nbsp;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಅನಿಷ್ಠಾನ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ಅನುಷ್ಠಾನ&lt;br /&gt;೨೯-೯-೦೯&amp;nbsp;&amp;nbsp;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಅಂಕೀತ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ಅಂಕಿತ &lt;br /&gt;೨೯-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಹರಿಸಿದ್ದಾರೆ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಹರಸಿದ್ದಾರೆ.&lt;br /&gt;೨೯-೯-೦೯&amp;nbsp;&amp;nbsp;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಶುಭಾಷಯ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp;&amp;nbsp; ಶುಭಾಶಯ&lt;br /&gt;೨೯-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ವಿಜಯದಶಿಮಿ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &amp;nbsp; ವಿಜಯದಶಮಿ&lt;br /&gt;೨೯-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅವ್ವಾಹತವಾಗಿ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅವ್ಯಾಹತವಾಗಿ&lt;br /&gt;೨೯-೯-೦೯&amp;nbsp;&amp;nbsp;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಪುನಶ್ಛೇತನ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ಪುನಶ್ಚೇತನ&lt;br /&gt;೨೯-೯-೦೯&amp;nbsp;&amp;nbsp;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ವಿಶಿಷ್ಠ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ವಿಶಿಷ್ಟ&lt;br /&gt;೩೦-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅನುಷ್ಟಾನ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅನುಷ್ಠಾನ&lt;br /&gt;೩೦-೯-೦೯&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮಧ್ಯಾನ್ಹದಿಂದ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮಧ್ಯಾಹ್ನದಿಂದ&lt;br /&gt;೩೦-೯-೦೯&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ಕಾಲ್ಕಿತಿತ್ತು &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಕಾಲ್ಕಿತ್ತಿತು&lt;br /&gt;&lt;br /&gt;&lt;b&gt;(೨) ವ್ಯಾಕರಣದೋಷಗಳು&lt;/b&gt;:&lt;br /&gt;ಕಾಗುಣಿತದ ತಪ್ಪುಗಳನ್ನು ಅಚ್ಚಿನ ದೋಷಗಳೆಂದು ಹೇಳಿ ಪಾರಾಗಬಹುದು. ಆದರೆ ವ್ಯಾಕರಣದ ತಪ್ಪುಗಳಿಗೆ ಯಾರು ಹೊಣೆ? ತಮ್ಮಲ್ಲಿ ಪರಿಶೀಲನೆಗೆ ಬಂದಂತಹ ವರದಿಗಳನ್ನು ಸಂಪಾದಕರು ಕಣ್ಣು ಮುಚ್ಚಿಕೊಂಡು ಓದುತ್ತಾರೆಯೆ? ಅಥವಾ ಕನ್ನಡ ವ್ಯಾಕರಣವನ್ನು ಚಿತ್ರಹಿಂಸೆಗೆ ಒಳಪಡಿಸುತ್ತಿರುವಾಗ ಇವರಿಗೆ ಏನೂ ನೋವಾಗುವದಿಲ್ಲವೆ? ಇದು ಸಂಪಾದಕರ ಹೊಣೆಗಾರಿಕೆ ಅಲ್ಲವೆ? ವ್ಯಾಕರಣದ ಮೃಗಯಾವಿಹಾರದ ಕೆಲವೊಂದು ಉದಾಹರಣೆಗಳು ಹೀಗಿವೆ:&lt;br /&gt;&lt;br /&gt;&lt;b&gt;೨೬-೯-೦೯&lt;/b&gt;&lt;br /&gt;(೧)ತಪ್ಪು: ಮಳೆಗೆ ಕೋಟ್ಯಂತರ ಆಸ್ತಿ ನಷ್ಟ&lt;br /&gt;ಒಪ್ಪು: ಮಳೆಯಿಂದ ಕೋಟ್ಯಂತರ ಆಸ್ತಿ ನಷ್ಟ&lt;br /&gt;(೨) ತಪ್ಪು: ಮಿಷಿನ್ ಗಳ&lt;br /&gt;ಒಪ್ಪು: ಮಶೀನುಗಳ&lt;br /&gt;&lt;b&gt;೨೭-೯-೦೯&lt;/b&gt;&lt;br /&gt;(೧) ತಪ್ಪು: ಸೂಕ್ತ ಆರೋಪಿಗಳನ್ನು&lt;br /&gt;ಒಪ್ಪು: ನೈಜ ಅಪರಾಧಿಗಳನ್ನು&lt;br /&gt;(ಟಿಪ್ಪಣಿ: ಸೂಕ್ತ ಎಂದರೆ ವಿಧಿ-ವಿಧಾನಗಳಲ್ಲಿ ಹೇಳಿದ ಮೇರೆಗೆ ಎಂದು ಅರ್ಥ.&lt;br /&gt;ಆರೋಪಿಗಳು ಅಪರಾಧಿಗಳಾಗಿರಬೇಕಿಲ್ಲ.)&lt;br /&gt;(೨) ತಪ್ಪು: ಬೆಳಗ್ಗೆ ನಿಲ್ದಾಣಕ್ಕೆ ಆಗಮಿಸಿತ್ತು.&lt;br /&gt;ಒಪ್ಪು: ಬೆಳಗಿನ ಸಮಯದಲ್ಲಿ ನಿಲ್ದಾಣಕ್ಕೆ ಆಗಮಿಸಿತ್ತು.&lt;br /&gt;(೩) ತಪ್ಪು: ಅಂತಾರಾಷ್ಟ್ರೀಯ (=inland)&lt;br /&gt;ಒಪ್ಪು: ಅಂತರರಾಷ್ಟ್ರೀಯ (=international)&lt;br /&gt;&lt;b&gt;೨೯-೯-೦೯&lt;/b&gt;&lt;br /&gt;(೧)&lt;b&gt; &lt;/b&gt;ತಪ್ಪು: ಪೋಲೀಸ ಠಾಣೆ ಸಂಪರ್ಕಿಸಲು&lt;br /&gt;ಒಪ್ಪು: ಪೋಲೀಸ ಠಾಣೆಯನ್ನು ಸಂಪರ್ಕಿಸಲು&lt;br /&gt;(೨) ತಪ್ಪು: ಜನತೆ ದಸರಾ ಹಬ್ಬವನ್ನು ಆಚರಿಸಿದರು&lt;br /&gt;ಒಪ್ಪು: ಜನತೆ ದಸರಾ ಹಬ್ಬವನ್ನು ಆಚರಿಸಿತು (ಅಥವಾ, ಜನರು .....ಆಚರಿಸಿದರು.)&lt;br /&gt;(೩) ತಪ್ಪು: ಶುಭ್ರವರ್ಣದ ಹೊಸ ಬಟ್ಟೆಗಳನ್ನು&lt;br /&gt;ಒಪ್ಪು: ಶುಭ್ರವಾದ ಹೊಸ ಬಟ್ಟೆಗಳನ್ನು&lt;br /&gt;(ಟಿಪ್ಪಣಿ: ಶುಭ್ರ=ಸ್ವಚ್ಛ. ವರ್ಣ ಶುಭ್ರವಾಗಿರುವದೊ ಅಥವಾ ಬಟ್ಟೆ ಶುಭ್ರವಾಗಿರುವದೊ?)&lt;br /&gt;&lt;br /&gt;&lt;b&gt;(೩) ಭಾಷೆಯ ತಪ್ಪುಗಳು: &lt;/b&gt;&lt;br /&gt;ವ್ಯಾಕರಣವು ಸಂಪಾದಕರಿಗೆ ಮಹತ್ವದ ವಿಷಯವೆಂದು ಅನ್ನಿಸಿರಲಿಕ್ಕಿಲ್ಲ ಎಂದು ಭಾವಿಸೋಣ. ಆದರೆ ಭಾಷೆಯ ತಪ್ಪು ಮಾತ್ರ ಒಂದು ಪತ್ರಿಕೆಯು ಎಂದೂ ಮಾಡಬಾರದ ತಪ್ಪು. ಓದುಗರನ್ನು ಸುಶಿಕ್ಷಿತರನ್ನಾಗಿ ಮಾಡುವದು ಯಾವುದೇ ಪತ್ರಿಕೆಯ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಪತ್ರಿಕೆಯ ಭಾಷೆಯನ್ನು ಪ್ರಮಾಣಿತ ಭಾಷೆ ಎಂದು ಗ್ರಹಿಸಿಕೊಳ್ಳುವ ಓದುಗರು ಭಾಷಾದೋಷಗಳನ್ನು ಅರಿಯದೇ ಅಂತರ್ಗತಗೊಳಿಸಿಕೊಳ್ಳುತ್ತಾರೆ. ಆ ತಪ್ಪುಗಳನ್ನು ತಾವೂ ಎಲ್ಲೆಡೆ ಹರಡುತ್ತಾರೆ. ಇದರಿಂದ ಾಷಾದೋಷವು ಸರ್ವವ್ಯಾಪಿಯಾಗಿ ಬಿಡುತ್ತದೆ. ‘ಸಂಯುಕ್ತ ಕರ್ನಾಟಕ’ದಲ್ಲಿಯ ಕೆಲವು ಭಾಷಾದೋಷಗಳನ್ನು ಗಮನಿಸೋಣ:&lt;br /&gt;"ಸಾರ್ವಜನಿಕ ಸ್ಥಳದಲ್ಲಿ ಗುಡಿ ನಿರ್ಮಾಣಕ್ಕೆ ಸುಪ್ರೀಂ ನಿರ್ಬಂಧ" ಎನ್ನುವ ಈ ವರದಿಯನ್ನು ನೋಡಿರಿ. ಸಂಯುಕ್ತ ಕರ್ನಾಟಕವು ಹಾಗೂ ಇತರ ಪತ್ರಿಕೆಗಳು ಅನೇಕ ವರ್ಷಗಳಿಂದ ‘ಸರ್ವೋಚ್ಚ ನ್ಯಾಯಾಲಯ’ ಎನ್ನುವ ಪದವನ್ನು ಬಳಸುತ್ತಲೇ ಬಂದಿವೆ. ಈ ಪದವು ಕನ್ನಡ ಓದುಗರಿಗೆ ಅರ್ಥವಾಗುವಂತಹ ಪದವೇ ಆಗಿದೆ. ಏಕಾಏಕಿಯಾಗಿ ಈ ಪದಕ್ಕೆ ಬದಲಾಗಿ&amp;nbsp; ‘ಸುಪ್ರೀಂ ಕೋರ್ಟ’ ಎನ್ನುವ ಆಂಗ್ಲ ಪದ ಬಳಸುವ ಅನಿವಾರ್ಯತೆಯನ್ನು ಸಂಪಾದಕರೇ ಹೇಳಬೇಕು! ಸರಿ ಬಿಡಿ, ಯಾವುದೋ ಗಡಿಬಿಡಿಯಲ್ಲಿ ಸಂಪಾದಕರು ಕನ್ನಡ ಪದ ನನಪಾಗದೇ ಆಂಗ್ಲ ಪದವನ್ನು ಉಳಿಸಿಕೊಂಡರು ಎಂದುಕೊಳ್ಳೋಣ. ಆದರೆ ಕನ್ನಡ ವಾಕ್ಯದ ಮಧ್ಯಭಾಗದಲ್ಲಿ ಆಂಗ್ಲ ಪದಪುಂಜವನ್ನು ಬಳಸಿಕೊಳ್ಳುವದರ ಕಾರಣವೇನು? ಮನೋರಮೆಯು ಮುದ್ದಣನಿಗೆ ಹೇಳುವಂತೆ ಇದು ಮುತ್ತಿನ ಸರದಲ್ಲಿ ಮೆಣಸನ್ನು ಪೋಣಿಸಿದಂತೆ ಅಲ್ಲವೆ? ಉದಾಹರಣೆಯನ್ನು ನೋಡಿರಿ:&lt;br /&gt;"ಸದಾ ಮಂತ್ರಿಗಳ ಕಾರುಬಾರಿನಲ್ಲಿದ್ದ ವಿಧಾನಸೌಧ ಇಂದು &lt;b&gt;ಫಾರ್ ಎ ಚೇಂಜ್&lt;/b&gt; ಅಧಿಕಾರಿಗಳ ದರ್ಬಾರಿನಲ್ಲಿ ಕಾಲ ಕಳೆಯುವಂತಾಗಿತ್ತು."&lt;br /&gt;ಸಂಪಾದಕರು ಓದುಗರೊಡನೆ ಹರಟೆ ಹೊಡೆಯುವ ಧಾಟಿಯಲ್ಲಿ ಸುದ್ದಿಯನ್ನು ಹೇಳುತ್ತಿದ್ದಾರೆಂದರೆ, ಈ ಶೈಲಿಯನ್ನು ಒಪ್ಪಿಕೊಳ್ಳಬಹುದು. ಆದರೆ ಗಂಭೀರ ವರದಿಗೆ ಇದು ತಕ್ಕ ಧಾಟಿಯೆನಿಸುವದಿಲ್ಲ. &lt;br /&gt;&lt;br /&gt;ಅಕ್ಟೋಬರ ೧೧ರಂದು ಪ್ರಕಟವಾದ ವರದಿಯ ಭಾಷೆ ಇನ್ನೂ ವಿಚಿತ್ರವಾಗಿದೆ:&lt;br /&gt;ಈ ವರದಿಯ ಮೊದಲನೆಯ ದೋಷವೆಂದರೆ ‘ಸವದತ್ತಿ’ಯನ್ನು ‘ಸೌಂದತ್ತಿ’ ಎಂದು ಗ್ರಾಮ್ಯವಾಗಿ ಬರೆದಿದ್ದು. ಈ ವರದಿಯ&amp;nbsp; ಪರಿಚ್ಛೇದ ಒಂದರ ಕೊನೆಯ ಸಾಲು ಹೀಗಿದೆ:&lt;br /&gt;"ಇತ್ತೀಚೆಗೆ ಸುರಿದ ದಾರಕಾರ ಮಳೆಯ ಕೊನೆಯ ದಿನ ತನ್ನ ಕಿರಿಯ ಮಗನ ಮಾತು ನಿರ್ಲಕ್ಷಿಸಿ ಪ್ರತಿದಿನ ಸ್ಥಳದಲ್ಲಿ ಮಲಗಿಕೊಂಡಿದ್ದರೆ ಆತನ ಕುಟುಂಬಕ್ಕೆ ಇಂದು ಬೆಳಕು ಕಾಣುತ್ತಿರಲಿಲ್ಲ."&lt;br /&gt;ಅರ್ಥವಾಯಿತೆ? ಸ್ವಲ್ಪ ತಿಣುಕಾಡಿದರೆ ಅರ್ಥ ಮಾಡಿಕೊಳ್ಳುವದು ಕಷ್ಟವೇನಲ್ಲ. ಆದರೆ ಸರಿಯಾದ ವಾಕ್ಯ ಹೀಗಿರಬೇಕಿತ್ತು:&lt;br /&gt;"ಇತ್ತೀಚೆಗೆ ಸುರಿದ ಧಾರಾಕಾರ ಮಳೆಯ ಕೊನೆಯ ದಿನ ತನ್ನ ಕಿರಿಯ ಮಗನ ಮಾತನ್ನು ನಿರ್ಲಕ್ಷಿಸಿ ಪ್ರತಿ ದಿನದಂತೆಯೆ ಮಲಗಿಕೊಂಡಿದ್ದರೆ, ಆತನ ಕುಟುಂಬವು ಇಂದು ಬೆಳಕನ್ನು ಕಾಣುತ್ತಿರುತ್ತಿಲ್ಲ."&lt;br /&gt;&lt;br /&gt;&lt;b&gt;(೪) ವರದಿಯ ದೋಷಗಳು:&lt;/b&gt;&lt;br /&gt;ವರದಿಯ ದೋಷಗಳಿಗಾಗಿ ಈ ವರದಿಗಳನ್ನು ನೋಡಬಹುದು:&lt;br /&gt;ಮೊದಲನೆಯ ವರದಿ ‘ಸಂಯುಕ್ತ ಕರ್ನಾಟಕ’ದಲ್ಲಿ ಸಪ್ಟಂಬರ ೩೦ರಂದು ಮೂರನೆಯ ಪುಟದಲ್ಲಿ ಪ್ರಕಟವಾಗಿದೆ. ಒಳ್ಳಯ ವರದಿಗೆಬೇಕಾದ ನಿಖರತೆ ಹಾಗೂ ಸಂಕ್ಷಿಪ್ತತೆಯ ಬದಲಾಗಿ ಜೊಳ್ಳು ಜೊಳ್ಳಾದ ವರ್ಣನೆ ಇಲ್ಲಿದೆ ಎಂದು ನನ್ನ ಅನಿಸಿಕೆ.&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_Y2fZto9Dv1Y/StUsMozcfdI/AAAAAAAAAIM/w3FxWbOQBuQ/s1600-h/sk+027.jpg" imageanchor="1" style="margin-left: 1em; margin-right: 1em;"&gt;&lt;img border="0" src="http://2.bp.blogspot.com/_Y2fZto9Dv1Y/StUsMozcfdI/AAAAAAAAAIM/w3FxWbOQBuQ/s400/sk+027.jpg" /&gt;&lt;/a&gt;&lt;br /&gt;&lt;/div&gt;&lt;br /&gt;"ಜಿಲ್ಲೆಯಾದ್ಯಂತ ಇಂದು ಮಧ್ಯಾನ್ಹದಿಂದ ಬಿಟ್ಟುಬಿಡದೇ ಮಳೆ ಸುರಿದ ಹಿನ್ನೆಲೆಯಲ್ಲಿ ಎಲ್ಲೆಡೆ ನೀರೇ ನೀರು." ಎಂದು ಈ ವರದಿ ಪ್ರಾರಂಭವಾಗುತ್ತದೆ.&lt;br /&gt;ಧಾರವಾಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ. ಕಲಘಟಗಿಯಂತಹ ಮಲೆನಾಡು ಹಾಗೂ ನವಲಗುಂದದಂತಹ ಬಯಲಸೀಮೆ ಈ ಜಿಲ್ಲೆಯಲ್ಲಿವೆ. ಇವುಗಳ ನಡುವಿನ ನೇರ ಅಂತರವು ಸುಮಾರು ೬೦ ಕಿಲೊಮೀಟರುಗಳಷ್ಟಾದರೂ ಇದ್ದೀತು. ’ಇಲ್ಲೆಲ್ಲಾ ಮಳೆ ಇಂದು ಮಧ್ಯಾಹ್ನವೇ ಪ್ರಾರಂಭವಾಯಿತೆ’, ಎನ್ನುವ ಸಂದೇಹ ಓದುಗನಿಗೆ ಬಾರದಿರದು. ಪತ್ರಿಕೆಯು ಇಂತಹ ಸಂದರ್ಭಗಳಲ್ಲಿ ಸಂದಿಗ್ಧ ಭಾಷೆಯನ್ನು ಬಳಸಬಾರದು. ಎರಡನೆಯದಾಗಿ ಮಳೆ ಸುರಿದದ್ದು ಹಿನ್ನೆಲೆಯಾಗುವದಿಲ್ಲ, ಕಾರಣವಾಗುತ್ತದೆ. ಈಗ ಈ ವಾಕ್ಯದ ವ್ಯಾಕರಣದ ತಪ್ಪುಗಳನ್ನಷ್ಟು ಗಮನಿಸಿರಿ: ‘ಮಧ್ಯಾಹ್ನ’ ಪದವನ್ನು ‘ಮಧ್ಯಾನ್ಹ’ ಎಂದು ಬರೆಯಲಾಗಿದೆ. ’ಬಿಟ್ಟೂಬಿಡದೆ’ ಎನ್ನುವದನ್ನು ‘ಬಿಟ್ಟುಬಿಡದೇ’ ಎಂದು ಬರೆಯಲಾಗಿದೆ.&lt;br /&gt;&lt;br /&gt;ಈ ಒಂಟಿ ಸಾಲಿನ ಮುಂದಿನ ಪರಿಚ್ಛೇದವನ್ನು ಈಗ ಗಮನಿಸಿರಿ:&lt;br /&gt;"ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ನಂತರ ಮಧ್ಯಾನ್ಹ 2ರ ಸುಮಾರಿಗೆ ಸಣ್ಣಗೆ ಸುರಿಯುತ್ತಿದ್ದ ಮಳೆ ಒಮ್ಮಿಂದೊಮ್ಮೆಲೇ ಜೋರಾಗಿ ಸುರಿಯಲು ಪ್ರಾರಂಭಿಸಿತು. ಮಳೆ ಬೀಳುವ ಸಂದರ್ಭದಲ್ಲಿ ಗಾಳಿಯೂ ಬೀಸುತ್ತಿರಲಿಲ್ಲ."&lt;br /&gt;ಮೊದಲನೆಯದಾಗಿ, ವರದಿಗಾರರು ಜಿಲ್ಲೆಯನ್ನು ಬಿಟ್ಟುಕೊಟ್ಟು ಧಾರವಾಡ ಶಹರಕ್ಕೆ ಜಿಗಿದಂತೆ ಭಾಸವಾಗುತ್ತದೆ. ಎರಡನೆಯದಾಗಿ ಸಾಮಾನ್ಯ ಓದುಗನಿಗೆ ನಿಖರವಾದ ಹಾಗೂ ಸಂಕ್ಷಿಪ್ತವಾದ ಮಾಹಿತಿ ಬೇಕಾಗಿರುತ್ತದೆ. ಸಂತೆಯಲ್ಲಿ ಭೆಟ್ಟಿಯಾದ ಜನರು ತಮ್ಮತಮ್ಮಲ್ಲಿ ವಿನಿಮಯ ಮಾಡಿಕೊಳ್ಳುವಂತಹ ಜೊಳ್ಳು ಮಾತಿನಲ್ಲಿ ಅವನಿಗೆ ಆಸಕ್ತಿ ಇರುವದಿಲ್ಲ. ಮಳೆ ಒಮ್ಮಿಂದೊಮ್ಮೆಲೆ ಜೋರಾಯಿತೊ ಅಥವಾ ಕಾಲಕ್ರಮೇಣ ಜೋರಾಯಿತೊ ; ಮಳೆ ಬೀಳುವ ಸಂದರ್ಭದಲ್ಲಿ ಗಾಳಿ ಬೀಸುತ್ತಿತ್ತೊ ಇಲ್ಲವೊ ಎನ್ನುವ ಮಾಹಿತಿ ಓದುಗನಿಗೆ ಅನವಶ್ಯಕವಾಗಿದೆ. ಇಂತಿಷ್ಟು ಮಿಲಿಮೀಟರ ಮಳೆ ಆಗಿದೆ ಎಂದು ತಿಳಿಯುವದಷ್ಟೇ ಅವನಿಗೆ ಬೇಕಾಗಿರುತ್ತದೆ.&lt;br /&gt;&lt;br /&gt;ಇದರ ಮುಂದಿನ ಪರಿಚ್ಛೇದದಲ್ಲಿ ಅಸ್ಪಷ್ಟತೆ ಇನ್ನೂ ಹೆಚ್ಚಾಗಿದೆ:&lt;br /&gt;"ಸಂಜೆ 4ರ ಸಮಯದಲ್ಲಿ ಆಕಾಶದಲ್ಲಿ ಕಪ್ಪನೇ ಮೋಡಗಳು ಗೋಚರಿಸುತ್ತಿತ್ತು. ನಂತರ ಐದು ನಿಮಿಷಗಳ ಕಾಲ ಮಳೆ ನಿಂತಿತಾದರೂ ಮತ್ತೆ ಸುರಿಯಲು ಪ್ರಾರಂಬಿಸಿತು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಳ್ಳ ತುಂಬಿದ ವರದಿಗಳು ಬಂದಿವೆ. ನಗರದ ತಗ್ಗು ಪ್ರದೇಶಗಳಾದ ಬಾವಿಕಟ್ಟಿ ಪ್ಲಾಟ್, ಜನ್ನತ್ ನಗರ ಮತ್ತು ಲಕ್ಷ್ಮಿಸಿಂಗನ ಕೆರೆಯಲ್ಲಿ ನೀರು ತುಂಬಿವೆಯಾದರೂ ಅನಾಹುತಗಳು ಸಂಭವಿಸಿಲ್ಲ. ನಗರದ ಗಟಾರುಗಳು ತುಂಬಿದ್ದು ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲಿಯೂ ಮಳೆ ಬಿದ್ದ ವರದಿಯಾಗಿವೆ. ಹೊಲಗಳಲ್ಲಿ ನೀರು ಹರಿದಿವೆ. ಹಳ್ಳಗಳಲ್ಲಿ ನೀರು ಬಂದಿವೆಯಾದರೂ ಸಂಚಾರಕ್ಕೆ ಅಡ್ಡಿಯಾಗಿಲ್ಲ."&lt;br /&gt;ವರದಿಯ ಪ್ರಕಾರ ಮೋಡ ಕವಿದ ವಾತಾವರಣ ಮುಂಜಾನೆಯಿಂದಲೇ ಇದೆ. ಮಳೆಯೂ ಸಹ ಬಿಟ್ಟೂಬಿಡದೇ ಬೀಳುತ್ತಿದೆ. ಅಂದ ಮೇಲೆ ಸಂಜೆ ನಾಲ್ಕರ ಸಮಯದಲ್ಲಿ ಆಕಾಶದಲ್ಲಿ ಕಪ್ಪನೆಯ ಮೋಡಗಳು ಗೋಚರಿಸುತ್ತಿದ್ದವು ಎಂದು ಹೇಳುವದರ ಔಚಿತ್ಯವೇನು? ಅಲ್ಲದೆ, "ಕಪ್ಪನೇ ಮೋಡಗಳು ಗೋಚರಿಸುತ್ತಿತ್ತು" ಎನ್ನುವದು ವ್ಯಾಕರಣದ ಕೊಲೆಯಲ್ಲವೆ?&lt;br /&gt;"ಐದು ನಿಮಿಷಗಳ ನಂತರ ಮಳೆ ಸುರಿಯಲಾರಂಭಿಸಿತು" ಅಂದರೆ, ನಾಲ್ಕು ಹೊಡೆದು ಐದು ನಿಮಿಷಕ್ಕೆ ಮಳೆ ಪ್ರಾರಂಭವಾಯಿತೆ?&lt;br /&gt;ಈ ಸಮಯವು ಇಡೀ ಧಾರವಾಡ ಜಿಲ್ಲೆಗೆ ಅನ್ವಯಿಸುವದೊ ಅಥವಾ ಧಾರವಾಡ ನಗರಕ್ಕೆ ಅನ್ವಯಿಸುವದೊ? ಧಾರವಾಡ ನಗರದಲ್ಲಿಯೇ ಒಂದೆಡೆ ಮಳೆ ಬೀಳುತ್ತಿದ್ದಾಗ, ಇನ್ನೊಂದೆಡೆ ಮಳೆ ಇರುವದಿಲ್ಲ. ಬಹುಶ: ಈ ಮಳೆ ವರದಿಗಾರರ ಮನೆಯ ಮೇಲೆ ಬೀಳುತ್ತಿತ್ತೇನೊ?!&lt;br /&gt;&lt;br /&gt;ನಗರದಲ್ಲಿ ಬೀಳುತ್ತಿದ್ದ ಮಳೆಯ ವರದಿ ಒಮ್ಮೆಲೆ ಹಳ್ಳಿಗಳಿಗೆ ಜಿಗಿದು, ಅಲ್ಲಿ ಹಳ್ಳಗಳು ತುಂಬಿದ್ದನ್ನು ಅವಲೋಕಿಸಿ,&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮತ್ತೆ ನಗರದಲ್ಲಿ ನೀರು ತುಂಬಿದ ಭಾಗಗಳ ವರ್ಣನೆಗೆ ಮರಳುತ್ತದೆ! ಇದರ ಮುಂದಿನ ಪರಿಚ್ಛೇದವಂತೂ ಕನ್ನಡ ಸಾಲೆಯ ಹುಡುಗನ ನಿಬಂಧ(--’ಒಂದು ಮಳೆಗಾಲದ ದಿನ’--)ದಂತೆ ಭಾಸವಾಗುತ್ತದೆ:&lt;br /&gt;"ಇಂದು ಸಂಜೆ ಜನರು ಕೊಡೆ ಹಿಡಿದುಕೊಂಡೇ ಅಡ್ಡಾಡುವ ದೃಶ್ಯ ಸಾಮಾನ್ಯವಾಗಿತ್ತು. ನಗರದಲ್ಲಿ ವಾಹನಗಳು ಪಕ್ಕಕ್ಕೆ ಹಾಯ್ದು ಹೋದರೆ ಅಲ್ಲಿ ನೀರಿನ ಸ್ನಾನ ಮಾಡಿಸುವದಂತೂ ಸತ್ಯವಿತ್ತು."&lt;br /&gt;&lt;b&gt; &lt;/b&gt;ವರದಿಯ ಕೊನೆಯ ಸಾಲಿನಲ್ಲಿ ‘ರವಿ ಕರಲಿಂಗಣ್ಣವರ’ ಎಂದು ಬಿಡಿಸಿ ಬರೆಯದೆ, ‘ರವಿಕರಲಿಂಗಣ್ಣವರ’ ಎಂದು ಕೂಡಿಸಿ ಬರೆಯಲಾಗಿದೆ. &lt;br /&gt;&lt;br /&gt;ಇದೇ ದಿನಾಂಕದ ಮತ್ತೊಂದು ಪುಟದಲ್ಲಿರುವ ವರದಿ ಹೀಗಿದೆ:&lt;br /&gt;"ಬರಗಾಲ ಪೀಡಿತ ಎಂದು ಘೋಷಿಸಲಾಗಿದ್ದ ಶಿರಹಟ್ಟಿ ಮತ್ತು ಮುಂಡರಗಿ ತಾಲೂಕಿನಲ್ಲಿ ಅಂಕಿ ಅಂಶಗಳ ಪ್ರಕಾರ ಉತ್ತಮವಾಗಿ ಮಳೆ ಸುರಿಯುತ್ತಿದೆ."&lt;br /&gt;"ಅಂಕಿ ಅಂಶಗಳ ಪ್ರಕಾರ ಮಳೆ ಸುರಿಯುತ್ತಿದೆ" ಎಂದು ಹೇಳಿದರೆ, ವಾಸ್ತವದಲ್ಲಿ ಹಾಗಿಲ್ಲ ಎನ್ನುವ ಅರ್ಥ ಹೊಮ್ಮುವದಿಲ್ಲವೆ? ಎರಡನೆಯದಾಗಿ&amp;nbsp; ಅಂಕಿ ಅಂಶಗಳು ಪತ್ರಿಕೆಯನ್ನು ತಲುಪಿದಾಗ ಮಳೆ ಸುರಿದು ಮುಗಿದಿರುತ್ತಿದೆ. ಆದುದರಿಂದ ‘ಮಳೆ ಸುರಿಯುತ್ತಿದೆ’ ಎಂದು ವರ್ತಮಾನಕಾಲದಲ್ಲಿ ಹೇಳಬಾರದು. ಮೂರನೆಯದಾಗಿ ಈ ಮಳೆ ಜನರಿಗೆ ಬೇಕಾಗಿರಲಿಲ್ಲ. ಆದುದರಿಂದ ‘ಉತ್ತಮವಾಗಿ’ ಎಂದು ವರ್ಣಿಸಬಾರದು ; ‘ಜೋರಾಗಿ’ ಎಂದು ಹೇಳಬಹುದಿತ್ತು.&lt;br /&gt;&lt;br /&gt;ಅಕ್ಟೋಬರ ೮ನೆಯ ದಿನಾಂಕದ ೫ನೆಯ ಪುಟದಲ್ಲಿ, ರಸಾಯನ ಶಾಸ್ತ್ರದಲ್ಲಿ ನೋಬೆಲ್ ಪದಕವನ್ನು ಪಡೆದ ಶ್ರೀ ರಾಮಕೃಷ್ಣನ್ ವೆಂಕಟರಾಮನ್ ಅವರನ್ನು "ಅಮೆರಿಕ ಮೂಲದ ಭಾರತೀಯ ವಿಜ್ಞಾನಿ" ಎಂದು ಬರೆಯಲಾಗಿದೆ. ಈ ವ್ಯತ್ಯಸ್ತ ವರ್ಣನೆಯನ್ನು ರೋಚಕ ಪ್ರಮಾದವೆಂದು ಭಾವಿಸಿ ಸಮಾಧಾನಪಟ್ಟುಕೊಳ್ಳಬೇಕಷ್ಟೆ!&lt;br /&gt;&lt;br /&gt;&lt;b&gt;(೫) ಮಾಹಿತಿಯ ತಪ್ಪುಗಳು:&lt;/b&gt;&lt;br /&gt;ಅಕ್ಟೋಬರ&lt;b&gt; &lt;/b&gt;೧೩ನೆಯ ದಿನಾಂಕದ ‘ಸಂಯುಕ್ತ ಕರ್ನಾಟಕ’ದ ‘ರಸಪ್ರಶ್ನೆ’ ವಿಭಾಗದಲ್ಲಿ ಕೇಳಲಾದ ಪ್ರಶ್ನೆ ಹಾಗೂ ಕೊಡಲಾದ ಉತ್ತರ ಹೀಗಿವೆ:&lt;br /&gt;ಪ್ರಶ್ನೆ: ‘ಸಂಸ್ಕಾರ’ ಚಲನಚಿತ್ರದ ನಿರ್ದೇಶಕರು ಯಾರು?&lt;br /&gt;ಕೊಟ್ಟ ಉತ್ತರ: ಗಿರೀಶ್ ಕಾರ್ನಾಡ್.&lt;br /&gt;ಇದು ತಪ್ಪು ಉತ್ತರ. ‘ಸಂಸ್ಕಾರ’ ಚಲನಚಿತ್ರವನ್ನು ನಿರ್ದೇಶಿಸಿದವರು ಪಟ್ಟಾಭಿ ರೆಡ್ಡಿಯವರು. ಅವರ ಹೆಂಡತಿ ಸ್ನೇಹಲತಾ ರೆಡ್ಡಿಯವರು ಈ ಚಿತ್ರದ ಮುಖ್ಯ ಸ್ತ್ರೀ ಪಾತ್ರದಲ್ಲಿ ಹಾಗು ಗಿರೀಶ ಕಾರ್ನಾಡರು ಮುಖ್ಯ ಪುರುಷಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದಲ್ಲಿ ಕಾರ್ನಾಡರ ಪಾಲು ಇದ್ದಿರಬಹುದು. ಆದರೆ ಚಿತ್ರದ ಶೀರ್ಷಿಕೆಗಳ ಪ್ರಕಾರ ಪಟ್ಟಾಭಿಯವರೇ ನಿರ್ದೇಶಕರು.&lt;br /&gt;&lt;br /&gt;ಎಪ್ಪತ್ತಾರು ವರ್ಷಗಳ ಇತಿಹಾಸವಿರುವ ‘ಸಂಯುಕ್ತ ಕರ್ನಾಟಕ’ ಯಾಕೆ ಈ ರೀತಿ ಎಡವುತ್ತ ನಡೆಯುತ್ತಿದೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-2861375061313226924?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/2861375061313226924/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=2861375061313226924' title='54 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/2861375061313226924'/><link rel='self' type='application/atom+xml' href='http://www.blogger.com/feeds/5939841257923965225/posts/default/2861375061313226924'/><link rel='alternate' type='text/html' href='http://sallaap.blogspot.com/2009/10/blog-post_14.html' title='ಪತ್ರಿಕಾಪ್ರದೂಷಣ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_Y2fZto9Dv1Y/StUsMozcfdI/AAAAAAAAAIM/w3FxWbOQBuQ/s72-c/sk+027.jpg' height='72' width='72'/><thr:total xmlns:thr='http://purl.org/syndication/thread/1.0'>54</thr:total></entry><entry><id>tag:blogger.com,1999:blog-5939841257923965225.post-6553156105916664835</id><published>2009-10-06T02:02:00.003+05:30</published><updated>2009-10-06T21:31:24.582+05:30</updated><title type='text'>‘ನಾ ಕಂಡ ಕರ್ನಾಟಕ’------ಲೇ: ಕೃಷ್ಣಾನಂದ ಕಾಮತ</title><content type='html'>ಕೃಷ್ಣಾನಂದ ಕಾಮತರು (೧೯೩೪-೨೦೦೨) ಬಹುಮುಖ ಪ್ರತಿಭೆಯ ಅದ್ಭುತ ವ್ಯಕ್ತಿ. ನ್ಯೂಯಾರ್ಕ ವಿಶ್ವವಿದ್ಯಾಲಯದಿಂದ ಕೀಟಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಕಾಮತರ ಆಸಕ್ತಿಯ ವ್ಯಾಪ್ತಿ ವಿಸ್ತಾರವಾದದ್ದು. ಸಾಹಿತ್ಯ, ಚಿತ್ರಕಲೆ, ಫೋಟೊಗ್ರಾಫಿ  ಇವೆಲ್ಲ ವಿಷಯಗಳಲ್ಲೂ ಅವರ ಸಾಧನೆ ಹೆಮ್ಮೆ ಪಡುವಂತಹುದು.&lt;br /&gt;&lt;br /&gt;ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲವು ಕರ್ನಾಟಕ ರಾಜ್ಯ  ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ೫೦ ಕೃತಿಗಳನ್ನು ಹೊರತಂದಿದೆ. ಕೃಷ್ಣಾನಂದ ಕಾಮತರ ‘ನಾ ಕಂಡ ಕರ್ನಾಟಕ’ ಎನ್ನುವ  ಕೃತಿಯು ಈ ಐವತ್ತು ಕೃತಿಗಳಲ್ಲಿ ಒಂದು. ಈ ಕೃತಿಯಲ್ಲಿ ೨೦ ಬಿಡಿ ಲೇಖನಗಳಿವೆ. ಇವುಗಳಲ್ಲಿ  ‘ಕರ್ನಾಟಕದ ಚಿಕಣಿ ಚಿತ್ರಗಳು’ ಎನ್ನುವ ಒಂದು ಲೇಖನವನ್ನು ಬಿಟ್ಟರೆ, ಉಳಿದೆಲ್ಲ ಲೇಖನಗಳು ಈಗಾಗಲೇ ಪತ್ರಿಕೆಗಳಲ್ಲಿ ಮುದ್ರಣ ಕಂಡಂತಹ ಲೇಖನಗಳೇ. ಈ ಗ್ರಂಥದಲ್ಲಿ ಎರಡು ಭಾಗಗಳನ್ನು ಮಾಡಲಾಗಿದೆ. ಮೊದಲ ಭಾಗದ ಹೆಸರು ‘ಕಲಾಪ್ರಪಂಚ’. ‘ಕಲಾಪ್ರಪಂಚ’ದಲ್ಲಿರುವ ಹತ್ತೂ ಲೇಖನಗಳು ಚಿತ್ರಕಲೆಗೆ ಸಂಬಂಧಿಸಿದ ಲೇಖನಗಳು. ಎರಡನೆಯ ಭಾಗದ ಹೆಸರು ‘ಜನಜೀವನ’. ಇದರಲ್ಲಿರುವ  ಲೇಖನಗಳು ಮಲೆನಾಡಿನ ಬಗೆಗೆ ಇರುವ ಲೇಖನಗಳು.&lt;br /&gt;&lt;br /&gt;ವಿಶಾಲ ಕರ್ನಾಟಕದ ವಿವಿಧ ಸ್ಥಳಗಳಲ್ಲಿರುವ ದೇವಾಲಯಗಳಲ್ಲಿ ಹಾಗು ಮೈಸೂರು ಅರಮನೆಯ ಒಳಾಂಗಣದಲ್ಲಿ ರಚಿಸಲಾದ ಚಿತ್ರಗಳ ಸಮಗ್ರ ದರ್ಶನಕ್ಕೆ ಮೊದಲ ಭಾಗದ ಲೇಖನಗಳು ಮೀಸಲಾಗಿವೆ. ಕಾಮತರು ತಮ್ಮ ಲೇಖನಗಳಲ್ಲಿ ದೇವಾಲಯದ ಇತಿಹಾಸ, ದೇವಾಲಯದಲ್ಲಿಯ ಚಿತ್ರಗಳ ಇತಿಹಾಸ, ಚಿತ್ರಗಳ ರಚನೆಯ ತಂತ್ರ, ಚಿತ್ರಪರಂಪರೆ, ಚಿತ್ರವಿಮರ್ಶೆ, ಚಿತ್ರಗಳ ಮೂಲಕ ಕಲ್ಪಿಸಬಹುದಾದ ಆ ಕಾಲದ ಸಾಮಾಜಿಕ ಹಾಗು ರಾಜಕೀಯ ಸ್ಥಿತಿ ಇವೆಲ್ಲವುಗಳನ್ನು ತಿಳಿಯಾದ ಭಾಷೆಯಲ್ಲಿ ಬಣ್ಣಿಸುತ್ತಾರೆ. ಈ ಚಿತ್ರಗಳ ಸದ್ಯದ ಪರಿಸ್ಥಿತಿ, ಈ ಗ್ರಾಮಗಳಲ್ಲಿ ವೀಕ್ಷಕರಿಗೆ ಸಿಗಬಹುದಾದ ಅಥವಾ  ಸಿಗಲಾರದ ಸೌಲಭ್ಯಗಳನ್ನೂ ಸಹ ಓದುಗರ ಅರಿವಿಗೆ ತಂದಿದ್ದಾರೆ.&lt;br /&gt;&lt;br /&gt;ಈ ಸಂಕಲನದ ಮೊದಲನೆಯ ಲೇಖನದಲ್ಲಿ ಬರುವ ಲೇಪಾಕ್ಷಿ ದೇವಾಲಯವು ಸದ್ಯದ ಕರ್ನಾಟಕದ ರಾಜಕೀಯ ಗಡಿಯ ಆಚೆಗಿದೆ, ಅಂದರೆ ಈಗಿನ ಆಂಧ್ರ ಪ್ರದೇಶದಲ್ಲಿದೆ. ಲೇಖನದಲ್ಲಿ ಲೇಪಾಕ್ಷಿ ದೇವಾಲಯದ  ಈಗಿನ ಸ್ಥಾನಿಕ ವಿವರಗಳನ್ನು ನೀಡುವದಲ್ಲದೇ, ದೇವಾಲಯದ ನಿರ್ಮಾಣಕಾಲ, ಇದರ ಶಿಲ್ಪಿಗಳು, ಕರ್ತೃಗಳು, ಯಜಮಾನಿಕೆ ಇವೆಲ್ಲವುಗಳ ಸಮಗ್ರ ವಿವರಗಳನ್ನು ಲೇಖಕರು ನೀಡಿದ್ದಾರೆ. &lt;br /&gt;&lt;br /&gt;ಚಿತ್ರಗಾರರು ಈ ದೇವಾಲಯದ ನಿರ್ಮಾಣದ ಸಮಯದಲ್ಲಿಯೇ ಹಸಿ ಗಾರೆಯ ಮೇಲೆ ಕಪ್ಪುಬಣ್ಣದಿಂದ ರೇಖಾಚಿತ್ರಗಳನ್ನು ಎಳೆದು ಅದರಲ್ಲಿ ಸ್ಥಳೀಯವಾಗಿ ಸಿಗುವ ಹರಳು, ಸಸ್ಯ ಇವುಗಳಿಂದ ಬಣ್ಣವನ್ನು ತುಂಬಿರಬೇಕು ಎಂದು ಲೇಖಕರು ಸಪ್ರಮಾಣವಾಗಿ ಊಹಿಸಿದ್ದಾರೆ. ಅದರಂತೆ ಸ್ಥಿತ ವ್ಯಕ್ತಿಗಳಿಗೆ ಚಲನೆ ಇದ್ದಂತೆ ತೋರಿಸಲು ಕಲಾವಿದರು ಅನುಸರಿಸಿದ ತಂತ್ರವನ್ನು ಲೇಖಕರು ಓದುಗರಿಗೆ ಬಿಚ್ಚಿ ತೋರಿಸುತ್ತಾರೆ.&lt;br /&gt;ಲೇಪಾಕ್ಷಿ ದೇವಾಲಯದ ಚಿತ್ರಗಳು ಅಜಂತಾ, ತಂಜಾವೂರು ಮತ್ತು ವಿಜಯನಗರ ಕಲೆಗಳ ಅನುಕರಣೆಯೆಂದು ಕೆಲವು ಕಲಾತಜ್ಞರು ಸಾಧಿಸಲು ಪ್ರಯತ್ನಿಸಿರುವದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ಲೇಖಕರು ಸಾಧಾರವಾಗಿ ಮಂಡಿಸುತ್ತಾರೆ. &lt;br /&gt;&lt;br /&gt;ಲೇಪಾಕ್ಷಿ ದೇವಾಲಯದಲ್ಲಿ ರಚಿಸಲಾದ  ಭಿತ್ತಿಚಿತ್ರಗಳನ್ನು ೮ ವರ್ಗಗಳಲ್ಲಿ ವಿಭಾಗಿಸಲಾಗಿದೆ:&lt;br /&gt;(೧) ಧಾರ್ಮಿಕ ಚಿತ್ರಗಳು (೨) ವ್ಯಕ್ತಿ ಚಿತ್ರಗಳು (೩) ಸ್ತ್ರೀಯರ ಚಿತ್ರಗಳು (೪) ಪುರುಷರ ಚಿತ್ರಗಳು (೫) ಸಸ್ಯ-ಪ್ರಾಣಿ ಚಿತ್ರಣ (೬) ದೇವದೇವತೆಗಳು ಹಾಗು ಗಣಗಳು.&lt;br /&gt;ಈ ಎಲ್ಲ ವರ್ಗಗಳಲ್ಲಿ ರಚಿಸಲಾದ ಚಿತ್ರಗಳ  ವಿವರವಾದ ವರ್ಣನೆ ಹಾಗು ವೈಶಿಷ್ಟ್ಯಗಳನ್ನು ಕಾಮತರು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಜೊತೆಗೇ ಅನೇಕ ಸುಂದರ ಛಾಯಾಚಿತ್ರಗಳೂ ಇಲ್ಲಿವೆ.&lt;br /&gt;&lt;br /&gt;ದುರ್ದೈವದಿಂದ ಈ ಚಿತ್ರಗಳ ರಕ್ಷಣೆಯು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಇವುಗಳ ರಕ್ಷಣೆಯ  ಹೊಣೆಗಾರಿಕೆಯ ಬಗೆಗೆ ಕಾಮತರ ತಳಮಳ ಹಾಗು  ಕನ್ನಡಿಗರಿಗೆ ಅವರು ಕೊಡುವ ಎಚ್ಚರಿಕೆ ಹೀಗಿದೆ:&lt;br /&gt;“ಶತಕಗಳ ಅಲಕ್ಷ್ಯದಿಂದಾಗಿ ಕನ್ನಡಿಗರ ಈ ಕಲಾಸಿರಿ ಕಣ್ಮರೆಯಾಗುವದರಲ್ಲಿದೆ. ಕನ್ನಡ ಸಂಸ್ಕೃತಿ, ಕಲೆಗಳು ಎಲ್ಲಿಯೇ ಇದ್ದರೂ ಅವನ್ನು ಭಾವೀ ಪೀಳಿಗೆಗಾಗಿ ರಕ್ಷಿಸಿಡುವದು ಕರ್ನಾಟಕ ಲಲಿತ ಕಲಾ ಅಕಾಡೆಮಿಯಂಥ ಸಂಸ್ಥೆಗಳ ಹೊಣೆ. ಲೇಪಾಕ್ಷಿಯನ್ನು ಕರ್ನಾಟಕದಲ್ಲಿ ಸೇರಿಸುವದು ಅಸಾಧ್ಯವಾಗಿರಬಹುದು. ಆದರೆ ಕರ್ನಾಟಕದ ಸಂಸ್ಕೃತಿಯ ಪ್ರತೀಕಗಳಾದ ಚಿತ್ರ-ಸಿರಿಯನ್ನು ಛಾಯಾಚಿತ್ರಗಳಲ್ಲಿ, ವಿಡಿಯೋ ರೂಪದಲ್ಲಿ ಸಚಿತ್ರ ಗ್ರಂಥದಲ್ಲಿ ಕಾಯ್ದಿರಿಸುವ ಕೆಲಸ ತ್ವರಿತವಾಗಿ ಆಗಲೇಬೇಕಾಗಿದೆ.”&lt;br /&gt;&lt;br /&gt;ಪಕ್ಷಿ ಹಾಗು ಪ್ರಾಣಿಗಳ ಶಿಲ್ಪ ಮತ್ತು ಚಿತ್ರಗಳು ನಮ್ಮ ದೇವಾಲಯಗಳ ವೈಶಿಷ್ಟ್ಯವೆನ್ನಬಹುದು. ಕಾಮತರ ಎರಡನೆಯ ಲೇಖನವು ಈ ರಚನೆಗಳ ಬಗೆಗಿದೆ. ಈ ಶಿಲ್ಪಗಳಲ್ಲಿ ಪ್ರಾಣಿಗಳ ನೈಸರ್ಗಿಕ ಚಿತ್ರಗಳಲ್ಲದೆ, ಚಮತ್ಕಾರಿಕ ಚಿತ್ರಗಳೂ ಇವೆ.  ಇಂತಹ ಕೆಲವು ಚಿತ್ರಗಳ ಸುಂದರ ವಿವರಣೆ ಹಾಗೂ ಅವುಗಳ ತದ್ರೂಪ ಚಿತ್ರಗಳು ಇಲ್ಲಿವೆ.&lt;br /&gt;&lt;br /&gt;ಕಾಮತರ ಮುಂದಿನ ಲೇಖನವು  ಕರ್ನಾಟಕದಲ್ಲಿಯ ತಾಳೆಗರಿಯ ಚಿತ್ರಲೇಖನವನ್ನು ವರ್ಣಿಸುತ್ತದೆ. ತಾಳೆಗರಿಯ ಚಿತ್ರಲೇಖನವು ಕರ್ನಾಟಕದಲ್ಲಿ ಕ್ರಿಸ್ತಪೂರ್ವದಲ್ಲಿಯೇ ಹುಟ್ಟಿದರೂ ಸಹ ಸದ್ಯಕ್ಕೆ ಓಡಿಸಾದಲ್ಲಿ ಮಾತ್ರ ಜೀವಂತವಾಗಿದೆ. ತಾಳೆಗರಿಗಳ ಪೂರ್ವಸಿದ್ಧತೆ, ಚಿತ್ರರಚನೆ ಹಾಗು ಸಂರಕ್ಷಣೆಯ ವೈಜ್ಞಾನಿಕ ತಂತ್ರ ಇವುಗಳನ್ನು ಕಾಮತರು ಇಲ್ಲಿ ವಿವರವಾಗಿ ತಿಳಿಸಿದ್ದಾರೆ. ಅಲ್ಲದೆ ತಾಳೆಗರಿಗಳ ಮೇಲೆ ಚಿತ್ರರೂಪದ ಅಕ್ಷರಗಳನ್ನು ಬರೆಯುವ ಪದ್ಧತಿಯು ಕರ್ನಾಟಕದಲ್ಲಿ ತನ್ನದೇ ವಿಧಾನದಲ್ಲಿ ಬಳಕೆಯಲ್ಲಿ ಇತ್ತೆಂಬುದಕ್ಕೆ ಪ್ರಮಾಣ ನೀಡಿದ್ದಾರೆ.&lt;br /&gt;&lt;br /&gt;ಕರ್ನಾಟಕದ ಕರಾವಳಿಯ ದೇವಾಲಯದಲ್ಲಿರುವ ಕಾವಿ ಚಿತ್ರಗಳು ರಚನೆ ಹಾಗೂ ಶೈಲಿಯಲ್ಲಿ ಇತರ ಚಿತ್ರಗಳಿಗಿಂತ ತುಂಬ ಭಿನ್ನವಾಗಿವೆ. ಇವುಗಳ ವರ್ಣನೆಯನ್ನು ನಾಲ್ಕನೆಯ ಲೇಖನದಲ್ಲಿ ಮಾಡಲಾಗಿದೆ. ಕರಾವಳಿಯ ಆರ್ದ್ರ ಹವೆಯಿಂದಾಗಿ ವರ್ಣಚಿತ್ರಗಳು ಬೇಗನೇ ಹಾಳಾಗಿ ಹೋಗುತ್ತವೆ. ಆ ಕಾರಣದಿಂದಾಗಿ ಕರಾವಳಿಯ ದೇವಾಲಯ ಹಾಗೂ ಇತರ ಕೆಲವೊಂದು ಕಟ್ಟಡಗಳಲ್ಲಿ ವರ್ಣಚಿತ್ರಗಳ ಬದಲಾಗಿ ಕಾವಿ ಚಿತ್ರಗಳನ್ನು ರಚಿಸಬೇಕಾಯಿತು ಎಂದು ಕಾಮತರು ವಿವರಿಸುತ್ತಾರೆ. ಕಲೆಗೆ ಸಂಬಂಧಿಸಿದಂತೆ ಕಾಮತರ ಸೂಕ್ಷ್ಮಗ್ರಹಣಶಕ್ತಿಯನ್ನು ಹಾಗು ಐತಿಹಾಸಿಕ ಜ್ಞಾನವನ್ನು  ಅರಿಯಬೇಕಾದರೆ, ಆ ಲೇಖನದ ಈ ಪರಿಚ್ಛೇದಗಳನ್ನು ಗಮನಿಸಬೇಕು:&lt;br /&gt;&lt;br /&gt;“ ಚಿತ್ರಕ್ಕಾಗಿ ಮೀಸಲಿಟ್ಟ ಸ್ಥಳವನ್ನು ಪೂರ್ಣವಾಗಿ ಸದುಪಯೋಗಿಸುವದು ಕಲಾಕಾರನ ಉದ್ದೇಶ. ಅಂತೆಯೇ ಚೂರೂ ಬಿಡದೆ ಗಿಡ-ಮರಗಳನ್ನು ಹೂ ಬಳ್ಳಿಗಳನ್ನು, ಗುಳೋಪು, ಪತಾಕೆ, ನಕ್ಷೆಗಳನ್ನು ಜೋಡಿಸುತ್ತಾನೆ. ಇವುಗಳಲ್ಲಿ ಛಾಯಾಚಿತ್ರಗಳ ವಿವರ ತುಂಬಿಸುವದಕ್ಕಿಂತ, ಸಾಂಕೇತಿಕವಾಗಿ ರೂಪಿಸುವದು ವಾಡಿಕೆ. ವರ್ತುಲ,  ಅರೆವರ್ತುಲ, ಲಂಬವರ್ತುಲಗಳನ್ನು ಬಳಸಿ ನಿರ್ಮಿಸಿದ ಗೋಲಕ ಒಂದು ಹೂವನ್ನು ಪ್ರತಿನಿಧಿಸಿದರೆ, ಅದಕ್ಕೊಂದು ಬೊಡ್ಡೆ, ಎಲೆ, ಕಾಯಿ, ಹಣ್ಣು ಜೋಡಿಸಿದರೆ ಮರವಾಗಿ ಬಿಡುತ್ತದೆ….ಕರಾವಳಿಯಲ್ಲಿ ಕುದುರೆಗಳ ಬಳಕೆ ಇರದಿದ್ದರೂ, ಹಲವಾರು ಯೋಧರು, ಸೈನಿಕರು, ಸರದಾರರು ಅಶ್ವಾರೋಹಿಗಳಾಗಿ ಚಿತ್ರಿತವಾಗಿದ್ದಾರೆ. ಬಹುಶಃ ವಿಜಯನಗರದ ಆಳರಸರು ತಮ್ಮ ಸೈನ್ಯಕ್ಕೆ ಬೇಕಾಗುವ ಕುದುರೆಗಳನ್ನು ಅರಬಸ್ತಾನದಿಂದ ಕರಾವಳಿಯ ಈ ಬಂದರುಗಳ ಮೂಲಕವೇ ಆಮದು ಮಾಡಿಸಿಕೊಳ್ಳಲಾರಂಭಿಸಿದ ನಂತರ ಈ ಪರಂಪರೆ ಬೆಳೆದು ಬಂದಿರಬೇಕು.”&lt;br /&gt;&lt;br /&gt;ಕೆಲವು ಕಲಾಸಂಶೋಧಕರು ಆತುರದಲ್ಲಿ ಎಸಗುವ ತಪ್ಪುಗಳು  ಕಾಮತರ ಸೂಕ್ಷ್ಮ ದೃಷ್ಟಿಗೆ ಬೀಳದೆ ಇಲ್ಲ.ಅದೇ ಲೇಖನದ ಕೆಳಗಿನ ಪರಿಚ್ಛೇದವನ್ನು  ಗಮನಿಸಿರಿ:&lt;br /&gt;“ಜರ್ಮನಿಯ ಶಿಷ್ಯವೇತನ ಪಡೆದು ಗೋವಾದ ಕಲೆ ಅಭ್ಯಸಿಸಿದ ಸಂಶೋಧಕಿ ಗ್ರಿಟ್ಲಿ  ಯು. ಮಿಟರ್ವಾಲನ್ಳು ಇದು ಮೂಲತಃ ಇಟಾಲಿಯ ಗ್ರಾಫಿಟಿ (ಗೀರುಚಿತ್ರ) ಚಿತ್ರಕಲೆಯಾಗಿದ್ದು, ಪೋರ್ಚುಗೀಜರು ಇದನ್ನು ಭಾರತಕ್ಕೆ ತಂದು, ಚರ್ಚುಗಳಿಗೆ ಹಸ್ತಾಂತರಿಸಿದರೆಂದೂ ಅನಂತರ ಹಿಂದೂಗಳು ಅದನ್ನು ತಮ್ಮದನ್ನಾಗಿ ಮಾಡಿಕೊಂಡಿದ್ದಾರೆಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ. ಇದೆಂತಹ ಸಂಶೋಧನೆ! ಪೋರ್ಚುಗೀಜರು ಗೋವಾದ ದೇವಾಲಯಗಳ ಧ್ವಂಸ ಕಾರ್ಯವನ್ನು ಪ್ರಾರಂಭಿಸುವ ಮೊದಲೇ ಅಲ್ಲಿಯ ಸಾರಸ್ವತರ ದೇವಾಲಯಗಳ ಮೇಲೆಲ್ಲ ಈ ಚಿತ್ರಗಳು ನಳನಳಿಸುತ್ತಿದ್ದವು. ಆ ಸಂಶೋಧಕಿ, ದಕ್ಷಿಣ ಕನ್ನಡ ನಾಡಿನ ಕರಾವಳಿಯಲ್ಲೂ ರಾರಾಜಿಸುತ್ತಿದ್ದ ಕಾವಿಚಿತ್ರಗಳನ್ನು ಅಭ್ಯಸಿಸಿದ್ದರೆ, ಇವುಗಳಲ್ಲಿರುವ ಮಣ್ಣಿನ ವಾಸನೆ ಅವಳಿಗೂ ಅರಿವಾಗದೇ ಇರುತ್ತಿರಲಿಲ್ಲ. ಆದರೆ ದುರ್ದೈವದಿಂದ ಅಭಿಮಾನ್ಯಶೂನ್ಯರಾದ ನಾವು ಅವುಗಳನ್ನು ಭರದಿಂದ ನಾಶ ಮಾಡಹತ್ತಿದ್ದೇವೆ. ಸರ್ವನಾಶವಾಗುವ ಮೊದಲೇ ಪುಣ್ಯಾತ್ಮ ಕಲಾಪ್ರೇಮಿಗಳು ಅವನ್ನು ಅಭ್ಯಸಿಸಿ, ಛಾಯಾಚಿತ್ರಗಳಲ್ಲಿ ಸೆರೆ ಹಿಡಿದು, ಗ್ರಂಥರೂಪದಲ್ಲಿ ಅವನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಿಡುವದರಿಂದ ಈ ಕಲೆಗೆ ಗೌರವ ಸಲ್ಲಿಸಬಹುದಾಗಿದೆ.” &lt;br /&gt;&lt;br /&gt;ಕಾಮತರೇ ಇಂತಹ ಅನೇಕ ಚಿತ್ರಗಳನ್ನು  ಛಾಯಾಚಿತ್ರಗಳಲ್ಲಿ ಸೆರೆ ಹಿಡಿದು ಕಲಾಸಂರಕ್ಷಣೆಯ ಪುಣ್ಯಕಾರ್ಯವನ್ನು ಮಾಡಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು.&lt;br /&gt;&lt;br /&gt;ಕಾಮತರ ಮುಂದಿನ ಲೇಖನ ಸೀಬಿ ಎನ್ನುವ ಕುಗ್ರಾಮದಲ್ಲಿಯ ನರಸಿಂಹ ದೇವಾಲಯದ ಭಿತ್ತಿಚಿತ್ರಗಳನ್ನು  ವರ್ಣಿಸುತ್ತದೆ. ನರಸಿಂಹ ದೇವಾಲಯದ ಒಳಭಾಗದ ರಚನೆ ಹಾಗು ಹೊರಭಾಗದ ರಚನೆಗಳು ಬೇರೆ ಬೇರೆ ಕಾಲದ ನಿರ್ಮಾಣಗಳೆಂದು ಲೇಖಕರು ಊಹಿಸಿದ್ದಾರೆ. ಸೀಬಿಯ ಚಿತ್ರಗಳ ವರ್ಗೀಕರಣವನ್ನು ಈ ರೀತಿಯಾಗಿ ಮಾಡಲಾಗಿದೆ:&lt;br /&gt;(೧) ಸಾಮಾಜಿಕ (೨) ನೈಸರ್ಗಿಕ (೩) ವ್ಯಕ್ತಿಗತ (೪) ಲೈಂಗಿಕ ಹಾಗು (೫) ಚಾರಿತ್ರಿಕ&lt;br /&gt;&lt;br /&gt;ಸೀಬಿಯ ದೇವಾಲಯದ ಈ ಎಲ್ಲ ಚಿತ್ರಗಳನ್ನು ಅಭ್ಯಸಿಸಿ, ವಿವಿಧ ಅಂಶಗಳನ್ನು ಗುರುತಿಸಿದ ನಂತರ ಲೇಖಕರು ಈ ತರಹದ ನಿರ್ಣಯಕ್ಕೆ ಬರುತ್ತಾರೆ:&lt;br /&gt;“……ಇಲ್ಲಿಯ ಕಲಾಶೈಲಿಯು ವಿಜಯನಗರ, ಮಹಾರಾಷ್ಟ್ರ ಮತ್ತು ಪಾಶ್ಚಾತ್ಯ ಪ್ರಭಾವಗಳಿಂದ ಬೆಳೆದು ಬಂದದ್ದು ಎಂದು ಪ್ರತಿಯೊಂದು ಚಿತ್ರವನ್ನು ಕೂಲಂಕಷವಾಗಿ ಅಭ್ಯಸಿಸಿದಾಗ ಅರಿವಾಗುವದು. ಬಹುಮಟ್ಟಿಗೆ ಕ್ರಿ.ಶ. ಸುಮಾರು ೧೭೯೦ರ ವೇಳೆಗೆ ಇವುಗಳು ಅಸ್ತಿತ್ವದಲ್ಲಿ ಬಂದವೆಂದು ಹೇಳಬಹುದು.”&lt;br /&gt;&lt;br /&gt;ಸಂಕಲನದ ಏಳನೆಯ ಲೇಖನದ ಶೀರ್ಷಿಕೆ: ‘ಮೈಸೂರು ಅರಸರ ಕಾಲದ ಚಿತ್ರಗಳಲ್ಲಿ ಒಳಾಂಗಣ ದೃಶ್ಯಗಳು’ ಎಂದಿದೆ. ಈವರೆಗಿನ ಪಾರಂಪರಿಕ ಚಿತ್ರಕಲೆಗೂ ಮೈಸೂರು ಒಳಾಂಗಣ ಚಿತ್ರಕಲೆಗೂ ಇರುವ ವ್ಯತ್ಯಾಸಗಳನ್ನು ಇಲ್ಲಿ ಗುರುತಿಸಲಾಗಿದೆ. ಅಲ್ಲದೆ ಈ ವ್ಯತ್ಯಾಸದ ಕಾರಣಗಳನ್ನೂ ಇಲ್ಲಿ ನೀಡಲಾಗಿದೆ. ಅವೆಲ್ಲವನ್ನು ಕಾಮತರ ಭಾಷೆಯಲ್ಲಿಯೇ ಓದೋಣ:&lt;br /&gt;“…..ಸಾಂಪ್ರದಾಯಿಕವಾಗಿ ಬಳಸುವ ಕಲ್ಲು ಮತ್ತು ಕಾಡಿಗೆಗಳಿಂದ ತಯಾರಿಸಿದ ವರ್ಣಗಳ ಬದಲಾಗಿ ರಾಸಾಯನಿಕಗಳಿಂದ ಉತ್ಪಾದಿಸಿದ ಪಾಶ್ಚಾತ್ಯ ಬಣ್ಣಗಳನ್ನು ಬಳಸಿದ್ದರಿಂದ ಅವು ಮಳೆ,ಗಾಳಿ,ಬಿಸಿಲುಗಳಿಗೆ ತಮ್ಮತನ ಕಳೆದುಕೊಳ್ಳಲಾರಂಭಿಸಿದವು. ಇದನ್ನು ದಕ್ಷಿಣದ ಪ್ರವಾಸದ ಹೊತ್ತಿಗೆ ಕಂಡುಕೊಂಡ ಗವರ್ನರ ಜನರಲ್ ಡಾಲಹೌಸಿಯು, ಅವುಗಳ ನವೀಕರಣಕ್ಕೆ ಶಿಫಾರಸು ಮಾಡಿದ್ದ……….ಇಂದಿನ ಛಾಯಾಚಿತ್ರಕಾರರು ಕಲಾಕಾರರಾಗಲು ಯತ್ನಿಸಿದರೆ, ಅಂದಿನ ಚಿತ್ರಕಾರರು ಛಾಯಾಚಿತ್ರಗಾರರಾಗಲು ಯತ್ನಿಸಿದ್ದಾರೆ!”&lt;br /&gt;&lt;br /&gt;ಮೈಸೂರು ಅರಮನೆಯ ಒಳಾಂಗಣ ಚಿತ್ರಗಳ ವಿವರಗಳನ್ನು ಅಂದರೆ ಆ ಕಾಲದ ವೇಷಭೂಷಣಗಳನ್ನು, ಅಧಿಕಾರಿಗಳನ್ನು-ಸೇವಕರನ್ನು, ಸಂಗೀತ ಉಪಕರಣಗಳನ್ನು ಕಾಮತರು ವಿವರವಾಗಿ ವರ್ಣಿಸಿದ್ದಾರೆ. ಅದರಂತೆ ಶ್ರವಣಬೆಳಗೊಳದ ಜೈನ ಮಠದ, ಮೈಸೂರಿನ ಪರಕಾಲ ಮಠದ ರಸ್ತೆಯಲ್ಲಿರುವ ವೆಂಕಟರಮಣಸ್ವಾಮಿ ದೇವಾಲಯದ, ಮೈಸೂರಿನ ಅರಮನೆಯ ಆವಾರದಲ್ಲಿರುವ ಪ್ರಸನ್ನ ಕೃಷ್ಣಸ್ವಾಮಿ ದೇವಾಲಯದ ಒಳಾಂಗಣ ಚಿತ್ರಗಳನ್ನು ಕಾಮತರು ವಿವರಿಸಿದ್ದಾರೆ. ಈ ಚಿತ್ರಗಳು ನಶಿಸಿ ಹೋಗುತ್ತಿರುವದನ್ನು ಗಮನಿಸಿದ ಕಾಮತರು ಎಚ್ಚರಿಕೆಯನ್ನೂ ನೀಡಿದ್ದಾರೆ:&lt;br /&gt;“ಕರ್ನಾಟಕದಲ್ಲಿ ಶತಕಗಳ ಹಿಂದೆ ವಿರಚಿತವಾಗಿ ಅಳಿದುಳಿದ ಚಿತ್ರಗಳನ್ನೇ ಅಭ್ಯಸಿಸಿ ಗ್ರಂಥರೂಪದಲ್ಲಿ ಪ್ರಕಟಿಸದೇ ಇರುವದು ಅತ್ಯಂತ ಶೋಚನೀಯ. ಅವು ಸಂಪೂರ್ಣ ನಶಿಸಿ ಹೋಗುವ ಮೊದಲು ಈ ಕಾರ್ಯವಾಗಲೇಬೇಕು.”&lt;br /&gt;&lt;br /&gt;“ಕರ್ನಾಟಕದ ಚಿಕಣಿ ಚಿತ್ರಗಳು” ಇದು ಈ ಸಂಕಲನದ ಎಂಟನೆಯ  ಲೇಖನ.  ಉತ್ತರ ಭಾರತದಲ್ಲಿ ಈ ಚಿತ್ರಕಲೆಯನ್ನು ಪ್ರಾರಂಭಿಸಿದವರು ರಜಪೂತರು. ಕರ್ನಾಟಕದಲ್ಲಿ ಅತಿ ಪುರಾತನ ಚಿಕಣಿ ಚಿತ್ರಗಳೆಂದರೆ ಮೂಡಬಿದಿರೆಯ ಜೈನ ಮಠದಲ್ಲಿರುವ ತಾಳೆಗರಿ ಗ್ರಂಥಗಳಲ್ಲಿರುವ ಚಿಕಣಿ ಚಿತ್ರಗಳು. (ಕ್ರಿ.ಶ.೧೧೨೦-೧೧೪೩). ಅದರಂತೆ ವಿಜಾಪುರದ ಸುಲ್ತಾನರ ಗ್ರಂಥಗಳಲ್ಲಿಯೂ ಚಿಕಣಿ ಚಿತ್ರಗಳಿದ್ದು, ಈ ಚಿತ್ರಗಳಲ್ಲಿ ಇರಾನದ ವರ್ಚಸ್ಸು ಕಾಣುತ್ತದೆ ಎನ್ನುವದು ಲೇಖಕರ ಅಭಿಪ್ರಾಯವಾಗಿದೆ. &lt;br /&gt;&lt;br /&gt;ಮೈಸೂರಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರರು ಅಧಿಕಾರಕ್ಕೆ ಬಂದಬಳಿಕ ಸಾಂಪ್ರದಾಯಕ ಸಚಿತ್ರ ಗ್ರಂಥಗಳಿಗೆ ಪ್ರೋತ್ಸಾಹ ದೊರೆಯಿತು.  ಅವರ ಕಾಲದಲ್ಲಿ ರಚಿತವಾದ ‘ತತ್ವನಿಧಿ’ ಎನ್ನುವ ಗ್ರಂಥದಲ್ಲಿ ೨೨೭೫ ಚಿಕಣಿ ಚಿತ್ರಗಳನ್ನು ಬರೆಯಲಾಗಿದೆಯಂತೆ! ಈ ಕೃತಿಯಲ್ಲಿಯ  ‘ಗೃಹನಿಧಿ’ ಎನ್ನುವ ಭಾಗದಲ್ಲಿ  ಹಕ್ಕಿಗಳಿಂದ ಹಿಡಿದು ಕೀಟಗಳವರೆಗೆ ಸಕಲ ಪ್ರಾಣಿಗಳನ್ನು ಚಿತ್ರಿಸಲಾಗಿದೆ.&lt;br /&gt;&lt;br /&gt;ಕಾಮತರು ಈ ಚಿತ್ರಕೋಶವನ್ನು ದೊರಕಿಸಲು ಪ್ರಯತ್ನಪಟ್ಟು ವಿಫಲರಾದ ಕತೆಯನ್ನು ಅವರ ಮಾತಿನಲ್ಲಿಯೇ ಕೇಳಿರಿ:&lt;br /&gt;“ ಈ ಚಿತ್ರಕೋಶವೂ ಮೈಸೂರಿನ ಒರಿಯಂಟಲ್ ಲೈಬ್ರರಿ ಮತ್ತು ಸಂಶೋಧನಾ ಕೇಂದ್ರದಲ್ಲಿದ್ದು ಅದರ ಪ್ರಕಾಶನಕ್ಕೆ ಧನಸಹಾಯದ ಕೊರತೆಯ ಜೊತೆಗೆ ಗ್ರಂಥದ ಸ್ವಾಮಿತ್ವ ಯಾರಿಗೆ ಸೇರಿದ್ದು? ಎಂದು ನಿರ್ಧರಿಸಲಾರದೇ, ಕಲಾಪ್ರೇಮಿಗಳಿಗೆ ನಿಲುಕದೇ ಮೂಲೆಗುಂಪಾಗಿದೆ. ಅದನ್ನು ವೀಕ್ಷಿಸಲು ಕಷ್ಟಪಟ್ಟು ಅಪ್ಪಣೆ ಪಡೆದಾಗ ಕೆಲವೇ ಪುಟಗಳ ಮೇಲೆ ಕೆಲನಿಮಿಷ ಕಣ್ಣು ಓಡಿಸಲು ಮಾತ್ರ ಅನುವು ಮಾಡಿಕೊಟ್ಟರು. ಇದರ ಇನ್ನೊಂದು ಪ್ರತಿ ಮೈಸೂರಿನ ಯುವರಾಜ ಶ್ರೀಕಂಠದತ್ತ ಒಡೆಯರ ಒಡೆತನದಲ್ಲಿದೆ ಎಂದು ಅರಿತು,ಅವರಿಂದ ಮುಂಚಿತವಾಗಿ ಅನುಮತಿ ಪಡೆದೇ ಅರಮನೆಗೆ ಹೋದರೆ ಕೀಲಿಕೈಗಳಿಲ್ಲ ಎಂಬ ಕುಂಟ ನೆಪ ಮಾಡಿ ನುಣುಚಿಕೊಂಡರು…..”&lt;br /&gt;&lt;br /&gt;ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ಇನ್ನಿತರ ಕೃತಿಗಳಾದ ‘ಸೌಗಂಧಿಕಾ ಪರಿಣಯ’ ‘ವೃಷಭೇಂದ್ರ ವಿಜಯ, ಹಾಗು ‘ಬಸವ ಪುರಾಣ’ ಈ ಕೃತಿಗಳ ಹಾಗೂ ಅವುಗಳಲ್ಲಿರುವ ಚಿತ್ರಗಳ ಪರಿಚಯವನ್ನೂ ಕಾಮತರು ಈ ಲೇಖನದಲ್ಲಿ ಮಾಡಿದ್ದಾರೆ. ಇದರಂತೆ ಅನೇಕ ಧಾರ್ಮಿಕ ವ್ಯಕ್ತಿಗಳ, ಉಚ್ಚ ಅಧಿಕಾರಿಗಳ ಹಾಗು ಮೈಸೂರು ಮಹಾರಾಜರ ಭಾವಚಿತ್ರಗಳ ಬಗೆಗೆ ಕಾಮತರು ವಿವರ ನೀಡಿದ್ದಾರೆ. ‘ಸೌಗಂಧಿಕಾ ಪರಿಣಯ’ದ ೧೦೪೩ನೆಯ ಪರಿಚ್ಛೇದದಿಂದ ೧೦೭೨ನೆಯ ಪರಿಚ್ಛೇದದವರೆಗೆ ಸಸ್ಯಶಾಸ್ತ್ರದ ಸಚಿತ್ರ ವಿವರಣೆಯಿರುವದಾಗಿ ಕಾಮತರು ತಿಳಿಸಿದ್ದಾರೆ. ಈ ವಿವರಣೆಗಳಲ್ಲಿ ತಿಳಿಸಲಾದ ಸಾಂಪ್ರದಾಯಿಕ ನಂಬಿಕೆಗಳಲ್ಲಿ ಗಟ್ಟಿ ಅಂಶವೆಷ್ಟು, ಟೊಳ್ಳೆಷ್ಟು ಎನ್ನುವದನ್ನು ನಮ್ಮ ಕೃಷಿಸಂಸ್ಥೆಗಳು ಹಾಗು ವಿಶ್ವವಿದ್ಯಾಲಯಗಳು ಸಂಶೋಧಿಸಬೇಕೆಂದು ಕಾಮತರು ಅಭಿಪ್ರಾಯ ಪಡುತ್ತಾರೆ.&lt;br /&gt;&lt;br /&gt;ಚಿಕಣಿ ಚಿತ್ರಗಳಲ್ಲಿ ಮುಖ್ಯವಾದವುಗಳು ರಾಗಮಾಲಾ ಚಿತ್ರಗಳು. ಬಿಜಾಪುರದ ಸುಲ್ತಾನನಾದ ಇಬ್ರಾಹಿಮ್ ಆದಿಲ್ ಶಹಾ ರಚಿಸಿದ ‘ಕಿತಾಬ್-ಏ-ನೌರಸ್’ದಲ್ಲಿರುವ ೯ ರಾಗ-ರಾಗಿಣಿಯರ ಚಿತ್ರಗಳ ವಿವರಗಳನ್ನು ಹಾಗು ‘ಶ್ರೀ ತತ್ವನಿಧಿ’ ಯಲ್ಲಿರುವ ೩೬  ರಾಗ-ರಾಗಿಣಿಯರ ಚಿತ್ರಗಳ ವಿವರಗಳನ್ನು ಕಾಮತರು ನೀಡಿದ್ದಾರೆ.&lt;br /&gt;&lt;br /&gt;ಎರಡನೆಯ ಭಾಗವು ಮಲೆನಾಡಿನ ವಿಸ್ತೃತವಾದ ಪರಿಚಯಕ್ಕೆ ಮೀಸಲಾಗಿದೆ. ಈ ಭಾಗದಲ್ಲಿ ಲೇಖಕರು ಮಲೆನಾಡಿನ ಪ್ರಾಕೃತಿಕ ಸಂಪತ್ತಿನ ವಿವರಣೆ ನೀಡಿದ್ದಾರೆ. ಇಲ್ಲಿಯ ಘಟ್ಟಪ್ರದೇಶ, ನದಿಗಳು, ಅವುಗಳ ದ್ವೀಪಗಳು ಇವೆಲ್ಲವುಗಳ ವರ್ಣನೆ ಇಲ್ಲಿದೆ. ಹಾಗೆಂದು ಇದು ಬರಿ ಭೌಗೋಲಿಕ ವರ್ಣನೆ ಅಲ್ಲ! ಇದು ಪಶ್ಚಿಮ ಘಟ್ಟಗಳ ಅವಸಾನದ ಇತಿಹಾಸವೂ ಹೌದು. ಕಾಮತರು ತಾವು ಚಿಕ್ಕವರಿದ್ದಾಗ ಇಲ್ಲಿ ಇದ್ದಂತಹ ಪುಷ್ಟ ಪರಿಸರ ಹಾಗೂ ಈಗಿನ ನಷ್ಟಪರಿಸರವನ್ನು ಮರುಕದಿಂದ ವರ್ಣಿಸಿದ್ದಾರೆ. ಅದು ಈಗ ನಷ್ಟವಾಗುತ್ತಿರುವ ಬಗೆಯನ್ನೂ ವಿವರಿಸಿದ್ದಾರೆ. ಕೇವಲ ನಿಸರ್ಗವರ್ಣನೆಯಿಂದ ತೃಪ್ತರಾಗದ ಕಾಮತರು ಇಲ್ಲಿ ವಾಸಿಸುತ್ತಿರುವ ವಿವಿಧ ಜನಸಮೂಹಗಳ ವರ್ಣನೆಯನ್ನೂ ಮಾಡಿದ್ದಾರೆ. ಈ ಸಮುದಾಯಗಳ ವೈಶಿಷ್ಟ್ಯಗಳನ್ನೂ ವಿವರಿಸಿದ್ದಾರೆ. &lt;br /&gt;&lt;br /&gt;ಈ ಭಾಗದ ಒಂದು ಲೇಖನವು ‘ಅಂಜದೀವ್’ ನಡುಗಡ್ಡೆಗೆ ಮೀಸಲಾಗಿದೆ. ಕಾಮತರ ಮೊದಲ ಕುತೂಹಲವೆಂದರೆ ಈ ನಡುಗಡ್ಡೆಗೆ ಅಂಜದೀವ್ ಎನ್ನುವ ಹೆಸರು ಹೇಗೆ ಬಂದಿತು ಎನ್ನುವದು. ಅವರ ಪ್ರಶ್ನೆ ಹೀಗಿದೆ:&lt;br /&gt;“ಉತ್ತರ ಕನ್ನಡ ಜಿಲ್ಲೆಯ ಕರಾವಳಿಗುಂಟ ಇರುವ ಹಲವಾರು ದ್ವೀಪಗಳಿಗೆ ಸ್ಥಾನೀಯರು ‘ಕುರ್ವೆ’(ಮಾವಿನಕುರ್ವೆ, ಮಲ್ಲಿಕುರ್ವೆ, ಕುರುಕುರ್ವೆ, ಪಾವಿನಕುರ್ವೆ)ಗಳೆಂದು ಗುರುತಿಸುವದು ವಾಡಿಕೆ. ಅವುಗಳ ಮೇಲೆ ಕೋಟೆಯಿದ್ದರೆ “ದುರ್ಗ”ವೆಂದು ಕರೆಯುವರು. (ಬಸವರಾಜದುರ್ಗ). ಛತ್ರಪತಿ ಶಿವಾಜಿಯ ವರ್ಚಸ್ಸಿಗೆ ಒಳಗಾದ ಕಾರವಾರದ ತೀರದಲ್ಲಿಯ ಜಲದುರ್ಗಗಳಿಗೆ ‘ಗಡ’ ಎಂಬ ಪ್ರತ್ಯಯ ಜೋಡಿಸುವದು ಪರಿಪಾಠ. ದೇವಗಡ, ಕೂರ್ಮಗಡ, ಮಧುಲಿಂಗಗಡ ಮುಂತಾದವು ಈ ಗುಂಪಿಗೆ ಸೇರಿದವು. ಇವುಗಳ ಜೊತೆಯಲ್ಲೇ ಇದ್ದ ಈ ನಡುಗಡ್ಡೆಗೆ ‘ಅಂಜದೀವ್’ ಎಂಬ ವಿಶಿಷ್ಟ ಹೆಸರು ಯಾಕೆ? ಎಂಬ ಕುತೂಹಲ ಕೆರಳಿತು.” &lt;br /&gt;&lt;br /&gt;ಈ ಕುತೂಹಲದ ಬೆನ್ನತ್ತಿ ಹೋದ ಕಾಮತರು ಅಂಜದೀವದ ಇತಿಹಾಸವನ್ನೆಲ್ಲ ಶೋಧಿಸಿದ್ದಾರೆ. &lt;br /&gt;ಆರ್ಯದೇವಿಯ ಸ್ಮರಣಾರ್ಥವಾಗಿ ‘ಆರ್ಯದ್ವೀಪ’ವೆಂದು ಕರೆಯಲಾಗುತ್ತಿದ್ದ ಈ ನಡುಗಡ್ಡೆ ವಿದೇಶಿ ನಾವಿಕರ ಬಾಯಲ್ಲಿ ಅಂಜನಿದ್ವೀಪ ಎಂತಲೂ, ಅನಂತರದ ಮಾಪಿಳ್ಳೆ ನಿವಾಸಿಗಳು ಇದನ್ನು ಅಂಜಿದೀವಾ ಎಂದು ಕರೆದರೆಂದೂ ಕಾಮತರು ಟ್ರೇಸ್ ಮಾಡುತ್ತಾರೆ. ಪೋರ್ತುಗೀಜರು ಇಲ್ಲಿ ನೆಲೆ ಊರಿದಾಗ ಈ ಅಂಜಿದೀವಾವನ್ನು ಅಂಜದೀವ್ ಎಂದು ಮಾರ್ಪಡಿಸಿದರೆಂದು ಕಾಮತರು ವಿವರಿಸುತ್ತಾರೆ.&lt;br /&gt;&lt;br /&gt;ಕೊನೆಯ ಭಾಗದಲ್ಲಿ ಕಾಮತರು ಪ್ರಗತಿ ಎನ್ನುವ ಮಾಯಾಮೃಗವು ನಿಸರ್ಗಸಂಪತ್ತಿನ  ಮಲೆನಾಡನ್ನು ಹೇಗೆ ಬೋಳು ಮಾಡಿದೆ ಎಂದು ವಿಷಾದದಿಂದ ವಿವರಿಸಿದ್ದಾರೆ.&lt;br /&gt;&lt;br /&gt;ಕಾಮತರು ಈ ಕೃತಿಯಲ್ಲಿ ಪ್ರಾಚೀನ ಕರ್ನಾಟಕದ ಕಲಾಪ್ರಪಂಚವನ್ನು, ಜನಜೀವನವನ್ನು ಹಾಗೂ ಆಧುನಿಕ ಕಾಲದ ಪರಿಸರ ನಾಶವನ್ನು ಒಬ್ಬ ಕಲಾರಸಿಕನಂತೆ, ಒಬ್ಬ ಸೌಹಾರ್ದ ಸ್ನೇಹಿತನಂತೆ ಆತ್ಮೀಯವಾಗಿ ವಿವರಿಸಿದ್ದಾರೆ. ಆದರೆ ಕೃತಿಯುದ್ದಕ್ಕೂ ಕಂಡು ಬರುವ ಅವರ ಐತಿಹಾಸಿಕ ಜ್ಞಾನ, ಕಲೆಯ ತಿಳುವಳಿಕೆ, ವಿವಿಧ ವಿಷಯಗಳ ಪಾಂಡಿತ್ಯ ,ಕೊನೆಯರಿಯದ ಪರಿಶ್ರಮ ಹಾಗು ಕಲಾರಕ್ಷಣೆಯ ಕಳಕಳಿ ಇವು ಅಚ್ಚರಿಗೊಳಿಸುವಂತಿವೆ.&lt;br /&gt;&lt;br /&gt;ಕಾಮತರ ಬಿಡಿ ಲೇಖನಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ಸಂಕಲಿಸಿ ಕರ್ನಾಟಕ ಇತಿಹಾಸ ಸಂಶೋಧನ ಮಂಡಲಕ್ಕೆ ಪ್ರಕಟಣೆಗಾಗಿ ನೀಡಿದವರು ಶ್ರೀಮತಿ ಜ್ಯೋತ್ಸ್ನಾ ಕಾಮತ. ಇಂತಹ ಒಂದು ಸ್ವಾರಸ್ಯಕರ ಕೃತಿಯನ್ನು ಕನ್ನಡಿಗರಿಗೆ ನೀಡಿದ್ದಕ್ಕಾಗಿ ಅವರಿಗೆ ನಮ್ಮ ಅಭಿನಂದನೆಗಳು ಸಲ್ಲುತ್ತವೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-6553156105916664835?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/6553156105916664835/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=6553156105916664835' title='26 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/6553156105916664835'/><link rel='self' type='application/atom+xml' href='http://www.blogger.com/feeds/5939841257923965225/posts/default/6553156105916664835'/><link rel='alternate' type='text/html' href='http://sallaap.blogspot.com/2009/10/blog-post_06.html' title='‘ನಾ ಕಂಡ ಕರ್ನಾಟಕ’------ಲೇ: ಕೃಷ್ಣಾನಂದ ಕಾಮತ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>26</thr:total></entry><entry><id>tag:blogger.com,1999:blog-5939841257923965225.post-1785428312964020835</id><published>2009-09-05T12:40:00.003+05:30</published><updated>2009-09-06T13:02:19.501+05:30</updated><title type='text'>ಕವಿಗಳು ಬಳಸುವ ಭಾಷೆ</title><content type='html'>ಮೈಸೂರೆನ್ನಿ, ಕನ್ನಡವೆನ್ನಿ,&lt;br /&gt;ಮಲ್ಲಿಗೆಯನ್ನಿ ಒಂದೇ.&lt;br /&gt;ಒಡೆಯರ ಮುಕುಟದ ರತ್ನವಿದೆನ್ನಿ&lt;br /&gt;ಒಡೆಯರ ಕನ್ನಡವೆನ್ನಿ&lt;br /&gt;ಇರುಳನು ಕಾಣದ ಕನ್ನಡವೆನ್ನಿ&lt;br /&gt;ಒಡೆಯದ ಕನ್ನಡವೆನ್ನಿ&lt;br /&gt;&lt;span style="font-weight:bold;"&gt;ಕವಿಗಳು ಬಳಸುವ ಭಾಷೆಯಿದೆನ್ನಿ&lt;/span&gt;&lt;br /&gt;ಒಳಗಿನ ಹೂರಣ ಒಂದೇ.&lt;br /&gt;&lt;br /&gt;‘ಮೈಸೂರು ಮಲ್ಲಿಗೆ’ಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ತಮ್ಮ ಕವನಸಂಕಲನದ ಸ್ವಾಗತ ಪುಟದಲ್ಲಿ, ಕನ್ನಡ ಭಾಷೆಯನ್ನು ಬಣ್ಣಿಸುವ ಒಂದು ಪುಟ್ಟ ಕವನವನ್ನು ಬರೆದಿದ್ದಾರೆ. ಆ ಪುಟ್ಟಕವನದಲ್ಲಿ ಅವರು ಕನ್ನಡವನ್ನು ‘ಕವಿಗಳು ಬಳಸುವ ಭಾಷೆ’ ಎಂದು ಕರೆದಿದ್ದಾರೆ. ಕನ್ನಡಕ್ಕೆ ಸಂದಿರಬಹುದಾದ,ಸಲ್ಲಬಹುದಾದ ಅತ್ಯುಚ್ಚ ಪ್ರಶಂಸೆ ಇದು. &lt;br /&gt;&lt;br /&gt;ನಮ್ಮ  ಕನ್ನಡ ಭಾಷೆ ಅವಿದ್ಯಾವಂತರ ಭಾಷೆ ಅಲ್ಲ. ಇದರಲ್ಲಿ ಅಪಾರ ಪದಸಂಪತ್ತಿದೆ.  ಮನಸ್ವಿನಿಯಂತೆ ಬಳುಕಬಲ್ಲ ಸಾಮರ್ಥ್ಯ ಈ ಭಾಷೆಗಿದೆ. ಶಿಷ್ಟರು (elite) ಕಾವ್ಯರಚನೆಗೆ ಬಳಸಲು ಇಷ್ಟಪಡುವ ಭಾಷೆ ಇದು ಎನ್ನುವದು ಕೆ.ಎಸ್. ನರಸಿಂಹಸ್ವಾಮಿಯವರ ಅಭಿಮತ. ಆದರೆ ಈ ಭಾಷೆಯನ್ನು ಶಿಷ್ಟರಷ್ಟೇ ಅಲ್ಲ, ಜಾನಪದ ಕವಿಗಳೂ ಸಹ ಇಷ್ಟಪಟ್ಟೇ ಬಳಸಿದ್ದಾರೆ. ಕನ್ನಡ ಜಾನಪದ ಕಾವ್ಯದ ಮೇಲ್ಮೆ ಶಿಷ್ಟಕಾವ್ಯಕ್ಕಿಂತ ಏನೂ ಕಡಿಮೆ ಇಲ್ಲ. &lt;br /&gt;&lt;br /&gt;ಕನ್ನಡ ಭಾಷೆಗೇನೋ ಅಪಾರ ಸಾಮರ್ಥ್ಯವಿದೆ. ಆದರೆ ಬಳಸಿದ ಬಟ್ಟೆಯನ್ನೇ ಬಳಸಿದರೆ ಹಳಸಲು ವಾಸನೆ ಬರಬಹುದು. ಅಲ್ಲದೆ, ಸಾಮಾಜಿಕ ಸ್ಥಿತಿ ಬದಲಾದಂತೆ ಕಾವ್ಯರಚನಾಶೈಲಿಯೂ ಬದಲಾಗಬೇಕಾಗುತ್ತದೆ. ಈ ಬದಲಾವಣೆಯು ಅನೇಕ ಸಲ ಕವಿಯ ಆಂತರಿಕ ಅವಶ್ಯಕತೆಯೂ ಆಗಿರುತ್ತದೆ.  &lt;br /&gt;&lt;br /&gt;ಸಾವಿರಾರು ವರ್ಷಗಳವರೆಗೆ ಕನ್ನಡ ನಾಡನ್ನು ಆಳುವವರ ಭಾಷೆ ಕನ್ನಡವಾಗಿರಲಿಲ್ಲ. ಹೀಗಾಗಿ ಆ ಕಾಲದಲ್ಲಿ ಸಂಸ್ಕೃತ ಹಾಗೂ ಪ್ರಾಕೃತಗಳೇ ಕವಿಗಳು ಬಳಸುವ ಭಾಷೆಗಳಾಗಿದ್ದವು. ಕನ್ನಡ ನಾಡಿನ ರಾಜರು ಕನ್ನಡವನ್ನು ನುಡಿಯುವವರೇ ಆದಬಳಿಕ ಈ ಪರಿಸ್ಥಿತಿಯು ಬದಲಾಗಲು ಆರಂಭಿಸಿತು. ಕನ್ನಡ ನಾಡಿಗೆ ಸಾಮ್ರಾಜ್ಯದ ಪಟ್ಟ ದೊರೆತ ಕಾಲದಲ್ಲಿ ಕನ್ನಡ ಭಾಷೆಗೂ ರಾಜಭಾಷೆಯ ಸ್ಥಾನಮಾನ ದೊರೆಯಿತು. ಈ ಸಂದರ್ಭದಲ್ಲಿ ಕನ್ನಡ ನಾಡಿನ ಕವಿಗಳು ರಾಜಭಾಷೆಯಾದ ಕನ್ನಡದಲ್ಲಿಯೇ ಕಾವ್ಯರಚನೆಯನ್ನು  ಪ್ರಾರಂಭಿಸಿದರು. ಆದರೆ ಕಾವ್ಯಶೈಲಿ ಮಾತ್ರ ಈ ಮೊದಲೇ ಮನ್ನಣೆ ಪಡೆದ ಶಿಷ್ಟಮಾನ್ಯ ಶೈಲಿಯಾಗಿತ್ತು. ಆದುದರಿಂದ   ಕನ್ನಡದ ಆದಿಕವಿ ಪಂಪ (ಕ್ರಿ.ಶ.೯೪೦), ಆನಂತರದ ರನ್ನ, ಪೊನ್ನ, ನಾಗಚಂದ್ರ ಮೊದಲಾದವರೆಲ್ಲ ಮಾರ್ಗಶೈಲಿಯಲ್ಲಿಯೇ ಚಂಪೂಕಾವ್ಯರಚನೆ ಮಾಡಿ ಅದ್ಭುತ ಕಾವ್ಯಸೃಷ್ಟಿ ಮಾಡಿದರು. ಕನ್ನಡ ಸಾಮ್ರಾಜ್ಯದ ಉನ್ನತಿಯು ಕನ್ನಡ ಕಾವ್ಯದ ಉನ್ನತಿಗೂ ಕಾರಣವಾಯಿತು. ಈ ಅವಧಿಯನ್ನು ಕನ್ನಡದ  Classical Age ಎಂದು ಕರೆಯಬಹುದೇನೊ? ಇಂತಹ ಕಾಲದಲ್ಲಿ ಬರೆದ ಕವಿಗಳು ಮಾರ್ಗ ಶೈಲಿಯಲ್ಲಿಯೇ ಬರೆದರೂ ಸಹ, ಕನ್ನಡದ ದೇಸಿ ಭಾಷೆಯನ್ನು ತಮ್ಮ ಕಾವ್ಯದಲ್ಲಿ ಹದನರಿತು ಬಳಸಿಕೊಂಡಿದ್ದಾರೆ. ಪಂಪನೇ ತನ್ನ ಮಹಾಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಈ ರೀತಿಯಾಗಿ ಹೇಳಿದ್ದಾನೆ:&lt;br /&gt;&lt;br /&gt;“ಬಗೆ ಪೊಸತಪ್ಪುದಾಗಿ ಮೃದು ಬಂಧದೊಳೊಂದುವುದೊಂದಿ ದೇಸಿಯೊಳ್&lt;br /&gt;ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ, ಕಾವ್ಯಬಂಧಮೊ&lt;br /&gt;ಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ಪೊರೆಯಿಂ ಬಳಲ್ದು ತುಂ&lt;br /&gt;ಬಿಗಳಿನೆ ತುಂಬಿ ಕೋಗಿಲೆಯ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್”&lt;br /&gt;&lt;br /&gt;ಸಾಮಾಜಿಕ ಹಾಗೂ ವೈಚಾರಿಕ ಕ್ರಾಂತಿಯನ್ನು ಉದ್ದೇಶವಾಗಿಟ್ಟುಕೊಂಡ  ಶರಣಚಳವಳಿಯು (ಕ್ರಿಶ.೧೧೫೦) ಕನ್ನಡಕಾವ್ಯದ ಶೈಲಿಯನ್ನೇ ಬದಲಿಸಿತು. ಕವಿಗಳು ಬಳಸುವ ಭಾಷೆಯು ಸಾಮಾನ್ಯರು ಬಳಸುವ ಭಾಷೆಯಾಯಿತು. ಸಾಮಾನ್ಯ ಜನರಿಗಾಗಿ ಬರೆಯುತ್ತಿದ್ದ ಶರಣರು ಆಡುನುಡಿಯಲ್ಲಿಯೇ ತಮ್ಮ ಅಸಾಮಾನ್ಯ ವಚನಗಳನ್ನು ರಚಿಸಿದರು. ಶರಣರ ಅನೇಕ ವಚನಗಳು ಬೋಧನಾತ್ಮಕ ವಚನಗಳಾಗಿದ್ದವು. &lt;br /&gt;ಉದಾಹರಣೆಗೆ: “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ; &lt;br /&gt;“ಛಲ ಬೇಕು ಶರಣಂಗೆ ಪರಧನವನೊಲೆನೆಂಬ” ಇತ್ಯಾದಿ. &lt;br /&gt;ಆದುದರಿಂದಲೆ ಆ ವಚನಕಾರ ಕವಿಗಳ ಭಾಷೆಯೂ ಸಹ ಸರಳ ಹಾಗೂ ನೇರ ಭಾಷೆಯಾಗಿರುತ್ತಿತ್ತು.&lt;br /&gt;&lt;br /&gt;ಜೈನಕವಿಗಳಿಗೆ ಶಿಷ್ಟಮಾನ್ಯ ಕಾವ್ಯ ರಚಿಸುವ ಅವಶ್ಯಕತೆ ಇದ್ದರೆ ವೀರಶೈವ ಕವಿಗಳಿಗೆ ಜನಸಾಮಾನ್ಯರಿಗಾಗಿ ಕಾವ್ಯ ರಚಿಸುವ ಅವಶ್ಯಕತೆ ಇತ್ತು. ಹೀಗಾಗಿ ವಚನಕಾರರ ನಂತರ ಬಂದ ವೀರಶೈವ ಕವಿಗಳು ಬಳಸಿದ ಭಾಷೆಯು  ಮಾರ್ಗಶೈಲಿಯ ಚಂಪೂರಚನೆಯನ್ನು ತ್ಯಜಿಸಿ  ‘ದೇಸಿ ಶೈಲಿ’ಗೆ ಹೊರಳಿತು. ಹರಿಹರ ಹಾಗೂ ರಾಘವಾಂಕರು ಈ ಬದಲಾವಣೆಯ ನೇತಾರರು. &lt;br /&gt;&lt;br /&gt;ಶಿವಭಕ್ತರ ಚರಿತ್ರೆಯನ್ನು ಬರೆಯಲು ಹರಿಹರನು (ಕ್ರಿ.ಶ.೧೨೦೦)  ರಗಳೆಗಳ ರೂಪವನ್ನು ಬಳಸಿದನು. ಹರಿಹರನ ರಸಾವೇಶದ ಕಥನಕ್ಕೆ, ವರ್ಣನೆಗಳಿಗೆ,  ಅನಿಯಮಿತ ಪಾದಸಂಖ್ಯೆಯುಳ್ಳ ರಗಳೆ ಯೋಗ್ಯ ವಾಹನವಾಯಿತು. ಬಸವಣ್ಣನು ಶಿವಪೂಜೆಗೈಯುತ್ತಿರುವಾಗ ಅವನಲ್ಲಿ ಮೂಡಿದ ಸಾತ್ವಿಕ ಆವೇಶವನ್ನು ಹರಿಹರನು ಬಣ್ಣಿಸುವಾಗ ಚಿಕ್ಕ ಚಿಕ್ಕ ಕ್ರಿಯಾಪದಗಳನ್ನೇ ದ್ವಿರುಕ್ತಿಗೊಳಿಸಿ, ಭಾವಾವೇಷವನ್ನು ಸಾಧಿಸುವ ಬಗೆ ಈ ರೀತಿಯಾಗಿದೆ: &lt;br /&gt;&lt;br /&gt;ಮಣಿಮಣಿದು ಕುಣಿಕುಣಿದು ಕಲೆಕಲೆದು ನಲಿದಾಡಿ&lt;br /&gt;ತಣಿತಣಿದು ತಕ್ಕೈಸಿ ಮಿಕ್ಕು ಮಲೆಮಲೆದಾಡಿ&lt;br /&gt;ಆಡುತಾಡುತ್ತಲ್ಲಿ ಪೊಗುಳ್ವದೆ ನೆರೆ ಮರೆತು&lt;br /&gt;ನೋಡನೋಡತ್ತಲ್ಲಿ ನೋಟಮಂ ಮಿಗೆ ಮರೆದು&lt;br /&gt;ಕಣ್ಮುಚ್ಚಿ ಗದಗದಿಸಿ ಜೋಲ್ದು ಜೊಂಪಿಸಿ ಬಿದ್ದು&lt;br /&gt;ಉಣ್ಮುವ ಶಿವಾನಂದರಸದ ಹೊನಲೊಳಗಿದ್ದು&lt;br /&gt;ಈಸಾಡಿ ಗಂಗಾಧರನ ಚರಣಮಂ ಪಿಡಿದು&lt;br /&gt;ಲೇಸಾಗಿ ಚಿತ್ತದೊಳು ಸಂಗನಂ ಸೆರೆ ಹಿಡಿದು &lt;br /&gt;&lt;br /&gt;ಹರಿಹರನ ಶಿಷ್ಯನಾದ ರಾಘವಾಂಕನಿಗೆ ಷಟ್ಪದಿಗಳ ಮೊದಲಿಗ ಎನ್ನಬಹುದು. ರಾಘವಾಂಕನ ವಿಸ್ತಾರವಾದ ಕಥನಕ್ಕೆ, ನಾಟಕೀಯ ಸಂಭಾಷಣೆಗಳಿಗೆ ವಾರ್ಧಕ ಷಟ್ಪದಿಯೇ ಯೋಗ್ಯವಾದ ಸಾಧನವಾಯಿತು. &lt;br /&gt;ಉದಾಹರಣೆಗಾಗಿ ಹರಿಶ್ಚಂದ್ರಕಾವ್ಯದಲ್ಲಿ ನಕ್ಷತ್ರಿಕನು ವಿಶ್ವಾಮಿತ್ರನಿಗೆ ಹೇಳುವ ಈ ನುಡಿಯೊಂದನ್ನು ನೋಡಿರಿ:&lt;br /&gt;&lt;br /&gt;ಬಿಸಿಲಾಗಿ, ಬಿರುಗಾಳಿಯಾಗಿ, ಕಲು ನೆಲವಾಗಿ,&lt;br /&gt;ವಿಷಮಾಗ್ನಿಯಾಗಿ, ನಾನಾ ಕ್ರೂರಮೃಗವಾಗಿ,&lt;br /&gt;ಮಸಗಿ ಘೋರಾರಣ್ಯವಾಗಿ, ಗರ್ಜಿಸಿ ಕವಿದ ಭೂತಬೇತಾಳರಾಗಿ&lt;br /&gt;ಹಸಿವು ನೀರಡಿಕೆ ನಿದ್ರಾಲಸ್ಯವಾಗಿ ಸಂ&lt;br /&gt;ಧಿಸಿ ಹುಂ ಹೊಕ್ಕಲ್ಲಿ ಹೊಕ್ಕು ಧಾವತಿಗೊಳಿಸಿ&lt;br /&gt;ಹುಸಿಗೆ ಹುಂ ಕೊಳಿಸುವೆಂ ಭೂಭೂಜನನೆನ್ನಿಂದ ಬಲ್ಲಿದರಾರೆಂದನು&lt;br /&gt;&lt;br /&gt;ಷಟ್ಪದಿಯ  ದಾರಿಯಲ್ಲಿ ನಡೆದು, ಆಡುನುಡಿಯ ಭಂಡಾರವನ್ನೇ ಸೂರೆಗೈದವನು ಕುಮಾರವ್ಯಾಸ. (ಕ್ರಿ.ಶ. ೧೪೦೦). ಈತನ ಭಾಷೆಯಲ್ಲಿ ಕನ್ನಡದ ದೇಶಿ ಪದಗಳು ಹಾಗೂ ಕನ್ನಡದಲ್ಲಿ ಬೆರೆತ, ಅರಬಿ, ಪಾರಸಿ ಹಾಗೂ ಮರಾಠಿಯಿಂದ ಬಂದಂತಹ ಅನ್ಯದೇಶಿ ಪದಗಳು ಹೇರಳವಾಗಿವೆ. ರಾಘವಾಂಕನ ವಾರ್ಧಕ ಷಟ್ಪದಿಯು ವಿಸ್ತಾರ ಕಥನಕ್ಕೆ ಯೋಗ್ಯವಾಗುತ್ತಿತ್ತು. ಚುಟುಕಾದ ಪದಗಳಲ್ಲಿ ರಸಸೃಷ್ಟಿಯ ಉದ್ದೇಶವಿಟ್ಟುಕೊಂಡ ಕುಮಾರವ್ಯಾಸನು ಬಳಸಿಕೊಂಡದ್ದು ಭಾಮಿನಿ ಷಟ್ಪದಿಯನ್ನು. &lt;br /&gt;&lt;br /&gt;ಆನಂತರದ (ಕ್ರಿ.ಶ. ೧೫೦೦) ವೀರಶೈವ ಕವಿಗಳಾದ ನಿಜಗುಣಿ ಶಿವಯೋಗಿ, ಸರ್ಪಭೂಷಣ ಶಿವಯೋಗಿ ಇವರ ಕಾಲದಲ್ಲಿ  ಕನ್ನಡ ಭಾಷೆಯು ಹೊಸಗನ್ನಡಕ್ಕೆ ಹತ್ತಿರವಾಗಿತ್ತು. ಉನ್ನತ ತತ್ವಜ್ಞಾನವನ್ನು ಅವರು ಅಚ್ಚಕನ್ನಡದಲ್ಲಿಯೆ ಸರಳವಾಗಿ ಹೇಳಲು ಶಕ್ತರಾಗಿದ್ದರು. ಮುಪ್ಪಿನ ಷಡಕ್ಷರಿಯವರ ಈ ಗೀತೆ ಅದಕ್ಕೆ ಉದಾಹರಣೆಯಾಗಿದೆ:&lt;br /&gt;&lt;br /&gt;ಅವರವರ ದರುಶನಕೆ, ಅವರವರ ವೇಷದಲಿ&lt;br /&gt;ಅವರವರಿಗೆಲ್ಲ ಗುರು ನೀನೊಬ್ಬನೆ&lt;br /&gt;ಅವರವರ ಭಾವಕ್ಕೆ, ಅವರವರ ಭಕ್ತಿಗೆ&lt;br /&gt;ಅವರವರಿಗೆಲ್ಲ ದೇವ ನೀನೊಬ್ಬನೆ&lt;br /&gt;ಹೋರಾಟವಿಕ್ಕಿಸಲು ಬೇರಾದೆಯಲ್ಲದೆ&lt;br /&gt;ಬೇರುಂಟೆ ಜಗದೊಳಗೆ ಎಲೆ ದೇವನೆ!&lt;br /&gt;&lt;br /&gt;ಕ್ರಿ.ಶ.೧೭೦೦ರ ಸುಮಾರಿನಲ್ಲಿ ಜೀವಿಸಿದ ಸರ್ವಜ್ಞನು ಲೋಕಹಿತದ ಪದಗಳನು ಬರೆಯುವ ಉದ್ದೇಶದಿಂದ ತನ್ನ ಕಾವ್ಯಕ್ಕೆ ಜನಪದ ಛಂದಸ್ಸಾದ ತ್ರಿಪದಿಯನ್ನು ಬಳಸಿ ಜನಪದ ಕವಿಯೇ ಆದನು. ಇದೇ ಕಾಲದ (ಕ್ರಿ.ಶ.೧೬೭೫) ರಂಗನಾಥನು ಕವಿಗಳು ಬಳಸುವ ಭಾಷೆಯಾದ ಕನ್ನಡದ ಬಗೆಗೆ ಒಂದು ಅಂತಿಮ ನಿರ್ಣಯ ಕೊಟ್ಟಿದ್ದಾನೆ:&lt;br /&gt;&lt;br /&gt;ಸುಲಿದ ಬಾಳೆಯ ಹಣ್ಣಿನಂದದಿ&lt;br /&gt;ಕಳೆದ ಸಿಗುರಿನ ಕಬ್ಬಿನಂದದಿ&lt;br /&gt;ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ&lt;br /&gt;ಲಲಿತವಹ ಕನ್ನಡದ ನುಡಿಯಲಿ&lt;br /&gt;ತಿಳಿದು ತನ್ನೊಳು ತನ್ನ ಮೋಕ್ಷವ&lt;br /&gt;ಗಳಿಸಿಕೊಂಡರೆ ಸಾಲದೆ? ಸಂಸ್ಕೃತದಲಿನ್ನೇನು?&lt;br /&gt;&lt;br /&gt;ಈ ರೀತಿಯಾಗಿ ಕವಿಗಳು ಬಳಸುವ ಭಾಷೆಯಾದ ಕನ್ನಡವು ಆದಿಕವಿ ಪಂಪನಿಂದ ಸರ್ವಜ್ಞನವರೆಗೆ ವಿವಿಧ ರೀತಿಯಲ್ಲಿ ತನ್ನ ಬೆಡಗನ್ನು ತೋರಿಸಿ ಕನ್ನಡಿಗರನ್ನು ನಲಿಸಿತು. ಹಳೆಗನ್ನಡವು ನಡುಗನ್ನಡಕ್ಕೆ ಹಾಗೂ ನಡುಗನ್ನಡವು ಹೊಸಗನ್ನಡಕ್ಕೆ ಬದಲಾದಂತೆ ಕವಿಗಳಲ್ಲಿ ಕೇವಲ ಭಾಷೆಯ ಬದಲಾವಣೆ ಅಷ್ಟೇ ಅಲ್ಲ, ಸಂಕೇತಗಳಲ್ಲಿಯೂ ಸಹ ಆಶ್ಚರ್ಯಕರ ಬದಲಾವಣೆಗಳಾದವು.&lt;br /&gt;&lt;br /&gt;ಉದಾಹರಣೆಗೆ ಮಾರ್ಗಸಂಪ್ರದಾಯದಲ್ಲಿ ವಸಂತ ಋತುವಿನ ಆಗಮನದ ಸಂಕೇತವಾಗಿದ್ದ, ಅಲಂಕಾರಶಾಸ್ತ್ರದ ಪುಟ್ಟ ಒಡವೆಯಾಗಿದ್ದ, ಕನ್ನಡ ಕವಿಗಳಿಗೆ ಪರಮಾಪ್ತವಾದ ಕೋಗಿಲೆಯು, ನಿಜಗುಣಿ ಶಿವಯೋಗಿಗಳ ಕವನದಲ್ಲಿ (“ಕೋಗಿಲೆ, ಚೆಲ್ವ ಕೋಗಿಲೆ”) ಮನಸ್ಸಿನ ಸಂಕೇತವಾಗಿದೆ. ನವೋದಯ ಕಾವ್ಯದಲ್ಲಿ ಬೇಂದ್ರೆಯವರು ತಮ್ಮ ಕವನಗಳಲ್ಲಿ ನಿಜಗುಣಿ ಶಿವಯೋಗಿಗಳನ್ನೇ ಅನುಸರಿಸಿದ್ದಾರೆ. (“ಮನದ ಮಾಮರದ ಕೊನಿಗೆ ಕೋಗಿಲೊಂದು ಕೂಗುತಿತ್ತ”). ಆದರೆ ಕುವೆಂಪು ಕೋಗಿಲೆಯನ್ನು ಕವಿಯ ಸ್ವಾತಂತ್ರ್ಯದ ಸಂಕೇತವಾಗಿ ಬಳಸಿದ್ದಾರೆ. (“ಕೋಗಿಲೆ ಹಾಗು ಸೋವಿಯಟ್ ರಶಿಯಾ”). ನವ್ಯಕಾವ್ಯದಲ್ಲಿ ನಿಸಾರ ಅಹಮದರು ಕಾಗೆಯನ್ನು ಕೋಗಿಲೆಗೆ ಪರ್ಯಾಯ ಸಂಕೇತವಾಗಿ ಬಳಸಿದ್ದಾರೆ. (“ಕಾಗೆ ಕೂಗದ ಮುನ್ನ ಏನಿತ್ತಣ್ಣ ಜಗದಿ?”)&lt;br /&gt;&lt;br /&gt;ಹಳೆಯ ಛಂದೋಬದ್ಧ ಕಾವ್ಯಮಾರ್ಗವನ್ನು ತ್ಯಜಿಸಿ, ಕನ್ನಡ ಕಾವ್ಯಕ್ಕೆ ನವೋದಯದ ಮಾರ್ಗವನ್ನು ತೋರಿಸುವ ಅವಶ್ಯಕತೆಯನ್ನು ಕಂಡವರು ಕನ್ನಡದ ಕಣ್ವ ಶ್ರೀ ಬಿ.ಎಮ್. ಶ್ರೀಕಂಠಯ್ಯನವರು. ಇವರ ಸಮಯದಲ್ಲಿ, ಆಂಗ್ಲ ಪ್ರಭುತ್ವವು ತನ್ನ ವಿಚಾರ ಹಾಗು ತನ್ನ ಶಿಕ್ಷಣವನ್ನು ಭಾರತದ ಮೇಲೆ ಹೇರಿತ್ತು. ಹೀಗಾಗಿ ಆಂಗ್ಲ ಸಾಹಿತ್ಯದ ಪ್ರಭಾವವು ಭಾರತೀಯರ ಮೇಲೆ, ಅದರಂತೆ ಕನ್ನಡಿಗರ ಮೇಲೂ ಆಗಿತ್ತು.ಆಂಗ್ಲ ಸಾಹಿತ್ಯದ ಸವಿಯನ್ನು ಉಂಡ ಶ್ರೀಕಂಠಯ್ಯನವರು ಆಂಗ್ಲಭಾಷೆಯ ಭಾವಗೀತೆಗಳ ಸೊಗಸನ್ನು ಕನ್ನಡಕ್ಕೆ ತರಲು ಬಹುವಾಗಿ ಶ್ರಮಿಸಿದರು. ಅವರ ಮಾತಿನಲ್ಲಿಯೇ ಹೇಳುವದಾದರೆ:&lt;br /&gt;“ಅವಳ ಉಡುಗೆ ಇವಳಿಗಿಟ್ಟು ನೋಡಬಯಸಿದೆ,&lt;br /&gt;ಇವಳ ತೊಡುಗೆ ಅವಳಿಗಿಟ್ಟು ಹಾಡಬಯಸಿದೆ.”&lt;br /&gt;ಅದುದರಿಂದ ಇಂದಿನ ಕವಿಗಳು ಬಳಸುವ ಕನ್ನಡ ಭಾಷೆಯು ಶ್ರೀಕಂಠಯ್ಯನವರ ಕೊಡುಗೆ ಎನ್ನಬಹುದು.&lt;br /&gt;&lt;br /&gt;ನವೋದಯ ಕಾಲವು ಆದರ್ಶದ ಕಾಲ, ನಿಸರ್ಗಪ್ರೇಮದ ಕಾಲ. ಇದರ ಫಲವಾಗಿ ನವೋದಯದ ಕವಿಗಳು ನಾಡಪ್ರೇಮದ ಬಗೆಗೆ, ನಿಸರ್ಗದ ಬಗೆಗೆ , ಕನ್ನಡದ ಅಭಿಮಾನದ ಬಗೆಗೆ ವಿಪುಲವಾಗಿ ಬರೆದರು. ನವೋದಯ ಕಾಲದ ಪ್ರಮುಖ ಕವಿಗಳೆಂದರೆ ಬೇಂದ್ರೆ, ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ ಹಾಗೂ ಜಿ.ಪಿ.ರಾಜರತ್ನಮ್. ಈ ನಾಲ್ವರೂ ಕಾವ್ಯರಚನೆಯಲ್ಲಿ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮದೇ  ಕವಿಭಾಷೆಯನ್ನು ರೂಪಿಸಿದರು. ಈ ಕವಿಗಳಲ್ಲಿ ಬೇಂದ್ರೆಯವರದು ಸರಳ ಭಾಷೆಯಾದರೆ, ಕುವೆಂಪುರವರದು ಅಲಂಕಾರಿಕ ಭಾಷೆ. ನರಸಿಂಹಸ್ವಾಮಿಯವರದು ಆಪ್ತಭಾಷೆ. ರಾಜರತ್ನಮ್ ಅವರದು ಆಡುನುಡಿಯ ವೇಷವನ್ನು ತೊಟ್ಟ ಭಾಷೆ.&lt;br /&gt;&lt;br /&gt;ಬೇಂದ್ರೆಯವರದು ಅತ್ಯಂತ inter active ಸ್ವಭಾವ. ಅವರ ಪಾಂಡಿತ್ಯವೂ ಅಗಾಧವಾದದ್ದು. ಅದರೊಡನೆ ಅವರಿಗೆ ಒಲಿದ ಬಂದ ಮಾತಿನ ಚತುರತೆ. ಹಾಗೆಂದು ಅವರು ಬರೆಯುವವದು ಪಂಡಿತರಿಗಾಗಿ ಅಲ್ಲ. ಸಂತೆಯಲ್ಲಿಯ ಸಾಮಾನ್ಯ ಮನುಷ್ಯನನ್ನು ಗೆಳೆಯನಂತೆ ಗಣಿಸಿ ಹರಟೆ ಹೊಡೆಯುವ ರೀತಿಯ ಕಾವ್ಯಭಾಷೆ ಅವರದು. ಇವೆಲ್ಲಾ ಒಟ್ಟುಗೂಡಿ ಅವರ ಕವನದ ಭಾಷೆಯನ್ನು ರೂಪಿಸಿವೆ.&lt;br /&gt;ಬೇಂದ್ರೆ ಕಾವ್ಯವು ಜನಪದ ಸತ್ವವನ್ನು ಹೀರಿದ ಕಾವ್ಯ. ಅವರು ತಮ್ಮ ಕೇಳುಗರಿಂದ ಬಯಸುತ್ತಿದ್ದದ್ದು ಶ್ರಾವಕನ ಸಹ-ಅನುಭೂತಿಯನ್ನು.&lt;br /&gt;“ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ&lt;br /&gt;ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ, ಆ ಸವಿಯ ಹಣಿಸು ನನಗೆ.”, ಎನ್ನುತ್ತಾರೆ ಬೇಂದ್ರೆ. &lt;br /&gt;ಈ ತರಹದ ಕಾವ್ಯದ ಅತ್ಯುತ್ತಮ ಉದಾಹರಣೆಗಳೆಂದರೆ ‘ಬೆಳದಿಂಗಳ ನೋಡs’, ‘ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾವಾ’ ಇತ್ಯಾದಿ.&lt;br /&gt;&lt;br /&gt;ಆದರೆ ಈ ಕಾರಣದಿಂದಲೇ ಅವರ ಭಾಷೆ ಕೆಲವೊಮ್ಮೆ ಅತಿ ಸರಳವಾಗಿ ಬಿಡುತ್ತದೆ. ಒಳಗಿನ ಭಾವ ಎಷ್ಟೇ ಸಂಕೀರ್ಣವಾಗಿರಲಿ, ಹೊರಗಿನ ಮುಖಮುದ್ರೆ ಅತಿ ಸರಳ. &lt;br /&gt;ಇದು ಅವರ ಕಾವ್ಯಭಾಷೆಯ ದೋಷವೆಂದೇ ಹೇಳಬೇಕಾಗುತ್ತದೆ.&lt;br /&gt;&lt;br /&gt;ಉದಾಹರಣೆಗೆ, ‘ಕರಡಿ ಕುಣಿತ’ವೆನ್ನುವ ಅವರ ಕವನದ ಈ ನುಡಿಯನ್ನು  ನೋಡಿರಿ:&lt;br /&gt;“ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ&lt;br /&gt;ಜಾಂಬುವಂತನ ಹಿಡಿದು ತಂದಾನೊ&lt;br /&gt;ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ&lt;br /&gt;ಧಣಿ ದಾನ ಕೊಡುವನು ಎಂದಾನೊ.”&lt;br /&gt;&lt;br /&gt;ಕರಡಿ ಕುಣಿಸುವವನ ಸಾಧಾರಣ ಮಾತುಗಳಂತೆ ತೋರುವ ಈ ಸಾಲುಗಳಲ್ಲಿ ಹುದುಗಿದ ಅರ್ಥ ಅಸಾಧಾರಣವಾದದ್ದು. ಕಾಡಾಡಿಯಾದ ಮಾನವನು, ತನ್ನ ಆದಿಮಾನವನ ಅವಸ್ಥೆಯಲ್ಲಿ ಸ್ವತಂತ್ರವಾಗಿ ಜೀವಿಸುತ್ತಿದ್ದವನು, ನಾಗರಿಕತೆ ಬೆಳೆದಂತೆ feudal ವ್ಯವಸ್ಥೆಗೆ ಹೇಗೆ ಬಲಿಯಾದನು ಎನ್ನುವ ವರ್ಣನೆ ಇಲ್ಲಿದೆ. &lt;br /&gt;ಈ ಆದಿಮಾನವ ಸಮಾಜ ಎಷ್ಟು ಹಳೆಯದು ಆತ ಎಷ್ಟು ಸ್ವಚ್ಛಂದವಾಗಿ ಬದಕುತ್ತಿದ್ದ ಎನ್ನುವದನ್ನು ಈ ಮತ್ತೊಂದು ನುಡಿಯಲ್ಲಿ ನೋಡಬಹುದು:&lt;br /&gt;&lt;br /&gt;“ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ&lt;br /&gt;ಕಲಿಯುಗದ ಕಲ್ಕೀನ ಕಂಡಾನೋ&lt;br /&gt;ಜಂಬೂನದಿ ದಂಡೀಯ ಜಾಂಬುನೀರಲ ಹಣ್ಣು&lt;br /&gt;ಕಲಿಯುಗದ ಕೊನೆಗೀವ ಉಂಡಾನೋ”&lt;br /&gt;&lt;br /&gt;(ಜಾಂಬುವಂತ ಎನ್ನುವ communityಯು ಭಾರತದ ಅತ್ಯಂತ ಹಳೆಯ communityಗಳಲ್ಲಿ ಒಂದು ಎನ್ನುವದನ್ನು ಗಮನಿಸಬೇಕು.)&lt;br /&gt;ಈ ವಿಶೇಷ ಅರ್ಥವು ಕವನದ ಸರಳ ಭಾಷೆಯಲ್ಲಿ ಎದ್ದು ಕಾಣುವದಿಲ್ಲ. &lt;br /&gt;&lt;br /&gt;“ಕರಿಮರಿ ನಾಯಿ” ಎನ್ನುವ ಅವರ ಮತ್ತೊಂದು ಕವನದಲ್ಲಿಯೂ ಈ ದೋಷವನ್ನು ಕಾಣಬಹುದು.&lt;br /&gt;“ಕರಿಮರಿ ನಾಯಿ ಕುಂಯ್ ಗುಡುತಿತ್ತು&lt;br /&gt;ಭಟ್ಟರ ಬಾಯಿ ಒಟಗುಡತಿತ್ತು&lt;br /&gt;ಬೆಚ್ಚನ ಮನೆಯ ಹೊಚ್ಚಲದೊಳಗೆ&lt;br /&gt;ನಿಂತರು ಭಟ್ಟರು ಹಣಕುತ ಹೊರಗೆ”&lt;br /&gt;&lt;br /&gt;ಈ ನುಡಿಯಲ್ಲಿಯ ‘ಭಟ್ಟರ ಬಾಯಿ ಒಟಗುಡತಿತ್ತು’ ಎನ್ನುವ ಸಾಲಿನಲ್ಲಿ ಅರ್ಥಹೀನ ಪುರೋಹಿತಶಾಹಿಯ ಪ್ರಾಬಲ್ಯವನ್ನೂ, ‘ಬೆಚ್ಚನ ಮನೆಯ ಹೊಚ್ಚಲದೊಳಗೆ’ ಎನ್ನುವ ಸಾಲಿನಲ್ಲಿ ಸುಭದ್ರ ಜೀವನದ ವರ್ಣನೆಯನ್ನೂ ಕಾಣಬಹುದು. ಆದರೆ ‘ಬಂಡಾಯಗಾರರ’ ಕಣ್ಣಿಗೆ ಈ ಸರಳ ಸಾಲುಗಳಲ್ಲಿಯ ವೈಚಾರಿಕತೆ ಕಾಣದೇ ಹೋಗುತ್ತದೆ.&lt;br /&gt;&lt;br /&gt;ನವೋದಯ ಯುಗದ ಮತ್ತೊಬ್ಬ ಮಹತ್ವದ ಕವಿ ಎಂದರೆ ಕುವೆಂಪು. ಕುವೆಂಪುರವರ ಕಾವ್ಯಭಾಷೆಯ ವೈಶಿಷ್ಟ್ಯಗಳೆಂದರೆ ಸಂಸ್ಕೃತಭೂಯಿಷ್ಠವಾದ, ವಾಗಾಡಂಬರದ ಪದಸಂಯೋಜನೆ ಹಾಗೂ ಆದೇಶಶೈಲಿ. ಇಂತಹ ಕಾವ್ಯಭಾಷೆಯನ್ನು ಬಳಸಲು ಅವರಿಗಿದ್ದ ಕಾರಣಗಳೇನು? ಅವರ ಕವನಗಳಲ್ಲಿ ಸಂಸ್ಕೃತಪದಗಳ ಬಾಹುಲ್ಯಕ್ಕೆ ಮೂರು ಕಾರಣಗಳಿವೆ. ಮೊದಲನೆಯದು ಕರ್ಣಮಧುರ ಪದಸಂಯೋಜನೆಯ ಉದ್ದೇಶ. ಎರಡನೆಯ ಉದ್ದೇಶವೆಂದರೆ ಕುವೆಂಪುರವರ ಒಂದು ವೈಯುಕ್ತಿಕ ಮನೋಧರ್ಮ. ಅವರ ಕಾದಂಬರಿ (ಕಾನೂರು ಸುಬ್ಬಮ್ಮ ಹೆಗ್ಗಡಿತಿ)ಯ ನಾಯಕನಾದ ಹೂವಯ್ಯನು ಕುವೆಂಪುರವರ ಪ್ರತ್ಯಾತ್ಮ (alter ego)ನಾಗಿದ್ದಾನೆ ಎನ್ನಲಾಗುತ್ತದೆ. ಸಾಮಾನ್ಯ ಜನತೆಯಿಂದ ಹೂವಯ್ಯನು ಮಾನಸಿಕವಾಗಿ ಎಷ್ಟು ದೂರವಿದ್ದನೋ, ಕುವೆಂಪು ಸಹ ಮಾನಸಿಕವಾಗಿ ಅಷ್ಟೇ ದೂರವಿದ್ದರು ಎನ್ನಬಹುದು. ಹೀಗಾಗಿ ಕುವೆಂಪುರವರು ಎಷ್ಟೇ ಜನಪರ ಕವಿಯಾಗಿದ್ದರೂ ಸಹ ಜನತೆಯಿಂದ ಒಂದು ವಿಶಿಷ್ಟ ದೂರವನ್ನು ಕಾಯ್ದುಕೊಳ್ಳಲು ಬಯಸುತ್ತಿದ್ದರು. ಹೀಗಾಗಿ ಆಡುನುಡಿಯ ಶೈಲಿ ಅವರ ಕಾವ್ಯದಲ್ಲಿ ಸಹಸಾ ಕಂಡುಬರುವದಿಲ್ಲ. ಮೂರನೆಯ ಉದ್ದೇಶವೆಂದರೆ ಕುವೆಂಪು ತಮ್ಮ ಕವನಗಳ ಮೂಲಕ ಓದುಗರಿಗೆ ಒಂದು ವಿಚಾರವನ್ನು ತಲುಪಿಸಲು ಬಯಸುತ್ತಿದ್ದರು. ಆದರೆ ಈ ವಿಚಾರವನ್ನು ಸರಳವಾದ ಭಾಷೆಯಲ್ಲಿ ನೀಡುವದು ಸಾಧ್ಯವಿರಲಿಲ್ಲ. ಸರಳವಾದ ಭಾಷೆಯಲ್ಲಿ ವಿಚಾರವನ್ನು ಮಂಡಿಸಿದ ಬೇಂದ್ರೆಯವರ ಕವನಗಳು ಅಯಶಸ್ವಿಯಾಗಿದ್ದನ್ನು ನಾವು ನೋಡಿದ್ದೇವೆ. ಇಂತಹ ತಪ್ಪನ್ನು ಕುವೆಂಪು ಮಾಡಲಿಲ್ಲ.&lt;br /&gt;ಇದಕ್ಕೆ ಉದಾಹರಣೆಯಾಗಿ ಕುವೆಂಪು ಅವರ ಕವನವೊಂದರ ಈ ಸಾಲನ್ನು ನೋಡಿ:&lt;br /&gt;“ಬಾಗಿಲಲಿ ಕೈ ಮುಗಿದು ಒಳಗೆ ಬಾ ಯಾತ್ರಿಕನೆ,&lt;br /&gt;ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ”&lt;br /&gt;&lt;br /&gt;ಈ ಸಾಲುಗಳಲ್ಲಿ ಕವಿ ಓದುಗನಿಗೆ ‘ನೀನು ಭಾರತೀಯ ಪರಂಪರೆಯ ಈ ಕಲೆಯನ್ನು ಗೌರವಿಸು’ ಎಂದು ಹೇಳಬಯಸುತ್ತಾನೆ. ಆದರೆ ಈ ಆದೇಶವನ್ನು ನೇರನುಡಿಯಲ್ಲಿ, ಆಡುಮಾತಿನಲ್ಲಿ ಹೇಳಲು ಇಷ್ಟಪಡದ ಕವಿ ಸಂಸ್ಕೃತ ಭೂಯಿಷ್ಠ ಭಾಷೆಯ ಮೂಲಕ ಸುತ್ತು ಬಳಸಿ ಹೇಳುತ್ತಿದ್ದಾರೆ.  &lt;br /&gt;&lt;br /&gt;ಇದರಂತೆ ಅವರ ಮತ್ತೊಂದು ಕವನದ ಕೆಲವು ಸಾಲುಗಳನ್ನು ನೋಡಿರಿ: &lt;br /&gt;“ಓ ನನ್ನ ಚೇತನಾ, ಆಗು ನೀ ಅನಿಕೇತನಾ!”&lt;br /&gt;ತಮ್ಮನ್ನೇ ಸಂಬೋಧಿಸುತ್ತಿರುವಂತೆ ತೋರುವ ಈ ಸಾಲಿನಲ್ಲಿ ಕುವೆಂಪು , ಒಂದು ಸಾರ್ವಜನಿಕ ಕರೆಯನ್ನೇ ನೀಡುತ್ತಿದ್ದಾರೆ: “ನಿಮ್ಮ ಪರಿಮಿತ ಹಾಗೂ ಸ್ವಾರ್ಥಪೂರ್ಣ ಉಪಾಧಿಗಳನ್ನು  ತ್ಯಜಿಸಿರಿ” ಎಂದು.&lt;br /&gt;ಹಾಗೆಂದು ಅವರ ಸಂಸ್ಕೃತ ಭೂಯಿಷ್ಠ ಆದೇಶಗಳು ಯಾವಾಗಲೂ ಯಶಸ್ವಿಯಾಗಿವೆ ಅಂತಲ್ಲ.&lt;br /&gt;ಉದಾಹರಣೆಗೆ ಈ ಕವನವನ್ನು ನೋಡಿರಿ:&lt;br /&gt;&lt;br /&gt;“ ಪ್ರಿಯ ಬಂಧು ಇದೆ ಹೊತ್ತು ಧ್ಯಾನಕ್ಕೆ: ಹೃದ್ಗ್ರಂಥ&lt;br /&gt;ಪ್ರಳಯಕ್ಕೆ; ಏಳು ಸಮಾಧಿಸ್ಥಾ ವಿಶ್ವದಲ್ಲಿ&lt;br /&gt;ತಲ್ಲೀನವಾಗುವಂ ಛವಿ ಕವಿಯೊಳಾಗುವಂತೆ”.&lt;br /&gt;&lt;br /&gt;ಇಲ್ಲಿ ಕವಿ ಬಳಸಿದ ಸಂಸ್ಕೃತ ಭಾಷೆಯೇ ಕೃತಕವಾಗುತ್ತದೆ. ತಲ್ಲೀನತೆ ತಾನಾಗಿ ಬರಬೇಕಲ್ಲದೆ, ಅದನ್ನು ಆಹ್ವಾನಿಸಲಾಗದು.&lt;br /&gt;ಆಡುನುಡಿಯಲ್ಲಿ, ಸರಳ ಕನ್ನಡದಲ್ಲಿ ಆದೇಶವನ್ನು ನೀಡಿದಂತಹ  ಕುವೆಂಪುರವರ ಕವನಗಳೂ ಸಹ ಅಯಶಸ್ವಿಯಾಗಿವೆ. ಉದಾಹರಣೆಗೆ ಈ ಕವನವನ್ನು ನೋಡಿರಿ:&lt;br /&gt;&lt;br /&gt;“ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ, ಬೇಗ ಸಖಿ&lt;br /&gt;ಬೃಂದಾವನದಿ ಹಾಲನು ಕೊಳ್ಳುವರಾರಿಹರೆ ಹೇಳಿಂದುಮುಖಿ”&lt;br /&gt;&lt;br /&gt;ಭಾರತದ ಕೋಗಿಲೆ ಎಂದು ಹೆಸರಾದ ಶ್ರೀಮತಿ ಸರೋಜಿನಿ ನಾಯಡು ಅವರು ಬರೆದ ಕವನವೊಂದನ್ನು ಈ ಕವನವು ಹೋಲುತ್ತದೆ. ಸರೋಜಿನಿ ನಾಯಡು ಅವರ ಆ ಮನೋಹರ ಕವನದಲ್ಲಿ, ಹಾಲು ಮಾರುವ ಗೋಪಿಕಾ ಸ್ತ್ರೀಯಲ್ಲಿ ಕಂಡು ಬರುವುದು ಆತ್ಮಸಮರ್ಪಣೆ ಹಾಗೂ ಸತತ ಕೃಷ್ಣಧ್ಯಾನ. ಆದರೆ ಕುವೆಂಪುರವರ ಕವನದಲ್ಲಿ ಕಂಡುಬರುವದು ದೈಹಿಕ ಶೃಂಗಾರ ಲೋಲುಪತೆ ಹಾಗೂ ಆದೇಶಶೈಲಿ. ಕುವೆಂಪುರವರ ಕವನದ ಗೋಪಸ್ತ್ರೀ ತನ್ನ ಸಖಿಗೆ ಹೇಳುವದು ಹೀಗೆ: &lt;br /&gt;“ತೊಂಡೆಯ ಹಣ್ಣನು ತುಟಿಗಳು ನಗಲಿ, &lt;br /&gt;ವದನವು ಮೀರಲಿ ತಾವರೆಯ”. &lt;br /&gt;&lt;br /&gt;‘ಕೃಷ್ಣದರ್ಶನಕ್ಕೆ ಹೋಗುವಾಗ ನಿನ್ನ ತುಟಿಗಳು ತೊಂಡೆಯ ಹಣ್ಣುಗಳಂತೆ ಕೆಂಪಾಗಿ ಕಾಣಿಸಲಿ’ ಎಂದು ಗೋಪಸ್ತ್ರೀ ತನ್ನ ಸಖಿಗೆ ಆದೇಶ ನೀಡುತ್ತಿದ್ದಾಳೆ. ಈ ಆದೇಶದಲ್ಲಿ ಮಹತ್ವವಿರುವದು ದೈಹಿಕ ಸೌಂದರ್ಯಕ್ಕೆ!&lt;br /&gt;ದೈಹಿಕ ಸೌಂದರ್ಯದ ಆರಾಧನೆ ಕುವೆಂಪುರವರ ಕವನಗಳ ಮತ್ತೊಂದು ಲಕ್ಷಣ. ಅವರ ಜನಪ್ರಿಯ ಕವನವಾದ “ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ” ಇದರ ಈ ಸಾಲುಗಳನ್ನು ಗಮನಿಸಿರಿ:&lt;br /&gt;&lt;br /&gt;“ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ&lt;br /&gt;ರಂಜಿಸುತ್ತಿದೆ, ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ.”&lt;br /&gt;&lt;br /&gt;ಈ ಸಾಲುಗಳಲ್ಲಿ “ಮೂಡುವೆಣ್ಣಿನ ಮೈಸಿರಿ ರಂಜಿಸುತ್ತಿದೆ” ಎನ್ನುವ ಪದಗಳು ಸೂಕ್ಷ್ಮಜ್ಞ ಓದುಗನಲ್ಲಿ ತಟಕ್ಕನೆ ಒಂದು ತರಹದ ಅರುಚಿಯನ್ನು ಹುಟ್ಟಿಸುತ್ತವೆ. ‘ಮೂಡುವೆಣ್ಣಿ’ಗೆ ಸರೂಪವಾದ  ‘ಬೆಲೆವೆಣ್ಣು’ ಎನ್ನುವ ಪದ ಮಿಂಚಿನಂತೆ ಮನಸ್ಸಿನಲ್ಲಿ ಹೊಳೆದು ಹೋಗುತ್ತದೆ. ಮತ್ತು ಇಂತಹ ಒಂದು ಕಾರಣಕ್ಕಾಗಿ “ಆಕೆಗೆ ಸುಪ್ರಭಾತವ ಬಯಸಿರಿ” ಎನ್ನುವ ಆದೇಶ ಓದುಗನಲ್ಲಿ ಹುಟ್ಟಿದ ಅರುಚಿಯನ್ನು ಇನ್ನೂ ಹೆಚ್ಚಿಸುತ್ತದೆ. ಕವನದ ಕೊನೆಯ ಸಾಲೂ ಸಹ ಆದೇಶದಲ್ಲಿಯೇ ಕೊನೆಯಾಗುತ್ತದೆ: “ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇರಲಿ ಈದಿನ ಇಂದಿಗೆ.” &lt;br /&gt;ಸೂಕ್ಷ್ಮಗ್ರಾಹಿ ಓದುಗನಿಗೆ ಇಂತಹ ಅದೇಶಶೈಲಿ ಹಾಗೂ ದೈಹಿಕ ಶೃಂಗಾರ ಲೋಲುಪತೆ ಸರಿ ತೋರದು. ಇಲ್ಲಿಯೂ ಸಹ ಆಡುನುಡಿಯ ಬಳಕೆಯೇ ಈ ವ್ಯತ್ಯಸ್ತ ಪರಿಸ್ಥಿತಿಗೆ ಕಾರಣವಾಗಿರಬಹುದು. ಆದರೂ ಸಹ ಕುವೆಂಪುರವರ ಈ ಕವನ ತುಂಬ ಜನಪ್ರಿಯವಾಗಿದೆ. ಈ ಕವನದ ಕರ್ಣಮಧುರತೆಯೇ ಅದಕ್ಕೆ ಕಾರಣವಾಗಿರಬಹುದು.&lt;br /&gt;&lt;br /&gt;ಅನೇಕ ಸಲ ಕುವೆಂಪುರವರ ಸಂಸ್ಕೃತಭೂಯಿಷ್ಠ ವಾಗಾಡಾಂಬರದ ಭಾಷೆಯು ಅನುಕೂಲಕರ ಪರಿಣಾಮವನ್ನೇ ಉಂಟು ಮಾಡುತ್ತದೆ. ಈ ಭಾಷೆಯ ಅನುಕೂಲವೆಂದರೆ ಸಾಧಾರಣ ಕಾವ್ಯವೂ  ಅಸಾಧಾರಣವಾಗಿಯೇ ತೋರುವದು. ಕವನದಲ್ಲಿ ವೈಚಾರಿಕತೆ ಇದ್ದಂತೆ ಭಾಸವಾಗುವದು. ಈ ವಾಗಾಡಂಬರದ (high sounding) ಶಬ್ದಜಾಲದಲ್ಲಿ ಕಾವ್ಯದ ವಾಗರ್ಥವು ಅಳಿಸಿ ಹೋದರೆ ಆಶ್ಚರ್ಯವಿಲ್ಲ. ಇದಕ್ಕೆ ಉದಾಹರಣೆಯಾಗಿ ಈ ಮೊದಲು ಉದ್ಧರಿಸಿದ ಅವರ ಕವನವೊಂದರ ಸಾಲುಗಳನ್ನೇ ಮತ್ತೊಮ್ಮೆ ನೋಡಿರಿ:&lt;br /&gt;“ಬಾಗಿಲಲಿ ಕೈ ಮುಗಿದು ಒಳಗೆ ಬಾ ಯಾತ್ರಿಕನೆ,&lt;br /&gt;ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ”&lt;br /&gt;&lt;br /&gt;“ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ” ಎಂದು ಹೇಳುವಾಗ ಕುವೆಂಪು ಪ್ರಾಸದ ಬಲೆಗೆ ಸಿಕ್ಕು ಬಿದ್ದಿರುವರೆಂದು ಅನ್ನಿಸದೇ ಇರದು. ಅಲ್ಲದೆ ‘ಕಲೆಯ ಬಲೆಯು’ ಅನ್ನುವಾಗ ಕಲೆಯು ಬಲೆಯಾಗಲು ಹೇಗೆ ಸಾಧ್ಯ ಎನ್ನುವ ಸಂದೇಹ ಬಾರದಿರದು.  ಈ ದೋಷಗಳ ಹೊರತಾಗಿಯೂ ಸಹ ಈ ಕವನ ಜನಪ್ರಿಯವಾಗಲು ಕಾರಣವೆಂದರೆ (೧) ಕರ್ಣಮಧುರ ಭಾಷೆ (೨) ಆದೇಶಶೈಲಿ (೩) ಹಾಗೂ ವಾಗಾಡಂಬರ. &lt;br /&gt;&lt;br /&gt;ತಮ್ಮ ಕಾವ್ಯದಲ್ಲಿ ಇಂತಹ ಭಾಷೆಯನ್ನು ಬಳಸಿದ ಕುವೆಂಪು ತಮ್ಮ ಕಾದಂಬರಿಯಲ್ಲಿ ಬಳಸುವ ಭಾಷೆಯೇ ಬೇರೆ.&lt;br /&gt;ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು. ನಿಸರ್ಗದ ಮಡಿಲಲ್ಲಿಯೇ ಬೆಳೆದ ಒಂದು ಗಂಡು,ಅಂತಹದೇ ಒಂದು ಹೆಣ್ಣಿನ ಜೊತೆಗೆ ನಿಸರ್ಗದಲ್ಲಿಯೇ ಕೂಡುವ ಒಂದು ಸಂದರ್ಭವನ್ನು ಕುವೆಂಪು ಇಲ್ಲಿ ಬರೆದಿದ್ದಾರೆ. ಇಲ್ಲಿ ಬಳಸಿದ ಭಾಷೆ ಅಚ್ಚಕನ್ನಡ. ಅದಕ್ಕೆ ಕಾರಣವೆಂದರೆ ಕುವೆಂಪು ಯಾವುದು ಸಹಜವೋ ಅದನ್ನು ಸಹಜವೆನ್ನುವಂತೆ ತೋರಿಸಲು ಬಯಸುತ್ತಾರೆ. ಇಲ್ಲಿ ಸಂಸ್ಕೃತ ಭಾಷೆಯ ಪದಗಳನ್ನು ಬಳಸಿದ್ದರೆ, ಈ ಕೂಟವು ಸಹಜಕ್ರಿಯೆ ಆಗುತ್ತಿರಲಿಲ್ಲ. ಬದಲು ಶೃಂಗಾರವರ್ಣನೆ ಆಗುತ್ತಿತ್ತು. ಆದುದರಿಂದ ಇಲ್ಲಿಯ ರತಿಕ್ರೀಡೆಯ ವರ್ಣನೆಯನ್ನು ಓದಿದಾಗ ಅದು ಸಹಜಕ್ರಿಯೆಯಂತೆಯೇ ಭಾಸವಾಗುತ್ತದೆ. ನಿಸರ್ಗದ ಮಕ್ಕಳ ಸಹಜ ಮನಸ್ಸಿನ ಸಹಜಭಾವವು ಅತ್ಯಂತ ಸಹಜವಾಗಿಯೇ ವ್ಯಕ್ತವಾಗುತ್ತದೆ.&lt;br /&gt;&lt;br /&gt;ನವ್ಯಕಾವ್ಯದ ಜನಕರಾದ ಗೋಪಾಲಕೃಷ್ಣ ಅಡಿಗರ ನವ್ಯಕಾವ್ಯಭಾಷೆಯು  ಬೇಂದ್ರೆಯವರ ಸರಳಭಾಷೆಗೆ ಅತ್ಯಂತ ವಿರುದ್ಧವಾದ ಭಾಷೆ. ಅಡಿಗರು ತಮ್ಮ ಕವನಗಳಲ್ಲಿ ಇಂಗ್ಲಿಶ್, ಸಂಸ್ಕೃತ ಹಾಗೂ ಉರ್ದು/ಹಿಂದಿ ಪದಗಳನ್ನು ಮೋಹಕವಾಗಿ ಪೋಣಿಸುತ್ತಾರೆ. &lt;br /&gt;ಉದಾಹರಣೆಗಳು:&lt;br /&gt;&lt;br /&gt; “ಈಡಿಪಸ್ಸಿನ ಗೂಢಪಾಪಲೇಪಿತ ನಾನು;&lt;br /&gt;ಟ್ರ್ಯಾಕ್ಟರನ್ನೇರಿದೆನು; ಉತ್ತೆ, ಸಿಗಿದೆ.&lt;br /&gt;ಬಿತ್ತಿದೆನು, ಬೆಳೆದೆ ಅಟಂಬಾಂಬು ಕಾಳುಗಳ:&lt;br /&gt;ಮಾರಕ ಕ್ರಿಮಿಪೈರ ಗೋರಿ ನಲಿದೆ.”&lt;br /&gt;&lt;br /&gt;“ಕುಡಿದು ಬಿಟ್ಟಿದೆ ಕಣೊ ಕಡಲ ಪಡಖಾನೆಯಲಿ&lt;br /&gt;ನೊರೆಗರೆವ ವ್ಹಿಸ್ಕಿ ಸೋಡಾ”&lt;br /&gt;&lt;br /&gt;“ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ;&lt;br /&gt;ಸುಟ್ಟಲ್ಲದೆಯೆ ಮುಟ್ಟೆನೆಂಬುಡಾಫೆ”.&lt;br /&gt;&lt;br /&gt;ಆದರೆ, ಬೇಂದ್ರೆಯವರಿಗೆ ಹಾಗೂ ಅಡಿಗರಿಗೆ ಇರುವ ಮುಖ್ಯ ವ್ಯತ್ಯಾಸವು ಭಾಷೆಯ ಶೈಲಿಯಲ್ಲಿ ಇರದೆ, ಕಾವ್ಯೋದ್ದೇಶದಲ್ಲಿ ಇದೆ. ಬೇಂದ್ರೆಯವರ ಕಾವ್ಯಾಂತರಂಗದಲ್ಲಿ ಇರುವದು mystical ಅನುಭವ. ಅಡಿಗರ ಕವನಗಳಲ್ಲಿ ಇರುವದು intellectual revelation. ಬೇಂದ್ರೆಯವರು ತಮ್ಮ ಕಾವ್ಯವನ್ನು  mystify ಮಾಡುತ್ತಾರೆ. ಅಡಿಗರು ತಮ್ಮ ಕವನಗಳನ್ನು demystify ಮಾಡುತ್ತಾರೆ. &lt;br /&gt;&lt;br /&gt;ನವೋದಯ ಕಾಲದ ಮತ್ತೊಬ್ಬ ಪ್ರಮುಖ ಕವಿ ಎಂದರೆ ಕೆ.ಎಸ್. ನರಸಿಂಹಸ್ವಾಮಿ. ಇವರ ಕಾವ್ಯಕ್ಕೆ ಒಲವೇ ಮೂಲಸ್ರೋತ. ಕನ್ನಡವನ್ನು ‘ಕವಿಗಳು ಬಳಸುವ ಭಾಷೆ’ ಎಂದು ಕರೆದ ಇವರ ಭಾಷೆ ಸುಕೋಮಲ ಭಾಷೆ, ಮೈಸೂರು ಮಲ್ಲಿಗೆಯ ಹಾಗೆ. ಅಡಿಗರು ನರಸಿಂಹಸ್ವಾಮಿಗಳ ಕಾವ್ಯವನ್ನು ‘ತೆಳು ಅನುಭವದ ಕಾವ್ಯ’ ಎಂದು ಟೀಕಿಸಿದ್ದು  ದೊಡ್ಡ ತಪ್ಪು ಹಾಗೂ ನರಸಿಂಹಸ್ವಾಮಿಗಳಿಗೆ ಮಾಡಿದ ಅನ್ಯಾಯ. ಇದಕ್ಕೆ ಉತ್ತರವಾಗಿ ನರಸಿಂಹಸ್ವಾಮಿಗಳು ತಮ್ಮ ಭಾಷೆಯು “ಇಬ್ಬರು ಆಪ್ತಮಿತ್ರರು ಸಂಜೆಯ ಸಮಯದಲ್ಲಿ ಜೊತೆಯಾಗಿ ಕುಳಿತು ಮಾತನಾಡಿದಂತೆ” ಎಂದು ತಮ್ಮ ಕವನವೊಂದರಲ್ಲಿ ವರ್ಣಿಸಿದ್ದಾರೆ. ಅಲ್ಲದೆ ಅಡಿಗರ ಕವನವನ್ನು “ಯಕ್ಷಗಾನದ ಅಬ್ಬರ” ಎಂದು ಕರೆದಿದ್ದಾರೆ.&lt;br /&gt;&lt;br /&gt;“ರತ್ನನ ಪದಗಳು” ಮೂಲಕ ರಾಜರತ್ನಮ್ ಪ್ರಸಿದ್ಧರಾದರು. ತಮ್ಮ ಕವನಗಳಲ್ಲಿ ಬಳಸಿದ ‘ಕುಡುಕನ ಆಡುಭಾಷೆ’ಯನ್ನು ಅರಿತುಕೊಳ್ಳುವ ಉದ್ದೇಶದಿಂದ ತಾವು ವೇಷ ಮರೆಸಿಕೊಂಡು ಕುಡುಕರ ಅಡ್ಡಾಗಳ ಸುತ್ತಮುತ್ತ ಸುಳಿದದ್ದಾಗಿ ರಾಜರತ್ನಮ್ ಹೇಳುತ್ತಾರೆ. ಆದರೆ, "ರಾಜರತ್ನಮ್ ಅವರ ಭಾಷೆ ನಿಜವಾಗಿಯೂ ಕುಡುಕರ ಆಡುಭಾಷೆ ಅಲ್ಲ, ಇದೊಂದು ಕೃತಕ ಭಾಷೆ" ಎಂದು ಲಂಕೇಶರವರು ಟೀಕಿಸಿದ್ದಾರೆ. ಇದೊಂದು ತುಂಬ ಅನುದಾರವಾದ ಟೀಕೆ.&lt;br /&gt;&lt;br /&gt;ನೇರವಾಗಿ ಹೇಳಲಾಗದ್ದನ್ನು ಕುವೆಂಪು ಸಂಸ್ಕೃತಭೂಯಿಷ್ಠ ಭಾಷೆಯನ್ನು ಬಳಸಿ ಹೇಳಿದರು. ರಾಜರತ್ನಮ್ ಸಹ  ಅದೇ ಕಾರಣಕ್ಕಾಗಿ ನೇರವಾಗಿ ಹೇಳಲಾಗದ್ದನ್ನು ಕೃತಕ ಆಡುನುಡಿಯ ಮೂಲಕ ಹೇಳಿದರು. &lt;br /&gt;ಬುದ್ಧಿವಂತ ನಾಗರಿಕನು ಹೇಳಿದರೆ ಯಾವುದು ಆಭಾಸವಾಗಿ ಕಾಣುತ್ತದೆಯೊ ಅದನ್ನು ವಿದ್ಯೆಯಿಲ್ಲದ ಕುಡುಕನೇ ಹೇಳಬೇಕಷ್ಟೆ. ನಿಜ ಹೇಳಬೇಕೆಂದರೆ ರತ್ನನ ಪದಗಳ ಭಾಷೆ ಕುಡುಕನ ಭಾಷೆ ಅಲ್ಲ; ಇದೂ ಸಹ ಕವಿಗಳು ಬಳಸುವ ಭಾಷೆಯೇ.&lt;br /&gt;ರಾಜರತ್ನಮ್ ಅವರ ಕವನವೊಂದನ್ನು ನಿದರ್ಶನವೆಂದು ಹಾಗೂ ಈ ಲೇಖನದ ಮಂಗಳಗೀತೆಯೆಂದು ಇಲ್ಲಿ ಕೊಡುತ್ತಿದ್ದೇನೆ.&lt;br /&gt;&lt;br /&gt;ಯೆಂಡಾ, ಯೆಡ್ತಿ, ಕನ್ನಡ ಪದಗೋಳ್&lt;br /&gt;ಅಂದ್ರೆ ರತ್ನಂಗ್ ಪ್ರಾಣಾ!&lt;br /&gt;ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ&lt;br /&gt;ತಕ್ಕೊ ಪದಗೋಳ್ ಬಾಣಾ!&lt;br /&gt;&lt;br /&gt;ಬಗವಂತ್ ಏನಾರ್ ಬೂಮಿಗಿಳ್ದು&lt;br /&gt;ನನ್ತಾಕ್ ಬಂದಾಂತ್ ಅನ್ನು;&lt;br /&gt;ಪರ್ ಗಿರೀಕ್ಸೆ ಮಾಡ್ತಾನ್ ಅವ್ನು&lt;br /&gt;ಬಕ್ತನ್ ಮೇಲ್ ಅವನ್ ಕಣ್ಣು.&lt;br /&gt;&lt;br /&gt;‘ಯೆಂಡಾ ಕುಡಿಯಾದ್ ಬುಟ್ಬುಡ್ ರತ್ನಾ’&lt;br /&gt;ಅಂತ ಅವನೇನಾರಂದ್ರೆ&lt;br /&gt;ಮೂಗ್ ಮೂರ್ ಚೂರಾಗ್ ಮುರಸ್ಕೊಂತೀನಿ&lt;br /&gt;ದೇವರ ಮಾತ್ಗಡ್ ಬಂದ್ರೆ!&lt;br /&gt;&lt;br /&gt;‘ಯೆಂಡಾ ಬುಟ್ಟೆ, ಎಡ್ತೀನ್ ಬುಟ್ ಬುಡ್’&lt;br /&gt;ಅಂತವನೇನಾರಂದ್ರೆ&lt;br /&gt;ಕಳೆದೊಯ್ತಂತಾ ಕುಣದಾಡ್ತೀನಿ&lt;br /&gt;ದೊಡ್ ಒಂದ್ ಕಾಟಾ ತೊಂದ್ರೆ!&lt;br /&gt;&lt;br /&gt;‘ಕನ್ನಡ ಪದಗೋಳ್ನ್ ಆಡೋದ್ನೆಲ್ಲಾ&lt;br /&gt;ನಿಲ್ಲಿಸ್ ಬುಡ್ಬೇಕ ರತ್ನಾ’&lt;br /&gt;ಅಂತವನಂದ್ರೆ ದೇವ್ರಾದ್ರೇನು &lt;br /&gt;ಮಾಡ್ತೇನ್ ಅವಂಗೆ ಖತ್ನಾ&lt;br /&gt;&lt;br /&gt;ಆಗ್ನೆ ಮಾಡೋ ಅಯ್ಗೋಳೆಲ್ಲಾ&lt;br /&gt;ದೇವ್ರೆ ಆಗ್ಲಿ ಎಲ್ಲಾ&lt;br /&gt;ಕನ್ನಡ ಸುದ್ದಿಗ್ ಏನಾರ್ ಬಂದ್ರೆ&lt;br /&gt;ಮಾನಾ ಉಳಿಸಾಕಿಲ್ಲ&lt;br /&gt;&lt;br /&gt;ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ&lt;br /&gt;ಬಾಯ್ ಒಲಿಸಾಕಿದ್ರೂನೂ&lt;br /&gt;ಮೂಗ್ನಲ್ ಕನ್ನಡ ಪದವಾಡ್ತೀನಿ&lt;br /&gt;ನನ್ ಮನಸನ್ ನೀ ಕಾಣೆ!&lt;br /&gt;&lt;br /&gt;ಯೆಂಡಾ ಓಗ್ಲಿ, ಯೆಡ್ತಿ ಓಗ್ಲಿ&lt;br /&gt;ಎಲ್ಲಾ ಕೊಚ್ಕೊಂಡ್ ಓಗ್ಲಿ&lt;br /&gt;ಪರ್ಪಂಚ್ ಇರೋ ತನಕಾ ಮುಂದೆ&lt;br /&gt;ಕನ್ನಡ ಪದಗೋಳ್ ನುಗ್ಲಿ!&lt;br /&gt;&lt;br /&gt;ಶಿಷ್ಟಮಾರ್ಗದಲ್ಲಿಯೇ ಆಗಲಿ, ದೇಸಿ ರೂಪದಲ್ಲಿಯೇ ಆಗಲಿ, ಜನಪದ ಹಾಡುಗಬ್ಬವೇ ಆಗಲಿ, ಅಥವಾ ಆಧುನಿಕ ಕಾವ್ಯವೇ ಆಗಲಿ ಕನ್ನಡವು ‘ಕವಿಗಳು ಬಳಸುವ ಭಾಷೆ’ಯಾಗಿ ತನ್ನ ಚೆಲವನ್ನು ಮೆರೆದಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-1785428312964020835?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/1785428312964020835/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=1785428312964020835' title='53 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/1785428312964020835'/><link rel='self' type='application/atom+xml' href='http://www.blogger.com/feeds/5939841257923965225/posts/default/1785428312964020835'/><link rel='alternate' type='text/html' href='http://sallaap.blogspot.com/2009/09/blog-post.html' title='ಕವಿಗಳು ಬಳಸುವ ಭಾಷೆ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>53</thr:total></entry><entry><id>tag:blogger.com,1999:blog-5939841257923965225.post-7138760615637164580</id><published>2009-08-22T15:13:00.002+05:30</published><updated>2009-08-22T15:17:00.147+05:30</updated><title type='text'>ಬೇಂದ್ರೆಯವರ ‘ಬೆಳಗು’--ಇದು ಬರಿ ಹಾಡಲ್ಲೋ ಅಣ್ಣಾ!</title><content type='html'>ಬೇಂದ್ರೆಯವರ  ಕವನಗಳನ್ನು ಪ್ರತಿ ಸಲ ಓದಿದಾಗಲೂ ಹೊಸ ಅರ್ಥ ‘ಹೊಳೆ’ಯುತ್ತಿರುತ್ತದೆ ಅವರ ಕವನಗಳನ್ನು ಈ ಹೊತ್ತು  ನಾವು ಪೂರ್ಣವಾಗಿ ಅರಿತುಕೊಂಡಿದ್ದೇವೆ ಎಂದು ಹೇಳುವದು ಸಾಧ್ಯವಲ್ಲದ ಮಾತು. ಅವರ ಕವನಗಳಲ್ಲಿ ಅರ್ಥವಲ್ಲದೇ ಪರಮಾರ್ಥವೂ ಇರುತ್ತದೆ. ಉದಾಹರಣೆಗೆ ಅವರ ‘ಬೆಳಗು’ ಕವನವನ್ನೇ ತೆಗೆದುಕೊಳ್ಳಿರಿ. ಈ ಕವನದ ಕೊನೆಯ ನುಡಿಯ ಬಗೆಗೆ ಶ್ರೀ ವ್ಯಾಸ ದೇಶಪಾಂಡೆಯವರು ಇದೀಗ ಹೆಚ್ಚಿನ ವಿವರಣೆಯನ್ನು ಈ ರೀತಿಯಾಗಿ ಕೊಟ್ಟಿದ್ದಾರೆ.&lt;br /&gt;&lt;br /&gt;ಕವನದ ಕೊನೆಯ ನುಡಿ ಹೀಗಿದೆ:&lt;br /&gt;“ ಅರಿಯದು ಅಳವು ತಿಳಿಯದು ಮನವು&lt;br /&gt;ಕಾಣsದೋ ಬಣ್ಣಾ&lt;br /&gt;ಕಣ್ಣಿಗೆ—ಕಾಣsದೋ ಬಣ್ಣಾ&lt;br /&gt;ಶಾಂತೀರಸವೇ ಪ್ರೀತೀಯಿಂದಾ&lt;br /&gt;ಮೈದೋರಿತಣ್ಣಾ&lt;br /&gt;ಇದು ಬರಿ—ಬೆಳಗಲ್ಲೋ ಅಣ್ಣಾ”&lt;br /&gt;&lt;br /&gt;ಕವನದ ಮೊದಲಿನ ಐದು ನುಡಿಗಳಲ್ಲಿ ಬೇಂದ್ರೆಯವರು ತಮ್ಮ ಪಂಚೇಂದ್ರಿಯಗಳಿಗಾದ ವಿಸ್ಮಯಭರಿತ   ಅನುಭವವನ್ನು ವರ್ಣಿಸಿದ್ದಾರೆ. ಪಂಚೇಂದ್ರಿಯಗಳ ಆ ಅನುಭವವು ಮನಸ್ಸನ್ನು ಹೇಗೆ ‘ವಿಶ್ವಾತ್ಮ’ನಲ್ಲಿ ತನ್ಮಯಗೊಳಿಸಿತು ಎನ್ನುವದನ್ನೂ ಹೇಳಿದ್ದಾರೆ. (‘ದೇವರದೀ—ಮನಸಿನ ಗೇಹಾ’). &lt;br /&gt;&lt;br /&gt;ಈ ಕೊನೆಯ ನುಡಿಯಲ್ಲಿ ಅವರು “&lt;span style="font-weight:bold;"&gt;ಅರಿಯದು ಅಳವು ತಿಳಿಯದು ಮನವು&lt;/span&gt;” ಎಂದು ಹೇಳುತ್ತಾರೆ. “&lt;span style="font-weight:bold;"&gt;ಅಳವು&lt;/span&gt;” ಅಂದರೆ ಸಾಮರ್ಥ್ಯ. ಬೇಂದ್ರೆಯವರು ‘ಬೆಳಗಿ’ ನ ಪೂರ್ಣ ಅನುಭವವು ತಮ್ಮ ಪಂಚೇಂದ್ರಿಯಗಳ ಅಳವಿಗೆ ಹೊರತಾದದ್ದು ಎಂದು ಹೇಳುತ್ತಿದ್ದಾರೆ. ಇದು ಮನುಷ್ಯನ ಪಂಚೇಂದ್ರಿಯಗಳ ಸಾಮರ್ಥ್ಯವನ್ನು ಮೀರಿದ್ದು. ಆದುದರಿಂದಲೇ ‘ತಿಳಿಯದು ಮನವು’. ತನ್ನ ಪಂಚೇಂದ್ರಿಯಗಳ ಸಂವೇದನೆಯಿಂದಲೇ ಲೋಕವನ್ನು ತಿಳಿಯುವ ಮನಸ್ಸಿಗೆ  ‘ಬೆಳಗಿ’ನ ಪೂರ್ಣ ಅನುಭವವನ್ನು ತಿಳಿಯಲು ಸಾಧ್ಯವಾಗುವದಿಲ್ಲ. ಈ ಅನುಭವದ ಬಣ್ಣ ಹೊರಗಣ್ಣಿಗಾಗಲೀ ಒಳಗಣ್ಣಿಗಾಗಲೀ ಕಾಣದು. ಉದಾಹರಣೆಗೆ ಹೊರಗಣ್ಣಿಗೆ ಕಾಣುವದು ಕೇವಲ ಏಳೇ ಬಣ್ಣಗಳು. ಈ ಬಣ್ಣಗಳ ತರಂಗಾಂತರದ ಹೊರಗಿನ ಬಣ್ಣಗಳನ್ನು ನಮ್ಮ ಹೊರಗಣ್ಣು ಗ್ರಹಿಸಲಾರದು. ಆ ಕಾರಣದಿಂದ ನಮ್ಮ ಮನಸ್ಸೂ ಸಹ ಅದನ್ನು ಗ್ರಹಿಸಲಾರದು. ಅದರಂತೆ ಈ ಅನುಭವವೂ ಸಹ ಪಂಚೇಂದ್ರಿಯಗಳ ಹೊರಗಿನ ‘ಅಲೌಕಿಕ’ ಅನುಭವ. &lt;br /&gt;&lt;br /&gt;ಉಪನಿಷತ್ತಿನಲ್ಲಿ ಭಗವಂತನನ್ನು ‘ಅತ್ಯತ್ತಿಷ್ಠದ್ದಶಾಂಗುಲಮ್’ ಎಂದು  ವರ್ಣಿಸಲಾಗಿದೆ. ಭಗವಂತನು ತನ್ನ ಸೃಷ್ಟಿಯ ಒಳಗಲ್ಲದೆ, ಹೊರಗೂ ಸಹ ಹತ್ತು ಅಂಗುಲದವರೆಗೆ ವ್ಯಾಪಿಸಿದ್ದಾನೆ. ಅದರಂತೆ ಈ ಅನುಭವವೂ ಸಹ ಮನುಷ್ಯನ ಸಂವೇದನೆಯ ಅಳವಿನ ಹೊರಗೂ ವ್ಯಾಪಿಸಿದೆ.  ಈ ಅಲೌಕಿಕ ವಿಸ್ಮಯವನ್ನು ಬಣ್ಣಿಸಲೇ ಬೇಕಾದರೆ, “ಶಾಂತೀರಸವೇ ಪ್ರೀತೀಯಿಂದಾ ಮೈದೋರಿತಣ್ಣಾ” ಎಂದಷ್ಟೇ ಹೇಳಬಹುದು.&lt;br /&gt;&lt;br /&gt;ಭಗವಂತನು ಶಾಂತಿರಸದ ಅನಂತಸಮುದ್ರವಿದ್ದಂತೆ. ಅವನಲ್ಲಿ ಇರುವ ಪ್ರೀತಿಯೇ ಸೃಷ್ಟಿಯ ರೂಪವಾಗಿ ಮೈದೋರುತ್ತದೆ. ಈ ಮಾಂತ್ರಿಕನ ಪ್ರೀತಿಯ ಜಾದೂದಿಂದಲೇ ಸೃಷ್ಟಿಯ ರೂಪಗಳು ವ್ಯಕ್ತವಾಗುತ್ತವೆ.  ಆದುದರಿಂದ ಈ ಬೆಳಗೆನ್ನುವದು ಭಗವಚ್ಚೈತನ್ಯದ ರೂಪ. ಹೀಗಾಗಿ ‘ಇದು ಬರಿ ಬೆಳಗಲ್ಲೊ ಅಣ್ಣಾ!’ ಎಂದು ಬೇಂದ್ರೆಯವರು ಹಾಡುತ್ತಾರೆ.&lt;br /&gt;ಅದೇ ರೀತಿಯಾಗಿ ಬೇಂದ್ರೆಯವರ ಕವನದ ಬಗೆಗೆ ನಾವೂ ಹೇಳಬಹುದಲ್ಲವೆ :&lt;br /&gt;“ಇದು ಬರಿ ಹಾಡಲ್ಲೋ ಅಣ್ಣಾ!”&lt;br /&gt;&lt;br /&gt;(ಶ್ರೀ ವ್ಯಾಸ ದೇಶಪಾಂಡೆಯವರಿಗೆ ಕೃತಜ್ಞತೆಗಳು.)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-7138760615637164580?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/7138760615637164580/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=7138760615637164580' title='38 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/7138760615637164580'/><link rel='self' type='application/atom+xml' href='http://www.blogger.com/feeds/5939841257923965225/posts/default/7138760615637164580'/><link rel='alternate' type='text/html' href='http://sallaap.blogspot.com/2009/08/blog-post_22.html' title='ಬೇಂದ್ರೆಯವರ ‘ಬೆಳಗು’--ಇದು ಬರಿ ಹಾಡಲ್ಲೋ ಅಣ್ಣಾ!'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>38</thr:total></entry><entry><id>tag:blogger.com,1999:blog-5939841257923965225.post-7532713367027266568</id><published>2009-08-17T20:46:00.011+05:30</published><updated>2009-08-18T21:01:13.242+05:30</updated><title type='text'>ಕಾವ್ಯದಲ್ಲಿ ವಿಸ್ಮಯರಸ</title><content type='html'>ಸಹೃದಯ ಓದುಗನ ಮನಸ್ಸನ್ನು ಪರವಶಗೊಳಿಸುವದೇ ವಿಸ್ಮಯರಸದ ಪ್ರಯೋಜನವೆನ್ನಬಹುದು. ಭಾರತೀಯ ಕಾವ್ಯದಲ್ಲಿ ವಿಸ್ಮಯರಸದ ಉಗಮವನ್ನು ಹುಡುಕಿದರೆ, ಅದು ನಮ್ಮ ಪ್ರಪ್ರಥಮ ಮಹಾಕಾವ್ಯದಲ್ಲಿಯೇ ದೊರೆಯುತ್ತದೆ. ಆದಿಕವಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಹನುಮಂತನು ಸಮುದ್ರಲಂಘನೆ ಮಾಡುವದು ಹಾಗು ಲಂಕೆಯಲ್ಲಿ ಅವನು ಮಾಡುವ ಸಾಹಸಗಳು  ವಿಸ್ಮಯರಸದ ಉಜ್ವಲ ನಿದರ್ಶನಗಳಾಗಿವೆ. &lt;br /&gt;&lt;br /&gt;ನಡುಗನ್ನಡ ಕನ್ನಡಸಾಹಿತ್ಯವನ್ನು ಅವಲೋಕಿಸಿದಾಗ, ಶರಣರ ವಚನಗಳಲ್ಲಿ ವಿಸ್ಮಯರಸದ ಅನೇಕ ನಿದರ್ಶನಗಳು ದೊರೆಯುತ್ತವೆ. &lt;br /&gt;ಬಸವಣ್ಣನವರ ಈ ವಚನವನ್ನೇ ಉದಾಹರಣೆಗೆ ತೆಗೆದುಕೊಳ್ಳಿರಿ:&lt;br /&gt;“ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,&lt;br /&gt;ಪಾತಾಲದಿಂದತ್ತತ್ತ ನಿಮ್ಮ ಶ್ರೀಚರಣ,&lt;br /&gt;ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ,&lt;br /&gt;ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲ ಸಂಗಮ ದೇವಯ್ಯಾ,&lt;br /&gt;ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!”&lt;br /&gt;ಭಗವಂತನ ಮಹತಿಗೆ ಬೆರಗಾದ ಭಕ್ತನ ಉದ್ಗಾರವನ್ನು ನಾವು ಈ ವಚನದಲ್ಲಿ ಕಾಣುತ್ತೇವೆ.&lt;br /&gt;&lt;br /&gt;ಈ ವಿಸ್ಮಯರಸದ ಬಗೆಗೆ ಇತ್ತೀಚೆಗೆ ಕನ್ನಡದ ಖ್ಯಾತ ನಾಟಕಕಾರ ವ್ಯಾಸ ದೇಶಪಾಂಡೆಯವರ ಜೊತೆಗೆ ಚರ್ಚೆ ನಡೆದಾಗ, ಅವರು ಸರ್ವಜ್ಞನ ವಚನವೊಂದರ ವಿವರಣೆಯನ್ನು ನೀಡಿದರು. &lt;br /&gt;ಆ ವಚನ ಹಾಗು ಅವರ ವಿವರಣೆ ಹೀಗಿದೆ:&lt;br /&gt;“ ಎಲುವಿಲ್ಲ ನಾಲಗೆಗೆ, ಬಲವಿಲ್ಲ ಬಡವಂಗೆ&lt;br /&gt;ತೊಲೆ ಕಂಬವಿಲ್ಲ ಗಗನಕ್ಕೆ, ದೇವರಲಿ&lt;br /&gt;ಕುಲ ಗೋತ್ರವಿಲ್ಲ ಸರ್ವಜ್ಞ”  &lt;br /&gt;&lt;br /&gt;ನಾಲಿಗೆಗೆ ಎಲುವಿಲ್ಲ ಎನ್ನುವದು ಎಲ್ಲರ ಅನುಭವಕ್ಕೂ ಬರುವ ಭೌತಿಕ ಸತ್ಯ. ಅದರಂತೆ ಬಡವನಿಗೆ ಬಲವಿಲ್ಲ ಎನ್ನುವದು ಒಂದು ಲೌಕಿಕ ಸತ್ಯ. ಮೊದಲಿಗೆ ಈ ಎರಡು ಅನುಭವವೇದ್ಯ ಸತ್ಯಗಳನ್ನು  ಹೇಳುವ ಸರ್ವಜ್ಞ, ಆ ಬಳಿಕ ’ತೊಲೆ ಕಂಬವಿಲ್ಲ ಗಗನಕ್ಕೆ’ ಎಂದು ಹೇಳುವ ಮೂಲಕ ಒಂದು meta physical ಸತ್ಯವನ್ನು ಹೇಳುತ್ತಾನೆ. ಆ ಬಳಿಕ ‘ಕುಲ ಗೋತ್ರವಿಲ್ಲ ದೇವರಲಿ’ ಎನ್ನುವ ‘ಅ--ಲೌಕಿಕ’ ಸತ್ಯವನ್ನು ಉಸುರುವ ಮೂಲಕ ಕೇಳುಗರನ್ನು ಪ್ರಭಾವಿತರನ್ನಾಗಿ ಮಾಡುತ್ತಾನೆ. ಇದು ವಿಸ್ಮಯರಸದ ಪ್ರಯೋಜನ. &lt;br /&gt;&lt;br /&gt;ಕನಕದಾಸರ ಕೀರ್ತನೆಯಲ್ಲಿಯೂ ಸಹ ಇದೇ ರೀತಿಯ ವಿಸ್ಮಯರಚನೆ ಇದೆ:&lt;br /&gt;“ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ&lt;br /&gt;ನೀ ದೇಹದೊಳಗೊ ನಿನ್ನೊಳೊ ದೇಹವೊ ಹರಿಯೆ”&lt;br /&gt;ದೇಹವನ್ನು ಸೃಷ್ಟಿಸಿದವನು ಭಗವಂತ. ಆದುದರಿಂದ ಭಗವಂತನಲ್ಲಿ ದೇಹವಿದೆ. ಆದರೆ ಅದೇ ದೇಹದಲ್ಲಿ ಭಗವಂತನೂ ಇದ್ದಾನೆ. ಕನಕದಾಸರು ಭಗವಂತನ ಮಹತಿಯನ್ನು ಅನುಭವಿಸಲು, ಅನುಭವಿಸಿದ್ದನ್ನು  ಸಾರಲು  ಈ ರೀತಿಯಾಗಿ ವಿಸ್ಮಯವನ್ನು ಪ್ರದರ್ಶಿಸುತ್ತಾರೆ.&lt;br /&gt;&lt;br /&gt;ಇದೇ ರೀತಿಯಲ್ಲಿ ಪುರಂದರದಾಸರ ಕೆಲವು ಕೀರ್ತನೆಗಳಲ್ಲಿಯೂ ವಿಸ್ಮಯಭಾವನೆಯು ಕಾಣಸಿಗುತ್ತದೆ. &lt;br /&gt;ಉದಾಹರಣೆಗೆ ಅವರ ಈ ಕೀರ್ತನೆಯನ್ನು ನೋಡಿರಿ:&lt;br /&gt;“ರಂಗ ಕೊಳಲನೂದಲಾಗಿ ಮಂಗಳಮಯವಾಯ್ತು ಧರೆ ಜ-&lt;br /&gt;ಗಂಗಳು ಚೈತನ್ಯ ಮರೆದು ಅಂಗಪರವಶವಾದವು ||ಪಲ್ಲ||&lt;br /&gt;ತೀಡಿದ ಮಾರುತ ಮಂದಗತಿಗೈಯೆ ಬಾಡಿದ ಅರಲು ಫಲಗೊಂಚಲು ಬಿಡೆ&lt;br /&gt;ಪಾಡಲೊಲ್ಲವಳಿಕುಲಗಳು ಬಾಡಿದ ಮಾಮರ ಚಿಗುರೊಡೆಯೆ&lt;br /&gt;................................."&lt;br /&gt;ಕೃಷ್ಣನು ಕೊಳಲು ಊದಿದೊಡನೆ, ಪ್ರಕೃತಿಯು ಹೇಗೆ ಪರವಶವಾಯಿತು ಎನ್ನುವದನ್ನು ಪುರಂದರದಾಸರು ಇಲ್ಲಿ ತೋರಿಸಿದ್ದಾರೆ. &lt;br /&gt;ದೈವೀ ಚೈತನ್ಯದಿಂದ ಜರಗುವ ವಿಸ್ಮಯಸಾಧನೆಯ ವರ್ಣನೆ ಇಲ್ಲಿದೆ.&lt;br /&gt;&lt;br /&gt;ಕನ್ನಡದ ನವೋದಯ ಕಾವ್ಯದಲ್ಲಂತೂ ವಿಸ್ಮಯರಸವು ಹೇರಳವಾಗಿ ಸಿಗುತ್ತದೆ. ಜಿ.ಪಿ.ರಾಜರತ್ನಮ್ ಅವರ ಸೃಷ್ಟಿಯಾದ ಯೆಂಡ್ಕುಡುಕ ರತ್ನನ ಈ ಉದ್ಗಾರವನ್ನು ನೋಡಿರಿ:&lt;br /&gt;“ಎಲೆಲೆ ರಸ್ತೆ,&lt;br /&gt;ಏನು ಅವ್ಯವಸ್ಥೆ!”&lt;br /&gt;ಇಲ್ಲಿ ಅವ್ಯವಸ್ಥೆಯಾಗಿರುವದು ಯೆಂಡ್ಕುಡುಕನ ಬುದ್ಧಿ. &lt;br /&gt;ತೋಲಾಡುತ್ತಿರುವ ಅವನಿಗೆ ರಸ್ತೆಯೇ ಅಡ್ಡಾದಿಡ್ಡಿಯಾಗಿ ಕಾಣುತ್ತದೆ. &lt;br /&gt;&lt;br /&gt;ಕೆ.ಎಸ್. ನರಸಿಂಹಸ್ವಾಮಿಯವರ ದಾಂಪತ್ಯಗೀತೆಗಳಲ್ಲೂ ಸಹ ವಿಸ್ಮಯರಸದ ಸುರಸ ಸೃಷ್ಟಿಯಾಗಿದೆ. &lt;br /&gt;ಪತಿಪತ್ನಿಯರ ಪರಸ್ಪರ ಒಲವು ನರಸಿಂಹಸ್ವಾಮಿಯವರಿಗೆ ಯಾವಾಗಲೂ ಕಾವ್ಯಸ್ಫೂರ್ತಿಯನ್ನು ಒದಗಿಸಿದೆ.&lt;br /&gt;“ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ,&lt;br /&gt;ನನಗದುವೆ ಕೋಟಿ ರೂಪಾಯಿ” &lt;br /&gt;ಎನ್ನುವ ಸಾಲುಗಳು ಕೊನೆಯ ಪಕ್ಷ ಹೆಂಗಸರಲ್ಲಾದರೂ ವಿಸ್ಮಯ ಹುಟ್ಟಿಸಲಾರವೆ?&lt;br /&gt;&lt;br /&gt;ನರಸಿಂಹಸ್ವಾಮಿಯವರ ಮತ್ತೊಂದು ಕವನವನ್ನು ನೋಡಿರಿ:&lt;br /&gt;“ಇವಳು ಯಾರು ಬಲ್ಲೆ ಏನು?&lt;br /&gt;ಇವಳ ದನಿಗೆ ತಿರುಗಲೇನು?&lt;br /&gt;ಇವಳ ಹೆಸರ ಹೇಳಲೇನು?&lt;br /&gt;ಇವಳು ಏತಕೊ, ಎನ್ನ ಬಳಿಗೆ ಸುಳಿದಳು!”&lt;br /&gt;ಈ ಕವನದಲ್ಲಿಯ “ಇವಳು” ಬೇರೆ ಯಾರೂ ಅಲ್ಲ. ಇವಳು ನರಸಿಂಹಸ್ವಾಮಿಯವರ ಹೆಂಡತಿಯೇ. &lt;br /&gt;ಇಲ್ಲಿ ಕವಿಗೆ ವಿಸ್ಮಯವನ್ನು ಹುಟ್ಟಿಸುತ್ತಿರುವದು ಗಂಡಹೆಂಡಿರ ನಡುವಿನ ಒಲವಿನ ಶಕ್ತಿ. &lt;br /&gt;“ಅಂತಿಂಥ ಹೆಣ್ಣು ನೀನಲ್ಲ,&lt;br /&gt;ನಿನ್ನಂಥ ಹೆಣ್ಣು ಇನ್ನಿಲ್ಲ”,&lt;br /&gt;ಎನ್ನುವಾಗಲೂ ಕವಿಯಲ್ಲಿ ಇರುವದು ಬೆರಗಿನ ಭಾವನೆಯೇ.&lt;br /&gt;&lt;br /&gt;ಬೇಂದ್ರೆಯವರ  ಅನೇಕ ಕವನಗಳನ್ನು ಮನೋಜ್ಞವಾಗಿಸುವ  ವಿಶಿಷ್ಟ ಗುಣವೆಂದರೆ ಆ ಕವನಗಳಲ್ಲಿರುವ ವಿಸ್ಮಯಭಾವ.ಬೇಂದ್ರೆಯವರ ಅತ್ಯಂತ ಸರಳ ಕವನದ ಉದಾಹರಣೆಯನ್ನೇ ತೆಗೆದುಕೊಳ್ಳಿರಿ:&lt;br /&gt;‘ಪಾತರಗಿತ್ತಿ ಪಕ್ಕಾ&lt;br /&gt;ನೋಡೀದೇನ ಅಕ್ಕಾ!’&lt;br /&gt;ಈ ಮೊದಲೆರಡು ಸಾಲುಗಳೇ ಕವಿ ಅನುಭವಿಸುತ್ತಿರುವ ಬೆರಗನ್ನು ಓದುಗನಿಗೆ ಹೃದಯಾಂತರಿಸುತ್ತವೆ. &lt;br /&gt;ಕವನದಲ್ಲಿ ಮುಂದುವರೆದಂತೆ ಬೆರಗು ಹುಟ್ಟಿಸುವ ಸಾಲುಗಳಿಗೆ ಏನೂ ಕೊರತೆಯಿಲ್ಲ.&lt;br /&gt;“ ಗಾಳೀ ಕೇನೀಲೇನs&lt;br /&gt;ಮಾಡಿದ್ದಾರ ತಾನ!&lt;br /&gt;ನೂರು ಆರು ಪಾರು&lt;br /&gt;ಯಾರು ಮಾಡಿದ್ದಾರು!”&lt;br /&gt;ಇಂತಹ ಸಾಲುಗಳು ಬೆರಗನ್ನು ಹೆಚ್ಚಿಸುತ್ತಲೇ ಹೋಗುತ್ತವೆ.&lt;br /&gt;&lt;br /&gt;ವಿಸ್ಮಯಭಾವವು ಬೇಂದ್ರೆಯವರ ನಿಸರ್ಗಕವನಗಳಿಗೆ ಮಾತ್ರ ಸೀಮಿತವಾಗಿಲ್ಲ. &lt;br /&gt;ಮಕ್ಕಳಾಟವು ಬೇಂದ್ರೆಯವರಲ್ಲಿ ಸಹಜವಾಗಿಯೇ ವಿಸ್ಮಯವನ್ನು ಹುಟ್ಟಿಸುತ್ತಿತ್ತು. &lt;br /&gt;ಆ ಬೆರಗನ್ನು ಅವರು ಸಹೃದಯರೊಡನೆ ಹಂಚಿಕೊಳ್ಳುತ್ತಿದ್ದರು.&lt;br /&gt;“ ಯಾರವ್ವಾ ಇವ ಚೆಲುವಾ&lt;br /&gt;ತನ್ನಷ್ಟಕ್ಕs&lt;br /&gt;ತಾನs ನೋಡಿ ನಲಿವಾ!” &lt;br /&gt;ಎಂದು ಬೇಂದ್ರೆ ನಲಿದಾಡುವ ಶಿಶುವನ್ನು ಕಂಡು ಬೆರಗುಬಡುತ್ತಿದ್ದರು.&lt;br /&gt;&lt;br /&gt;ಬೇಂದ್ರೆಯವರ ಪುಟ್ಟ ಮಗಳು ಮಂಗಲಾ ನೀರು ತರಲು ಹೋದಾಗ, ಬೇಲಿಯ ಬದಿಗೆ ಬೆಳೆದಿದ್ದ ಹೂವಿನ ಬಳ್ಳಿಗಳು ಅಚ್ಚರಿಪಟ್ಟವಂತೆ. &lt;br /&gt;ಅವು ಬೆರಗುಗೊಂಡು ತಮ್ಮತಮ್ಮಲ್ಲಿಯೆ ಮಾತನಾಡುವದನ್ನು ಕೇಳಿರಿ :&lt;br /&gt;“ಗುಲಬಾಕ್ಷಿ-ಮಲ್ಲಿಗೆ | ಕೇಳತಾವ ಕಲ್ಲಿಗೆ |&lt;br /&gt;ಕಳಿಸೋದೆ ನೀರಿಗೆ | ಇಂಥ ಸುಕುಮಾರಿಗೆ ||”&lt;br /&gt;&lt;br /&gt;ಗೊಂಬೆಯಾಟವಾಡಿ ದಣಿದು ಮಲಗಿಕೊಂಡ ಮಗಳನ್ನು ಕಂಡಾಗ ಬೇಂದ್ರೆಯವರು ವಿಸ್ಮಯಪಡುತ್ತಿದ್ದದ್ದು ಹೀಗೆ:&lt;br /&gt;“ಆಟದ ಗೊಂಬಿ, ನಿಜವೆಂದು ನಂಬಿ&lt;br /&gt;ಮಗ್ಗಲಲಿ ಮಲಗಿಸಿಕೊಂಡ ದಿನವೇಸೊ!”&lt;br /&gt;&lt;br /&gt;ವೈರುಧ್ಯಗುಣಗಳುಳ್ಳ ವಸ್ತುಗಳನ್ನು ಒಂದೇ ಕಡೆಯಲ್ಲಿ ಪೋಣಿಸುವದರ ಮೂಲಕ ವಿಸ್ಮಯವನ್ನು ಸೃಷ್ಟಿಸುವದು ವರಕವಿಗಳ ಅಪೂರ್ವ ಸಿದ್ಧಿಗಳಲ್ಲೊಂದು. ಉದಾಹರಣೆಗೆ ಅವರ ‘ಬಾರೊ ಸಾಧನಕೇರಿಗೆ’ ಕವನದಲ್ಲಿ  ‘ ಬೇಲಿಗೂ ಹೂ ಬೆರಳಿದೆ ’ ಎನ್ನುವ ಸಾಲು ಬರುತ್ತದೆ.&lt;br /&gt;&lt;br /&gt;ಬೇಲಿಯ ಕೆಲಸವೇನು? Job of fence is defense. ಆದುದರಿಂದ ಬೇಲಿಗೆ ಇರಬೇಕಾದದ್ದು ಮುಳ್ಳು. ಆದರೆ ಇಲ್ಲಿ ಬೇಲಿಗೆ ಇದ್ದದ್ದು ‘ ಹೂ ಬೆರಳು ’. ಅಂದರೆ ಇಲ್ಲಿ ಬೇಲಿಯು ನಮ್ಮನ್ನು ಸ್ವಾಗತಿಸುತ್ತಿದೆಯೇ ಹೊರತು ಹೊರಗಿಡುತ್ತಿಲ್ಲ. ಇದು ಬೆರಗನ್ನು ಹುಟ್ಟಿಸುವ ಬೇಂದ್ರೆ ಪರಿ.&lt;br /&gt;&lt;br /&gt;ಬೇಂದ್ರೆಯವರ  ‘ಬೆಳುದಿಂಗಳ ನೋಡs ’ ಕವನವು ವಿಸ್ಮಯಸೃಷ್ಟಿಯ ಅದ್ಭುತ ಕವನ. ಆ ಕವನದ ಕೆಲವು ಸಾಲುಗಳು ಹೀಗಿವೆ:&lt;br /&gt;“ಮರ ಮರದ ಗೊನೀಗೆ ಕೂತು&lt;br /&gt;ಹಾರಿ ಮೈ ಸೋತು&lt;br /&gt;ತೆಪ್ಪಗs ಗಾsಳಿs&lt;br /&gt;ತೆಪ್ಪಗs ಗಾಳಿ||&lt;br /&gt;ತೂಕಡಸತsದ ತಾನೀಗ&lt;br /&gt;ಜಂಪು ಬಂಧಾಂಗ&lt;br /&gt;ಜಂಪು ಬಂಧಾಂsಗs &lt;br /&gt;ಇದು ಅದರ ತುಪ್ಪಳದ ಗೂsಡs&lt;br /&gt;ಬೆಳುದಿಂಗಳ ನೋಡs ||”&lt;br /&gt;&lt;br /&gt;ಈ ಕವನದಲ್ಲಿ ಗಾಳಿಯು ಬೆಳದಿಂಗಳಿನಲ್ಲಿ ಸಮರಸವಾದಂತಹ ಒಂದು ಸಜೀವವಾದ ವಸ್ತುವಾಗುತ್ತದೆ. ಬೆಳದಿಂಗಳು ಈ ಗಾಳಿಯ ತುಪ್ಪಳದ ಗೂಡಾಗುತ್ತದೆ. ನಿರ್ಜೀವ ವಸ್ತುಗಳನ್ನು ಸಜೀವವಾಗಿಸುವ ಮೂಲಕ ಬೇಂದ್ರೆಯವರು ವಿಸ್ಮಯದ ಪರಾಕಾಷ್ಠೆಯನ್ನು ತಲಪುತ್ತಾರೆ.&lt;br /&gt;&lt;br /&gt;ವಿಸ್ಮಯಭಾವವನ್ನು ಕವನದಲ್ಲಿ ಹಾಸುಹೊಕ್ಕಾಗಿ ನೇಯ್ದಂತಹ ಅವರ ಉತ್ಕೃಷ್ಟ ಕವನವೆಂದರೆ ‘ಬೆಳಗು’.&lt;br /&gt;ಈ ಕವನದ ಮೊದಲ ಎರಡು ನುಡಿಗಳಲ್ಲಿ ಸೂರ್ಯೋದಯವಾಗುತ್ತಿರುವ ವರ್ಣನೆ ಇದೆ. ಮುಂದಿನ ಮೂರು ನುಡಿಗಳಲ್ಲಿ ಸೂರ್ಯೋದಯದ ಸಮಯದಲ್ಲಿಯ ನಿಸರ್ಗದ ವರ್ಣನೆ ಇದೆ. ಕೊನೆಯ ಎರಡು ನುಡಿಗಳಲ್ಲಿ ಕವಿಯ ಮನಸ್ಸಿನ ಮೇಲಾದ ಪರಿಣಾಮದ ವರ್ಣನೆ ಇದೆ.&lt;br /&gt;&lt;br /&gt;ಈ ಕವನದ ಮೊದಲ ಎರಡು ನುಡಿಗಳನ್ನು ನೋಡಿರಿ:&lt;br /&gt;==೧==&lt;br /&gt;ಮೂಡಲ ಮನೆಯಾ ಮುತ್ತಿನ ನೀರಿನ&lt;br /&gt;ಎರಕsವ ಹೊಯ್ದಾ&lt;br /&gt;ನುಣ್ಣ-ನ್ನೆರಕsವ ಹೊಯ್ದಾ&lt;br /&gt;ಬಾಗಿಲು ತೆರೆದೂ ಬೆಳಕು ಹರಿದೂ&lt;br /&gt;ಜಗವೆಲ್ಲಾ ತೊಯ್ದಾ&lt;br /&gt;ಹೋಯ್ತೋ-ಜಗವೆಲ್ಲಾ ತೊಯ್ದಾ&lt;br /&gt;&lt;br /&gt;==೨==&lt;br /&gt;ರತ್ನದ ರಸದಾ ಕಾರಂಜೀಯೂ&lt;br /&gt;ಪುಟಪುಟನೇ ಪುಟಿದು&lt;br /&gt;ತಾನೇ-ಪುಟಪುಟನೇ ಪುಟಿದು&lt;br /&gt;ಮಘಮಘಿಸುವಾ ಮುಗಿದ ಮೊಗ್ಗೀ&lt;br /&gt;ಪಟಪಟನೇ ಒಡೆದು&lt;br /&gt;ತಾನೇ-ಪಟಪಟನೇ ಒಡೆದು&lt;br /&gt;&lt;br /&gt;ನಿದ್ರಿಸುತ್ತಿರುವ ಜಗವು ತನ್ನ ಬಾಗಿಲನ್ನು ತೆರೆದಾಗ, ಬೆಳಕು ಹರಿದು ಬಂದು ಇಡಿ ಜಗತ್ತೇ ಆ ಬೆಳಕಿನಿಂದ ತೊಯ್ದು ಹೋಯಿತು ಎಂದು ಬೇಂದ್ರೆ ಹೇಳುತ್ತಾರೆ. ಬೇಂದ್ರೆಯವರು ತಾನು ಅನುಭವಿಸಿದ ಅಚ್ಚರಿಯನ್ನು ಓದುಗರಿಗೂ ಈ ರೀತಿಯಲ್ಲಿ ನೀಡುತ್ತಿದ್ದಾರೆ.&lt;br /&gt;&lt;br /&gt;ಮೊದಲ ನುಡಿಯಲ್ಲಿ ಬೆಳಕು ಮುತ್ತಿನ ನೀರಿನಂತೆ ಸೌಮ್ಯವಾಗಿದ್ದರೆ, ಎರಡನೆಯ ನುಡಿಯಲ್ಲಿ ಅದು ರತ್ನದ ರಸದಂತೆ ಪ್ರಖರವಾಗಿದೆ. ಬೇಂದ್ರೆಯವರು ವಾಸ್ತವತೆಗೆ ಬದ್ಧರಾಗಿರುತ್ತಾರೆ ಎನ್ನುವದಕ್ಕೆ ಇದೊಂದು ನಿದರ್ಶನ.&lt;br /&gt;ಈ ಬೆಳಕು ಹರಡುವ ಕ್ರಮವನ್ನು ಬೇಂದ್ರೆ “ಮುಗಿದ ಮೊಗ್ಗಿ ಪಟಪಟನೆ ಒಡೆದು” ಎಂದು ಬಣ್ಣಿಸುತ್ತಾರೆ.&lt;br /&gt;ಅಂದರೆ ಬೆಳಕು ಕ್ಷಣಕ್ಷಣಕ್ಕೆ ಹೆಚ್ಚುತ್ತಿರುವದರ ವರ್ಣನೆ ಇದು. ವಿಶ್ವನಿಯಾಮಕ ಭಗವಂತನಿಗೆ ಕೈಮುಗಿದು ಹುಟ್ಟುತ್ತಿರುವ ಸೂರ್ಯನು “ಮುಗಿದ ಮೊಗ್ಗಿ” ಇದ್ದಂತೆ. ಹೂವು ತನ್ನ ಪಕಳೆಗಳನ್ನು ಬಿಚ್ಚುವಂತೆ (unfolding in quick succession) ಆತನು ಪಟಪಟನೆ ಒಡೆದು ಬೆಳಕನ್ನು ನೀಡುತ್ತಾನೆ. ಅದ್ಭುತವಾದ ಕ್ರಿಯೆಯನ್ನು ಅದ್ಭುತವಾಗಿ ವರ್ಣಿಸುವ ಈ ಸಾಲುಗಳು ಓದುಗನಲ್ಲಿ ಬೆರಗನ್ನು ಹುಟ್ಟಿಸುತ್ತವೆ.&lt;br /&gt;&lt;br /&gt;[ಟಿಪ್ಪಣಿ: ಶ್ರೀ ಪ್ರಭುಶಂಕರ ಅವರು ಕನ್ನಡದ ಖ್ಯಾತ ವಿಮರ್ಶಕರು. ಯಾಕೋ ಏನೊ ಅವರಿಗೆ “ಪಟಪಟನೆ ಒಡೆದು” ಎನ್ನುವ ಸಾಲುಗಳು ಅರ್ಥವಾಗಲಿಲ್ಲ. ಅವರು ತಮ್ಮ ಗುರುಗಳಾದ ಕುವೆಂಪು ಅವರ ಬಳಿಗೆ ಹೋಗಿ “ಬೇಂದ್ರೆಯವರು ‘ಪಟಪಟನೆ  ಒಡೆದು’ ಎಂದು ಬರೆದಿದ್ದಾರಲ್ಲ ; ಸೂರ್ಯೋದಯದ ವೇಳೆಗೆ ಪಟಪಟ ಎನ್ನುವ ಶಬ್ದವಾಗುತ್ತದೆಯೆ?” ಎಂದು ಟೀಕಿಸಿದರು. ಅದಕ್ಕೆ ಕುವೆಂಪುರವರು “ದೊಡ್ಡ ಕವಿಗಳಿಗೆ ಹಾಗೆಲ್ಲ ಅನ್ನಬೇಡಿರಿ; ಅದರ ಅರ್ಥ ನಿಮಗೆ ಆಗುವದಿಲ್ಲ” ಎಂದು ಹೇಳಿ ಕಳಿಸಿದರು. ಪ್ರಭುಶಂಕರರು  ಹಿರಿಯ ವಿಮರ್ಶಕರು. ಅಂಥವರಿಗೆ ‘ಪಟಪಟನೆ ಒಡೆದು= unfolding in quick succession’ ಎಂದು ಇಂಗ್ಲೀಶಿನಲ್ಲಿ ತಿಳಿಸಬೇಕಾದದ್ದು ಕನ್ನಡಿಗರ ದೌರ್ಭಾಗ್ಯ! ]&lt;br /&gt;&lt;br /&gt;‘ಬೆಳಗು’ ಕವನದ ಮೂರನೆಯ ನುಡಿಯನ್ನು  ನೋಡಿರಿ:&lt;br /&gt;==೩==&lt;br /&gt;“ಎಲೆಗಳ ಮೇಲೇ ಹೂಗಳ ಒಳಗೇ&lt;br /&gt;ಅಮೃತsದ ಬಿಂದು&lt;br /&gt;ಕಂಡವು-ಅಮೃತsದ ಬಿಂದು&lt;br /&gt;ಯಾರಿರಿಸಿರುವರು ಮುಗಿಲs ಮೇಲಿಂ-&lt;br /&gt;ದಿಲ್ಲಿಗೇ ತಂದು &lt;br /&gt;ಈಗ-ಇಲ್ಲಿಗೇ ತಂದು.”&lt;br /&gt;&lt;br /&gt;ಎಲೆಗಳ ಮೇಲೆ ಹಾಗೂ ಹೂವುಗಳ ಒಳಗೆ ಕಾಣುವ ಇಬ್ಬನಿಗಳು ಕ್ಷಣಾರ್ಧದಲ್ಲಿ ಮಾಯವಾಗಿ ಹೋಗುವ ವಸ್ತುಗಳು. ಇವು ಕವಿಗೆ ಅಮೃತದ ಬಿಂದುಗಳಂತೆ ಅಂದರೆ ಶಾಶ್ವತವಾದ ವಸ್ತುಗಳಂತೆ ಕಾಣುವವು. ಇಂತಹ ವೈರುಧ್ಯವು ಕವಿಯಲ್ಲಿ ಪ್ರಕೃತಿಯಲ್ಲಿಯ ಬೆರಗನ್ನು ತೋರಿಸುತ್ತದೆ. ಇದು ದೃಶ್ಯದ ಅನುಭವ. &lt;br /&gt;ಇದರ ಮುಂದಿನ ನುಡಿಯಲ್ಲಿ ಸ್ಪರ್ಶದ ಹಾಗೂ ಗಂಧದ ಅನುಭವವಿದೆ. &lt;br /&gt;&lt;br /&gt;=೪=&lt;br /&gt;ತಂಗಾಳೀಯಾ ಕೈಯೊಳಗಿರಿಸೀ&lt;br /&gt;ಎಸಳೀನಾ ಚವರಿ&lt;br /&gt;ಹೂವಿನ-ಎಸಳೀನಾ ಚವರಿ&lt;br /&gt;ಹಾರಿಸಿಬಿಟ್ಟರು ತುಂಬಿಯ ದಂಡು &lt;br /&gt;ಮೈಯೆಲ್ಲಾ ಸವರಿ&lt;br /&gt;ಗಂಧಾ-ಮೈಯೆಲ್ಲಾ ಸವರಿ.&lt;br /&gt;&lt;br /&gt;ಮುಂಜಾವಿನ ತಂಗಾಳಿ ಬೀಸಿದಾಗ ಹೂವು ಅಲುಗಾಡುತ್ತವೆ. ಇದು ಕವಿಯ ಕಣ್ಣಿಗೆ ಚಾಮರವನ್ನು ಬೀಸಿದಂತೆ ಕಾಣುತ್ತದೆ. &lt;br /&gt;ಹೂವು ಅಲುಗಾಡಿದಾಗ ಅಲ್ಲಿ ಕುಳಿತ ತುಂಬಿಗಳು ಹಾರಿ ಬಿಡುತ್ತವೆ. &lt;br /&gt;ತುಂಬಿಗಳ ಮೈಗೆ ಗಂಧ ಸವರಿ ಹಾರಿಸಿಬಿಟ್ಟರು ಎಂದು ಬೇಂದ್ರೆಯವರು ಹೇಳುತ್ತಾರೆ. &lt;br /&gt;ಹೀಗೆ ಹಾರಿಸಿಬಿಟ್ಟವರು ಯಾರು? ಅದು ನಿಸರ್ಗಚೈತನ್ಯ. ಆ ಚೈತನ್ಯವನ್ನು ಭಗವಂತ ಎಂದು ಕರೆಯಬಹುದು. &lt;br /&gt;ಈ ರೀತಿಯಾಗಿ ನಿಸರ್ಗಚೈತನ್ಯದ ಬಗೆಗೆ ಬೆರಗಿನ ಭಾವವನ್ನು ಬೇಂದ್ರೆಯವರು ಓದುಗನಲ್ಲಿ ಹುಟ್ಟಿಸುತ್ತಾರೆ. &lt;br /&gt;ಇದೇ ರೀತಿಯಲ್ಲಿ ಇದರ ಮುಂದಿನ ನುಡಿಯಲ್ಲಿ ಶ್ರವಣದ ಅನುಭವವಿದೆ:&lt;br /&gt;&lt;br /&gt;==೫==&lt;br /&gt;“ಗಿಡಗಂಟೆಯಾ ಕೊರಳೊಳಗಿಂದ&lt;br /&gt;ಹಕ್ಕೀಗಳ ಹಾಡು&lt;br /&gt;ಹೊರಟಿತು-ಹಕ್ಕೀಗಳ ಹಾಡು&lt;br /&gt;ಗಂಧರ್ವರಾ ಸೀಮೆಯಾಯಿತು&lt;br /&gt;ಕಾಡಿನಾ ನಾಡು&lt;br /&gt;ಕ್ಷಣದೊಳು-ಕಾಡಿನಾ ನಾಡು ”&lt;br /&gt;ಹಕ್ಕಿಗಳ ಹಾಡು ಗಿಡಗಂಟೆಗಳ ಕೊರಳೊಳಗಿಂದ ಹೊರಟಿತು ಎಂದು ಹೇಳುವ ಮೂಲಕ ಬೇಂದ್ರೆಯವರು ಚರಾಚರ ಪ್ರಕೃತಿಯು ಸಜೀವವಾಗಿ ಎದ್ದು ಬರುವದನ್ನು ಅನುಭವಿಸುತ್ತಾರೆ ಹಾಗು ಹಾಡುತ್ತಾರೆ.&lt;br /&gt;ಈ ರೀತಿಯಲ್ಲಿ ಪಂಚೇಂದ್ರಿಯಗಳ ಅನುಭವವು ಕಾಡಿನ ನಾಡನ್ನು ಗಂಧರ್ವರ ನಾಡನ್ನಾಗಿ ಮಾರ್ಪಡಿಸುತ್ತದೆ. ಆದರೆ ಈ ಎಲ್ಲ ಅನುಭವಗಳನ್ನು ಅನುಭವಿಸಬೇಕಾದದ್ದು ಮನಸ್ಸೇ ತಾನೆ? ಅದು ಎಂತಹ ಮನಸ್ಸು? ದೇವರು ನೀಡಿದ ಮನಸ್ಸು. ಆ ಅನುಭವವು ಆರನೆಯ ನುಡಿಯಲ್ಲಿದೆ.&lt;br /&gt;&lt;br /&gt;==೬==&lt;br /&gt;ಕಂಡಿತು ಕಣ್ಣು ಸವಿದಿತು ನಾಲಗೆ&lt;br /&gt;ಪಡೆದೀತೀ ದೇಹ&lt;br /&gt;ಸ್ಪರ್ಶಾ-ಪಡೆದೀತೀ ದೇಹ&lt;br /&gt;ಕೇಳಿತು ಕಿವಿಯು ಮೂಸಿತು ಮೂಗು&lt;br /&gt;ತನ್ಮಯವೀ ಗೇಹಾ&lt;br /&gt;ದೇವರ-ದೀ ಮನಸಿನ ಗೇಹಾ.&lt;br /&gt;&lt;br /&gt;ಈ ರೀತಿಯಾಗಿ ಪಂಚೇಂದ್ರಿಯಗಳ ಮೂಲಕ ಪಡೆದ ಲೌಕಿಕ ಅನುಭವವು  ‘ಅ--ಲೌಕಿಕ’ ಅನುಭವವಾಗಿ ಮಾರ್ಪಡುವ ವಿಸ್ಮಯಜನಕ ಕ್ರಿಯೆಯನ್ನು ಕವಿಯು ಅನುಭವಿಸುತ್ತಾನೆ ಹಾಗು ಸಹೃದಯ ಓದುಗರೊಡನೆ ಹಂಚಿಕೊಳ್ಳುತ್ತಾನೆ.&lt;br /&gt;ಆ ‘ಅಲೌಕಿಕತೆ’ಯ ವರ್ಣನೆ ಮುಂದಿನ ನುಡಿಯಲ್ಲಿದೆ.&lt;br /&gt;&lt;br /&gt;==೬==&lt;br /&gt;ಅರಿಯದು ಅಳವು ತಿಳಿಯದು ಮನವು&lt;br /&gt;ಕಾಣsದೋ ಬಣ್ಣಾ&lt;br /&gt;ಕಣ್ಣಿಗೆ-ಕಾಣsದೋ ಬಣ್ಣಾ.&lt;br /&gt;ಶಾಂತೀರಸವೇ ಪ್ರೀತೀಯಿಂದಾ&lt;br /&gt;ಮೈದೋರಿತಣ್ಣಾ&lt;br /&gt;ಇದು ಬರಿ-ಬೆಳಗಲ್ಲೋ ಅಣ್ಣಾ.&lt;br /&gt;&lt;br /&gt;ಈ ರೀತಿಯಾಗಿ ಪ್ರಕೃತಿಯಲ್ಲಿಯ ವಿಸ್ಮಯರಸವನ್ನು ತಾವು ಅನುಭವಿಸಿ, ತಮ್ಮ ಕವನದ ಮೂಲಕ ಸಹೃದಯ ಓದುಗನಲ್ಲಿ ರಸಾನುಭವ ಹುಟ್ಟಿಸುವದರ ಮೂಲಕ ಬೇಂದ್ರೆಯವರು ಕನ್ನಡ ಕಾವ್ಯಕ್ಕೆ ಅಪೂರ್ವ ಕಾಣಿಕೆಯನ್ನಿತ್ತಿದ್ದಾರೆಂದು ಹೇಳಬಹುದು.&lt;br /&gt;ಕನ್ನಡ ಕವಿಗಳು ತಮ್ಮ ಕಾವ್ಯದಲ್ಲಿ ವಿಸ್ಮಯರಸವನ್ನು ಬಳಸಿಕೊಂಡು ಸಹೃದಯ ಓದುಗನ ಮನಸ್ಸನ್ನು ಪರವಶಗೊಳಿಸಿದ್ದಾರೆ ಹಾಗೂ ಕನ್ನಡ ಕಾವ್ಯಕ್ಕೆ ವೈಭವ ತಂದುಕೊಟ್ಟಿದ್ದಾರೆ ಎನ್ನಬಹುದು.&lt;br /&gt;&lt;br /&gt;(ನನ್ನೊಡನೆ ಚರ್ಚಿಸಿ, ಈ ಲೇಖನಕ್ಕೆ ಕಾರಣರಾದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ಹಾಗು ಲೇಖನ ಸಿದ್ಧಪಡಿಸುವಾಗ ನೆರವು ನೀಡಿದ ನನ್ನ ನಿರಂತರ ವಿಮರ್ಶಕಿಯಾದ ನನ್ನ ಅರ್ಧಾಂಗಿನಿ ಶ್ರೀಮತಿ ವನಮಾಲಾ ಇವರಿಗೆ ಕೃತಜ್ಞನಾಗಿದ್ದೇನೆ.)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-7532713367027266568?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/7532713367027266568/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=7532713367027266568' title='25 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/7532713367027266568'/><link rel='self' type='application/atom+xml' href='http://www.blogger.com/feeds/5939841257923965225/posts/default/7532713367027266568'/><link rel='alternate' type='text/html' href='http://sallaap.blogspot.com/2009/08/blog-post_17.html' title='ಕಾವ್ಯದಲ್ಲಿ ವಿಸ್ಮಯರಸ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>25</thr:total></entry><entry><id>tag:blogger.com,1999:blog-5939841257923965225.post-8251684853877284989</id><published>2009-08-05T16:45:00.009+05:30</published><updated>2009-08-05T17:29:28.325+05:30</updated><title type='text'>ಗೋಪಾಲಕೃಷ್ಣ ಅಡಿಗರ ‘ಭೂತ’</title><content type='html'>ಕ್ರಿ.ಶ. ೧೯೫೦ರಲ್ಲಿ ವಿನಾಯಕ ಕೃಷ್ಣ ಗೋಕಾಕರು ‘ನವ್ಯ ಕವಿತೆಗಳು’ ಎನ್ನುವ ಕವನಸಂಕಲನವನ್ನು ಹೊರತಂದರು. ೧೯೫೧ರಲ್ಲಿ  ಮುಂಬಯಿಯಲ್ಲಿ ಜರುಗಿದ ಕನ್ನಡ ಸಾಹಿತ್ಯಸಮ್ಮೇಳನದಲ್ಲಿ ನವ್ಯಕಾವ್ಯದ ಲಕ್ಷಣಗಳನ್ನು ವಿವರಿಸಿ, ತಮ್ಮ ಕವಿತೆಗಳನ್ನು ನವ್ಯಕಾವ್ಯವೆಂದು ಘೋಷಿಸಿದರು. ಆದರೆ ಈ ಕವನಗಳು ಕೇವಲ ತಮ್ಮ ವಸ್ತುವಿನಲ್ಲಿ ಮಾತ್ರ ಆಧುನಿಕವಾಗಿದ್ದವೇ ಹೊರತು, ಭಾವನೆಯಲ್ಲಿ ಅಲ್ಲ. In fact ಈ ಕವನಗಳನ್ನು ಬಾಲಿಶ ಕವನಗಳೆಂದು ಕರೆಯುವದೇ ಯೋಗ್ಯವಾದೀತು. &lt;br /&gt;ಗೋಕಾಕರ ‘ನವ್ಯ ಕವಿತೆಗಳು’ ಸಂಕಲನದಲ್ಲಿಯ ‘ರೇಡಿಯೋ’ ಕವನವು ಬಾಲಿಶತನಕ್ಕೊಂದು ಉತ್ತಮ ಉದಾಹರಣೆ. ಅದರ ಮೊದಲ ನುಡಿ ಹೀಗಿದೆ:&lt;br /&gt;&lt;br /&gt;“ಕಾಡಿಯೊ, ಬೇಡಿಯೊ,&lt;br /&gt;ತಂದೆನೊಂದು ರೇಡಿಯೊ;&lt;br /&gt;ಮನೆ ತುಂಬಿಸಿಕೊಂಡ ಸೊಸೆ,&lt;br /&gt;ಇಲ್ಲಿದೆ ಬಾ ಹೀಗೆ ಹಸೆ.”&lt;br /&gt;&lt;br /&gt;ಇಲ್ಲಿಯವರೆಗೆ ನಿಸರ್ಗ, ದೇಶಪ್ರೇಮ, ಗೆಳೆತನ, ಆದರ್ಶ ಮೊದಲಾದ ವಸ್ತುಗಳ ಬಗೆಗೆ ಕವನಗಳು ಬರುತ್ತಿದ್ದು, ಈಗ ‘ರೇಡಿಯೊ’ ಎನ್ನುವ ಆಧುನಿಕ ವಸ್ತುವಿನ ಬಗೆಗೆ ಗೋಕಾಕರು ಕವನವನ್ನು ಬರೆದರು. ಆದರೆ ಈ ಕವನದ ಭಾವ ಹಾಗು ರಚನೆಗಳು ಭಾವಗೀತೆಯ ಭಾವ ಹಾಗು ರಚನೆಗಿಂತ ಬೇರೆಯಾಗಿಲ್ಲ. ಗೋಕಾಕರಲ್ಲಿ self-appreciation ಬಹಳ. ಹೀಗಾಗಿ ಅವರ ಸಾಹಿತ್ಯದಲ್ಲಿಯೂ ಸಹ ಅವರ ಈ ಮನೋಭಾವ ವ್ಯಕ್ತವಾಗುತ್ತಿರುತ್ತದೆ. &lt;br /&gt;&lt;br /&gt;ಕನ್ನಡದ ಹೆಸರಾತ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು, “ಸೂಕ್ಷ್ಮವಾಗಿ ನೋಡಿದರೆ ನಮ್ಮಲ್ಲಿ  ನವ್ಯತೆ ಇಟಲಿಯ ನೃತ್ಯಮಂದಿರದಲ್ಲಿ ಹುಟ್ಟಿದ ಪೇಜಾವರ ಸದಾಶಿವರಾಯರ ಕಾವ್ಯದಿಂದ ಪ್ರಾರಂಭವಾಯಿತೆನ್ನಬಹುದು” ಎಂದು ಹೇಳುತ್ತಾರೆ. ಪೇಜಾವರ ಸದಾಶಿವರಾಯರ ಆ ಕವನ “ನಾಟ್ಯೋತ್ಸವ” ಹೀಗಿದೆ:&lt;br /&gt;&lt;br /&gt;“ಲೋರೆನ್ಸೊ ಇಲ್ ಮನ್ನೀಫಿಕೊ&lt;br /&gt;ಹಾಡನರ್ಪಿಸಿಹೆನು ತಕೊ!&lt;br /&gt;. . . . . . . . . . . . . .&lt;br /&gt;. . . . . . . . . . . . . .&lt;br /&gt;ಕಾಯದಲ್ಲಿ ಕದನದಿಚ್ಛೆ&lt;br /&gt;ಆದರದನು ಕೊಂಚ ಮುಚ್ಚೆ&lt;br /&gt;ಅರಳುತಿರುವ ಮುಗುಳು ನಗೆ&lt;br /&gt;ಸಾವಿರ ಸಿಗರೇಟ ಹೊಗೆ;&lt;br /&gt;ಮಧುವಿನಲ್ಲಿ ಮಿಂದ ಮುದವು&lt;br /&gt;ಮನಸ ಕೆದರಿದೆ!&lt;br /&gt;. . . . . .. . . . . . . . . . . .&lt;br /&gt;. . . . . . . . . . . . . . . . . ”&lt;br /&gt;&lt;br /&gt;ಪೇಜಾವರರ ಈ ಕವನವು ಪಾಶ್ಚಾತ್ಯ ಮನೋವೃತ್ತಿಯ ವಿಜೃಂಭಣೆಯಂತೆ ಕಂಡು ಬರುತ್ತದೆ. ಕವನದ ರಚನೆಯೂ ಸಹ ಭಾವಗೀತೆಯ ರಚನೆಯನ್ನು ಬಿಟ್ಟು ಮುಕ್ತತೆಯ ಕಡೆಗೆ ವಾಲಿದೆ. ಇಷ್ಟರ ಮಟ್ಟಿಗೆ ಇದಕ್ಕೆ ನವ್ಯಕಾವ್ಯವೆನ್ನಬಹುದು.&lt;br /&gt;&lt;br /&gt;ಬೇಂದ್ರೆಯವರನ್ನು ಬಿಟ್ಟರೆ, ನವೋದಯ ಕಾವ್ಯಪ್ರಕಾರದಲ್ಲಿ ಅತ್ಯುತ್ತಮ ಸಿದ್ಧಿಯನ್ನು ಮಾಡಿದವರು ಗೋಪಾಲಕೃಷ್ಣ ಅಡಿಗರು. &lt;br /&gt;“ಕಟ್ಟುವೆವು ನಾವು ನಾಡೊಂದನು&lt;br /&gt;ರಸದ ಬೀಡೊಂದನು” ಎನ್ನುವ ಅವರ ಕವನದ ಸಾಲುಗಳನ್ನು ರಾಜಕಾರಣಿಗಳೂ ಸಹ, ಇಂದಿಗೂ quote ಮಾಡುತ್ತಲೇ ಇರುತ್ತಾರೆ. &lt;br /&gt;“ಯಾವ ಮೋಹನ ಮುರಲಿ ಕರೆಯಿತು, ದೂರ ತೀರಕೆ ನಿನ್ನನು?” ಎನ್ನುವ ಕವನವಂತೂ ಅವರ ಅತ್ಯಂತ ಜನಪ್ರಿಯ ಕವನವಾಗಿ ಉಳಿದಿದೆ.&lt;br /&gt;ಆದರೆ ಸ್ವಾತಂತ್ರ್ಯಾನಂತರ ಆದರ್ಶವಾದಿ ಪರಿಸರವು ಶೀಘ್ರವಾಗಿ ಕುಸಿದು ಬೀಳುತ್ತಿದ್ದನ್ನು ಕಂಡು, ಅವರಲ್ಲಿ ಸಾಮಾಜಿಕ ಹಾಗೂ ರಾಜಕೀಯ ಭ್ರಮನಿರಸನವಾಯಿತು. ಬದಲಾಗುತ್ತಿರುವ ಸಂಸ್ಕೃತಿಯು ವ್ಯಕ್ತಿಯ ಮೇಲೆ ಮಾಡುತ್ತಿರುವ ಪರಿಣಾಮಗಳು, ಅದರಲ್ಲಿ ಯಾವುದು ಸರಿ ಯಾವುದು ತಪ್ಪು, ಯಾವುದು ಶ್ರೇಯಸ್ಸು, ಯಾವುದು ಪ್ರೇಯಸ್ಸು  ಎನ್ನುವ ವೈಯಕ್ತಿಕ ತಳಮಳವು ಅಡಿಗರಲ್ಲಿ ಪ್ರಾರಂಭವಾಯಿತು. ಈ ತಳಮಳದ ಪರಿಣಾಮವು ಅವರ ಕಾವ್ಯಮಾರ್ಗದ ಮೇಲೂ ಆದದ್ದನ್ನು ನೋಡಬಹುದು. ನವೋದಯದ ಭಾವಗೀತೆಯ ಮಾರ್ಗವನ್ನು ಕಿತ್ತೆಸೆದು, ಅಡಿಗರು ನವ್ಯ ಮಾರ್ಗದಲ್ಲಿ ಚರಿಸಿದರು. ಅವರ ‘ಭೂಮಿಗೀತ’ ಕವನದಲ್ಲಿ ಬರುವ ಈ ಸಾಲುಗಳು ಅವರ ಕಾವ್ಯಮಾರ್ಗಕ್ಕೂ ಹೊಂದುತ್ತವೆ ಎನ್ನಬಹುದು:&lt;br /&gt;“ತೆಗೆದುಕೊ ನೀ ಕೊಟ್ಟ ವಸ್ತ್ರವಿಲಾಸ, ಈ ಶರಟು, ಈ ಶರಾಯಿ,&lt;br /&gt;ಈ ಭಗ್ನ ಜೋಪಡಿಯೂ ನಿನ್ನದೇ.&lt;br /&gt;&lt;span style="font-weight:bold;"&gt;ಬತ್ತಲಾಗದೆ ಬಯಲು ಸಿಕ್ಕದಿಲ್ಲಿ&lt;/span&gt;!”&lt;br /&gt;&lt;br /&gt;ಈ ಕಾರಣಗಳಿಂದಾಗಿ ಗೋಪಾಲಕೃಷ್ಣ ಅಡಿಗರನ್ನೇ ಕನ್ನಡದ ನವ್ಯಕಾವ್ಯ ಪ್ರವರ್ತಕರೆಂದು ಕರೆಯುವದು ಸರಿಯಾದ ಮಾತು. ಆದರೆ ಅಡಿಗರಿಂದ ಪ್ರಭಾವಿತರಾಗಿ ನವ್ಯಮಾರ್ಗವನ್ನು ಅನುಸರಿಸಿದ ಯಾವ ಕವಿಯೂ ಅಡಿಗರು ಏರಿದ ಎತ್ತರವನ್ನು ಮುಟ್ಟಿಲ್ಲ.&lt;br /&gt;&lt;br /&gt;ಅಡಿಗರ ‘ಭೂತ’ ಕವನವು ೧೯೫೯ರಲ್ಲಿ ಪ್ರಕಟವಾಯಿತು. ಆ ಕವನದ ಪೂರ್ತಿಪಾಠ ಹೀಗಿದೆ :&lt;br /&gt;&lt;br /&gt;ಭೂತ&lt;br /&gt;--೧--&lt;br /&gt;ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು :&lt;br /&gt;ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ&lt;br /&gt;ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿ&lt;br /&gt;ಅಳ್ಳಳ್ಳಾಯಿ ಜಪಿಸುವ ಬಿಸಿಲಕೋಲಿಗೇರಿ ತೆಕ್ಕಾಮುಕ್ಕಿ&lt;br /&gt;ಹಾಯುತ್ತಿದೆ ಆಗಾಗ್ಗೆ ತುಳಸಿವೃಂದಾವನದ ಹೊದರಿಗೂ.&lt;br /&gt;ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ ದಡದಲ್ಲಿ&lt;br /&gt;ಕತ್ತರಿಸಿದಿಲಿಬಾಲ ಮಿಡುಕುತ್ತದೆ.&lt;br /&gt;ಕತ್ತಲಲ್ಲೇ ಕಣ್ಣುನೆಟ್ಟು ತಡಕುವ ನನಗೆ&lt;br /&gt;ಹೊಳೆವುದು ಹಠಾತ್ತನೊಂದು ಚಿನ್ನದ ಗೆರೆ :&lt;br /&gt;ಅಮವಾಸ್ಯೆ ಕಂದಕಗಳಲ್ಲಿ ಹೇಗೋ ಬಿದ್ದು ಒದ್ದಾಡುತ್ತಿರುವ ಗರಿ ಸುಟ್ಟ ತಾರೆ.&lt;br /&gt;&lt;br /&gt;--೨--&lt;br /&gt;ವರ್ತಮಾನಪತ್ರಿಕೆಯ ತುಂಬ ಭೂತದ ಸುದ್ದಿ :&lt;br /&gt;ನೀರ ಮೇಲಕ್ಕೊಂದು ಮಡಿ, ಕೆಳಕ್ಕೇಳು ಮಂಜಿನ ಶಿಖರಿ ;&lt;br /&gt;ಇದ್ದಕ್ಕಿದ್ದಂತಕಸ್ಮಾತ್ತಗ್ನಿನುಡಿಯುಗಿದ&lt;br /&gt;ಮಂಜು ಮುಸುಕಿದ ಮುಗ್ಧ ಜ್ವಾಲಾಮುಖಿ.&lt;br /&gt;ಪತ್ರಿಕೆಯ ಮುಚ್ಚಿದರು----&lt;br /&gt;ಸದ್ದಿರದ ಖಾಲಿಕಂಕಾಲ ಕೋಣೆಗಳಲ್ಲಿ&lt;br /&gt;ತಾಳವಿಲ್ಲದೆ ಮೂಕಸನ್ನೆ ಮುಲುಕುವ ತಿರುಗುಮುರುಗು ಪಾದದ ಪರಿಷೆ&lt;br /&gt;ಅಂತರಾಳಗಲ್ಲಿ ನಿಂತ ನೀರುಗಳಲ್ಲಿ&lt;br /&gt;ಕಂತಿ ಕೈಬಡೆವ ಬೀಜಾಣುಜಾಲ ;&lt;br /&gt;ಕಾಳರಂಗಸ್ಥಳದ ಫರದೆ ಮುರಿಮರೆಯಲ್ಲಿ&lt;br /&gt;ಮಾತು ಹೆಕ್ಕುವ ಮಿಣುಕು ಮೊನೆಯ ಬಾಲ----- ಇವು&lt;br /&gt;ಬಯಸವೆ ಹೊರಂಗಳದ ರಂಗುರಂಗಿನ ಬಳ್ಳಿ ಹೂವು ಹೊದರ ?&lt;br /&gt;&lt;br /&gt;---೩—&lt;br /&gt;ನೀರು ನೆಲೆಯಿಲ್ಲದವರು ಪಿತೃಪಿತಾಮಹರು,&lt;br /&gt;ಗಾಳಿಹೆದ್ದೆರೆಲಾಳಿಗಂಟಿ ನೆಲಸಿಕ್ಕಿಯೂ ದಕ್ಕದವರು.&lt;br /&gt;ಉಚ್ಛಾಟನೆಯ, ತರ್ಪಣದ ತಂತ್ರ ಬಲ್ಲೆ ; ಆದರು ಮಂತ್ರ ಮರೆತೆ ;&lt;br /&gt;ಬರಿದೇ ಹೀಗೆ ಆಡಿಸುತ್ತಿದ್ದೇನೆ ಮಂತ್ರದಂಡ.&lt;br /&gt;ಪುರೋಹಿತರ ನೆಚ್ಚಿ ಪಶ್ಚಿಮಬುದ್ಧಿಯಾದೆವೋ ;&lt;br /&gt;ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು.&lt;br /&gt;ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು ;&lt;br /&gt;ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ&lt;br /&gt;ಕಂಡೀತು ಗೆರೆ ಮಿರಿವ ಚಿನ್ನದದಿರು,&lt;br /&gt;ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ&lt;br /&gt;ಇನ್ನಾದರೂ ಕೊಂಚ ಕಲಿಯಬೇಕು :&lt;br /&gt;ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ---&lt;br /&gt;ವಿಗ್ರಹಕ್ಕೊಗ್ಗಿಸುವ ಅಸಲು ಕಸಬು.&lt;br /&gt;&lt;br /&gt;--೪—&lt;br /&gt;ಬಾವಿಯೊಳಗಡೆ ಕೊಳೆವ ನೀರು ; ಮೇಲಕ್ಕಾವಿ ;&lt;br /&gt;ಆಕಾಶದುದ್ದವೂ ಅದರ ಕಾರಣ ಬೀದಿ ;&lt;br /&gt;ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು&lt;br /&gt;ನವಮಾಸವೂ ಕಾವ ಭ್ರೂಣರೂಪಿ---&lt;br /&gt;ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ---&lt;br /&gt;ಭೂತರೂಪಕ್ಕೆ ಮಳೆ ವರ್ತಮಾನ ;&lt;br /&gt;ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ;&lt;br /&gt;ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ,&lt;br /&gt;ಗುಡಿಗೋಪುರಗಳ ಬಂಗಾರ ಶಿಖರ.&lt;br /&gt;………………………………………………………………………………&lt;br /&gt;&lt;br /&gt;ಈ ಕವನದಲ್ಲಿ ಬರುವ ಭೂತ ಪದಕ್ಕೆ ಎರಡು ಅರ್ಥಗಳನ್ನು ಮಾಡಬಹುದು. ಒಂದು past ; ಎರಡನೆಯದು ghost. ಕವಿ ತನ್ನ ಭೂತಕಾಲವನ್ನು ಅಂದರೆ ತನ್ನ ಪೂರ್ವಸಂಸ್ಕಾರಗಳನ್ನು, ಪೂರ್ವಪರಂಪರೆಯನ್ನು ಮರೆತಿದ್ದಾನೆ.ಇದು ವರ್ತಮಾನದ ಪರಿಣಾಮವಾಗಿರಬಹುದು; ಪರಸಂಸ್ಕೃತಿಯ ಆಕರ್ಷಣೆಯ ಪರಿಣಾಮವಾಗಿರಬಹುದು. ಇದರಿಂದ ಕವಿಯ ಮೇಲೆ Alienation Effect ಅಂತೂ ಆಗಿದೆ. ಕವಿಯು ಇಲ್ಲಿ ತನ್ನ ಜನಾಂಗದ ಪ್ರತಿನಿಧಿಯೂ ಹೌದು. ಆದುದರಿಂದ ಒಂದು ಜನಾಂಗವೇ ತನ್ನ ಪರಂಪರೆಯ ವಿಸ್ಮರಣೆಗೆ ಒಳಗಾಗಿದ್ದನ್ನು ಕವಿಯು ವೈಯಕ್ತಿಕವಾಗಿ ಅನುಭವಿಸುತ್ತಿದ್ದಾನೆ. ಆದರೆ ಓರ್ವ ವ್ಯಕ್ತಿಯ ಅಥವಾ ಒಂದು ಜನಾಂಗದ ಸುಪ್ತಪ್ರಜ್ಞೆಯಲ್ಲಿರುವ ಪರಂಪರೆಯ ನೆನಪಿನ ಗ್ರಂಥಿಗಳು ಸುಲಭವಾಗಿ ನಾಶವಾಗುವದಿಲ್ಲ. ಅವು ಒಂದಿಲ್ಲ ಒಂದು ರೀತಿಯಲ್ಲಿ ತಮ್ಮ ಇರುವಿಕೆಯನ್ನು ವ್ಯಕ್ತಪಡಿಸುತ್ತವೆ.  ಆದುದರಿಂದಲೇ ಕವಿಯು ಇವುಗಳನ್ನು ‘ಭೂತಕಾಲದ ಭ್ರೂಣ ಗೂಢಗಳು ’ ಎಂದು ಹೇಳುತ್ತಿದ್ದಾನೆ. ಪರಂಪರೆಯ ನೆನಪಿನ ಈ ಗ್ರಂಥಿಗಳು ಕವಿಗೂ ಸಹ ಗೂಢವಾಗಿಯೇ ಇವೆ. ಅವುಗಳನ್ನು ಗುರುತಿಸಲು ಆತ ಶಕ್ತನಾಗುತ್ತಿಲ್ಲ. ಆದರೆ ಅವು ನಿರ್ಜೀವ ಗೂಢಗಳಲ್ಲ. ಅವು ಭ್ರೂಣಾವಸ್ಥೆಯಲ್ಲಿವೆ. ಅಂದರೆ ಅವುಗಳಲ್ಲಿ ಜೀವವಿದೆ. ಅವು ಕವಿಯ ಸುಪ್ತ ಪ್ರಜ್ಞೆಯಿಂದ ಅವನ ಜಾಗೃತ ಪ್ರಜ್ಞೆಗೆ ಅಂದರೆ ಅವನ ಸಂಕಲ್ಪಾತ್ಮಕ ಪ್ರಜ್ಞೆಗೆ (Determining mind) ಬರಲು ತವಕಿಸುತ್ತವೆ. ಶಾಸ್ತ್ರೀಯ ಮನೋವಿಜ್ಞಾನದ ಪಿತಾಮಹನಾದ ಫ್ರಾ^ಯ್ಡನ ಭಾಷೆಯಲ್ಲಿ ಈ ಭ್ರೂಣಗೂಢಗಳು ಅಂದರೆ complexes in subconscious mind ಎಂದು ಹೇಳಬಹುದು. ಮತ್ತೊಬ್ಬ ಮನೋವಿಜ್ಞಾನಿ ಯೂಂಗನ ಭಾಷೆಯಲ್ಲಿ ಇವನ್ನು ಜನಾಂಗೀಯ ಪ್ರಜ್ಞೆಯ ಗ್ರಂಥಿಗಳು ಎಂದೂ ಹೇಳಬಹುದು. ಒಟ್ಟಿನಲ್ಲಿ ಈ ಭ್ರೂಣಗೂಢಗಳಿಂದಾಗಿ ಕವಿಯ ಮನಸ್ಸು ತೀವ್ರ ತಳಮಳಕ್ಕೊಳಗಾಗಿದೆ.&lt;br /&gt;&lt;br /&gt;ಕವನದ ಮೊದಲ ಭಾಗದಲ್ಲಿ ಈ ಅಸ್ವಸ್ಥತೆಯ ವರ್ಣನೆ ಇದೆ. ಎರಡನೆಯ ಭಾಗದಲ್ಲಿ ಗುರುತಿಸಲಾಗದ ಈ ಭೂತಗಳ ವರ್ಣನೆ ಇದೆ. ಮೂರನೆಯ ಭಾಗದಲ್ಲಿ ಕವಿಯ ಸಂಕಲ್ಪವರ್ಣನೆ ಇದೆ. ನಾಲ್ಕನೆಯ ಭಾಗದಲ್ಲಿ ಆಶೆಯ ಮುನ್ನೋಟದ ಸಂಕೇತವಿದೆ. ನಿರಾಶೆಯಿಂದಲೇ ಪ್ರಾರಂಭವಾದ ಕವನವು  ಸಂಕಲ್ಪದಲ್ಲಿ ಹಾಗೂ ಆಶಾವಾದದಲ್ಲಿ ಮುಕ್ತಾಯವಾಗುತ್ತದೆ.&lt;br /&gt;&lt;br /&gt;--೧—&lt;br /&gt;ಮೊದಲ ಭಾಗ ಹೀಗಿದೆ:&lt;br /&gt;&lt;br /&gt;ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು :&lt;br /&gt;ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ&lt;br /&gt;ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿ&lt;br /&gt;ಅಳ್ಳಳ್ಳಾಯಿ ಜಪಿಸುವ ಬಿಸಿಲಕೋಲಿಗೇರಿ ತೆಕ್ಕಾಮುಕ್ಕಿ&lt;br /&gt;ಹಾಯುತ್ತಿದೆ ಆಗಾಗ್ಗೆ ತುಳಸಿವೃಂದಾವನದ ಹೊದರಿಗೂ.&lt;br /&gt;ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ ದಡದಲ್ಲಿ&lt;br /&gt;ಕತ್ತರಿಸಿದಿಲಿಬಾಲ ಮಿಡುಕುತ್ತದೆ.&lt;br /&gt;ಕತ್ತಲಲ್ಲೇ ಕಣ್ಣುನೆಟ್ಟು ತಡಕುವ ನನಗೆ&lt;br /&gt;ಹೊಳೆವುದು ಹಠಾತ್ತನೊಂದು ಚಿನ್ನದ ಗೆರೆ :&lt;br /&gt;ಅಮವಾಸ್ಯೆ ಕಂದಕಗಳಲ್ಲಿ ಹೇಗೋ ಬಿದ್ದು ಒದ್ದಾಡುತ್ತಿರುವ ಗರಿ ಸುಟ್ಟ ತಾರೆ.&lt;br /&gt;&lt;br /&gt;ತನ್ನ ಸುಪ್ತಪ್ರಜ್ಞೆಯನ್ನು ಕವಿ ‘ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ’ ಎಂದು ಸಂಕೇತಿಸುತ್ತಾನೆ. ತಾಯಗರ್ಭದಲ್ಲಿರುವ ಭ್ರೂಣವು ಹೇಗೆ ತಲೆ ಕೆಳಗೆ ಮಾಡಿಕೊಂಡೇ ಹೊರಗೆ ಬರಲು ಪ್ರಯತ್ನಿಸುವದೋ, ಅದೇ ರೀತಿಯಲ್ಲಿ, ಈ ಭೂತಕಾಲದ ಗೂಢಭ್ರೂಣಗಳೂ ಸಹ ತಲೆಕೆಳಗು ಮಾಡಿಕೊಂಡು ತೆವಳುತ್ತ ಹೊರಬರಲು ಪ್ರಯತ್ನಿಸುತ್ತಿವೆ. ಅವುಗಳ ಪ್ರಯತ್ನಕ್ಕೆ ಅಲ್ಲೊಂದು ಆಶಾಕಿರಣವಿದೆ. ಅದೇ ಹೊರಪ್ರಜ್ಞೆಯಲ್ಲಿರುವ ’ಬಿಸಿಲುಕೋಲು’. ಆ ಬಿಸಿಲಕೋಲನ್ನು ಹಿಡಿದುಕೊಂಡು ಇವು ಹೊರಬಂದರೆ ಇವಕ್ಕೆ ಸಿಗುವದು ಜೀವನವನ್ನು ಪಾವನಗೊಳಿಸುವ ತುಳಸಿವೃಂದಾವನ ! &lt;br /&gt;&lt;br /&gt;ಆದರೆ ಈ ಪ್ರಯಾಣ ಸುಖಕರವಾಗಿಲ್ಲ. ಗೂಢಪ್ರಜ್ಞೆಯ ಗರ್ಭದಿಂದ ಹೊರಬಂದಾಗ ಇವು ಗರ್ಭದ ಜೊತೆಗೆ ಸಂಬಂಧ ನೀಡಿದ ಹೊಕ್ಕಳಹುರಿಯನ್ನು ಕಳಚಿಕೊಳ್ಳುತ್ತವೆ, ಕತ್ತರಿಸಿದ ಇಲಿಬಾಲ ಮಿಡುಕುವಂತೆ. ಇದು pain of separation ಅನ್ನು ಸೂಚಿಸುತ್ತದೆ.&lt;br /&gt;ಈ ರೀತಿಯಾಗಿ ಗೂಢಭ್ರೂಣವು ಹೊರಗೆ ಪ್ರತ್ಯಕ್ಷವಾದಾಗ, ಅದನ್ನು ಗುರುತಿಸಲು ಕತ್ತಲಲ್ಲಿ ತಡಕಾಡುತ್ತಿರುವ ಕವಿಯ ಕಣ್ಣಿಗೆ ಮಿಂಚೊಂದು ಹೊಳೆದು ಅದು ಕಾಣುತ್ತದೆ. ಆ ಮಿಂಚಿನಲ್ಲಿ ಕವಿ ಕಾಣುವದು ಏನನ್ನು? ಈ ಭ್ರೂಣದ ಸ್ಥಿತಿಯನ್ನು :ಅದೊಂದು ಗರಿ ಸುಟ್ಟ ತಾರೆ ! ಅದು ತಾರೆಯೇನೋ ನಿಜ. ಆದರೆ ಅದರ ಗರಿ ಸುಟ್ಟಿದೆ. ಅದು ಹಾರಲಾರದೇ ಒದ್ದಾಡುತ್ತಿದೆ. ನಾವು ಕಳೆದುಕೊಂಡಿರುವ ನಮ್ಮ ಪರಂಪರೆಯ ಅಂಶಗಳು ಗರಿಸುಟ್ಟ ತಾರೆಯಂತಾಗಿವೆ ಎನ್ನುವದು ಕವಿಯ ಭಾವ.&lt;br /&gt;ಈ ರೀತಿಯಾಗಿ ಮೊದಲ ಭಾಗದಲ್ಲಿ ಕವಿ ಸುಪ್ತಪ್ರಜ್ಞೆಯಲ್ಲಿರುವ ಪಾರಂಪರಿಕ ಅಂಶಗಳ ವಸ್ತುಸ್ಥಿತಿಯನ್ನು ಹಾಗೂ ಕವಿಯ ಜೊತೆಗೆ ಅವುಗಳಿಗಿರುವ ಸಂಬಂಧವನ್ನು ವರ್ಣಿಸಿದ್ದಾನೆ.&lt;br /&gt;&lt;br /&gt;--೨—&lt;br /&gt;ಎರಡನೆಯ ಭಾಗ ಹೀಗಿದೆ:&lt;br /&gt;&lt;br /&gt;ವರ್ತಮಾನಪತ್ರಿಕೆಯ ತುಂಬ ಭೂತದ ಸುದ್ದಿ :&lt;br /&gt;ನೀರ ಮೇಲಕ್ಕೊಂದು ಮಡಿ, ಕೆಳಕ್ಕೇಳು ಮಂಜಿನ ಶಿಖರಿ ;&lt;br /&gt;ಇದ್ದಕ್ಕಿದ್ದಂತಕಸ್ಮಾತ್ತಗ್ನಿನುಡಿಯುಗಿದ&lt;br /&gt;ಮಂಜು ಮುಸುಕಿದ ಮುಗ್ಧ ಜ್ವಾಲಾಮುಖಿ.&lt;br /&gt;ಪತ್ರಿಕೆಯ ಮುಚ್ಚಿದರು----&lt;br /&gt;ಸದ್ದಿರದ ಖಾಲಿಕಂಕಾಲ ಕೋಣೆಗಳಲ್ಲಿ&lt;br /&gt;ತಾಳವಿಲ್ಲದೆ ಮೂಕಸನ್ನೆ ಮುಲುಕುವ ತಿರುಗುಮುರುಗು ಪಾದದ ಪರಿಷೆ&lt;br /&gt;ಅಂತರಾಳಗಲ್ಲಿ ನಿಂತ ನೀರುಗಳಲ್ಲಿ&lt;br /&gt;ಕಂತಿ ಕೈಬಡೆವ ಬೀಜಾಣುಜಾಲ ;&lt;br /&gt;ಕಾಳರಂಗಸ್ಥಳದ ಫರದೆ ಮುರಿಮರೆಯಲ್ಲಿ&lt;br /&gt;ಮಾತು ಹೆಕ್ಕುವ ಮಿಣುಕು ಮೊನೆಯ ಬಾಲ----- ಇವು&lt;br /&gt;ಬಯಸವೆ ಹೊರಂಗಳದ ರಂಗುರಂಗಿನ ಬಳ್ಳಿ ಹೂವು ಹೊದರ ?&lt;br /&gt;&lt;br /&gt;ಎರಡನೆಯ ಭಾಗದಲ್ಲಿ ಕವಿ ತನ್ನ --(ಅಂದರೆ ತನ್ನ ಜನಾಂಗದ ಎನ್ನುವ ಅರ್ಥವೂ ಇಲ್ಲಿದೆ)—ವರ್ತಮಾನ ಸ್ಥಿತಿಗೂ ಹಾಗೂ ತನ್ನ ಪರಂಪರೆಗೂ ಇರುವ ಗಾಢ ಸಂಬಂಧವನ್ನು ವಿವರಿಸುತ್ತಾನೆ. &lt;br /&gt;ವರ್ತಮಾನ ಪತ್ರಿಕೆ ಅಂದರೆ news paper. ಅದು ಜಗತ್ತಿನಲ್ಲಿ ಸದ್ಯಕ್ಕೆ ನಡೆಯುತ್ತಿರುವದನ್ನು (=ವರ್ತಮಾನವನ್ನು=present stateಅನ್ನು) ತಿಳಿಸಬೇಕು. ಆದರೆ ಈ ವರ್ತಮಾನ ಪತ್ರಿಕೆಯಲ್ಲಿ ಬಂದಿರುವದು ಸದ್ಯದ ಸುದ್ದಿಯಲ್ಲ ; ಅಲ್ಲಿರುವದು ಕೇವಲ ಭೂತದ ಸುದ್ದಿ. &lt;br /&gt;ಅರ್ಥಾತ್ ವರ್ತಮಾನವನ್ನು ಭೂತಕಾಲವು control ಮಾಡುತ್ತಿದೆ.&lt;br /&gt;ಇದರ ಕಾರಣವು  ಖ್ಯಾತ ಮನೋವಿಜ್ಞಾನಿ ಫ್ರಾ^ಯ್ಡನ ಥಿಯರಿಯಲ್ಲಿ ಸಿಗುತ್ತದೆ. &lt;br /&gt;ಮನಸ್ಸಿನಲ್ಲಿ ಮೇಲೆ ಕಾಣುವ ಜಾಗ್ರತ ಭಾಗ ಒಂದು ಮಡಿಯಾದರೆ, ಸುಪ್ತ ಭಾಗವು ಏಳು ಮಡಿಯಷ್ಟಿರುತ್ತದೆ. ಈ ಸುಪ್ತಭಾಗವು ಮಂಜು ಮುಸುಕಿದ, ತಣ್ಣನೆಯ ಜ್ವಾಲಾಮುಖಿ. ಯಾವದೋ ಸಂದರ್ಭದಲ್ಲಿ ಇದು ಸಿಡಿದೇಳಬಹುದು!&lt;br /&gt;ಭೂತದ ಸುದ್ದಿಯನ್ನೇ ಹೇಳುವ ಈ ವರ್ತಮಾನ ಪತ್ರಿಕೆಯನ್ನು ಈಗ ಮುಚ್ಚಿ ಹಾಕಿದ್ದಾರೆ. &lt;br /&gt;ಸರಿ, ಪತ್ರಿಕಾಲಯದ ಒಳಗಿನ ಖಾಲಿ ಕೋಣೆಗಳಲ್ಲಿ ಈಗ  ಕಾಣುವದೇನು?&lt;br /&gt;ಅಲ್ಲೂ ಭೂತಚಲನೆ !&lt;br /&gt;ಆದರೆ, ವರ್ತಮಾನವು ಮಾಡುವಂತೆ, ಭೂತವು ಸದ್ದು ಮಾಡಲಾರದು, ಇದು ನಿಶ್ಶಬ್ದ ಜೀವಿ ! ಇದರದು ಏನಿದ್ದರೂ silent operation ! ಅದಕ್ಕೆಂದೇ ‘ಸದ್ದಿರದ ಕಂಕಾಲ (=skeleton)ಕೋಣೆ ಎಂದು ಕವಿ ಸುಪ್ತಪ್ರಜ್ಞೆಯನ್ನು ಬಣ್ಣಿಸುತ್ತಾನೆ. ಅಲ್ಲಿ ತಿರುಗು ಮುರುಗು ಪಾದವುಳ್ಳ (= ಭೂತಗಳ) ಪರಿಷೆ ಅಂದರೆ ಜಾತ್ರೆ ನಡೆದಿದೆ. ಅವು ತಾಳವಿಲ್ಲದ ಬೇತಾಳಗಳಾಗಿ, ಮೂಕಸನ್ನೆ ಮಾಡುತ್ತ ಚರಿಸುತ್ತಿವೆ. ಭೂತಗಳ ಪಾದಗಳು ತಿರುಗುಮುರುಗಾಗಿ ಇರುವದರಿಂದ ಅವು ಹಿಂದೆ ನಡೆದರೂ ಸಹ, ಅವುಗಳ ಚಲನೆ ಮುಂದಿನ ದಿಕ್ಕಿನಲ್ಲಿರುತ್ತದೆ. ಅರ್ಥಾತ್ ಅವು ಹೊರಬರಲು ಪ್ರಯತ್ನಿಸುತ್ತಿವೆ.&lt;br /&gt;&lt;br /&gt;ಈ ಭೂತಗಳು ಜೀವ ಪಡೆಯಲು ಪ್ರಯತ್ನಿಸುತ್ತಿವೆ. ಆದುದರಿಂದ ಕವಿಯು ಇವುಗಳನ್ನು  ಬೀಜಾಣುಜಾಲಕ್ಕೆ(=sperms) ಹೋಲಿಸುತ್ತಾನೆ. ಈ spermಗಳು ಇರುವ ಸುಪ್ತಪ್ರಜ್ಞೆಯ ಗರ್ಭ ಎಂತಹದು? ಅದು ನಿಂತ ನೀರು, stagnant pond. ಕವಿಯ ಅಂತರಾಳವು stagnant pond ಯಾಕೆ ಅನ್ನುವ ಪ್ರಶ್ನೆ ಇಲ್ಲಿ ಬರುತ್ತದೆ. ಕವಿಯು ಪೂರ್ವಪರಂಪರೆಯನ್ನು ಪೂರ್ಣವಾಗಿ ತ್ಯಜಿಸಿ  ಪರಸಂಸ್ಕೃತಿಯನ್ನು ಅಪ್ಪಿಕೊಂಡದ್ದರಿಂದಲೇ, ಅವನ ಪರಂಪರೆಯು ನಿಂತ ನೀರಾಯಿತು. ಈಗ ಆ ನಿಂತ ನೀರಿನಲ್ಲಿಯೇ ಈ ಬೀಜಾಣುಗಳು ಕೈಬಡೆಯುತ್ತ ಚಲಿಸುತ್ತಿವೆ, ಹೊಸ ಜನ್ಮ ಪಡೆಯುವ ಉದ್ದೇಶದಿಂದ. ಭ್ರೂಣಾವಸ್ಥೆಗೆ ಬಂದು, ಆಬಳಿಕ ಜಾಗೃತ ಪ್ರಜ್ಞೆಗೆ ನುಗ್ಗುವ ಉದ್ದೇಶದಿಂದ ಅವು ನಿಂತ ನೀರಿನಲ್ಲಿಯೇ ಕೈಬಡೆಯುತ್ತ ಚಲಿಸುತ್ತಿವೆ. &lt;br /&gt;&lt;br /&gt;ಕವಿ ಈಗ ಮತ್ತೆ ಕತ್ತರಿಸಿದಿಲಿಬಾಲವನ್ನು ನೆನಪಿಸುತ್ತಾನೆ. ಈ ಇಲಿಬಾಲವು ಕಾಳ(=dark;time)ರಂಗಸ್ಥಳದ ಪರದೆಯ ಹಿಂದಿರುವ ಇಲಿಬಾಲವಾಗಿದೆ. ಇದು ಮಾತನ್ನು ಹೆಕ್ಕುತ್ತಿದೆ. ಯಾವ ರೀತಿಯಲ್ಲಿ ರಂಗಸ್ಥಳದಲ್ಲಿ ಇರುವ ಪಾತ್ರಗಳು ಪರದೆಯ ಹಿಂದಿನಿಂದ ಬರುವ prompting ಅಂದರೆ ಸೂಚನಾಪದಗಳನ್ನು ಅನುಸರಿಸಿ ಮಾತನಾಡುತ್ತವೆಯೊ, ಅದೇ ರೀತಿಯಲ್ಲಿ ಈ ಭ್ರೂಣಗಳು ರಂಗಸ್ಥಳದ (=ಜಾಗೃತಾವಸ್ಥೆಯ) ಹಿಂದಿರುವ ಸುಪ್ತಪ್ರಜ್ಞೆಯಿಂದ ಸೂಚನೆಗಳನ್ನು ಅನುಸರಿಸುತ್ತವೆ.&lt;br /&gt;ಈ ಎಲ್ಲ ಪ್ರಯತ್ನಗಳೊಂದಿಗೆ, ಈ ಎಲ್ಲ ಅವಸ್ಥೆಗಳನ್ನು ದಾಟಿ ಈ ಪಾರಂಪರಿಕ ಭ್ರೂಣಗೂಢಗಳು ಜಾಗೃತ ಪ್ರಜ್ಞೆಗೆ ಬರಲು ಬಯಸುತ್ತವೆ. ಅವುಗಳಿಗೆ ಅಲ್ಲಿ ಕಾಣಸಿಗುವುದು : ಹೊರ ಅಂಗಳದ(=ಜಾಗೃತ ಪ್ರಜ್ಞೆಯಲ್ಲಿ) ಇರುವ ಬಣ್ಣ ಬಣ್ಣದ ಹೂವು, ಪೊದರುಗಳು! &lt;br /&gt;&lt;br /&gt;--೩—&lt;br /&gt;ಮೂರನೆಯ ಭಾಗ ಹೀಗಿದೆ:&lt;br /&gt;&lt;br /&gt;ನೀರು ನೆಲೆಯಿಲ್ಲದವರು ಪಿತೃಪಿತಾಮಹರು,&lt;br /&gt;ಗಾಳಿಹೆದ್ದೆರೆಲಾಳಿಗಂಟಿ ನೆಲಸಿಕ್ಕಿಯೂ ದಕ್ಕದವರು.&lt;br /&gt;ಉಚ್ಚಾಟನೆಯ, ತರ್ಪಣದ ತಂತ್ರ ಬಲ್ಲೆ ; ಆದರು ಮಂತ್ರ ಮರೆತೆ ;&lt;br /&gt;ಬರಿದೇ ಹೀಗೆ ಆಡಿಸುತ್ತಿದ್ದೇನೆ ಮಂತ್ರದಂಡ.&lt;br /&gt;ಪುರೋಹಿತರ ನೆಚ್ಚಿ ಪಶ್ಚಿಮಬುದ್ಧಿಯಾದೆವೋ ;&lt;br /&gt;ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು.&lt;br /&gt;ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು ;&lt;br /&gt;ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ&lt;br /&gt;ಕಂಡೀತು ಗೆರೆ ಮಿರಿವ ಚಿನ್ನದದಿರು,&lt;br /&gt;ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ&lt;br /&gt;ಇನ್ನಾದರೂ ಕೊಂಚ ಕಲಿಯಬೇಕು :&lt;br /&gt;ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ---&lt;br /&gt;ವಿಗ್ರಹಕ್ಕೊಗ್ಗಿಸುವ ಅಸಲು ಕಸಬು.&lt;br /&gt;&lt;br /&gt;ಮೊದಲನೆಯ ಭಾಗದಲ್ಲಿ ಭ್ರೂಣಗೂಢಗಳ ಸ್ಥಿತಿಯನ್ನು ಹಾಗು ಎರಡನೆಯ ಭಾಗದಲ್ಲಿ ಅವುಗಳ ಚಲನಯತ್ನವನ್ನು  ಸಾರಿದ ಕವಿ, ಮೂರನೆಯ ಭಾಗದಲ್ಲಿ ತನ್ನ ಅಂತರಂಗದ ( ಅಂದರೆ ಸಂಕಲ್ಪಪ್ರಜ್ಞೆಯ) ವಿಮರ್ಶೆಯಲ್ಲಿ ತೊಡಗಿದ್ದಾನೆ. &lt;br /&gt;ತನ್ನ ಪಿತೃ ಪಿತಾಮಹರು ನೀರು, ನೆಲೆಯಿಲ್ಲದವರು. ಏಕೆಂದರೆ ತಾನು ಅವರ ಶ್ರಾದ್ಧಕರ್ಮಗಳನ್ನು ಮಾಡಿಲ್ಲ. ಏಕೆಂದರೆ ಪರಂಪರೆಯಲ್ಲಿ ತನಗೆ ಶ್ರದ್ಧೆ ಇಲ್ಲ. &lt;br /&gt;(ಟಿಪ್ಪಣಿ: ಶ್ರದ್ಧೆಯಿಂದ ಶ್ರಾದ್ಧ ಪದ ಬಂದಿದೆ.)&lt;br /&gt;ಕವಿಗೆ ಎರಡೂ ತರಹದ ತಂತ್ರಗಳು ಗೊತ್ತು. ಅಂದರೆ ಆತ ಈ ಪಿತೃಗಳ ಉಚ್ಚಾಟನೆಯನ್ನೂ ಮಾಡಬಲ್ಲ ಅಥವಾ ಅವರಿಗೆ ತರ್ಪಣವನ್ನೂ ಸಲ್ಲಿಸಬಲ್ಲ. ಆದರೆ ತಂತ್ರವನ್ನು (ಅಂದರೆ ಹೊರಗಿನ proceduresಗಳನ್ನು) ತಿಳಿದ ಕವಿ ಮಂತ್ರವನ್ನು (ಅಂದರೆ ಅಂತರಂಗ ರಹಸ್ಯವನ್ನು) ಮರೆತು ಬಿಟ್ಟಿದ್ದಾನೆ. ಬರಿದೆ ಮಂತ್ರದಂಡವನ್ನು ಆಡಿಸುತ್ತಿದ್ದಾನೆ. ಇದಕ್ಕೆ ಕಾರಣವೇನು? ಕವಿ ಇದಕ್ಕೆ ಪುರೋಹಿತರನ್ನು ದೂರುತ್ತಿದ್ದಾನೆ. ಪುರೋಹಿತರು ಓರ್ವ ವ್ಯಕ್ತಿಯ ಲೌಕಿಕ ಹಾಗು ಪಾರಲೌಕಿಕ ಶ್ರೇಯಸ್ಸಿಗೆ lead ಮಾಡುವಂಥವರು. ಆದರೆ ಈ ಪುರೋಹಿತರು ಕೇವಲ ಪಶ್ಚಿಮಬುದ್ಧಿಯನ್ನು ಕಲಿಸಿದ್ದಾರೆ. ಪಶ್ಚಿಮಬುದ್ಧಿ ಅಂದರೆ : Western thoughts, western culture. &lt;br /&gt;ಇದನ್ನು ಕಲಿಸಿದವರು ಬ್ರಿಟಿಶ್ ಭಾರತದ rationalists. ಪಶ್ಚಿಮಬುದ್ಧಿಗೆ ಇನ್ನೂ ಒಂದು ಅರ್ಥವಿದೆ. ಪೂರ್ವಬುದ್ಧಿ ಎಂದರೆ ‘ಮೊದಲು ಇದ್ದಂತಹ ಬುದ್ಧಿ’ಅಂದರೆ ಪಾರಂಪರಿಕ ಬುದ್ಧಿ . ಪಶ್ಚಿಮಬುದ್ಧಿ ಎಂದರೆ ‘ಆ ಮೇಲೆ ಬಂದಂತಹ ಬುದ್ಧಿ’. ನಮ್ಮ ಪರಂಪರೆಯನ್ನು ಬಿಟ್ಟುಕೊಟ್ಟು , ಮತ್ತೊಂದು ಸಂಸ್ಕೃತಿಯನ್ನು ಅಪ್ಪಿಕೊಂಡಾಗ ಬಂದಂತಹ ಬುದ್ಧಿ. ಇನ್ನು ಮೇಲಾದರೂ ಸಹ ಪೂರ್ವಮೀಮಾಂಸೆ ಅಂದರ ನಮ್ಮ ಪಾರಂಪರಿಕ ಜ್ಞಾನವನ್ನು ನಾವು ತಿಳಿದುಕೊಳ್ಳಬೇಕು ಎಂದು ಕವಿ ಹೇಳುತ್ತಾನೆ.&lt;br /&gt;ಈ ಕಾರ್ಯ ಹಗುರವಾದ ಕಾರ್ಯವೇನಲ್ಲ. ಈ ಪಾರಂಪರಿಕ ಜ್ಞಾನ ‘ಭೂತ’ದಲ್ಲಿ ಹುಗಿದು ಹೋಗಿದೆ. ಗುದ್ದಲಿಯೊತ್ತಿ, ಅದನ್ನು ಹೊರತೆಗೆಯಲು ಪ್ರಯತ್ನಿಸಿದರೆ, ‘ಚಿನ್ನದ ಅದಿರು’ ಕಂಡೀತು. ಆದರೆ ಇದು ಸುತ್ತಲೂ ಕಲ್ಮಶ ಮೆತ್ತಿದ ಅದಿರು ಮಾತ್ರ. ಆ ಅದಿರನ್ನು ಶೋಧಿಸಿ, ಚೊಕ್ಕ ಬಂಗಾರವನ್ನು ಮಾಡುವ ವಿದ್ಯೆಯನ್ನೂ ಕಲಿಯಬೇಕು. ಬಂಗಾರವನ್ನು ಶೋಧಿಸಿದ ಬಳಿಕ, ಆ ಬಂಗಾರದಿಂದ ಮಾಡುವದೇನು?----- &lt;span style="font-weight:bold;"&gt;ಇಷ್ಟದೇವತೆಯ ವಿಗ್ರಹವನ್ನು&lt;/span&gt;! &lt;br /&gt;ಈ ಭಾಗದಲ್ಲಿ ಕಾಣುವ ಆತ್ಮವಿಮರ್ಶೆ ಹಾಗು ಸಮಾಧಾನಪೂರ್ಣ ಸಂಕಲ್ಪ ಇವು ಕವನಕ್ಕೆ ಶಿಖರಪ್ರಾಯವಾಗಿವೆ ಎನ್ನಬಹುದು.&lt;br /&gt;&lt;br /&gt;--೪—&lt;br /&gt;ಕವನದ ಕೊನೆಯ ಭಾಗ ಹೀಗಿದೆ:&lt;br /&gt;&lt;br /&gt;ಬಾವಿಯೊಳಗಡೆ ಕೊಳೆವ ನೀರು ; ಮೇಲಕ್ಕಾವಿ ;&lt;br /&gt;ಆಕಾಶದುದ್ದವೂ ಅದರ ಕಾರಣ ಬೀದಿ ;&lt;br /&gt;ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು&lt;br /&gt;ನವಮಾಸವೂ ಕಾವ ಭ್ರೂಣರೂಪಿ---&lt;br /&gt;ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ---&lt;br /&gt;ಭೂತರೂಪಕ್ಕೆ ಮಳೆ ವರ್ತಮಾನ ;&lt;br /&gt;ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ;&lt;br /&gt;ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ,&lt;br /&gt;ಗುಡಿಗೋಪುರಗಳ ಬಂಗಾರ ಶಿಖರ.&lt;br /&gt;&lt;br /&gt;ಈ ನಾಲ್ಕನೆಯ ಭಾಗದಲ್ಲಿ ಒಂದೂ ಕ್ರಿಯಾಪದವು ಇಲ್ಲವೆನ್ನುವದನ್ನು ಗಮನಿಸಬೇಕು. ಯಾಕೆಂದರೆ ಈಗ ಕ್ರಿಯೆ ನಡೆಯುತ್ತಿರುವದು ಕವಿಯ ಒಳನೋಟದಲ್ಲಿ.&lt;br /&gt;ಬಾವಿಯ ಕೆಳಗಡೆಗೆ ಇರುವ ಭೂಗತ ಜಲವು ಕೊಳವಿಯಿಂದ ಬಾವಿಯಲ್ಲಿ ಬರುತ್ತದೆ. ಅದು ಆವಿಯಾಗಿ ಮೇಲಕ್ಕೆ ಹೋಗುತ್ತದೆ. ಆಕಾಶವು ಅದಕ್ಕೆ ಮೇಘರೂಪವನ್ನು ಕೊಡುವ ಕಾರಣಪಥ. ಭೂಗತವೆನ್ನುವದು unconscious mind ಅನ್ನೂ, ಬಾವಿಯು conscious mind ಅನ್ನೂ ಪ್ರತಿನಿಧಿಸಿದರೆ ಆಕಾಶವೆನ್ನುವದು superconscious mind ಅನ್ನು ಅಂದರೆ ವಿವೇಕಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ. ಸುಪ್ತಪ್ರಜ್ಞೆಯ ಗೂಢಗಳಿಗೆ ವಿವೇಕಪ್ರಜ್ಞೆಯು ಸರಿಯಾದ ರೂಪವನ್ನು ಕೊಡಬೇಕೆನ್ನುವದು ಕವಿಯ ಆಶಯ. ಆಕಾಶಕ್ಕೇರಿದ ಈ ಸುಪ್ತಪ್ರಜ್ಞೆಯ ಗೂಢಗಳು ಅಲ್ಲಿ ಅಂತರಪಿಶಾಚಿಯಾಗಿ ನವಮಾಸಗಳವರೆಗೆ ಅಂದರೆ ಪರಿಪೂರ್ಣ ರೂಪವನ್ನು ಪಡೆಯುವವರೆಗೆ ಕಾಯಬೇಕು. ಗುಡುಗು ಸಿಡಿಲಿನ ಕಾಟವನ್ನು ಅಂದರೆ ವಿಭಿನ್ನ ವಿಚಾರಗಳ ಕಾಟವನ್ನು ಸೋಸಬೇಕು. ಆಗಲೇ ಈ ಭೂತರೂಪವು ಮಳೆಯಾಗಿ ವರ್ತಮಾನವನ್ನು ಅಂದರೆ ಜಾಗೃತ ಪ್ರಜ್ಞೆಯನ್ನು ತೋಯಿಸುವದು. &lt;br /&gt;ಇನ್ನು ಮುಂದಿನ ಕಾರ್ಯ ಸಂಕಲ್ಪ ಪ್ರಜ್ಞೆಯದು. ತನ್ನೆದುರಿಗಿನ ಭೂಮಿಯನ್ನು (=ಕರ್ಮಭೂಮಿಯನ್ನು) ಅಗೆದು, ಉತ್ತಿ, ಉತ್ತಮ ಬೀಜಗಳನ್ನು ಬಿತ್ತಿದರೆ ಅಲ್ಲಿ ದೊರೆಯುವದು ಸುಧಾನ್ಯ, ಸುಫಲ ಹಾಗೂ  ತನ್ನ ಜನಾಂಗದ ಪರಂಪರೆಯ ಪ್ರತೀಕವಾದ, aspirationಗಳ ಪ್ರತೀಕವಾದ ಗುಡಿಗೋಪುರಗಳ ಬಂಗಾರದ ಶಿಖರಗಳು.&lt;br /&gt;……………………………………………………………&lt;br /&gt;ಆಧುನಿಕ ವಿಚಾರಗಳಿಂದ ಹಾಗೂ ಶಾಸ್ತ್ರೀಯ ಮನೋವಿಜ್ಞಾನದಿಂದ ಪ್ರಭಾವಿತವಾದ ನವ್ಯಕಾವ್ಯವು ಸಂಪ್ರದಾಯವಿರೋಧಿಯಾಗಿದೆ ಎನ್ನುವದು ಸಾಮಾನ್ಯ ಗ್ರಹಿಕೆಯಾಗಿದೆ. ನವ್ಯಕಾವ್ಯದ ಬಹುತೇಕ ಕವಿಗಳು ಅಂತಹದೇ ಕವನಗಳನ್ನು ರಚಿಸಿದರು. ಕೆಲವು ಕವಿಗಳು sex ಬಗೆಗೆ ಬಿಚ್ಚಿ ಬರೆಯುವದೇ ನವ್ಯಕಾವ್ಯವೆಂದು ತಿಳಿದರು. ಈ ತಪ್ಪು ತಿಳಿವಳಿಕೆಯನ್ನು  ಹೊತ್ತ ಗಂಗಾಧರ ಚಿತ್ತಾಳರು ತಮ್ಮ ‘ಕಾಮಸೂತ್ರ’ದಲ್ಲಿ ರತಿಕ್ರಿಯೆಯನ್ನು ಬಿಚ್ಚು ಬಿಚ್ಚಾಗಿ ವರ್ಣಿಸಿದ್ದಾರೆ. ಆದರೆ ಕನ್ನಡ ಪದಗಳ ಬದಲಾಗಿ ಅಲ್ಲಿ ಸಂಸ್ಕೃತ ಪದಗಳ ಬಳಕೆ ಇದೆ, ಅಷ್ಟೇ!&lt;br /&gt;ಕನ್ನಡ ಪದಗಳನ್ನೇ ಬಳಸಿದ್ದರೆ ಚಿತ್ತಾಳರ ಕವನಗಳು ಹೋಳಿ ಹುಣ್ಣಿವೆಯ ಪೋಲಿ ಕವನಗಳಾಗುತ್ತಿದ್ದವು. &lt;br /&gt;(ಈ ಕವನವನ್ನು ೨೦೦೭ ನವೆಂಬರ ೧೪ರ "ಮೋಟುಗೋಡೆಯಾಚೆ ಇಣುಕಿದಲ್ಲಿ" blogದಲ್ಲಿ(http://motugode.blogspot.com) ಓದಬಹುದು.)&lt;br /&gt;&lt;br /&gt;ನವ್ಯಕಾವ್ಯದ ಮನೋಧರ್ಮವನ್ನು ಅರಿಯಲು ಅಡಿಗರ ಕವನಗಳನ್ನು ಓದಬೇಕು. ಅವರ ‘ಪ್ರಾರ್ಥನೆ’ ಕವನದಲ್ಲಿರುವದು ಒಬ್ಬ ಪ್ರಾಮಾಣಿಕನ, ಒಬ್ಬ ಆದರ್ಶವಾದಿಯ ತಳಮಳ. ಅದಕ್ಕೆಂದೇ, ಆ ಕವನದಲ್ಲಿ ಬರುವ ಅಂತಿಮ ಘೋಷಣೆ : “ತಕ್ಕ ತೊಡೆಗಳ ನಡುವೆ ಧಾತುಸ್ಖಲನದೆಚ್ಚರವ ” ಎನ್ನುವದು ಪೋಲಿ ಮಾತಾಗದೆ, ಪ್ರಾಮಾಣಿಕನ, ಆದರ್ಶವಾದಿಯ ಎಚ್ಚರಿಕೆಯ ಮಾತಾಗುತ್ತದೆ.&lt;br /&gt;(ಈ ಕವನವನ್ನು ೨೦೦೯ ಜೂನ್ ೨೫ರ "ಮೋಟುಗೋಡೆಯಾಚೆ ಇಣುಕಿದಲ್ಲಿ" blogದಲ್ಲಿ(http://motugode.blogspot.com) ಓದಬಹುದು.)&lt;br /&gt;ಅಡಿಗರೇ ತಮ್ಮ ಮತ್ತೊಂದು ಕವನದಲ್ಲಿ “ಗುರುವಿನ &lt;span style="font-weight:bold;"&gt;ಸಮಾನ&lt;/span&gt;ನಾಗುವತನಕ ದೊರೆಯದಣ್ಣ ಮುಕುತಿ” ಎಂದಿದ್ದಾರೆ. ಹೀಗೆನ್ನುವಾಗ “ಗುರುವಿನ ಗುಲಾಮರಾಗುವ ತನಕ ದೊರೆಯದಣ್ಣ ಮುಕುತಿ” ಎನ್ನುವ ಪುರಂದರದಾಸರ ಅವಹೇಳನ ಮಾಡುತ್ತಿಲ್ಲ. ಆದರೆ ದಾಸ ಮನೋಭೂಮಿಕೆಯನ್ನು ಬಿಡಬೇಕು, ಕುರುಡು ವಿಚಾರಗಳನ್ನು ವಿರೋಧಿಸಬೇಕು ಎನ್ನುವ ವೈಚಾರಿಕ ಮನೋಭಾವವನ್ನು ತೋರಿಸುತ್ತಿದ್ದಾರೆ.&lt;br /&gt;ಹಾಗೆಂದು ಅಡಿಗರು ಸತ್-ಪರಂಪರೆಯ ವಿರೋಧಿಯಲ್ಲ. ಪಾಶ್ಚಾತ್ಯರ ಅಂಧಾನುಕರಣೆಯಿಂದ ನಮ್ಮ ಜನಜೀವನ ಹಾಳಾಗುತ್ತಿರುವದನ್ನು ಕಂಡಿದ್ದರಿಂದಲೇ ಅವರು ಈ ಸತ್-ಪರಂಪರೆಯ ಅಂಶಗಳನ್ನು  ಮತ್ತೊಮ್ಮೆ ನಮ್ಮಲ್ಲಿ ಅಳವಡಿಸಿಕೊಳ್ಳುವದರ ಅವಶ್ಯಕತೆಯನ್ನು ಈ ಕವನದಲ್ಲಿ ತೋರುತ್ತಿದ್ದಾರೆ. ಆದರೆ ಅವರ ಎಲ್ಲ ಕವನಗಳಲ್ಲಿಯೂ ಅವರ ಸಾಮಾಜಿಕ, ಸಾಂಸ್ಕೃತಿಕ ತೊಳಲಾಟವು ಅವರ ವೈಯಕ್ತಿಕ ತೊಳಲಾಟವಾಗಿ ಬಿಂಬಿತವಾಗುತ್ತದೆ. &lt;br /&gt;ಇದೇ ಅವರ ಪ್ರಾಮಾಣಿಕತೆಯ ಪ್ರತೀಕವಲ್ಲವೆ?!&lt;br /&gt;&lt;br /&gt;ಆಡಿಗರ ಭಾಷೆಯು ಕನ್ನಡಕಾವ್ಯದಲ್ಲಿಯೇ ಅತ್ಯಂತ ಸುಂದರವಾದ ಭಾಷೆ. ಅವರ ಭಾಷೆಯನ್ನು ಅಪ್ಸರೆಯ ಚೆಲುವಿಗೆ ಹೋಲಿಸಬಹುದು. ಅವರ ನವೋದಯ ಮಾರ್ಗದ  “ಯಾವ ಮೋಹನ ಮುರಲಿ ಕರೆಯಿತು…” ಕವನವೇ ಆಗಲಿ, ಅಥವಾ ನವ್ಯಮಾರ್ಗದ ‘ಭೂತ’ ಕವನವೇ ಆಗಲಿ, ನಮ್ಮ ಮನಸ್ಸನ್ನು ತಕ್ಷಣವೇ ಸೆರೆ ಹಿಡಿಯುವದು ಆ ಭಾಷೆಯ ಚೆಲುವಿನಿಂದ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-8251684853877284989?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/8251684853877284989/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=8251684853877284989' title='34 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/8251684853877284989'/><link rel='self' type='application/atom+xml' href='http://www.blogger.com/feeds/5939841257923965225/posts/default/8251684853877284989'/><link rel='alternate' type='text/html' href='http://sallaap.blogspot.com/2009/08/blog-post.html' title='ಗೋಪಾಲಕೃಷ್ಣ ಅಡಿಗರ ‘ಭೂತ’'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>34</thr:total></entry><entry><id>tag:blogger.com,1999:blog-5939841257923965225.post-8189285173120255651</id><published>2009-07-25T23:45:00.002+05:30</published><updated>2009-07-25T23:55:10.943+05:30</updated><title type='text'>ಗ್ರಹಣರಹಸ್ಯ</title><content type='html'>“ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ ಹಾಗೂ ಶನಿ ಇವರು ಆಕಾಶದಲ್ಲಿ ಸಂಚರಿಸುವ ದೇವತೆಗಳು ; ರಾಹು ಹಾಗೂ ಕೇತು ಇವರು ರಾಕ್ಷಸರು. ಇವರಲ್ಲಿ ಒಬ್ಬನಿಗೆ ರುಂಡ ಮಾತ್ರ ಇದೆ. ಮತ್ತೊಬ್ಬನಿಗೆ ಮುಂಡ ಮಾತ್ರ ಇದೆ. ಗ್ರಹಣಕಾಲದಲ್ಲಿ  ಸೂರ್ಯನನ್ನು ಅಥವಾ ಚಂದ್ರನನ್ನು ಈ ರಾಕ್ಷಸರಲ್ಲಿ ಒಬ್ಬನು ಹಿಡಿದುಕೊಳ್ಳುತ್ತಾನೆ ಎನ್ನುವ ಪಾರಂಪರಿಕ ನಂಬಿಕೆ ಭಾರತೀಯರಲ್ಲಿ ಇದೆ.” &lt;br /&gt;ಆದುದರಿಂದ ಭಾರತೀಯರು ಮೂಢರು ಎನ್ನುವ ಒಂದು ಗ್ರಹಿಕೆ ಪಾಶ್ಚಾತ್ಯರಲ್ಲಿ ಹಾಗೂ ಅನೇಕ ಭಾರತೀಯರಲ್ಲಿ ಇದೆ. ಆದರೆ ಈ ಗ್ರಹಿಕೆ ಪೂರ್ವಾಗ್ರಹಪೀಡಿತವಾದಂತಹ ಗ್ರಹಿಕೆ.&lt;br /&gt;&lt;br /&gt;ಭಾರತೀಯರ ಈ ನಂಬಿಕೆಯನ್ನು ಸ್ವಲ್ಪ ಲಕ್ಷ್ಯಗೊಟ್ಟು ಪರೀಕ್ಷಿಸಿರಿ. ಗ್ರಹಣಸಮಯದಲ್ಲಿ ಸೂರ್ಯನನ್ನು ಅಥವಾ ಚಂದ್ರನನ್ನು ರಾಹು ಅಥವಾ ಕೇತು ಎನ್ನುವ ರಾಕ್ಷಸನು ಹಿಡಿಯುತ್ತಾನೆ ಎನ್ನುವದು ಇಲ್ಲಿರುವ ನಂಬಿಕೆ. ಭಾರತೀಯರಲ್ಲಿ ಮೂಢನಂಬಿಕೆಯೆ ಇದ್ದರೆ, ಒಬ್ಬನೇ ರಾಕ್ಷಸನು ಇವರನ್ನು ಬೆನ್ನಟ್ಟಬಹುದಿತ್ತಲ್ಲ? ಇಬ್ಬರು ಯಾಕೆ ಬೇಕು ಎನ್ನುವ ಪ್ರಶ್ನೆ ಬರುತ್ತದೆ. ಅಲ್ಲದೆ, ಯಾವ ಗ್ರಹಣದಲ್ಲಿ ಯಾವ ರಾಕ್ಷಸನು ಈ ಬೆನ್ನಟ್ಟುವ ಕಾರ್ಯ ಮಾಡುತ್ತಾನೆ, ಅವನು ರಾಹುವೊ ಅಥವಾ ಕೇತುವೊ ಎನ್ನುವದನ್ನು ಭಾರತೀಯ ಪಂಚಾಂಗಗಳಲ್ಲಿ ನಿಖರವಾದ ಕಾಲಮಾನದೊಡನೆ ಹೇಳಲಾಗುತ್ತದೆ. ಅರ್ಥಾತ್ ಭಾರತೀಯರಿಗೆ ಈ ರಾಕ್ಷಸರು ಯಾರು ಅನ್ನುವ ಕಲ್ಪನೆ ಸ್ಪಷ್ಟವಾಗಿತ್ತು.&lt;br /&gt;&lt;br /&gt;ಖಗೋಲಶಾಸ್ತ್ರವು ಸಾವಿರಾರು ವರ್ಷಗಳಷ್ಟು ಹಳೆಯದು. ಭೂಮಿ ಹಾಗೂ ಇತರ ಗ್ರಹಗಳು ಸೂರ್ಯನ ಸುತ್ತಲೂ ಪರಿಭ್ರಮಿಸುತ್ತವೆ ಎನ್ನುವ ಮಾತನ್ನು ಮೊದಲು ದಾಖಲಿಸಿದವನು  ಮೊದಲನೆಯ ಆರ್ಯಭಟನು (ಕ್ರಿ.ಶ. ೪೭೬-೫೫೦). ಭೂಮಿಯ ಸುತ್ತಳತೆ ಹಾಗೂ ಸೂರ್ಯನಿಂದ ಭೂಮಿಯ ದೂರವನ್ನು ಆರ್ಯಭಟನು ಅತ್ಯಂತ ನಿಖರವಾಗಿ ತಿಳಿಸಿದ್ದಾನೆ. &lt;br /&gt;ಆರ್ಯಭಟನ ನಂತರ ಒಂದು ಸಾವಿರ ವರ್ಷಗಳ ಬಳಿಕ ಕೋಪರ್ನಿಕಸ್(ಕ್ರಿ.ಶ. ೧೪೭೩- ಕ್ರಿ.ಶ. ೧೫೪೩) ಎನ್ನುವ ಪೋಲ್ಯಾಂಡಿನ ಶಾಸ್ತ್ರಜ್ಞನು ಭೂಮಿಯ ಪರಿಭ್ರಮಣವನ್ನು ಯುರೋಪಿನಲ್ಲಿ ಸಾರಿದನು. &lt;br /&gt;&lt;br /&gt;ಖಗೋಲಶಾಸ್ತ್ರದ ವಿದ್ಯಾರ್ಥಿಗಳಿಗೆಲ್ಲ ಗೊತ್ತಿರುವಂತೆ, ಚಂದ್ರನು ಭೂಮಿಯ ಸುತ್ತಲೂ ತಿರುಗುವ ಕಕ್ಷೆಯು, ಭೂಮಿಯು ಸೂರ್ಯನ ಸುತ್ತಲೂ ತಿರುಗುವ ಕಕ್ಷೆಯನ್ನು,  ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಇವೆರಡೂ ಕಾಲ್ಪನಿಕ ಬಿಂದುಗಳು. ಪರಿಭ್ರಮಣೆ ಮುಂದುವರೆದಂತೆಲ್ಲ, ಈ ಬಿಂದುಗಳೂ ಸಹ ಸರಿಯುತ್ತಲೆ ಹೋಗುತ್ತವೆ. ಭೂಮಿಯು ಸೂರ್ಯನ ಸುತ್ತಲೂ ತಿರುಗುವ ದಿಕ್ಕಿಗೆ ವಿರುದ್ಧವಾದ ದಿಕ್ಕಿನಲ್ಲಿ ಈ ಬಿಂದುಗಳು ಸರಿಯುತ್ತವೆ.&lt;br /&gt;&lt;br /&gt;ಈಗ ಈ ಬಿಂದುಗಳಲ್ಲಿ ಮೊದಲನೆಯ ಬಿಂದುವಿಗೆ ನಮ್ಮ ಶಾಸ್ತ್ರಜ್ಞರು ಕೊಟ್ಟ ಹೆಸರು ರಾಹು ; ಎರಡನೆಯ ಬಿಂದುವಿನ ಹೆಸರು ಕೇತು. ‘ಈ ಬಿಂದುಗಳು ರಾಕ್ಷಸರು ಏಕೆ?’ ಎನ್ನುವ ಪ್ರಶ್ನೆಗೆ ಅನೇಕ ಉತ್ತರಗಳಿವೆ. ಉತ್ತರವನ್ನು ಹುಡುಕುವ ಮೊದಲು ನಾವು ಇನ್ನಿಷ್ಟು ಮಾಹಿತಿಗಳನ್ನು ಗಮನಿಸೋಣ.&lt;br /&gt;&lt;br /&gt;ಮೊದಲನೆಯದಾಗಿ ಈ ಬಿಂದುಗಳ ಹೆಸರುಗಳನ್ನು ಪರೀಕ್ಷಿಸೋಣ. ಮೊದಲನೆಯ ಬಿಂದುವಿಗೆ ರಾಹು ಎಂದು ಕರೆದಿದ್ದಾರೆ. ರಾಹು ಈ ಪದದ ಅರ್ಥ Lock. ಗ್ರಹಣಸಮಯದಲ್ಲಿ ಈ ಬಿಂದುವಿನಲ್ಲಿ ಸೂರ್ಯ ಅಥವಾ ಚಂದ್ರರ ಚೈತನ್ಯಕ್ಕೆ ತಡೆ ಬೀಳುವದರಿಂದ ಈ ಬಿಂದುವಿನ ಹೆಸರು Lock ಅಥವಾ ರಾಹು.&lt;br /&gt;ಎರಡನೆಯ ಬಿಂದುವಿನ ಹೆಸರು ಕೇತು. ಕೇತು ಅಂದರೆ Flag. ಮೊದಲನೆಯ ಬಿಂದುವಿಗೆ Flag ಎಂದು ಕರೆಯದೆ ಎರಡನೆಯ ಬಿಂದುವಿಗೆ Flag ಎಂದು ಕರೆಯುವ ಕಾರಣವೇನು? ಯಾಕೆಂದರೆ, ಈ ಬಿಂದುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುವದರಿಂದ, ಮೊದಲನೆಯ ಬಿಂದು ಹಿಂದಿನಿಂದ ಚಲಿಸುತ್ತದೆ ಹಾಗೂ ಎರಡನೆಯ ಬಿಂದು ಮುಂದಿನಿಂದ ಚಲಿಸುತ್ತದೆ. ಎರಡನೆಯ ಬಿಂದುವೇ ಇಲ್ಲಿ Flag bearer. ಆದುದರಿಂದ ಇದರ ಹೆಸರು ಕೇತು ಅರ್ಥಾತ್ Flag!&lt;br /&gt;ಮತ್ತೊಂದು ವಿಷಯವೆಂದರೆ ರಾಹುವಿಗೆ ರುಂಡವಿಲ್ಲ ಹಾಗೂ ಕೇತುವಿಗೆ ಮುಂಡವಿಲ್ಲ. ಈ ಎರಡೂ ಬಿಂದುಗಳು ಒಂದರ್ಥದಲ್ಲಿ Supplementary ಬಿಂದುಗಳು. ಆದುದರಿಂದಲೇ ಇವು ಅರ್ಧದೇಹಿಗಳು.&lt;br /&gt;&lt;br /&gt;ಪಾಶ್ಚಾತ್ಯರಿಗಿಂತ ಸಾವಿರ ವರ್ಷಕ್ಕೂ ಮೊದಲೇ ಭಾರತೀಯ ಖಗೋಲವಿಜ್ಞಾನಿಗಳು ತಿಳಿದ ವಿಷಯ ಇದು. ಆದರೆ, ಯುರೋಪ ಖಂಡವು ಏಶಿಯಾ ಖಂಡವನ್ನು ತನ್ನ ಆಳ್ವಿಕೆಗೆ ಒಳಪಡಿಸಿದ್ದರಿಂದ, ಭಾರತೀಯ ಖಗೋಲಶಾಸ್ತ್ರಜ್ಞರ ಜ್ಞಾನಕ್ಕೆ ಮನ್ನಣೆ ಸಿಗದೆ, ಈ ದೇಶವನ್ನು ಗೆದ್ದವರೇ ಪಂಡಿತರಾಗಿ ಮನ್ನಣೆ ಪಡೆದದ್ದು ಅನಿವಾರ್ಯವಾಯಿತು.&lt;br /&gt;&lt;br /&gt;ಈ ಜಗತ್ತಿಗೆ ಅತ್ಯಂತ ಮಹತ್ವದ ಜ್ಞಾನವನ್ನು ನೀಡಿದ ವಿಷಯ ಯಾವದು ಎಂದು ಕೇಳಿದರೆ ಪಾಶ್ಚಾತ್ಯರು ಒಕ್ಕೊರಲಿನಿಂದ  ಐನ್‌ಸ್ಟೈನನ ಸಾಪೇಕ್ಷವಾದವೆಂದು ಘೋಷಿಸುತ್ತಾರೆ. ಆದರೆ ಅಂಕಗಣಿತದಲ್ಲಿಯ Place value position ಹಾಗೂ ಶೂನ್ಯಸಂಕೇತ ಇವೇ ಅತ್ಯಂತ ಮಹತ್ವದ ಜ್ಞಾನಗಳು. ಇದರ ಸಂಶೋಧಕರು ಭಾರತೀಯರು. ಆದರೆ ಜಗತ್ತಿಗೆ ಅತ್ಯಂತ ಮಹತ್ವದ ಜ್ಞಾನ ನೀಡಿದ ಸಂಶೋಧನೆ ಎಂದು ಇವಕ್ಕೆ ಯಾರೂ ಕರೆಯುವದಿಲ್ಲ. ಒಂದು ವೇಳೆ ಭಾರತೀಯ ಗಣಿತಜ್ಞರು ಶೂನ್ಯಸಂಶೋಧನೆಯನ್ನು ಮಾಡಿರದಿದ್ದರೆ, ವಿಜ್ಞಾನದ ಪ್ರಗತಿಯು ಸಾಧ್ಯವಿರಲಿಲ್ಲ.&lt;br /&gt;&lt;br /&gt;ಇವತ್ತು ಯಾವುದೇ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೆ, “ನೂರು-ಐವತ್ತು” ಎಂದು ಕೇಳಿದರೆ (೧೦೦-೫೦) ಎಂದು ಬರೆದುಕೊಂಡು ೫೦ ಎನ್ನುವ ಉತ್ತರವನ್ನು ಥಟ್ಟನೆ ನೀಡುತ್ತಾನೆ. ಆದರೆ ಭಾರತೀಯ ಗಣಿತವು ಯುರೋಪಿಗೆ ತಲುಪುವ ಮೊದಲು “ನೂರು-ಐವತ್ತು” ಇದನ್ನು ಅಲ್ಲಿಯ ಗಣಿತ ಪಂಡಿತರು “C-L” ಎಂದು ಬರೆದುಕೊಳ್ಳುತ್ತಿದ್ದರು. ಆ ಬಳಿಕ ಒಂದುನೂರು ಗುಂಡುಗಳನ್ನು ಎಣಿಸಿ ತೆಗೆದುಕೊಂಡು, ಅದರಲ್ಲಿ ಐವತ್ತು ಗುಂಡುಗಳನ್ನು ಎಣಿಸಿ ಪಕ್ಕಕ್ಕಿಡುತ್ತಿದ್ದರು. ಬಳಿಕ ಉಳಿದ ಗುಂಡುಗಳನ್ನು ಎಣಿಸಿ, ಐವತ್ತು ಎನ್ನುವ ಉತ್ತರವನ್ನು ಕೊಡುತ್ತಿದ್ದರು.&lt;br /&gt;&lt;br /&gt;ವಿಜ್ಞಾನದಲ್ಲಿ ಇಷ್ಟೆಲ್ಲ ಮುಂದುವರಿದಿದ್ದ ಭಾರತೀಯರು ರಾಹು ಹಾಗೂ ಕೇತು ಎನ್ನುವ ಬಿಂದುಗಳನ್ನು ರಾಕ್ಷಸರು ಎಂದು ಕರೆದಿದ್ದೇಕೆ? ಇದಕ್ಕೆ ಉತ್ತರ ಬಹುಶಃ ಹೀಗಿರಬಹುದು. ನಮ್ಮ ವಿಜ್ಞಾನಿಗಳು ಆಕಾಶಕಾಯಗಳನ್ನು ದೇವತೆಗಳು ಎಂದು ಭಾವಿಸಿದ್ದರು. ಈ ದೇವತೆಗಳನ್ನು ಮರೆಮಾಡುವಂತಹ ವಸ್ತು ಯಾವುದೇ ಇದ್ದರೂ ಅದು ರಾಕ್ಷಸಸಮಾನ. ಆದುದರಿಂದ ಈ ಬಿಂದುಗಳು ರಾಕ್ಷಸರು. &lt;br /&gt;&lt;br /&gt;ಆಕಾಶಕಾಯಗಳನ್ನು ದೇವತೆಗಳು ಎಂದು ಭಾವಿಸುವದು ತಪ್ಪೆನ್ನುತ್ತೀರಾ? ಭೌತಿಕ ಅರ್ಥದಲ್ಲಿ ಅದು ತಪ್ಪಾಗಿರಬಹುದು. ಆದರೆ ಪುರಾತನ ಭಾರತೀಯರು ಅತ್ಯಂತ ಧಾರ್ಮಿಕ ಮನೋಭಾವದವರಾಗಿದ್ದರು. ಈ ಸೃಷ್ಟಿಯಲ್ಲಿಯ ಪ್ರತಿಯೊಂದು ವಸ್ತುವೂ ಭಗವಂತನ ರೂಪವೇ (form) ಆಗಿದೆ. ಇತರರಿಗೆ ಒಳ್ಳೆಯದನ್ನು ಮಾಡುತ್ತಿದ್ದರೆ ಅದೊಂದು ದೇವತೆ ; ದೇವತೆಗೆ ವಿರೋಧವಾಗಿರುವದು ರಾಕ್ಷಸ. ಇದು ನಮ್ಮ ಪುರಾತನರ ಭಾವನೆ.&lt;br /&gt;&lt;br /&gt;ಆದುದರಿಂದಲೇ ಅವರು ಸೂರ್ಯ ಹಾಗು ಚಂದ್ರರನ್ನು ದೇವತೆಗಳೆಂದು ಭಾವಿಸಿದರು ; ರಾಹು ಹಾಗು ಕೇತು ಎನ್ನುವ ಕಾಲ್ಪನಿಕ ಖಗೋಲ ಬಿಂದುಗಳನ್ನು ರಾಕ್ಷಸರೆಂದು ಕರೆದರು. ತಮ್ಮ ಖಗೋಲ ಜ್ಞಾನದ ಮೂಲಕ ಗ್ರಹಣದ ಸಮಯ ಹಾಗೂ ಅವಧಿಯನ್ನು ಕಂಡು ಹಿಡಿಯುತ್ತದ್ದಿಂತೆಯೇ, ಆ ಅವಧಿಯಲ್ಲಿ ನದಿಯಲ್ಲಿ ಮುಳುಗು ಹಾಕಿ ದೇವರ ಧ್ಯಾನವನ್ನು ಮಾಡುತ್ತಿದ್ದರು! ಇದು ಅವರ ಪ್ರಾಮಾಣಿಕ ಮನೋಧರ್ಮ. ಇದರಲ್ಲಿ ಯಾವುದೇ ವಿರೋಧಾಭಾಸ ಇಲ್ಲ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-8189285173120255651?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/8189285173120255651/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=8189285173120255651' title='36 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/8189285173120255651'/><link rel='self' type='application/atom+xml' href='http://www.blogger.com/feeds/5939841257923965225/posts/default/8189285173120255651'/><link rel='alternate' type='text/html' href='http://sallaap.blogspot.com/2009/07/blog-post_25.html' title='ಗ್ರಹಣರಹಸ್ಯ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>36</thr:total></entry><entry><id>tag:blogger.com,1999:blog-5939841257923965225.post-4816248899604202033</id><published>2009-07-12T11:33:00.003+05:30</published><updated>2009-07-12T11:42:43.472+05:30</updated><title type='text'>ಬೆಕ್ಕು ಹಾರುತಿದೆ ನೋಡಿದಿರಾ?</title><content type='html'>ಬೇಂದ್ರೆಯವರ ಪ್ರತಿಭೆ ಕೇವಲ ಗಂಭೀರ ಸಾಹಿತ್ಯಕ್ಕೆ ಮಾತ್ರ ಮೀಸಲಾಗಿರಲಿಲ್ಲ. ವಿನೋದಸಾಹಿತ್ಯದಲ್ಲೂ ಅವರು ಕುಶಲರೇ. ಅವರ ಅಣಕುವಾಡುಗಳು ಹಾಗೂ ಅವರ ‘ಸಾಯೋ ಆಟ’ ನಾಟಕವು ಅವರ ಈ ಪ್ರತಿಭೆಗೆ  ಉದಾಹರಣೆಗಳಾಗಿವೆ. &lt;br /&gt;&lt;br /&gt;‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನವನ್ನು ಬರೆದು, ಹಾಡಿ, ಕನ್ನಡಿಗರನ್ನು ಮೋಡಿ ಮಾಡಿದ ಬೇಂದ್ರೆಯವರು ಇದೇ ಹಾಡನ್ನು ಅಣಗಿಸಿ  ‘ಬೆಕ್ಕು ಹಾರುತಿದೆ ನೋಡಿದಿರಾ?’ ಎನ್ನುವ ಕವನವನ್ನು ಬರೆದರು. ಇಂತಹ ಕವನಗಳಿಗೆ ‘ಅಣಕುವಾಡು’ ಎಂದು ಕರೆದರು. ‘ಒರದಾ ತಗಣಿ ಒರದಾ’ ಎನ್ನುವದು ಅವರ ಇನ್ನೊಂದು ಅಣಕುವಾಡು. ಇದು ‘ವರದಾ ಕಂಚಿ ವರದಾ’ ಎನ್ನುವ ದಾಸರ ಹಾಡಿನ ಮೇಲೆ ರೂಪಿತವಾಗಿದೆ.&lt;br /&gt;&lt;br /&gt;‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನವನ್ನು ಓದಿದಾಗ, ಬೇಂದ್ರೆಯವರ ವೈನೋದಿಕ ಕಲ್ಪನಾಸಾಮರ್ಥ್ಯದ ಅರಿವಾಗುವದು. ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನದಲ್ಲಿ ಆಟವಾಡಿದ ಕಲ್ಪನೆಯೇ ಈ ಕವನದಲ್ಲಿಯೂ ಆಟವಾಡಿದೆ. ಭಾಷೆ, ಛಂದಸ್ಸು ಎಲ್ಲವೂ ಮೂಲಕವನದ ಅನುಕರಣೆಗಳು. ಅಲ್ಲದೆ, ಪ್ರತಿಯೊಂದು ಸಾಲಿನಲ್ಲಿಯೂ ಮೂಲಕವನದ ಅಣಕನ್ನು ಕಾಣಬಹುದು.&lt;br /&gt;&lt;br /&gt;&lt;span style="font-weight:bold;"&gt;‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನದ ಪೂರ್ತಿಪಾಠ ಹೀಗಿದೆ:&lt;/span&gt;&lt;br /&gt;&lt;br /&gt;ಈರುಳ್ಳ್ಯುರುಳಲು ಮಾಡವು ಬೆಳಗೆ&lt;br /&gt;ಅತ್ತಲೆತ್ತಲು ಕತ್ತಲೆಯೊಳಗೆ&lt;br /&gt;ಯಾವುದ ! ಯಾವುದ ! ಯಾವುದ ಎಂದು &lt;br /&gt;ಕೇಳುವ ಹೇಳುವ ಹೊತ್ತಿನ ಒಳಗೆ&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೧||&lt;br /&gt;&lt;br /&gt;ಕರಿ-ನೆರೆ ಬಣ್ಣದ ಮೊಸಡೆಯ ಗಂಟು&lt;br /&gt;ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು&lt;br /&gt;ಹಚ್ಚನ ಬೆಚ್ಚನ ಪಚ್ಚೆಯ ಪೈರಿನ&lt;br /&gt;ಬಣ್ಣದ ಕಣ್ಣು ಕಿವಿ ಬದಿಗುಂಟು&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೨||&lt;br /&gt;&lt;br /&gt;ಕಾಡಿಗೆಗಿಂತಲು ಕಪ್ಪೋ ಬಣ್ಣಾ&lt;br /&gt;ಕತ್ತಲಕೇ ಕಾಲೊಡೆದವೊ ಅಣ್ಣಾ&lt;br /&gt;ಕೂದಲ ಕೂದಲ ನಿಗುರಿಸಿಕೊಂಡು&lt;br /&gt;ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೩||&lt;br /&gt;&lt;br /&gt;ರಾಜ್ಯದ ಹೆಗ್ಗಣಗಳ ತಾನೊಕ್ಕಿ&lt;br /&gt;ಜೊಂಡಿಗದಾ ಹುಲುಗಡಣವ ಮುಕ್ಕಿ&lt;br /&gt;ಹಾರಿಸಿ ಹೇಂಟೆಯ ಹಿಂಡುಹಿಂಡುಗಳ&lt;br /&gt;ಜಂಭದ ಕೋಳಿಯ ನೆತ್ತಿಯ ಕುಕ್ಕಿ&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೪||&lt;br /&gt;&lt;br /&gt;ಹಾಲಿನ ಗಡಿಗೆಯ ತಳವನು ಒರಸಿ&lt;br /&gt;ಮೊಸರಿನ ಮಡಿಕೆಯ ಮುಚ್ಚಳ ಸರಿಸಿ&lt;br /&gt;ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ&lt;br /&gt;ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೫||&lt;br /&gt;&lt;br /&gt;ಇಲಿಗಳು ಬೆಳ್ಳಗೆ ಇದ್ದರು ಬಿಡದು&lt;br /&gt;ಬೆಳ್ಳಗಿದ್ದದನು ಕುಡಿದೂ ಕುಡಿದೂ&lt;br /&gt;ನೋಡಿ ಚಂದ್ರನನು ಬೆಣ್ಣೆಯದೆಂದೊ&lt;br /&gt;ಮುಗಿಲಿನಂಗಳಕೆ ಸಿಟ್ಟನೆ ಸಿಡಿದು&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೬||&lt;br /&gt;&lt;br /&gt;ಹಿಂದಕೆ ಮುಂದಕೆ ಚಾಚಿದೆ ಕಾಲ&lt;br /&gt;ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ&lt;br /&gt;ಬೆಳುದಿಂಗಳ ಹಾಲೆನೆ ತಿಳುಕೊಂಡೊ&lt;br /&gt;ಬಲ್ಲರು ಯಾರಿವರಪ್ಪನ ಸಾಲ!&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೭||&lt;br /&gt;…………………………………………………………….&lt;br /&gt;&lt;span style="font-weight:bold;"&gt;‘ಹಕ್ಕಿ ಹಾರುತಿದೆ ನೋಡಿದಿರಾ?’ ಮೂಲಕವನದ  ಪೂರ್ತಿಪಾಠ ಹೀಗಿದೆ:&lt;/span&gt;&lt;br /&gt;ಇರುಳಿರುಳಳಿದು ದಿನ ದಿನ ಬೆಳಗೆ&lt;br /&gt;ಸುತ್ತುಮುತ್ತಲೂ ಮೇಲಕೆ ಕೆಳಗೆ&lt;br /&gt;ಗಾವುದ ಗಾವುದ ಗಾವುದ ಮುಂದೆ &lt;br /&gt;ಎವೆ ತೆರೆದಿಕ್ಕುವ ಹೊತ್ತಿನ ಒಳಗೆ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೧||&lt;br /&gt;&lt;br /&gt;ಕರಿನೆರೆ ಬಣ್ಣದ ಪುಚ್ಚಗಳುಂಟು&lt;br /&gt;ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು&lt;br /&gt;ಕೆನ್ನನ ಹೊನ್ನನ ಬಣ್ಣಬಣ್ಣಗಳ&lt;br /&gt;ರೆಕ್ಕೆಗಳೆರಡೂ ಪಕ್ಕದಲುಂಟು&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೨||&lt;br /&gt;&lt;br /&gt;ನೀಲಮೇಘಮಂಡಲ-ಸಮ ಬಣ್ಣ !&lt;br /&gt;ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !&lt;br /&gt;ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು&lt;br /&gt;ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೩||&lt;br /&gt;&lt;br /&gt;ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ&lt;br /&gt;ಮಂಡಲ-ಗಿಂಡಲಗಳ ಗಡ ಮುಕ್ಕಿ&lt;br /&gt;ತೇಲಿಸಿ ಮುಳುಗಿಸಿ ಖಂಡ-ಖಂಡಗಳ&lt;br /&gt;ಸಾರ್ವಭೌಮರಾ ನೆತ್ತಿಯ ಕುಕ್ಕಿ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೪||&lt;br /&gt;&lt;br /&gt;ಯುಗ-ಯುಗಗಳ ಹಣೆಬರಹವ ಒರಸಿ&lt;br /&gt;ಮನ್ವಂತರಗಳ ಭಾಗ್ಯವ ತೆರೆಸಿ&lt;br /&gt;ರೆಕ್ಕೆಯ ಬೀಸುತ ಚೇತನೆಗೊಳಿಸಿ&lt;br /&gt;ಹೊಸಗಾಲದ ಹಸುಮಕ್ಕಳ ಹರಸಿ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೫||&lt;br /&gt;&lt;br /&gt;ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ&lt;br /&gt;ತಿಂಗಳೂರಿನ ನೀರನು ಹೀರಿ&lt;br /&gt;ಆಡಲು ಹಾಡಲು ತಾ ಹಾರಾಡಲು&lt;br /&gt;ಮಂಗಳಲೋಕದ ಅಂಗಳಕೇರಿ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೬||&lt;br /&gt;&lt;br /&gt;ಮುಟ್ಟಿದೆ ದಿಗ್ಮಂಡಲಗಳ ಅಂಚ&lt;br /&gt;ಆಚೆಗೆ ಚಾಚಿದೆ ತನ್ನಯ ಚುಂಚ&lt;br /&gt;ಬ್ರಹ್ಮಾಂಡಗಳನು ಒಡೆಯಲು ಎಂದೊ&lt;br /&gt;ಬಲ್ಲರು ಯಾರಾ ಹಾಕಿದ ಹೊಂಚ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೭||&lt;br /&gt;………………………………………………………………………………….................&lt;br /&gt;‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನದ ಮೊದಲ ನುಡಿಯನ್ನು ನೋಡಿರಿ:&lt;br /&gt;ಇರುಳಿರುಳಳಿದು ದಿನ ದಿನ ಬೆಳಗೆ&lt;br /&gt;ಸುತ್ತುಮುತ್ತಲೂ ಮೇಲಕೆ ಕೆಳಗೆ&lt;br /&gt;ಗಾವುದ ಗಾವುದ ಗಾವುದ ಮುಂದೆ &lt;br /&gt;ಎವೆ ತೆರೆದಿಕ್ಕುವ ಹೊತ್ತಿನ ಒಳಗೆ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೧||&lt;br /&gt;&lt;br /&gt;ಈಗ ‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನದ ಮೊದಲ ನುಡಿಯನ್ನು ನೋಡಿರಿ:&lt;br /&gt;ಈರುಳ್ಳ್ಯುರುಳಲು ಮಾಡವು ಬೆಳಗೆ&lt;br /&gt;ಅತ್ತಲೆತ್ತಲು ಕತ್ತಲೆಯೊಳಗೆ&lt;br /&gt;ಯಾವುದ ! ಯಾವುದ ! ಯಾವುದ ಎಂದು &lt;br /&gt;ಕೇಳುವ ಹೇಳುವ ಹೊತ್ತಿನ ಒಳಗೆ&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೧||&lt;br /&gt;&lt;br /&gt;ಮೂಲಕವನದ ಮೊದಲ ಸಾಲಿನಲ್ಲಿ ‘ಇರುಳಿರುಳಳಿದು ದಿನ ದಿನ ಬೆಳಗೆ’ ಎನ್ನುವ ವಾಕ್ಯವಿದ್ದರೆ, ಅಣಕುಕವನದಲ್ಲಿ ‘ಈರುಳ್ಳ್ಯುರುಳಲು ಮಾಡವು ಬೆಳಗೆ’ ಎನ್ನುವ ಸಾಲಿದೆ.&lt;br /&gt;ಇವೆರಡೂ ಸಾಲುಗಳು ಶ್ರವಣಕ್ಕೆ ಒಂದೇ ತೆರನಾಗಿವೆ. ಆದರೆ ಮೂಲಕವನದ ಸಾಲು ಹಕ್ಕಿಯ ಬೆಳಗಿನ ಹಾರಾಟದೊಂದಿಗೆ ಕಾರ್ಯಾರಂಭ ಮಾಡಿದರೆ, ಅಣಕುವಾಡಿನ ಸಾಲು ಕತ್ತಲೆಯಲ್ಲಿ ಬೆಕ್ಕು ಮಾಡುವ ಹಾರಾಟವನ್ನು ಚಿತ್ರಿಸುತ್ತದೆ.&lt;br /&gt;ಈ ಬೆಕ್ಕು ಮಾಡಕ್ಕೆ ಜಿಗಿದು ಅಲ್ಲಿ ಇಟ್ಟ ಈರುಳ್ಳಿಗಳನ್ನೆಲ್ಲ ಉರುಳಿಸುವದರೊಂದಿಗೆ  ಕವನ ಪ್ರಾರಂಭವಾಗುತ್ತದೆ.&lt;br /&gt;ಮೂಲಕವನದ ಮುಂದಿನ ಸಾಲುಗಳಲ್ಲಿ&lt;br /&gt;‘ಗಾವುದ ಗಾವುದ ಗಾವುದ ಮುಂದೆ, &lt;br /&gt;ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ’ &lt;br /&gt;ಎನ್ನುವ ವರ್ಣನೆ ಇದ್ದರೆ, ಅಣಕವಾಡಿನಲ್ಲಿ&lt;br /&gt;‘ಯಾವುದ ! ಯಾವುದ ! ಯಾವುದ ಎಂದು, &lt;br /&gt;ಕೇಳುವ ಹೇಳುವ ಹೊತ್ತಿನ ಒಳಗೆ’ &lt;br /&gt;ಎನ್ನುವ ವರ್ಣನೆ ಇದೆ.&lt;br /&gt;&lt;br /&gt;ಈ ರೀತಿಯಾಗಿ, ಬೇಂದ್ರೆ ಮೂಲಕವನದ ಸಾಲುಗಳ alliteration ಅನ್ನು ಅಣಕುವಾಡಿನಲ್ಲಿ ಅನುಸರಿಸಿದ್ದಾರೆ.&lt;br /&gt;&lt;br /&gt;ಮೂಲಕವನವದ ಎರಡನೆಯ ನುಡಿಯಲ್ಲಿ ಹಕ್ಕಿಯ ಗರಿಗಳನ್ನು ವರ್ಣಿಸಲಾಗಿದೆ:&lt;br /&gt;ಕರಿನೆರೆ ಬಣ್ಣದ ಪುಚ್ಚಗಳುಂಟು&lt;br /&gt;ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು&lt;br /&gt;ಕೆನ್ನನ ಹೊನ್ನನ ಬಣ್ಣಬಣ್ಣಗಳ&lt;br /&gt;ರೆಕ್ಕೆಗಳೆರಡೂ ಪಕ್ಕದಲುಂಟು&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೨||&lt;br /&gt;&lt;br /&gt;ಅಣಕುವಾಡಿನಲ್ಲಿ ಬೆಕ್ಕಿನ ಮುಖವರ್ಣನೆ ಇದೆ.&lt;br /&gt;ಕರಿ-ನೆರೆ ಬಣ್ಣದ ಮೊಸಡೆಯ ಗಂಟು&lt;br /&gt;ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು&lt;br /&gt;ಹಚ್ಚನ ಬೆಚ್ಚನ ಪಚ್ಚೆಯ ಪೈರಿನ&lt;br /&gt;ಬಣ್ಣದ ಕಣ್ಣು ಕಿವಿ ಬದಿಗುಂಟು&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೨||&lt;br /&gt;&lt;br /&gt;ಮೂಲಕವನದ ಮೂರನೆಯ ನುಡಿ ಹೀಗಿದೆ:&lt;br /&gt;ನೀಲಮೇಘಮಂಡಲ-ಸಮ ಬಣ್ಣ !&lt;br /&gt;ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !&lt;br /&gt;ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು&lt;br /&gt;ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೩||&lt;br /&gt;&lt;br /&gt;ಅಣಕುವಾಡಿನ ಮೂರನೆಯ ನುಡಿಯೂ ಸಹ ಬೆಕ್ಕಿನ ಬಣ್ಣದ ಬಣ್ಣನೆಯನ್ನು ಮಾಡುತ್ತದೆ.&lt;br /&gt;ಕಾಡಿಗೆಗಿಂತಲು ಕಪ್ಪೋ ಬಣ್ಣಾ&lt;br /&gt;ಕತ್ತಲಕೇ ಕಾಲೊಡೆದವೊ ಅಣ್ಣಾ&lt;br /&gt;ಕೂದಲ ಕೂದಲ ನಿಗುರಿಸಿಕೊಂಡು&lt;br /&gt;ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೩||&lt;br /&gt;&lt;br /&gt;ಮೂಲಕವನದಲ್ಲಿ ಹಕ್ಕಿಗೆ ಮಾಡಲಾದ ವರ್ಣನೆಯ ಸಮಾಂತರ ವರ್ಣನೆ ಅಣಕುವಾಡಿನಲ್ಲಿಯೂ ಇದೆ. ಅಲ್ಲದೆ ‘ಕತ್ತಲಕೇ ಕಾಲೊಡೆದವೊ ಅಣ್ಣಾ’&lt;br /&gt;ಎನ್ನುವ ಸಾಲು ನಗುವನ್ನು ಉಕ್ಕಿಸುತ್ತದೆ.&lt;br /&gt;&lt;br /&gt;ಮೂಲಕವನದ ನಾಲ್ಕನೆಯ ನುಡಿ ಕಾಲಪಕ್ಷಿಯ ಗಂಭೀರ-ಭಯಂಕರ ಕಾರ್ಯವನ್ನು ವರ್ಣಿಸುತ್ತದೆ: &lt;br /&gt;ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ&lt;br /&gt;ಮಂಡಲ-ಗಿಂಡಲಗಳ ಗಡ ಮುಕ್ಕಿ&lt;br /&gt;ತೇಲಿಸಿ ಮುಳುಗಿಸಿ ಖಂಡ-ಖಂಡಗಳ&lt;br /&gt;ಸಾರ್ವಭೌಮರಾ ನೆತ್ತಿಯ ಕುಕ್ಕಿ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೪||&lt;br /&gt;&lt;br /&gt;ಅಣಕುವಾಡಿನಲ್ಲಿ ಬೆಕ್ಕು ಮಾಡುವ ಭಯಂಕರ ಕಾರ್ಯ(!)ಗಳ ವರ್ಣನೆ ಇದೆ:&lt;br /&gt;ರಾಜ್ಯದ ಹೆಗ್ಗಣಗಳ ತಾನೊಕ್ಕಿ&lt;br /&gt;ಜೊಂಡಿಗದಾ ಹುಲುಗಡಣವ ಮುಕ್ಕಿ&lt;br /&gt;ಹಾರಿಸಿ ಹೇಂಟೆಯ ಹಿಂಡುಹಿಂಡುಗಳ&lt;br /&gt;ಜಂಭದ ಕೋಳಿಯ ನೆತ್ತಿಯ ಕುಕ್ಕಿ&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೪||&lt;br /&gt;&lt;br /&gt;ಕಾಲಪಕ್ಷಿ ಹಾಗೂ ಬೆಕ್ಕು ಇವುಗಳ ಘನತೆ ಬೇರೆಯಾಗಿರಬಹುದು. ಇವುಗಳ ಕಾರ್ಯರಂಗಗಳು ಬೇರೆಯಾಗಿರಬಹುದು. ಬೆಕ್ಕು ಮಾಡುವ ಕಾರ್ಯ ಹಾಸ್ಯವಾಗಿ ಕಾಣಲೂಬಹುದು. ಆದರೆ ಈ ಎರಡೂ ಕಾರ್ಯಗಳಲ್ಲಿಯ ಅಂತರಂಗ ಒಂದೇ ಆಗಿದೆ:&lt;br /&gt;King or Cock, they meet their end!&lt;br /&gt;&lt;br /&gt;ಸಮಾಂತರವಾಗಿ ಚಲಿಸುತ್ತಿದ್ದ ಈ ಎರಡೂ ಕವನಗಳು ಇನ್ನು ಮುಂದಿನ ನುಡಿಗಳಲ್ಲಿ ಸ್ವಲ್ಪ ಬೇರೆಯಾಗಿ  ಸಾಗುತ್ತವೆ.&lt;br /&gt;ಮೂಲಕವನದ ಐದನೆಯ ನುಡಿ ಹೀಗಿದೆ:&lt;br /&gt;ಯುಗ-ಯುಗಗಳ ಹಣೆಬರಹವ ಒರಸಿ&lt;br /&gt;ಮನ್ವಂತರಗಳ ಭಾಗ್ಯವ ತೆರೆಸಿ&lt;br /&gt;ರೆಕ್ಕೆಯ ಬೀಸುತ ಚೇತನೆಗೊಳಿಸಿ&lt;br /&gt;ಹೊಸಗಾಲದ ಹಸುಮಕ್ಕಳ ಹರಸಿ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೫||&lt;br /&gt;ಮೂಲಕವನವು ಇಲ್ಲಿ ಶುಭ ಕೋರುವ ಕಾಲಪಕ್ಷಿಯಾಗಿದೆ. ಆದರೆ ಬೆಕ್ಕು ಮಾತ್ರ ತನ್ನ ಚಾಳಿಯನ್ನು ಬಿಡದು:&lt;br /&gt;ಹಾಲಿನ ಗಡಿಗೆಯ ತಳವನು ಒರಸಿ&lt;br /&gt;ಮೊಸರಿನ ಮಡಿಕೆಯ ಮುಚ್ಚಳ ಸರಿಸಿ&lt;br /&gt;ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ&lt;br /&gt;ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೫||&lt;br /&gt;ಹಾಲಿನ ಗಡಿಗೆಯನ್ನು ಸ್ವಚ್ಛ ಮಾಡುವ ಈ ಬೆಕ್ಕು ಮೊಸರನ್ನೂ ಸಹ ನೆಕ್ಕುತ್ತದೆ. ಅಲ್ಲಿರುವ ಪಾತ್ರೆಗಳನ್ನೆಲ್ಲ ಉರುಳಿಸುತ್ತದೆ. ಇಷ್ಟಕ್ಕೆ ಇದರ ಕಿಡಿಗೇಡಿತನ ನಿಲ್ಲುವದಿಲ್ಲ. ಮನೆಯವರು ತೆಗೆದಿಟ್ಟ ಬಿಸಿ ಹಾಲಿನಲ್ಲಿ ತುಸು ಮಜ್ಜಿಗೆ ಬೆರಸಿಬಿಡುತ್ತದೆ. ಬೇಂದ್ರೆಯವರ ವಿನೋದಸೃಷ್ಟಿಗೆ ಈ ಸಾಲು ಅತ್ಯುತ್ತಮ ಉದಾಹರಣೆಯಾಗಿದೆ.&lt;br /&gt;&lt;br /&gt;ಆರನೆಯ ನುಡಿಗಳಲ್ಲಿ ರಚನಾ ಸಾದೃಶ್ಯವಿದೆ.&lt;br /&gt;ಮೂಲಕವನ ಹೀಗಿದೆ:&lt;br /&gt;ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ&lt;br /&gt;ತಿಂಗಳೂರಿನ ನೀರನು ಹೀರಿ&lt;br /&gt;ಆಡಲು ಹಾಡಲು ತಾ ಹಾರಾಡಲು&lt;br /&gt;ಮಂಗಳಲೋಕದ ಅಂಗಳಕೇರಿ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೬||&lt;br /&gt;&lt;br /&gt;ಅಣಕುವಾಡು ಹೀಗಿದೆ:&lt;br /&gt;ಇಲಿಗಳು ಬೆಳ್ಳಗೆ ಇದ್ದರು ಬಿಡದು&lt;br /&gt;ಬೆಳ್ಳಗಿದ್ದದನು ಕುಡಿದೂ ಕುಡಿದೂ&lt;br /&gt;ನೋಡಿ ಚಂದ್ರನನು ಬೆಣ್ಣೆಯದೆಂದೊ&lt;br /&gt;ಮುಗಿಲಿನಂಗಳಕೆ ಸಿಟ್ಟನೆ ಸಿಡಿದು&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೬||&lt;br /&gt;&lt;br /&gt;ಕಾಲಪಕ್ಷಿ  ಮುಗಿಲಿನಲ್ಲಿ ಹಾರಾಡಿದರೆ, ಈ ಬೆಕ್ಕು ತಾನೂ ಸಹ ಮುಗಿಲಿನಲ್ಲಿರುವ ಚಂದ್ರನನ್ನು ಹಿಡಿಯಲು ಜಿಗಿಯುತ್ತದೆ, ಬೆಣ್ಣೆಯೆಂದು ತಿಳಿದು!&lt;br /&gt;&lt;br /&gt;ಮೂಲಕವನದ ಏಳನೆಯ ನುಡಿಯಲ್ಲಿ ಕಾಲಪಕ್ಷಿಯ ಭವಿಷ್ಯತ್ ಯೋಜನೆಗಳ ಹೊಳಹು ಇದೆ:&lt;br /&gt;ಮುಟ್ಟಿದೆ ದಿಗ್ಮಂಡಲಗಳ ಅಂಚ&lt;br /&gt;ಆಚೆಗೆ ಚಾಚಿದೆ ತನ್ನಯ ಚುಂಚ&lt;br /&gt;ಬ್ರಹ್ಮಾಂಡಗಳನು ಒಡೆಯಲು ಎಂದೊ&lt;br /&gt;ಬಲ್ಲರು ಯಾರಾ ಹಾಕಿದ ಹೊಂಚ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ? ||೭||&lt;br /&gt;&lt;br /&gt;ಅಣಕುವಾಡಿನಲ್ಲಿಯೂ ಸಹ ಬೆಕ್ಕು ತನ್ನ ಭವಿಷ್ಯದ ಕಾರ್ಯಗಳಿಗಾಗಿ ಹೊಂಚಿ ನಿಂತಿರುವ ವರ್ಣನೆ ಇದೆ:&lt;br /&gt;ಹಿಂದಕೆ ಮುಂದಕೆ ಚಾಚಿದೆ ಕಾಲ&lt;br /&gt;ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ&lt;br /&gt;ಬೆಳುದಿಂಗಳ ಹಾಲೆನೆ ತಿಳುಕೊಂಡೊ&lt;br /&gt;ಬಲ್ಲರು ಯಾರಿವರಪ್ಪನ ಸಾಲ!&lt;br /&gt;ಬೆಕ್ಕು ಹಾರುತಿದೆ ನೋಡಿದಿರಾ? ||೭||&lt;br /&gt;&lt;br /&gt;ಈ ರೀತಿಯಾಗಿ ಮೂಲಕವನದ ತದ್ವತ್ ಅನುಕರಣೆಯನ್ನು ಈ ಅಣಕುವಾಡು ಮಾಡುತ್ತದೆ.&lt;br /&gt;ಮೂಲಕವನವು ಬೇಂದ್ರೆಯವರ ದಾರ್ಶನಿಕ ಪ್ರತಿಭೆಯನ್ನು  ತೋರಿಸಿದರೆ, ಅಣಕುವಾಡು ಅವರ ವಿನೋದಸೃಷ್ಟಿಯ ಪ್ರತಿಭೆಯನ್ನು ತೋರಿಸುತ್ತದೆ. ಆದರೆ, ಈ ಎರಡೂ ರಚನೆಗಳಲ್ಲಿ ಕಂಡುಬರುವ ಕಾವ್ಯರಚನಾ ಕೌಶಲ್ಯವು ಅಪ್ರತಿಮವಾಗಿದೆ. &lt;br /&gt;‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನವನ್ನು ಸ್ವತಂತ್ರ ಕವನವೆಂದು ಓದಿದರೂ ಸಹ , ಇದು ಅಷ್ಟೇ ಸ್ವಾರಸ್ಯಪೂರ್ಣವಾದ ಕವನವಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-4816248899604202033?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/4816248899604202033/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=4816248899604202033' title='28 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/4816248899604202033'/><link rel='self' type='application/atom+xml' href='http://www.blogger.com/feeds/5939841257923965225/posts/default/4816248899604202033'/><link rel='alternate' type='text/html' href='http://sallaap.blogspot.com/2009/07/blog-post_12.html' title='ಬೆಕ್ಕು ಹಾರುತಿದೆ ನೋಡಿದಿರಾ?'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>28</thr:total></entry><entry><id>tag:blogger.com,1999:blog-5939841257923965225.post-912455175722487843</id><published>2009-07-03T23:26:00.002+05:30</published><updated>2009-07-03T23:32:24.072+05:30</updated><title type='text'>ಚೋಳ ಕಡಿತು, ನನಗೊಂದು ಚೋಳ ಕಡಿತು</title><content type='html'>‘ಚೋಳ ಕಡಿತು, ನನಗೊಂದು ಚೋಳ ಕಡಿತು’ – ಇದು ಶರೀಫರು ರಚಿಸಿದ ಗೀತೆ.&lt;br /&gt;ಸಾಮಾನ್ಯವಾಗಿ ಕುಂಡಲಿನಿ ಶಕ್ತಿಯನ್ನು ಅಂದರೆ ಮನುಷ್ಯನಲ್ಲಿ ನಿಹಿತವಾದ ದೈವಿ ಶಕ್ತಿಯನ್ನು ಸರ್ಪರೂಪವಾಗಿ ಕಲ್ಪಿಸುತ್ತಾರೆ. ಈ ಕವನದಲ್ಲಿ ಶರೀಫರು ತಮ್ಮ ಬದುಕನ್ನು ಬದಲಾಯಿಸಿದ ಘಟನೆಯನ್ನು, ಅದಕ್ಕೆ ಕಾರಣವಾದ ಶಕ್ತಿಯನ್ನು ಚೋಳಿನ ರೂಪದಲ್ಲಿ ಬಣ್ಣಿಸಿದ್ದಾರೆ. ಶರೀಫರ ಗೀತೆಯ ಪೂರ್ಣಪಾಠ ಹೀಗಿದೆ:&lt;br /&gt;&lt;br /&gt;ಚೋಳ ಕಡಿತು ನನಗೊಂದು ಚೋಳ ಕಡಿತು&lt;br /&gt;ಕಾಳಕತ್ತಲದೊಳಗೆ ಕೂತಿತ್ತು, ನನಕಂಡ ಬಂತು ||ಪಲ್ಲ||&lt;br /&gt;&lt;br /&gt;ಎಷ್ಟು ದಿನದ ಸಿಟ್ಟು ಇಟ್ಟಿತ್ತು, ತೀರಿಸಿ ಬಿಟ್ಟಿತು&lt;br /&gt;ಯಾರಿಗೆ ಹೇಳಿದರ ಏನ ಆದೀತು&lt;br /&gt;ಗುರುತಾತು ಈ ಮಾತು&lt;br /&gt;ಹುಟ್ಟಿದ ಮಗಳ ಕಂಡಿದ್ದಿಲ್ಲ&lt;br /&gt;ಇದರ ಕಷ್ಟ ಶಿವನೇ ಬಲ್ಲ&lt;br /&gt;ಘಟ್ಟಿಯಾಗಿ ಮುಳ್ಳು ಚುಚ್ಚಿತ್ತು ಮಾಯವಾಗಿ ಹೋತು ||೧||&lt;br /&gt;&lt;br /&gt;ಮೂರು ದೇಹದೊಳಗ ತಾನಿತ್ತ&lt;br /&gt;ಪರಮಾತ್ಮನಾದದೊಳು ತಾನು ಬೆಳೆದಿತ್ತ&lt;br /&gt;ಸಾರಿಬಂದು ಎನ್ನ ನೋಡುತ&lt;br /&gt;ಮೂರು ಲೋಕ ಬೆಳಗು ಮೇಲು ಮೀರಿದುನ್ಮನಿ ಹಾರಿ ನಿಂತಿತು ||೨||&lt;br /&gt;&lt;br /&gt;ದೇವರಮನಿ ಮೂಲೆಯೊಳಗಿತ್ತು&lt;br /&gt;ಆಧಾರ ಹಿಡಿದು ಊರ್ಧ್ವಮುಖದಿ ಕೊಂಡಿ ಮಾಡಿತ್ತು&lt;br /&gt;ಕಾಲ ಕಳೆದು ಸ್ಥೂಲದೇಹದೊಳಗೆ ಮಲಗಿತ್ತು&lt;br /&gt;ಕಲಿಕರ್ಮ ನುಂಗಿತ್ತು&lt;br /&gt;ದೇವಶಿಶುನಾಳಧೀಶನ ಧ್ಯಾನದೊಳಗಾ ಚೋಳು ಇತ್ತು&lt;br /&gt;ಕಚ್ಚುತಿರಲು ಎಚ್ಚರಾದಿತು, ಹುಚ್ಚು ಹಿಡಿದಂಗಾತು ||೩||&lt;br /&gt;&lt;br /&gt;ಆಧ್ಯಾತ್ಮಪಥದಲ್ಲಿ ಸಾಗಿದವರ ಜೀವನದಲ್ಲಿ ನಡೆಯುವ ಒಂದೆರಡು ಘಟನೆಗಳಿಂದಾಗಿ ಅವರ ಜೀವನವೇ ಬದಲಾಗಿ ಬಿಡುತ್ತದೆ. ಇಂತಹ ಸಂದರ್ಭವನ್ನು ಅನೇಕ ಸಾಧಕರು ಕಾವ್ಯದ ಮೂಲಕ ವರ್ಣಿಸಿದ್ದೂ ಉಂಟು.&lt;br /&gt;ತಮ್ಮ ಬದುಕಿನಲ್ಲಿಯ ಇಂತಹ ಘಟನೆಯೊಂದನ್ನು ಶರೀಫರು “ಚೋಳ ಕಡಿತು ನನಗೊಂದು ಚೋಳ ಕಡಿತು”.&lt;br /&gt;ಎನ್ನುವ ಚಿಕ್ಕ ಗೀತೆಯಲ್ಲಿ ಬಣ್ಣಿಸಿದ್ದಾರೆ.&lt;br /&gt;&lt;br /&gt;ಯಾವ ಜೀವಿಗೂ ತನ್ನ ಮುಂದಿನ ಕ್ಷಣದ ಭವಿಷ್ಯದ ಅರಿವಿರುವದಿಲ್ಲ. ಭವಿಷ್ಯವೆಂದರೆ ಕಪ್ಪುಕತ್ತಲೆಯೇ ಸೈ. ಇಂತಹ ಕಪ್ಪು ಕತ್ತಲೆಯಲ್ಲಿ ತನ್ನ ಬಲಿಯನ್ನು ಜಪ್ಪಿಸಿಕೊಂಡು ಈ ಚೋಳು ಕೂತಿರುತ್ತದೆ. ಬಲಿಗೆ ಚೋಳು ಕಾಣಲಿಕ್ಕಿಲ್ಲ. ಆದರೆ ಚೋಳಿಗೆ ಬಲಿಯು ಸುಸ್ಪಷ್ಟ.&lt;br /&gt;ಆದುದರಿಂದ ಇದನ್ನು “ಕಾಳಕತ್ತಲದೊಳಗೆ ಕೂತಿತ್ತು, ನನಕಂಡ ಬಂತು” ಎಂದು ಶರೀಫರು ಬಣ್ಣಿಸುತ್ತಾರೆ.&lt;br /&gt;&lt;br /&gt;ಈ ಚೋಳು ಅಕಸ್ಮಾತ್ತಾಗಿ ಶರೀಫರನ್ನು ಕಂಡದ್ದಲ್ಲ. ಅದು ಎಷ್ಟೋ ದಿನದಿಂದ ಇವರ ಮೇಲೆ ಸಿಟ್ಟು ಇಟ್ಟುಕೊಂಡು ಕಾಯುತ್ತ ಕೂತಿದೆ. ಆದುದರಿಂದಲೇ ಚೋಳು ಕಚ್ಚಿಸಿಕೊಂಡ ಬಳಿಕ ಶರೀಫರು ವಿಸ್ಮಯಗೊಳ್ಳುತ್ತಾರೆ. “ಎಷ್ಟು ದಿನದ ಸಿಟ್ಟು ಇಟ್ಟಿತ್ತು, ಈಗ ತೀರಿಸಿ ಬಿಟ್ಟಿತು”, ಎನ್ನುತ್ತಾರೆ.&lt;br /&gt;ಈ ಚೋಳಿಗೆ ಶರೀಫರ ಮೇಲೆ ದೀರ್ಘಕಾಲದ ಸಿಟ್ಟು ಯಾಕೆ ಎನ್ನುವ ಪ್ರಶ್ನೆ ಬರುತ್ತದೆ. &lt;br /&gt;ಶರೀಫರ ಜನ್ಮಾಂತರಗಳ ಕರ್ಮಫಲವೇ ಈ ಚೋಳು. ಆದುದರಿಂದ ಅದರ ಸಿಟ್ಟು ಎಷ್ಟೋ ಜನ್ಮಗಳ ಸಿಟ್ಟು. ಈ ಚೋಳು ಕಡಿದ ಸಂಗತಿಯನ್ನು ಅಥವಾ ಅದರ ನೋವನ್ನು ಯಾರಿಗೆ ಹೇಳಿದರೂ ಪ್ರಯೋಜನವಿಲ್ಲ, ಕರ್ಮಫಲವನ್ನು ಬದಲಿಸಲು ಯಾರೂ ತಮಗೆ ಸಹಾಯ ಮಾಡಲಾರರು ಎನ್ನುವದು ಶರೀಫರ ಮನಸ್ಸಿಗೆ ಅನುಭವವಾಗುತ್ತದೆ. ಅದಕ್ಕೇ ಸ್ವಗತದಲ್ಲಿ ಎಂಬಂತೆ ಶರೀಫರು ನುಡಿಯುತ್ತಾರೆ: &lt;br /&gt;“ಯಾರಿಗೆ ಹೇಳಿದರ ಏನ ಆದೀತು&lt;br /&gt;ಗುರುತಾತು ಈ ಮಾತು”.&lt;br /&gt;&lt;br /&gt;ಚೋಳಿನ ಕಡಿತದಷ್ಟು ಶರೀಫರ ಮನಸ್ಸಿಗೆ ಆಘಾತ ಕೊಡುವ ಯಾವ ಘಟನೆ ನಡೆದಿರಬಹುದೆನ್ನುವ ಸೂಚನೆ ಮುಂದಿನ ಸಾಲಿನಲ್ಲಿ ಸಿಗುತ್ತದೆ:&lt;br /&gt;“ಹುಟ್ಟಿದ ಮಗಳ ಕಂಡಿದ್ದಿಲ್ಲ&lt;br /&gt;ಇದರ ಕಷ್ಟ ಶಿವನೇ ಬಲ್ಲ&lt;br /&gt;ಘಟ್ಟಿಯಾಗಿ ಮುಳ್ಳು ಚುಚ್ಚಿತ್ತು ಮಾಯವಾಗಿ ಹೋತು ”&lt;br /&gt;&lt;br /&gt;ಶರೀಫರ ಮೊದಲ ಹಾಗೂ ಒಂದೇ ಸಂತತಿಯಾದ ಹೆಣ್ಣು ಕೂಸು, ಅವರ ಹೆಂಡತಿಯ ತವರು ಮನೆಯಲ್ಲಿ ಜನಿಸಿ, ಸ್ವಲ್ಪೇ ದಿನಗಳಲ್ಲಿ ತೀರಿಕೊಳ್ಳುತ್ತದೆ. ಇದೊಂದು ತೀವ್ರ ದುಃಖದ ಅನುಭವ. ಅದಕ್ಕೇ ‘ಇದರ ಕಷ್ಟ ಶಿವನೇ ಬಲ್ಲ’ ಎಂದು ಶರೀಫರು ದುಃಖದಿಂದ ಹೇಳುತ್ತಾರೆ. ಇದು ಎದೆಯಲ್ಲಿ ಮುಳ್ಳು ಚುಚ್ಚಿದಂತಹ ಅನುಭವವಾಗಿರಬೇಕು. ಆ ಸಮಯದಲ್ಲಿ ಅಧ್ಯಾತ್ಮದ ಕಡೆಗೆ ಹೆಚ್ಚೆಚ್ಚಾಗಿ ತಿರುಗಿದ ಶರೀಫರು ‘ಮಾಯವಾಗಿ ಹೋತು’ ಎಂದು ಹೇಳುತ್ತಾರೆ.&lt;br /&gt;&lt;br /&gt;ಈ ‘ಮಾಯವಾಗಿ ಹೋತು’ ಎನ್ನುವ ವಾಕ್ಯ ಅನೇಕ ಅರ್ಥಗಳಿಂದ ಕೂಡಿದೆ. ಇದೀಗ ಹುಟ್ಟಿದ ಕೂಸು ಕೆಲವೇ ದಿನಗಳಲ್ಲಿ ಮಾಯವಾಗಿ ಹೋಯಿತು ಎನ್ನುವದು ಒಂದು ಅರ್ಥ. ಚುಚ್ಚಿದ ಮುಳ್ಳು ಮಾಯವಾಗಿ ಹೋಯಿತು ಎಂದು ತಿಳಿದರೆ ಸಂಸಾರದಲ್ಲಿ ಯಾವದೂ ಶಾಶ್ವತವಲ್ಲ; ಸುಖ ಹಾಗೂ ದುಃಖಗಳು ಬರುತ್ತವೆ ಹಾಗೂ ಹೋಗುತ್ತವೆ ಎನ್ನುವದು ಮತ್ತೊಂದುಅರ್ಥ. ಸಂಸಾರದಲ್ಲಿ ಮುಳುಗಿದ ಶರೀಫರಿಗೆ ಕವಿದ ಮೋಹದ ಮಾಯೆ  ಮಾಯವಾಗಿ ಹೋಯಿತು ಎನ್ನುವದು ಮೂರನೆಯ ಅರ್ಥ. &lt;br /&gt;&lt;br /&gt;ಇಂತಹ ದುಃಖದ ಅನುಭವದ ನಂತರ ಶರೀಫರು ಇದೀಗ ಕಣ್ಣು ತೆರೆದ ವ್ಯಕ್ತಿ. ಹೀಗಾಗಿ ಆ ಚೋಳನ್ನು ಕೇವಲ ಆಘಾತ ನೀಡುವ ಕರ್ಮಫಲವೆಂದು ತಿಳಿಯದೆ, ಜ್ಞಾನದ ಬೆಳಕು ನೀಡುವ ಶಕ್ತಿಯೆಂದು ಅವರು ಭಾವಿಸುತ್ತಾರೆ. ಈ ಚೋಳು ಕೇವಲ ಕಷ್ಟ ಕೊಡುವ ಚೋಳಲ್ಲ, ಕಷ್ಟದ ಮೂಲಕ ಪರಮಜ್ಞಾನದ ಕಡೆಗೆ ಮನಸ್ಸನ್ನು ತಿರುಗಿಸುವ ಚೋಳು ಎನ್ನುವದು ಅವರಿಗೆ ಅರಿವಾಗುತ್ತದೆ.  ಅದರ ನಿಜಸ್ವರೂಪ ಅವರಿಗೆ ಈಗ ನಿಚ್ಚಳವಾಗತೊಡಗಿದೆ. ಈ ಗೂಢಾರ್ಥ ಅವರ ಮುಂದಿನ ನುಡಿಗಳಲ್ಲಿ ಸ್ಪಷ್ಟವಾಗಿದೆ.&lt;br /&gt;&lt;br /&gt;“ಮೂರು ದೇಹದೊಳಗ ತಾನಿತ್ತ&lt;br /&gt;ಪರಮಾತ್ಮನಾದದೊಳು ತಾನು ಬೆಳೆದಿತ್ತ&lt;br /&gt;ಸಾರಿಬಂದು ಎನ್ನ ನೋಡುತ&lt;br /&gt;ಮೂರು ಲೋಕ ಬೆಳಗು ಮೇಲು ಮೀರಿದುನ್ಮನಿ ಹಾರಿ ನಿಂತಿತು” &lt;br /&gt;&lt;br /&gt;ಈ ಚೋಳು ಇರುವ ಮೂರು ದೇಹಗಳು ಅಂದರೆ ಸ್ಥೂಲ ಶರೀರ, ಸೂಕ್ಷ್ಮ ಶರೀರ ಹಾಗೂ ಕಾರಣಶರೀರಗಳು. ಸ್ಥೂಲಶರೀರವೆಂದರೆ ಯಾವುದೇ ಒಂದು ಜನ್ಮದಲ್ಲಿ ನಮಗಿರುವ ದೇಹ. ಸೂಕ್ಷ್ಮಶರೀರವೆಂದರೆ ವಾಸನಾಶರೀರ. ಇದು ಸ್ಥೂಲಶರೀರವು ನಾಶವಾದ ನಂತರವೂ ಉಳಿದಿರುವ ವಾಸನೆಗಳ ಹಾಗೂ ಕರ್ಮಫಲಗಳ ಶರೀರ. ಕಾರಣಶರೀರವೆಂದರೆ ಆತ್ಮವು ದೇಹವನ್ನು ಧರಿಸಲು ಬೇಕಾಗುವ ಮೂಲ ಪ್ರೇರಣಾ ಶರೀರ. ಈ ಮೂರೂ ದೇಹಗಳಲ್ಲಿ ಈ ಚೋಳು ಇರುತ್ತದೆ ಎಂದು ಶರೀಫರು ಹೇಳುತ್ತಾರೆ. ಅಂದರೆ, ಈ ಚೋಳು ನಮಗೆ ಹೊರಗಿನದಲ್ಲ, ನಮ್ಮಲ್ಲೇ ಸದಾಕಾಲ ಇರುವಂಥಾದ್ದು. ನಮ್ಮನ್ನು  ತಪ್ಪು ಮಾರ್ಗದಿಂದ ಬಿಡಿಸಿ ಸನ್ಮಾರ್ಗಕ್ಕೆ ಹಚ್ಚುವಂಥಾದ್ದು. ಈ ಚೋಳಿಗೆ ಇರುವ ಸ್ವಭಾವ ಯಾವುದು ಎಂದರೆ ‘ಪರಮಾತ್ಮನಾದದೊಳು ತಾನು ಬೆಳೆದಿತ್ತ’. &lt;br /&gt;ಯಾವಾಗಲೂ ಪರಮಾತ್ಮನನ್ನು ಚಿಂತಿಸುತ್ತ ಅದೇ ನಾದದಲ್ಲಿ, ಅದೇ ಧ್ಯಾನದಲ್ಲಿ ಇರುವ ಜೀವಿ ಇದು. ಹಾಗಿದ್ದರೆ ಇದಕ್ಕೆ ನೋವು ಕೊಡುವ ಕೊಂಡಿ ಏಕೆ ಇದೆ ಎಂದು ಕೇಳಬಹುದು. ಮನುಷ್ಯನಿಗೆ ನೋವಿನ ಅನುಭವವಾಗದೇ ಅವನ ಮನಸ್ಸು ಪರಮಾರ್ಥದ ಕಡೆಗೆ ಹೊರಳದು. ಆದುದರಿಂದ ನಮ್ಮ ಒಳಗೇ ಇರುವ ಈ ಜ್ಞಾನಶಕ್ತಿಯು ಚೋಳಿನ ರೂಪ ಧರಿಸಿರುತ್ತದೆ. ಸಕಾಲದಲ್ಲಿ ನೋವಿನ ಕೊಂಡಿಯಿಂದ ಚುಚ್ಚಿ, ನಮ್ಮನ್ನು ಎಚ್ಚರಕ್ಕೆ ತರುತ್ತದೆ. ಸರಿಯಾದ ಸಮಯದಲ್ಲಿ ಇದು ಸಾರಿ ಬಂದು ಅಂದರೆ ಧಾವಿಸಿ ಬಂದು, ಶರೀಫರನ್ನು ನೋಡಿತು. ಆ ಚೋಳು ನೋಡಿದ್ದೇ ಒಂದು ಅನುಗ್ರಹ! ಆ ಚೋಳಿನಲ್ಲಿರುವ ಬೆಳಕು ಎಂತಹದಂದರೆ, ಮೂರು ಲೋಕಗಳನ್ನೂ ಬೆಳಗುವ ಬೆಳಕು ಅದು. ಮೂರು ಲೋಕಗಳೆಂದರೆ ಸ್ವರ್ಗ, ಮರ್ತ್ಯ ಹಾಗೂ ಪಾತಾಳ. ಆತ್ಮವು ತನ್ನ ವಿವಿಧ ಅವಸ್ಥೆಗಳಲ್ಲಿ ಈ ಲೋಕಗಳಲ್ಲಿ ವಾಸಿಸುತ್ತದೆ. ಯಾವುದೇ ಲೋಕದಲ್ಲಿರಲಿ, ಅಲ್ಲಿ ಈ ಎಚ್ಚರಿಕೆ ನೀಡುವ ಚೋಳು ಆತ್ಮವನ್ನು  ದಿಟ್ಟಿಸುತ್ತಲೇ ಇರುತ್ತದೆ. ಹಾಗು ಈ ಮೂರೂ ಲೋಕಗಳ ಮೇಲಿರುವ ಉನ್ಮನಿ ಅವಸ್ಥೆಯಲ್ಲಿ ಈ ಚೋಳು ಹಾರಿ ಐಕ್ಯವಾಗುತ್ತದೆ. (ಉನ್ಮನಿ ಅವಸ್ಥೆ ಎಂದರೆ ಸಾಧನೆಯ ಒಂದು ಅವಸ್ಥೆ. ಈ ಅವಸ್ಥೆಯಲ್ಲಿ ಸಾಧಕನ ಪ್ರಜ್ಞೆಯು ಲೋಕಸಾಮಾನ್ಯ ಸ್ಥಿತಿಯಲ್ಲಿ ಇರುವದಿಲ್ಲ. ಹೀಗಾಗಿ ಆ ವ್ಯಕ್ತಿಯು ಜನರ ಕಣ್ಣಿಗೆ ಹುಚ್ಚನಂತೆ ಕಾಣಬಹುದು. ರಾಮಕೃಷ್ಣ ಪರಮಹಂಸರು ಈ ಅವಸ್ಥೆಯಲ್ಲಿ ಇದ್ದಾಗ ಹುಚ್ಚರಂತೆ ವರ್ತಿಸುತ್ತಿದ್ದರು ಎಂದು ಹೇಳಲಾಗುತ್ತದೆ.) &lt;br /&gt;&lt;br /&gt;ಈಗಿನ ಆಧುನಿಕ ಮನೆಗಳಲ್ಲಿ ಚೋಳು ಕಾಣಸಿಗುವದಿಲ್ಲ. ಆದರೆ ಮೊದಲು ಹಳ್ಳಿಗಳಲ್ಲಿ ಕಟ್ಟಿರುತ್ತಿದ್ದ ಮಣ್ಣಿನ ಮನೆಗಳಲ್ಲಿ ಇವು ಸಾಮಾನ್ಯವಾಗಿರುತ್ತಿದ್ದವು. ಮನೆಯ ಕೋಣೆಗಳ ಮೂಲೆಗಳಲ್ಲಿ ಇವು ಸಿಗುತ್ತಿದ್ದವು. ಶರೀಫರು ತಮ್ಮ ಈ ಚೋಳು ದೇವರ ಕೋಣೆಯ ಮೂಲೆಯೊಳಗಿತ್ತು ಎಂದು ಹೇಳುತ್ತಾರೆ. ಅಂದರೆ ಈ ಚೋಳನ್ನು ನೀವು ಕಾಣಬೇಕಾದರೆ ಅಥವಾ ಈ ಚೋಳಿನಿಂದ ಕಡಿಸಿಕೊಳ್ಳಬೇಕಾದರೆ, ದೇವರ ಕೋಣೆಯೊಳಗೆ ನೀವು ಪ್ರವೇಶಿಸಬೇಕು ಅರ್ಥಾತ್ ನಿಮ್ಮ ಮನಸ್ಸು ಪರಮಾತ್ಮದ ಕಡೆಗೆ ತಿರುಗಬೇಕು! ದೇವರ ಮನೆ ಎಂದರೆ ಮನುಷ್ಯನ ಮನಸ್ಸು ಎಂದೂ ಅರ್ಥವಾಗಬಹುದು. ಅಲ್ಲಿ ಈ ಚೋಳು ಆಧಾರ ಹಿಡಿದು ಕೊಂಡಿಯನ್ನು ಮೇಲ್ಮುಖವಾಗಿ ಮಾಡಿಕೊಂಡಿತ್ತು. &lt;br /&gt;“ದೇವರಮನಿ ಮೂಲೆಯೊಳಗಿತ್ತು&lt;br /&gt;ಆಧಾರ ಹಿಡಿದು ಊರ್ಧ್ವಮುಖದಿ ಕೊಂಡಿ ಮಾಡಿತ್ತು&lt;br /&gt;ಕಾಲ ಕಳೆದು ಸ್ಥೂಲದೇಹದೊಳಗೆ ಮಲಗಿತ್ತು&lt;br /&gt;ಕಲಿಕರ್ಮ ನುಂಗಿತ್ತು&lt;br /&gt;ದೇವಶಿಶುನಾಳಧೀಶನ ಧ್ಯಾನದೊಳಗಾ ಚೋಳು ಇತ್ತು&lt;br /&gt;ಕಚ್ಚುತಿರಲು ಎಚ್ಚರಾದಿತು, ಹುಚ್ಚು ಹಿಡಿದಂಗಾತು ”&lt;br /&gt;&lt;br /&gt;ಶರೀಫರು ಈ ಸಾಲಿನಲ್ಲಿ ಯೋಗಸಾಧನೆಯ ಪರಿಭಾಷೆಯನ್ನು ಬಳಸುತ್ತಾರೆ. ಆಧಾರ ಎಂದರೆ ಮೂಲಾಧಾರ ಚಕ್ರ. ಅಲ್ಲಿ ಈ ಚೋಳು ಊರ್ಧ್ವಮುಖಿಯಾಗಿತ್ತು ಅಂದರೆ ಇದರ ಗಮನ ಮೂಲಾಧಾರದ ಮೇಲಿರುವ ಚಕ್ರಗಳತ್ತ ಇದೆ. (ಮೂಲಾಧಾರದ ಮೇಲಿನ ಚಕ್ರಗಳು ಹೀಗಿವೆ: ಸ್ವಾಧಿಸ್ಠಾನ, ಮಣಿಪೂರ, ಅನಾಹತ, ವಿಶುದ್ಧಿ ಹಾಗೂ ಆಜ್ಞಾಚಕ್ರ.) ಸಾಧಕನನ್ನು ಮೇಲ್ಮುಖವಾಗಿ ಕರೆದೊಯ್ಯುವ ಶಕ್ತಿ ಇದು. ತನ್ನ ಸಮಯ ಬರುವವರೆಗೆ ಇದು ಸ್ಥೂಲದೇಹದಲ್ಲಿ ಅಂದರೆ ಜ್ಞಾನವಿಹೀನ ದೇಹದಲ್ಲಿ ನಿದ್ರಿಸುತ್ತಿರುತ್ತದೆ. (ಕುಂಡಲಿನಿ ಶಕ್ತಿಯು ಮೂಲಾಧಾರದಲ್ಲಿ ಸರ್ಪರೂಪದಲ್ಲಿ ಮಲಗಿರುತ್ತದೆ ಎನ್ನುವದು ಯೋಗಶಾಸ್ತ್ರದ ಪರಿಭಾಷೆ.) ಹಾಗೂ ಕಲಿಕರ್ಮವನ್ನು ಅಂದರೆ ದುಷ್ಕರ್ಮಗಳನ್ನು ನುಂಗುತ್ತ ತಕ್ಕ ಸಮಯಕ್ಕಾಗಿ ಕಾಯುತ್ತಿತ್ತು. ಸಮಯ ಬರುವ ವರೆಗೂ ಈ ಚೋಳು ಪರಮಾತ್ಮನ ಧ್ಯಾನದಲ್ಲಿಯೇ ಮಗ್ನವಾಗಿತ್ತು. ಅರ್ಥಾತ್ ಪರಮಾತ್ಮನ ಹೊರತಾಗಿ ಈ ಶಕ್ತಿಗೆ ಮತ್ತೇನೂ ಬೇಕಾಗಿಲ್ಲ. ಅಂತಹ ಚೈತನ್ಯ ವು ಕುಟುಕಿದಾಗ, ಶರೀಫರು ತಮಗೆ ಎಚ್ಚರಾಯಿತು, ಅಷ್ಟೇ ಅಲ್ಲ ಹುಚ್ಚು ಹಿಡಿದ ಹಾಗಾಯಿತು ಎಂದು ಹೇಳುತ್ತಾರೆ. &lt;br /&gt;ಪರಮಾರ್ಥದ ಜ್ಞಾನ ದೊರೆತ ಬಳಿಕ ಜೀವಿಯು ಪರಮಾತ್ಮನ ಹುಚ್ಚಿನಲ್ಲಿ ಮುಳುಗುವದು ಸಹಜವೇ ಆಗಿದೆ!&lt;br /&gt;&lt;br /&gt;[ಟಿಪ್ಪಣಿ:&lt;br /&gt;ಪರಮಾರ್ಥದ ಜ್ಞಾನಕ್ಕಾಗಿ ನೋವಿನ ಅನುಭವ ಅನಿವಾರ್ಯವೇನೊ? ಕರ್ನಾಟಕದ ಇನ್ನಿಬ್ಬರು ಸಂತರ ಬಾಳಿನಲ್ಲಿಯೂ ಇಂತಹ ವಿಷಾದಕರ ಘಟನೆಗಳು ನಡೆದಿವೆ. ಮೊದಲನೆಯವರು ಬಸವಣ್ಣ. ತಮ್ಮ ಮಗ ಸಂಗಬಸವಣ್ಣ ನಿಧನ ಹೊಂದಿದಾಗ ಅವರು ಉದ್ಗರಿಸಿದ ವಚನ ಹೀಗಿದೆ:&lt;br /&gt;“ಪಕ್ವವಾದ ಫಲವಿರಲು ಕಸುಕಾಯನೆತ್ತಿಕೊಂಡನು ಶಿವನು”.&lt;br /&gt;ಪರಮಾತ್ಮನು ವಯಸ್ಸಾದ ತನಗೆ ಸಾವು ಕೊಡುವ ಬದಲು ಚಿಕ್ಕ ಬಾಲಕನಿಗೆ ಸಾವು ಕೊಟ್ಟನಲ್ಲ ಎನ್ನುವ ಈ ವಚನದಲ್ಲಿ ವ್ಯಕ್ತವಾಗುವ anguish ಹಾಗೂ resignation to God’s will ಇವು ಬೇರೆ ಯಾವ ಭಾಷೆಯ ಸಾಹಿತ್ಯದಲ್ಲೂ ಸಿಗಲಿಕ್ಕಿಲ್ಲ.&lt;br /&gt;ಎರಡನೆಯವರು ಪುರಂದರದಾಸರು. ತಮ್ಮ ಮಗನ ಮರಣದ ಸಂದರ್ಭದಲ್ಲಿ ಇವರು ಹಾಡಿದ ಗೀತೆಯೂ ಸಹ ಶೋಕರಸದ ಅನನ್ಯ ಗೀತೆಯಾಗಿದೆ:&lt;br /&gt;“ಗಿಳಿಯು ಪಂಜರದೊಳಿಲ್ಲ&lt;br /&gt;ಬರಿದೆ ಪಂಜರವಾಯಿತಲ್ಲ!”]&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-912455175722487843?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/912455175722487843/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=912455175722487843' title='29 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/912455175722487843'/><link rel='self' type='application/atom+xml' href='http://www.blogger.com/feeds/5939841257923965225/posts/default/912455175722487843'/><link rel='alternate' type='text/html' href='http://sallaap.blogspot.com/2009/07/blog-post.html' title='ಚೋಳ ಕಡಿತು, ನನಗೊಂದು ಚೋಳ ಕಡಿತು'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>29</thr:total></entry><entry><id>tag:blogger.com,1999:blog-5939841257923965225.post-3549631104640483530</id><published>2009-06-24T22:42:00.008+05:30</published><updated>2009-06-26T10:50:04.176+05:30</updated><title type='text'>‘ಹಕ್ಕಿ ಹಾರುತಿದೆ ನೋಡಿದಿರಾ?’</title><content type='html'>‘ಹಕ್ಕಿ ಹಾರುತಿದೆ ನೋಡಿದಿರಾ?’ ಇದು ಬೇಂದ್ರೆಯವರ ಸುಪ್ರಸಿದ್ಧ ಕವನ. ೧೯೨೯ನೆಯ ಇಸವಿಯಲ್ಲಿ ಬೆಳಗಾವಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರು ಈ ಕವನವನ್ನು ಹಾಡಿದರು. ಬೇಂದ್ರೆಯವರ ಉತ್ತರ ಕರ್ನಾಟಕದ ವೇಷ-ಭೂಷ, ಅವರ ಹಾವಭಾವ ಹಾಗೂ ಹಾಡುಗಾರಿಕೆಯ ಗತ್ತು ಇವುಗಳಿಂದ ನೆರೆದ ಸಭಿಕರೆಲ್ಲ ಮಂತ್ರಮುಗ್ಧರಾದರಂತೆ. ಆನಂತರ ೧೯೩೨ರಲ್ಲಿ ಪ್ರಕಟವಾದ ಅವರ ಪ್ರಥಮ ಕವನ ಸಂಕಲನ ’ಗರಿ’ಯಲ್ಲಿ ಈ ಕವನ ಸೇರ್ಪಡೆಯಾಯಿತು.&lt;br /&gt; &lt;br /&gt;ಕವನದ ಪೂರ್ತಿಪಾಠ ಹೀಗಿದೆ:&lt;br /&gt;&lt;br /&gt;ಇರುಳಿರಳಳಿದು ದಿನದಿನ ಬೆಳಗೆ&lt;br /&gt;ಸುತ್ತಮುತ್ತಲೂ ಮೇಲಕೆ ಕೆಳಗೆ&lt;br /&gt;ಗಾವುದ ಗಾವುದ ಗಾವುದ ಮುಂದಕೆ&lt;br /&gt;ಎವೆ ತೆರೆದಿಕ್ಕುವ ಹೊತ್ತಿನ ಒಳಗೆ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ಕರಿನೆರೆ ಬಣ್ಣದ ಪುಚ್ಚಗಳುಂಟು&lt;br /&gt;ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು&lt;br /&gt;ಕೆನ್ನನ ಹೊನ್ನನ ಬಣ್ಣಬಣ್ಣಗಳ&lt;br /&gt;ರೆಕ್ಕೆಗಳೆರಡೂ ಪಕ್ಕದಲುಂಟು&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ನೀಲಮೇಘಮಂಡಲ-ಸಮ ಬಣ್ಣ !&lt;br /&gt;ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !&lt;br /&gt;ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು&lt;br /&gt;ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ&lt;br /&gt;ಮಂಡಲ-ಗಿಂಡಲಗಳ ಗಡ ಮುಕ್ಕಿ&lt;br /&gt;ತೇಲಿಸಿ ಮುಳುಗಿಸಿ ಖಂಡ-ಖಂಡಗಳ&lt;br /&gt;ಸಾರ್ವಭೌಮರಾ ನೆತ್ತಿಯ ಕುಕ್ಕಿ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ಯುಗ-ಯುಗಗಳ ಹಣೆಬರಹವ ಒರಸಿ&lt;br /&gt;ಮನ್ವಂತರಗಳ ಭಾಗ್ಯವ ತೆರೆಸಿ&lt;br /&gt;ರೆಕ್ಕೆಯ ಬೀಸುತ ಚೇತನೆಗೊಳಿಸಿ&lt;br /&gt;ಹೊಸಗಾಲದ ಹಸುಮಕ್ಕಳ ಹರಸಿ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ&lt;br /&gt;ತಿಂಗಳೂರಿನ ನೀರನು ಹೀರಿ&lt;br /&gt;ಆಡಲು ಹಾಡಲು ತಾ ಹಾರಾಡಲು&lt;br /&gt;ಮಂಗಳಲೋಕದ ಅಂಗಳಕೇರಿ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ಮುಟ್ಟಿದೆ ದಿಗ್ಮಂಡಲಗಳ ಅಂಚ&lt;br /&gt;ಆಚೆಗೆ ಚಾಚಿದೆ ತನ್ನಯ ಚುಂಚ&lt;br /&gt;ಬ್ರಹ್ಮಾಂಡಗಳನು ಒಡೆಯಲು ಎಂದೊ&lt;br /&gt;ಬಲ್ಲರು ಯಾರಾ ಹಾಕಿದ ಹೊಂಚ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ಬೇಂದ್ರೆಯವರು ಈ ಕವನದಲ್ಲಿ ಕಾಲವನ್ನು ಹಾರುತ್ತಿರುವ ಹಕ್ಕಿಗೆ ಹೋಲಿಸಿದ್ದಾರೆ. ಈ ಕವನದ ಮೊದಲ ನುಡಿಯಲ್ಲಿ ಕಾಲಪಕ್ಷಿಯನ್ನು ಪರಿಚಯಿಸುವ ವಿಧಾನ ತುಂಬಾ ಸ್ವಾರಸ್ಯಕರವಾಗಿದೆ. &lt;br /&gt;`ಇರುಳು ಅಳಿದು ದಿನವಾಗುವದು'-- ಇದು ಒಂದು ದಿನದ ಕಾಲಮಾನವನ್ನು ಸೂಚಿಸುತ್ತದೆ. &lt;br /&gt;‘ಇರುಳು ಇರುಳು ಅಳಿದು ದಿನದಿನ ಬೆಳಗೆ’ ಅನ್ನುವದು ಈ ಕಾಲಮಾನದ  recurrence. &lt;br /&gt;ಈ ರೀತಿಯಾಗಿ ಮೊದಲನೆಯ ಸಾಲಿನ ಮೂಲಕ ಬೇಂದ್ರೆಯವರು ಒಂದು ಚಲನಶೀಲ ಕಾಲವನ್ನು ನಮ್ಮ ಕಣ್ಣೆದುರಿಗೆ ಮೂಡಿಸುತ್ತಾರೆ.&lt;br /&gt;&lt;br /&gt;ಈಗ ಕವನದ ಮುಂದಿನ  ಸಾಲನ್ನು ನೋಡಿರಿ:&lt;br /&gt;‘ಸುತ್ತಮುತ್ತಲೂ ಮೇಲಕೆ ಕೆಳಗೆ’ ಎನ್ನುವ ಸಾಲು ‘ಅವಕಾಶ’ದ (space) ಮೂರು ಆಯಾಮಗಳನ್ನು (3 co-ordinates) ಬಣ್ಣಿಸುತ್ತದೆ.&lt;br /&gt;ಅಂದರೆ ಈ ಕಾಲವು ‘ವಿಶ್ವವ್ಯಾಪಿ ಕಾಲ’ವಾಯಿತು !&lt;br /&gt;ಕಾಲಪಕ್ಷಿಯ ಬೃಹತ್ ರೂಪವನ್ನು ಈ ರೀತಿಯಾಗಿ ಬೇಂದ್ರೆ ನಿರೂಪಿಸಿದ್ದಾರೆ.&lt;br /&gt;&lt;br /&gt;ಈ ಕಾಲಪಕ್ಷಿಯ ಗತಿ ಎಂತಹದು?&lt;br /&gt;‘ಗಾವುದ ಗಾವುದ ಗಾವುದ ಮುಂದಕೆ’!&lt;br /&gt;‘ಮುಂದಕೆ’ ಎಂದು ಹೇಳುವ ಮೂಲಕ ಈ ಕಾಲಪಕ್ಷಿಯು ಕೇವಲ ಗತಿಶೀಲವಲ್ಲ, ಪ್ರ-ಗತಿಶೀಲವೂ ಹೌದು ಎಂದು ಬೇಂದ್ರೆ ಸೂಚಿಸುತ್ತಾರೆ.&lt;br /&gt;ಈ ಗಾವುದ ದೂರವನ್ನು ಚಲಿಸಲು ಈ ಪಕ್ಷಿಗೆ ಬೇಕಾಗುವ ಸಮಯ ಮಾತ್ರ ‘ಎವೆ ತೆರೆದಿಕ್ಕುವ ಹೊತ್ತು’.&lt;br /&gt;ಕೇವಲ ಕಣ್ಣು ಮಿಟುಕಿಸುವ ಸಮಯದಲ್ಲಿ ಈ ಕಾಲಪಕ್ಷಿ ಸುದೂರ ಗಮಿಸಬಲ್ಲದು.&lt;br /&gt;&lt;br /&gt;ಸಮಯದ ಅತ್ಯಂತ ಚಿಕ್ಕ ಅಳತೆ ಯಾವುದು ಎಂದರೆ ‘ನಿಮಿಷ’. ಭಾರತೀಯರು ಪೂರ್ವಕಾಲದಿಂದಲೂ ಬಳಸುತ್ತಿದ್ದ ಕಾಲಮಾನ ಇದು. ‘ನಿಮಿಷ’ವನ್ನು ಅಳೆಯುವ ಬಗೆ ಹೇಗೆ? ಕಣ್ಣರೆಪ್ಪೆಯನ್ನು ಬಡಿಯುವ ಕಾಲಮಾನಕ್ಕೆ ‘ನಿಮಿಷ’ ಎನ್ನುತ್ತಾರೆ. ಆದುದರಿಂದ ‘ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಈ ಪದಪುಂಜದ ಅರ್ಥ=ನಿಮಿಷ. ಇದೇ least unit of time. ಆದುದರಿಂದ ಅತಿ ಚಿಕ್ಕ ಕಾಲಮಾನದಲ್ಲಿ ಈ ಹಕ್ಕಿ ಗಾವುದ ದೂರಕ್ಕೆ ಚಲಿಸಬಲ್ಲದು. ಕಲ್ಪನೆಯಂತೆ ಕಾಣುವ ಪದದಲ್ಲಿ ವಾಸ್ತವತೆಯನ್ನು ಹಿಡಿದಿಡುವ ಬೇಂದ್ರೆ-ಪ್ರತಿಭೆಯನ್ನು ಈ ಸಾಲಿನಲ್ಲಿ ನಾವು ಕಾಣುತ್ತೇವೆ.&lt;br /&gt;(ದೇವತೆಗಳು ಕಣ್ಣು ಮುಚ್ಚುವದಿಲ್ಲ ಅಂದರೆ ಕಣ್ಣರೆಪ್ಪೆ ಬಡೆಯುವದಿಲ್ಲ ; ಆದುದರಿಂದ ಅವರು ‘ಅನಿಮೇಷ’ರು.)&lt;br /&gt;&lt;br /&gt;ಈಗ ಈ ನುಡಿಯ ಮತ್ತೊಂದು ಆಯಾಮವನ್ನು ನೋಡೋಣ. &lt;br /&gt;ವಿಶ್ವವನ್ನು ವ್ಯಾಪಿಸಿರುವ ಈ ಕಾಲಪಕ್ಷಿ ತನ್ನ ಚಲನೆಯ ಮೂಲಕ ವಿಶ್ವವನ್ನು ಅಂದರೆ ದೇಶವನ್ನು ಬದಲಾವಣೆಗೆ ಒಳಪಡಿಸುತ್ತದೆ. ಇದೇ ಮಾತನ್ನು ವಿಜ್ಞಾನಿ ಐನ್‍ಸ್ಟೈನ್‍ ‘ಕಾಲ ಮತ್ತು ದೇಶ ಇವೆರಡು ಸಾಪೇಕ್ಷವಾಗಿವೆ’ ಎನ್ನುವ ಮೂಲಕ ತಿಳಿಸಿದರು. (Relativity of space and time.)&lt;br /&gt;ಶಂಕರಾಚಾರ್ಯರೂ ಇದೇ ಮಾತನ್ನು ‘ಮಾಯಾಕಲ್ಪಿತ ದೇಶ,ಕಾಲ ಕಲನಾ’ ಎಂದು philosophically ಹೇಳಿದ್ದಾರೆ (=ದೇಶ ಮತ್ತು ಕಾಲ ಇವು ಕೇವಲ ಭ್ರಮೆ.)&lt;br /&gt;&lt;br /&gt;ಆದುದರಿಂದ ಬೇಂದ್ರೆಯವರ ಈ ಕಾಲಪಕ್ಷಿ ಕೇವಲ ಸಮಯದ ಪಕ್ಷಿ ಅಲ್ಲ. ವಿಶ್ವವನ್ನೇ ತನ್ನ ಚಲನೆಯಲ್ಲಿ ಬದಲಾಯಿಸುತ್ತಿರುವ ಬೃಹತ್ ಚೈತನ್ಯಪಕ್ಷಿ!&lt;br /&gt;&lt;br /&gt;ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಈ ಚೈತನ್ಯರೂಪಿ ಕಾಲಪಕ್ಷಿಯ ಭೌತಿಕ ವಿವರಗಳನ್ನು  ಕೊಡುತ್ತಾರೆ:&lt;br /&gt;&lt;br /&gt;ಕರಿನೆರೆ ಬಣ್ಣದ ಪುಚ್ಚಗಳುಂಟು&lt;br /&gt;ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು&lt;br /&gt;ಕೆನ್ನನ ಹೊನ್ನನ ಬಣ್ಣ-ಬಣ್ಣಗಳ&lt;br /&gt;ರೆಕ್ಕೆಗಳೆರಡೂ ಪಕ್ಕದಲುಂಟು&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ಈ ನುಡಿಯನ್ನು ಎರಡು ರೀತಿಯಲ್ಲಿ ಅರ್ಥೈಸಬಹುದು:&lt;br /&gt;ಪುಚ್ಚ ಅಂದರೆ ಬಾಲ. ಇದು ಹಕ್ಕಿಯ ಹಿಂದಿರುತ್ತದೆ. ಇದು ಭೂತಕಾಲ. ಆದುದರಿಂದ ಇದರ ಬಣ್ಣ ಕರಿ. &lt;br /&gt;ಈಗ ಕಣ್ಣಿಗೆ ಕಾಣುತ್ತಿರುವ , ಹೊಳೆಯುತ್ತಿರುವ ಗರಿಯ ಬಣ್ಣ ಬಿಳಿ. ಆದುದರಿಂದ ಇದು ವರ್ತಮಾನ ಕಾಲ. ನಮಗೆ ಮುಂದೆ  ಕಾಣುವದು ಭವಿಷ್ಯತ್ ಕಾಲ. ಇದು ಉದಯಿಸುತ್ತಿರುವ ಸೂರ್ಯನ ಹಾಗೆ ಕೆಂಪಾಗಿ ಹಾಗೂ ಬಂಗಾರ ಬಣ್ಣದ್ದಾಗಿರುತ್ತದೆ. ಈ ಮೂರೂ ಕಾಲಗಳು ಕಾಲಪಕ್ಷಿಯ ಚಲನೆಯ ಅಂಶಗಳು.&lt;br /&gt;&lt;br /&gt;ಎರಡನೆಯದಾಗಿ, ನಮ್ಮ ಪೃಥ್ವಿಯ ಮೇಲಿನ ಜನಾಂಗಗಳನ್ನು ಗಮನಿಸಿರಿ: ಕರಿಯ ಬಣ್ಣದ ಆಫ್ರಿಕನ್ ಜನಾಂಗ, ಬಿಳಿಯ ಬಣ್ಣದ ಕಾ^ಕೇಸಿಯನ್ ಜನಾಂಗ, ಇವೆರಡರ ನಡುವಿನ ಕೆನ್ನನ ಅಂದರೆ brownie ಜನಾಂಗ ಹಾಗೂ ಕೊನೆಯದಾಗಿ ಹಳದಿ ಬಣ್ಣದ ಅಂದರೆ ಹೊನ್ನ ಬಣ್ಣದ ಮಂಗೋಲಿಯನ್ ಜನಾಂಗ. &lt;br /&gt;ಈ ಎಲ್ಲ ಜನಾಂಗಗಳನ್ನು ಈ ಕಾಲಪಕ್ಷಿ ಹೊತ್ತುಕೊಂಡು ಮುನ್ನಡೆದಿದೆ ಎಂದೂ ಅರ್ಥೈಸಬಹುದು.&lt;br /&gt;&lt;br /&gt;ಇಂತಹ ಒಂದು ಬೃಹತ್ ಪಕ್ಷಿ ನೋಡಲು ಹೇಗೆ ಕಾಣುತ್ತಿರಬಹುದು?&lt;br /&gt;ಇದರ ಹರಹು ಪೃಥ್ವಿಯನ್ನಷ್ಟೇ ಅಲ್ಲ, ನಮ್ಮ ಆಕಾಶಗಂಗೆಯನ್ನೂ (milky way) ದಾಟಿದೆ. ಬೇಂದ್ರೆ ಇದರ ಅನಂತ ವೈಶಾಲ್ಯವನ್ನು ಹೀಗೆ ಬಣ್ಣಿಸುತ್ತಾರೆ :&lt;br /&gt;&lt;br /&gt;ನೀಲಮೇಘಮಂಡಲ-ಸಮ ಬಣ್ಣ !&lt;br /&gt;ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !&lt;br /&gt;ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು&lt;br /&gt;ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ಆಕಾಶ ಅನಂತವಾದದ್ದು. ಅದರ ಬಣ್ಣ ಈ ಕಾಲಪಕ್ಷಿಯದು, ಅಂದರೆ ಕಾಲವೂ ಸಹ ಅನಂತವೇ.  ಆ ಅನಂತವಾದ ಆಕಾಶಕ್ಕೆ ರೆಕ್ಕೆ ಒಡೆದರೆ ಹೇಗಿರಬೇಡ!? ಅಂತಹ ಈ ಕಾಲಪಕ್ಷಿಯು ಚಿಕ್ಕೆಗಳ ಮಾಲೆಯನ್ನು ಅಂದರೆ ಆಕಾಶಗಂಗೆಯೇ(=milky way) ಮೊದಲಾದ ವಿಶ್ವಗಳನ್ನು (=galaxies) ಸೆಕ್ಕಿಸಿಕೊಂಡಿದೆ. &lt;br /&gt;ಬೇಂದ್ರೆಯವರು ‘ಸಿಕ್ಕಿಸಿಕೊಂಡಿದೆ’ ಎಂದು ಹೇಳಿಲ್ಲ . ಸೆಕ್ಕಿಸಿಕೊಂಡಿದೆ ಎಂದು ಹೇಳಿದ್ದಾರೆ. ಸೆಕ್ಕಿಸಿಕೊಳ್ಳುವದು ಅಂದರೆ ದಿಮಾಕಿನಿಂದ ಸಿಕ್ಕಿಸಿಕೊಳ್ಳುವದು. &lt;br /&gt;ಈ ಕಾಲಪಕ್ಷಿಯ ಕಣ್ಣುಗಳು ಸೂರ್ಯ ಹಾಗೂ ಚಂದ್ರ ಎನ್ನುವ ಎರಡು ಪ್ರಭಾಬಿಂಬಗಳು. ಸೂರ್ಯ ಹಾಗೂ ಚಂದ್ರರನ್ನು ನಾವು ಕಾಲಗಣನೆಗೆ ಬಳಸುತ್ತೇವೆ. ಆದುದರಿಂದ ಈ ಪ್ರಭಾಬಿಂಬಗಳು ಕಾಲಪಕ್ಷಿಯ ಕಣ್ಣುಗಳು ಎಂದು ಹೇಳುವದು ಯಥಾರ್ಥವಾಗಿದೆ.&lt;br /&gt;ಇಂತಹ ಅದ್ಭುತ ನೋಟದ ಈ ಕಾಲಪಕ್ಷಿಯು ಮಾಡುತ್ತಿರುವದೇನು? &lt;br /&gt;ಅದನ್ನು ನಾಲ್ಕನೆಯ ನುಡಿಯಲ್ಲಿ ಬೇಂದ್ರೆಯವರು ಈ ರೀತಿಯಾಗಿ ಬಣ್ಣಿಸುತ್ತಾರೆ:&lt;br /&gt;&lt;br /&gt;ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ&lt;br /&gt;ಮಂಡಲ-ಗಿಂಡಲಗಳ ಗಡ ಮುಕ್ಕಿ&lt;br /&gt;ತೇಲಿಸಿ ಮುಳುಗಿಸಿ ಖಂಡ-ಖಂಡಗಳ&lt;br /&gt;ಸಾರ್ವಭೌಮರಾ ನೆತ್ತಿಯ ಕುಕ್ಕಿ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ಸಣ್ಣ ಪುಟ್ಟ ರಾಜ್ಯಗಳನ್ನು, ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಹುಟ್ಟಿಸಿ ಬೆಳೆಯಿಸುವದೇ ಈ ಕಾಲಪಕ್ಷಿ. ಅವುಗಳ ತೆನೆ ಒಕ್ಕುವದು ಅಂದರೆ ಅವುಗಳ ಫಲಿತವನ್ನು harvest ಮಾಡುವದು ಈ ಕಾಲಪಕ್ಷಿ. ಈ ತರಹ ಬೆಳೆದು ನಿಂತ ತೆನೆಗಳನ್ನು  ಮುಕ್ಕುವದೂ ಸಹ ಈ ಕಾಲಪಕ್ಷಿಯೇ! (ಸುಗ್ಗಿಯ ಸಮಯದಲ್ಲಿ ಹಕ್ಕಿಗಳು ಹೊಲದಲ್ಲಿಯ ಕಾಳುಗಳನ್ನು ಮುಕ್ಕುವದನ್ನು ನೆನಪಿಸಿಕೊಳ್ಳಿರಿ.) ಭೂಮಂಡಲವೆಲ್ಲ ಈ ಹಕ್ಕಿಯ ಆಹಾರವೇ. ಧರಣಿಮಂಡಲದಲ್ಲಿರುವ ಏಳೂ ಖಂಡಗಳನ್ನು ಈ ಹಕ್ಕಿ ತೇಲಿಸುತ್ತದೆ ಹಾಗೂ ಮುಳುಗಿಸುತ್ತದೆ. ಒಂದು ಕಾಲದಲ್ಲಿ ಏಶಿಯಾ ಖಂಡ ಎಲ್ಲಕ್ಕೂ ಮೇಲೆ ತೇಲುತ್ತಿತ್ತು,ಇದೀಗ ಯುರೋಪ ಹಾಗೂ ಅಮೇರಿಕಾ ಖಂಡಗಳು ಮೇಲೆದ್ದಿವೆ! &lt;br /&gt;(ಭೌತಿಕವಾಗಿಯೂ ಸಹ ಇಡೀ ಭೂಪ್ರದೇಶವು ಮೊದಲು ಗೊಂಡವನ ಖಂಡವೆನ್ನುವ ಒಂದೇ ಭೂಮಿಯಾಗಿದ್ದು, ಅನಂತರ ತುಂಡಾಗಿ ಏಳು ಖಂಡಗಳಾದವು.)&lt;br /&gt;ಈ ಖಂಡಗಳಿಗೆ ತಾವು ಸಾರ್ವಭೌಮರೆಂದುಕೊಂಡು ಬೀಗುತ್ತಿರುವವರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಈ ಕಾಲಪಕ್ಷಿ  ಮೆಟ್ಟಿ ನಿಂತಿದೆ. &lt;br /&gt;(ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಶ್ ಸಾಮ್ರಾಟರನ್ನು ಅಣಕಿಸುವ ಈ ಸಾಲುಗಳನ್ನು ಬರೆಯಲು ಯಾವುದೇ ಕವಿಗೂ ಅಪಾರ ಧೈರ್ಯ ಬೇಕು. ಸಾಹಿತ್ಯಸಮ್ಮೇಳನದಲ್ಲಿ ಈ ಕವನವನ್ನು ಕೇಳುತ್ತಿದ್ದ ಬಿ.ಎಮ್.ಶ್ರೀಕಂಠಯ್ಯನವರು ಗಾಬರಿಗೊಂಡರೆಂದು ದಾಖಲೆಗಳಿವೆ.)&lt;br /&gt;&lt;br /&gt;ಈ ವಿಶ್ವ, ಈ ಭೂಮಿ, ಭೂಮಿಯ ಮೇಲಿನ ಜೀವಜಂತುಗಳು ಇವೆಲ್ಲವುಗಳ ಉಗಮವಾಗಿ ಯಾವ ಕಾಲವಾಯಿತೊ? ಹೊಸ ಯುಗಕ್ಕೊಮ್ಮೆ ಆ ಯುಗದ ಹಣೆಬರಹವನ್ನು ಬರೆಯುವದು, ಹಳೆಯ ಯುಗದ ಹಣೆಬರಹವನ್ನು ಒರೆಸುವದು ಈ ಕಾಲಪಕ್ಷಿಯ ಕೆಲಸ. ಭೂಮಿಯ ಮೇಲಿನ ಶಿಲಾಯುಗ, ಧಾತುಯುಗ, ಪರಮಾಣುಯುಗ ಇವೆಲ್ಲ ಕಾಲದ ಅಧೀನವೇ.&lt;br /&gt;ಆದುದರಿಂದ ಈ ಕಾಲಪಕ್ಷಿಯ ಮಹಿಮೆ ಅಪಾರ. ಅದು ಯುಗ-ಯುಗಗಳನ್ನು, ಮನ್ವಂತರಗಳನ್ನು ತನ್ನ ಆಧೀನದಲ್ಲಿಟ್ಟುಕೊಂಡಿದೆ:&lt;br /&gt;&lt;br /&gt;ಯುಗ-ಯುಗಗಳ ಹಣೆಬರಹವ ಒರಸಿ&lt;br /&gt;ಮನ್ವಂತರಗಳ ಭಾಗ್ಯವ ತೆರೆಸಿ&lt;br /&gt;ರೆಕ್ಕೆಯ ಬೀಸುತ ಚೇತನೆಗೊಳಿಸಿ&lt;br /&gt;ಹೊಸಗಾಲದ ಹಸುಮಕ್ಕಳ ಹರಸಿ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ಕಾಲಪಕ್ಷಿಯ ಕೆಲಸ ಕೇವಲ ವಿನಾಶಕಾರಿಯಲ್ಲ. ಹೊಸ ಮನ್ವಂತರದ  ಶುಭೋದಯವಾಗುವದು ಈ ಕಾಲಪಕ್ಷಿಯಿಂದಲೇ. ಯಾಕೆಂದರೆ ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಪ್ರಾಣವಾಯುವನ್ನು ಕೊಟ್ಟು ಈ ನಿರ್ಜೀವ (inanimate) ಮನ್ವಂತರಗಳನ್ನು ಚೇತನಗೆ ಒಳಪಡಿಸುವದು ಅಂದರೆ ಸಜೀವಗೊಳಿಸುವದು ಈ ಕಾಲಪಕ್ಷಿ. ನಮ್ಮ ಭೂಮಂಡಲದಲ್ಲಿ ಜರುಗಿದ ಸಾಂಸ್ಕೃತಿಕ ಬದಲಾವಣೆಗಳು, ಪುನಶ್ಚೇತನಗಳು (Renaissances) ಎಲ್ಲವೂ ಈ ಕಾಲಪಕ್ಷಿಯ ಮಹಿಮೆಯೇ! ಹೊಸ ಕಾಲದ ಎಳೆಯ ಮಕ್ಕಳಿಗೆ ಹಾರೈಸಿ ಬೆಳೆಸುವದು ಈ ಕಾಲಪಕ್ಷಿಯೇ. ಇದನ್ನೆಲ್ಲ ಪರಿವೀಕ್ಷಿಸುವ ಕಣ್ಣು ನಮಗೆ ಬೇಕು. ಅಂತಲೇ ಬೇಂದ್ರೆ ನಮ್ಮನ್ನು ಕೇಳುತ್ತಿದ್ದಾರೆ:&lt;br /&gt;“ಹಕ್ಕಿ ಹಾರುತಿದೆ ನೋಡಿದಿರಾ?”&lt;br /&gt;&lt;br /&gt;ಮಾನವ ದೃಷ್ಟಿ ತತ್ಕಾಲಕ್ಕೆ ಸೀಮಿತವಾಗಿರುತ್ತದೆ. ಆದರೆ ಕವಿಯ ನೋಟ ಕಾಲಾತೀತ, ದೇಶಾತೀತ.&lt;br /&gt;ಮುಂದಿನ ನುಡಿಯಲ್ಲಿ ಬೇಂದ್ರೆಯವರು ಕಾಲಪಕ್ಷಿಯ ಲಾಘವದ ಭವಿಷ್ಯ ನುಡಿಯುತ್ತಿದ್ದಾರೆ:&lt;br /&gt;&lt;br /&gt;ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ&lt;br /&gt;ತಿಂಗಳೂರಿನ ನೀರನು ಹೀರಿ&lt;br /&gt;ಆಡಲು ಹಾಡಲು ತಾ ಹಾರಾಡಲು&lt;br /&gt;ಮಂಗಳಲೋಕದ ಅಂಗಳಕೇರಿ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ಕಾಲದ ಓಟದಲ್ಲಿ ಬೆಳ್ಳಿ ಅಂದರೆ ಶುಕ್ರಗ್ರಹವು ಮನುಷ್ಯನಿಗೆ ಕೇವಲ ಹಳ್ಳಿಯಾಗಬಹುದು, ಚಂದ್ರಲೋಕವು ಬರಿ ಊರಾಗಬಹುದು ಹಾಗೂ ಮಂಗಳಲೋಕವು ಭೂಮಿಗೆ ಅಂಗಳವಾಗಬಹುದು. ಮಾನವನಿಗೆ ಈ ಆಕಾಶಕಾಯಗಳು ಆಡಲು, ಹಾಡಲು ಹಾಗೂ ಹಾರಾಡಲು platforms ಆಗಬಹುದು!&lt;br /&gt;ಮಾನವನು ಭೂಮಿಯಿಂದ ಇತರ ಗ್ರಹ, ಉಪಗ್ರಹಗಳಿಗೆ ಸಂಚರಿಸಬಹುದಾದ ದಾರ್ಶನಿಕ ಮುನ್ನೋಟ ಈ ನುಡಿಯಲ್ಲಿ ವ್ಯಕ್ತವಾಗಿದೆ.&lt;br /&gt;&lt;br /&gt;ಕೊನೆಯ ನುಡಿಯಲ್ಲಿ ಬೇಂದ್ರೆಯವರು ಈ ಕಾಲಪಕ್ಷಿಯ ಹಾರಾಟ ಮಾನವನ ಕಲ್ಪನೆಗೆ ಮೀರಿದ್ದು ಎನ್ನುವದನ್ನು ವ್ಯಕ್ತಪಡಿಸುತ್ತಾರೆ:&lt;br /&gt;&lt;br /&gt;ಮುಟ್ಟಿದೆ ದಿಗ್ಮಂಡಲಗಳ ಅಂಚ&lt;br /&gt;ಆಚೆಗೆ ಚಾಚಿದೆ ತನ್ನಯ ಚುಂಚ&lt;br /&gt;ಬ್ರಹ್ಮಾಂಡಗಳನು ಒಡೆಯಲು ಎಂದೊ&lt;br /&gt;ಬಲ್ಲರು ಯಾರಾ ಹಾಕಿದ ಹೊಂಚ&lt;br /&gt;ಹಕ್ಕಿ ಹಾರುತಿದೆ ನೋಡಿದಿರಾ?&lt;br /&gt;&lt;br /&gt;ವಿಶ್ವಗಳು ಅನೇಕವಿರಬಹುದು. ಈ ವಿಶ್ವಗಳ ದಿಕ್ಕುಗಳು ಅನಂತವಾಗಿರಬಹುದು. ಆದರೆ ಈ ಕಾಲಪಕ್ಷಿಯು ಈ ಎಲ್ಲ ಮಂಡಲಗಳ ಅಂಚನ್ನು ಮುಟ್ಟಿದೆ. ಇಷ್ಟೇ ಅಲ್ಲ, ಈ ಅನಂತತೆಯ ಆಚೆಗೂ ಸಹ ಇದು ತನ್ನ ಚುಂಚನ್ನು ಚಾಚಿದೆ. ಅಬ್ಬಾ, ಎಂತಹ ಕಲ್ಪನೆ !&lt;br /&gt;ಈ ಕಾಲಪಕ್ಷಿಯ ಮನೋಗತ ನಮಗೆ ಅರ್ಥವಾಗಬಹುದೆ? ಇದು ಅಸಾಧ್ಯ ಎನ್ನುವ ಹೊಳಹನ್ನು ‘ಬಲ್ಲರು ಯಾರಾ’ ಎನ್ನುವ ಪ್ರಶ್ನೆಯ ಮೂಲಕ ಬೇಂದ್ರೆ ವ್ಯಕ್ತಪಡಿಸುತ್ತಾರೆ.&lt;br /&gt;ಬ್ರಹ್ಮಾಂಡ ಅಂದರೆ ಬ್ರಹ್ಮದೇವನು ಸೃಷ್ಟಿಸಿದ ಬೃಹತ್ ಅಂಡ. ಆ ಬ್ರಹ್ಮಸೃಷ್ಟಿಗಳನ್ನೇ ಈ ಕಾಲಪಕ್ಷಿ ಒಡೆಯಲೆಂದು ಹೊಂಚು ಹಾಕಿ ಹಾರುತ್ತಿದೆಯೆ? ಇರಬಹುದು, ಅಥವಾ ಅಂಡವು ಒಡೆದಾಗಲೇ ಹೊಸ ಸೃಷ್ಟಿ ಹೊರಗೆ ಬರುವದು ಎನ್ನುವ ಅರ್ಥವೂ ಇಲ್ಲಿ ಇರಬಹುದು.&lt;br /&gt;ಇದಕ್ಕೆ ಉತ್ತರ : “ಬಲ್ಲರು ಯಾರಾ?”&lt;br /&gt;&lt;br /&gt;ಇಂತಹ ಹಕ್ಕಿ ಹಾರುತ್ತಿರುವದನ್ನು ನೀವು ನೋಡಿದಿರಾ?&lt;br /&gt;ಬಹುಶ: ಈ ಕಾಣ್ಕೆ, ಈ ನೋಟ ವರಕವಿಗೆ ಮಾತ್ರ ಸಾಧ್ಯ!&lt;br /&gt;&lt;br /&gt;&lt;span style="font-weight:bold;"&gt;ಈ ಕವನದ ಕೆಲವು ವೈಶಿಷ್ಟ್ಯಗಳು:&lt;/span&gt;&lt;br /&gt;ಈ ಕವನವನ್ನು ಓದಿದಾಗ ಮೂಡುವ ಭಾವನೆ ಎಂದರೆ ಬೆರಗು. &lt;br /&gt;ವಿಸ್ಮಯರಸವೇ ಈ ಕವನದ ಪ್ರಧಾನ ರಸ. ಈ ರಸವನ್ನು  ಬೇಂದ್ರೆಯವರು ಹೇಗೆ ಸಾಧಿಸಿದ್ದಾರೆ?&lt;br /&gt;ಕವನದ ಪ್ರತಿಯೊಂದು ನುಡಿಯ ಕೊನೆಯ ಸಾಲು  “ಹಕ್ಕಿ ಹಾರುತಿದೆ ನೋಡಿದಿರಾ?”  ಎಂದಾಗಿರುವದನ್ನು ನೀವು ಗಮನಿಸಿರಬಹುದು. ಕವನದ ಏಳೂ ನುಡಿಗಳಲ್ಲಿ ಇದು repeat ಆಗಿದೆ. ಆಗಸದಲ್ಲಿ ಹಾರುವ ಹಕ್ಕಿಯೊಂದನ್ನು ನೋಡಿದ ಹುಡುಗನೊಬ್ಬ ಬೆರಗುಪಟ್ಟು ತನ್ನ ಗೆಳೆಯನೊಬ್ಬನಿಗೆ ಆ ಹಕ್ಕಿಯನ್ನು ತೋರಿಸುತ್ತ, ಬಣ್ಣಿಸುತ್ತ, ಪದೇ ಪದೇ ಉದ್ಗರಿಸುವ ಪ್ರಶ್ನೆಯಂತಿದೆ ಈ ಸಾಲು. ಆ ಹುಡುಗನ ಬೆರಗು ಅವನ ಗೆಳೆಯನಿಗೂ ಸಹ ಹಬ್ಬುತ್ತದೆ. &lt;br /&gt;ಇದು ಬೇಂದ್ರೆಯವರು ವಿಸ್ಮಯರಸವನ್ನು ಈ ಕವನದಲ್ಲಿ ಸಾಧಿಸಿದ ವಿಧಾನ.&lt;br /&gt;&lt;br /&gt;ಕವನಕ್ಕೆ ಅವಶ್ಯವಾದ ಛಂದಸ್ಸನ್ನು ಆಯ್ಕೆ ಮಾಡುವದು, ಕವನದಲ್ಲಿ ಲಯವನ್ನು ಸಾಧಿಸುವದು ಇವು ಬೇಂದ್ರೆಯವರ ಸಹಜಸಿದ್ಧಿಗಳು. ಈ ಕವನದ ನುಡಿಗಳಲ್ಲಿ ಐದು ಸಾಲುಗಳಿವೆ. ಕವನದಲ್ಲಿ ನಾಲ್ಕು ಸಾಲುಗಳಿರುವದು ಸಹಜ. ದಾಸರ ಹಾಡುಗಳಿಂದ ಹಿಡಿದು, ನವೋದಯದ ಭಾವಗೀತೆಗಳವರೆಗೆ, ಕನ್ನಡದ ಕವನಗಳು ಬಹುತೇಕವಾಗಿ ಚೌಪದಿಗಳೇ ಆಗಿವೆ. ನಡುಗನ್ನಡದ ಕವಿಗಳು ಷಟ್ಪದಿಗಳನ್ನು ರಚಿಸಿದ್ದಾರೆ ನಿಜ, ಆದರೆ ಅವೂ ಸಹ ಚೌಪದಿಗಳೇ. ಉದಾಹರಣೆಗೆ ಚಾಮರಸನ ಪ್ರಭುಲಿಂಗಲೀಲೆಯ ಈ ಪದ್ಯವನ್ನು ಗಮನಿಸಿರಿ:&lt;br /&gt;&lt;br /&gt;ಹಿಡಿಹಿಡಿದುಕೊಂಡರ್ತಿಯಲಿ ಬೆಂ-&lt;br /&gt;ಬಿಡದೆ ಶಿಕ್ಷಾಚಾರ್ಯತನದಲಿ&lt;br /&gt;ಜಡಿದು, ಜಂಕಿಸಿ, ಮುದ್ದುತನ ಮಿಗೆ ಮಾಯೆ ತನ್ನಂತೆ|&lt;br /&gt;ನಡೆಯಕಲಿಸಿದಳಂಚೆವಿಂಡಿಗೆ&lt;br /&gt;ನುಡಿಯಕಲಿಸಿದರಗಿಳಿಗೆ&lt;br /&gt;ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ||&lt;br /&gt;&lt;br /&gt;ಭಾಮಿನೀಷಟ್ಪದಿಯ ಈ ನುಡಿಯನ್ನು ಹೀಗೂ ಬರೆಯಬಹುದು:&lt;br /&gt;“ ಹಿಡಿಹಿಡಿದುಕೊಂಡರ್ತಿಯಲಿ, ಬೆಂಬಿಡದೆ ಶಿಕ್ಷಾಚಾರ್ಯತನದಲಿ&lt;br /&gt;ಜಡಿದು ಜಂಕಿಸಿ, ಮುದ್ದುತನ ಮಿಗೆ ಮಾಯೆ ತನ್ನಂತೆ|&lt;br /&gt;ನಡೆಯಕಲಿಸಿದಳಂಚೆವಿಂಡಿಗೆ, ನುಡಿಯಕಲಿಸಿದರಗಿಳಿಗೆ&lt;br /&gt;ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ ”||&lt;br /&gt;ಇದೀಗ ಚೌಪದಿಯಾಯಿತು!&lt;br /&gt;&lt;br /&gt;ಹೀಗಿರುವಾಗ, ಬೇಂದ್ರೆಯವರು ಕವನವನ್ನು ಚೌಪದಿಯನ್ನಾಗಿ ಬರೆಯದೆ, ಪ್ರತಿಯೊಂದು ನುಡಿಗೂ ಐದನೆಯ ಸಾಲೊಂದನ್ನು ಜೋಡಿಸಿದ್ದಾರೆ. ಐದನೆಯ ಸಾಲಿನಲ್ಲಿ ವಿಸ್ಮಯವನ್ನು ಸೂಚಿಸುವ Recurring Lineಅನ್ನು ಇಟ್ಟಿದ್ದಾರೆ.&lt;br /&gt;ಹೀಗೆ ಮಾಡುವಾಗ ಕಾವ್ಯದ ಲಯವು ಕೈತಪ್ಪಿ ಹೋಗಬೇಕು. ಆದರೆ ಏಳು ನುಡಿಗಳ ಈ ಕವನದಲ್ಲಿ ಮೊದಲ ಸಾಲಿನಿಂದ ಕೊನೆಯ ಸಾಲಿನವರೆಗೂ ಕಾವ್ಯದಲಯವು ಸಮಪ್ರವಾಹದಲ್ಲಿ ಹರಿದಿದೆ.&lt;br /&gt;&lt;br /&gt;“ಪಾತರಗಿತ್ತಿ ಪಕ್ಕ”ದಲ್ಲಿ ಪುಟ್ಟ ಸಾಲುಗಳ ಮೂಲಕ, ಎರಡೇ ಸಾಲುಗಳ ನುಡಿಯ ಮೂಲಕ, ದೀರ್ಘವಾಗಿರುವ ಇಡೀ ಕವನವನ್ನೇ ಚಿಕ್ಕ ಚಿಟ್ಟೆಯನ್ನಾಗಿ ಪರಿವರ್ತಿಸಿದ ಕವಿ, ಇಲ್ಲಿ ಚೌಪದಿಯ ಬಂಧವನ್ನು ಕಿತ್ತೊಗೆದು, ಕಾವ್ಯದಲಯವನ್ನು ಹಿಡಿತದಲ್ಲಿ ಇಟ್ಟುಕೊಂಡೇ ಕಾಲಪಕ್ಷಿಯ ವಿಶಾಲತೆಯನ್ನು  ಓದುಗನ ಅನುಭವಕ್ಕೆ ತರುತ್ತಾರೆ.&lt;br /&gt;&lt;br /&gt;ಇನ್ನು ಬೇಂದ್ರೆಯವರ ಕವನಗಳ ಇತರ ಲಕ್ಷಣಗಳು ಈ ಕವನದಲ್ಲೂ ಕಾಣುತ್ತವೆ.&lt;br /&gt;ವಾಸ್ತವತೆಯನ್ನು ಚಮತ್ಕಾರಿಕವಾಗಿ ಬಳಸುವ ಅವರ ಪ್ರತಿಭೆಯನ್ನು ಇಲ್ಲೂ ಕಾಣಬಹುದು. ಉದಾಹರಣೆಗೆ ‘ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಎನ್ನುವಾಗಿನ ಕಾಲಮಾನದ ವಾಸ್ತವತೆಯನ್ನು ಗಮನಿಸಬಹುದು. &lt;br /&gt;&lt;br /&gt;ಬೇಂದ್ರೆಯವರ ಕವನಗಳಲ್ಲಿ ಬರುವ ಪ್ರತೀಕಗಳು ಸಂಕೀರ್ಣವಾಗಿರುತ್ತವೆ. ಕಾಲಪಕ್ಷಿಯ ಪುಚ್ಚ ಹಾಗೂ ಗರಿಗಳ ಪ್ರತೀಕವನ್ನು ಉದಾಹರಣೆಯಾಗಿ ಗಮನಿಸಬಹುದು. &lt;br /&gt;&lt;br /&gt;ಬೇಂದ್ರೆಯವರ ಕಲ್ಪನೆ ಅಗಾಧವಾದದ್ದು. ಕಾಲಪಕ್ಷಿಯ ವರ್ಣನೆ, ಅದರ ಆಹಾರ,ಅದರ ಕಾರ್ಯಸೂಚಿಯನ್ನು ಬೇಂದ್ರೆಯವರು ಹೆಣೆದ ಪರಿಯನ್ನು ಗಮನಿಸಿದರೆ, ಅವರ ಕಲ್ಪನಾಸಾಮರ್ಥ್ಯದ ಅರಿವಾಗುವದು. ಇಂತಹ ಅಪಾರ ಕಲ್ಪನೆಯನ್ನು systematic ಆಗಿ ಹೆಣೆಯುತ್ತ, ಕವನದ focus ಅನ್ನು ಕಾಯ್ದುಕೊಂಡು ಹೋಗುವದು ಪ್ರತಿಭಾವಂತ ಕವಿಗೇ ಸಾಧ್ಯ. &lt;br /&gt;&lt;br /&gt;ಇಷ್ಟೆಲ್ಲ ಗುಣಗಳಿದ್ದ ಈ ಕವನದಲ್ಲಿ ದೋಷಗಳೂ ಇವೆ.&lt;br /&gt;ಓದುಗನಲ್ಲಿ ಕಾಲಪಕ್ಷಿಯ ಬಗೆಗೆ ಬೆರಗು ಹುಟ್ಟುತ್ತದೆಯೇ ಹೊರತು, ಕಾಲಪಕ್ಷಿಯ ಪ್ರಧಾನಗುಣವಾದ powerಅನ್ನು  ಆತ ಅನುಭವಿಸುವದಿಲ್ಲ. ಕಾಲಪಕ್ಷಿಯ powerಅನ್ನು ತಿಳಿಸಲು, ಬೇಂದ್ರೆ ಮೂರು-ನಾಲ್ಕು ನುಡಿಗಳನ್ನು ಬರೆದಿದ್ದಾರೆ. ಆದರೆ ಈ ಸಾಲುಗಳು ಕೇವಲ ವಾಚ್ಯವಾಗಿವೆ. ಕಾಲಪಕ್ಷಿಯ ಶಕ್ತಿ ಓದುಗನ ಅನುಭವಕ್ಕೆ ಬರುವದಿಲ್ಲ. &lt;br /&gt;&lt;br /&gt;ಶಂಕರಾಚಾರ್ಯರು ತಮ್ಮ ಸ್ತೋತ್ರವೊಂದರಲ್ಲಿ ಕಾಲದ ಮಹಿಮೆಯನ್ನು ಹೀಗೆ ಬಣ್ಣಿಸಿದ್ದಾರೆ:&lt;br /&gt;“ಕಾಲೋ ಜಗದ್ ಭಕ್ಷಕ:” (=Time swallows universes.)&lt;br /&gt;ಈ ಒಂದು ಸಾಲಿನಲ್ಲಿ ಅನುಭವಕ್ಕೆ ಬರುವ ಕಾಲದ ಶಕ್ತಿಯು, ಬೇಂದ್ರೆಯವರ ೩೫ ಸಾಲುಗಳಲ್ಲಿ ಬರುವದಿಲ್ಲವೆನ್ನುವದು ಕವನದ ಕಳಾಹೀನತೆಯ ನಿದರ್ಶನವಾಗಿದೆ.&lt;br /&gt;&lt;br /&gt;ಹೀಗಾಗಿ ಬೇಂದ್ರೆಯವರ ಈ ಕವನವು ಉತ್ತಮ ಲಕ್ಷಣಗಳಿದ್ದರೂ ಸಹ ರಸಸೃಷ್ಟಿಯಲ್ಲಿ ಸೋತಿದೆ ಎಂದು ಹೇಳಬೇಕಾಗುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-3549631104640483530?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/3549631104640483530/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=3549631104640483530' title='32 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/3549631104640483530'/><link rel='self' type='application/atom+xml' href='http://www.blogger.com/feeds/5939841257923965225/posts/default/3549631104640483530'/><link rel='alternate' type='text/html' href='http://sallaap.blogspot.com/2009/06/blog-post_24.html' title='‘ಹಕ್ಕಿ ಹಾರುತಿದೆ ನೋಡಿದಿರಾ?’'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>32</thr:total></entry><entry><id>tag:blogger.com,1999:blog-5939841257923965225.post-4326439614207485883</id><published>2009-06-13T18:37:00.004+05:30</published><updated>2009-06-13T18:53:59.635+05:30</updated><title type='text'>ಸೋರುತಿಹದು ಮನಿಯ ಮಾಳಿಗಿ</title><content type='html'>ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವ  ಸಾಧಕರು, ತಾವು ಈ ದರ್ಶನಕ್ಕೆ ಅರ್ಹರೊ ಎಂದು ತಮ್ಮನ್ನೆ ಪರೀಕ್ಷಿಸಿಕೊಳ್ಳುವದು ಸಹಜ. ಕನ್ನಡ ನಾಡಿನಲ್ಲಿ ಬಾಳಿದ, ಇಲ್ಲಿಯ ನಾಡಿಗರ ಮನಸ್ಸನ್ನು ಬೆಳಗಿದ ಇಬ್ಬರು ಅನುಭಾವಿಗಳಾದ ಬಸವಣ್ಣ ಹಾಗೂ ಶರೀಫರು ಇಂತಹ ಭಾವನೆಗಳನ್ನು ತಮ್ಮ ವಚನ ಹಾಗೂ ಹಾಡಿನಲ್ಲಿ ವ್ಯಕ್ತಪಡಿಸಿದ್ದಾರೆ.&lt;br /&gt;&lt;br /&gt;ಇವರಲ್ಲಿ ಮೊದಲಿಗರಾದ ಬಸವಣ್ಣನವರ ವಚನವನ್ನೇ ಗಮನಿಸಿರಿ:&lt;br /&gt;&lt;br /&gt;“ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?&lt;br /&gt;ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,&lt;br /&gt;ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?&lt;br /&gt;ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ&lt;br /&gt;ಮನೆಯೊಳಗೆ ಮನೆಯೊಡೆಯನಿಲ್ಲಾ&lt;br /&gt;ಕೂಡಲಸಂಗಮ ದೇವಾ!”&lt;br /&gt;&lt;br /&gt;ಬಸವಣ್ಣನವರು ತಮ್ಮ ತನು ಹಾಗೂ ಮನವನ್ನು ಮನೆಗೆ ಹೋಲಿಸಿ, ಈ ಮನೆಯಲ್ಲಿ ಕೇವಲ ಕಸ ಕಡ್ಡಿ ತುಂಬಿಕೊಂಡಿದೆ; ಈ ಮನೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಒಡೆಯನು  ಇಲ್ಲವಲ್ಲ ಎಂದು ವಿಷಾದಿಸುತ್ತಾರೆ. ಮನೆಯನ್ನು ಸ್ವಚ್ಛಗೊಳಿಸುವ ಒಡೆಯ ಅಂದರೆ ತಿಳಿವನ್ನು ಪಡೆದ ಆತ್ಮ ಅಥವಾ ಪರಮಾತ್ಮ.&lt;br /&gt;&lt;br /&gt;ಇದರಂತೆಯೆ, ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಬಾಳಿದ ಶರೀಫರು ಸಹ ಮನೆಯನ್ನು ಮನಸ್ಸಿಗೆ ಅಥವಾ Selfಗೆ ಹೋಲಿಸಿ ಹಾಡಿದ್ದಾರೆ. ಶರೀಫರ ಹಾಡು ಹೀಗಿದೆ:&lt;br /&gt;&lt;br /&gt;ಸೋರುತಿಹದು ಮನಿಯ ಮಾಳಿಗಿ, ಅಜ್ಞಾನದಿಂದ&lt;br /&gt;ಸೋರುತಿಹದು ಮನಿಯ ಮಾಳಿಗಿ  ||ಪಲ್ಲ||&lt;br /&gt;&lt;br /&gt;ಸೋರುತಿಹದು ಮನಿಯ ಮಾಳಿಗಿ&lt;br /&gt;ದಾರುಗಟ್ಟಿ ಮಾಳ್ಪರಿಲ್ಲ&lt;br /&gt;ಕಾಳಕತ್ತಲೆಯೊಳಗೆ ನಾನು&lt;br /&gt;ಮೇಲಕೇರಿ ಮೆಟ್ಟಲಾರೆ  ||೧||&lt;br /&gt;&lt;br /&gt;ಮುರುಕು ತೊಲೆಯು ಹುಳುಕು ಜಂತಿ&lt;br /&gt;ಕೊರೆದು ಸರಿದು ಕೀಲ ಸಡಲಿ&lt;br /&gt;ಹರಕ ಚಪ್ಪರ ಜೇರು ಗಿಂಡಿ&lt;br /&gt;ಮೇಲಕೇರಿ ಮೆಟ್ಟಲಾರೆ  ||೨||&lt;br /&gt;&lt;br /&gt;ಕರಕಿ ಹುಲ್ಲು ಕಸವು ಹತ್ತಿ&lt;br /&gt;ದುರಿತ ಭವದಿ ಇರಬಿ ಮುತ್ತಿ&lt;br /&gt;ಜಲದಿ ಭರದಿ ತಿಳಿಯ ಮಣ್ಣು&lt;br /&gt;ಒಳಗೆ ಹೊರಗೆ ಏಕವಾಗಿ ||೩||&lt;br /&gt;&lt;br /&gt;ಕಾಂತೆ ಕೇಳೆ ಕರುಣದಿಂದ&lt;br /&gt;ಬಂತೆ ಕಾಣೆ ಹುಬ್ಬಿ ಮಳೆಯು&lt;br /&gt;ಈಗ ಶಿಶುವಿನಾಳ ಗ್ರಾಮಕ&lt;br /&gt;ಮೇಘರಾಜ ಒಲಿದು ಬಂದ ||೪||&lt;br /&gt;&lt;br /&gt;ಶರೀಫರು ಜೀವಿಸಿದ್ದ ಬೆಳವಲ ನಾಡಿನಲ್ಲಿ ಮಳೆ ಕಡಿಮೆ. ಆದುದರಿಂದ ಮನೆಯ ಮೇಲ್ಭಾಗವು (roof) ಮಣ್ಣಿನದಾಗಿರುತ್ತಿತ್ತು. ಇದಕ್ಕೆ ಮೇಲ್ಮುದ್ದಿಯ ಮನೆ ಎಂದು ಹೇಳುತ್ತಾರೆ. ಈ ಮೇಲ್ಮುದ್ದಿಗೆ ಆಧಾರ ಎಂದು ಕೆಳಭಾಗದಲ್ಲಿ ಕಟ್ಟಿಗೆಯ ತೊಲೆ ಹಾಗೂ ಜಂತಿಗಳನ್ನು ಬಳಸಿರುತ್ತಾರೆ.&lt;br /&gt;ಮಣ್ಣಿನ ಮೇಲ್ಮುದ್ದಿಯಾಗಿರುವದರಿಂದ, ಇಲ್ಲಿ ಹುಲ್ಲು ಬೆಳೆಯುವದು ಸ್ವಾಭಾವಿಕ. ತೇವಾಂಶದಿಂದಾಗಿ ತೊಲೆ ಹಾಗೂ ಜಂತಿಗಳು ಕೆಡುವದೂ ಸಹ ಸ್ವಾಭಾವಿಕ. ಇದರಿಂದಾಗಿ ಮನೆಯ ಮಾಳಿಗೆ ಸೋರಲು ಪ್ರಾರಂಭವಾಗುತ್ತದೆ.&lt;br /&gt;ಈ ಮೇಲ್ಮುದ್ದಿಯನ್ನು ಮಳೆಗಾಲಕ್ಕಿಂತ ಮೊದಲೇ ದುರಸ್ತು ಮಾಡಬೇಕಾಗುತ್ತದೆ.&lt;br /&gt;&lt;br /&gt;ಈ ಹಾಡಿನಲ್ಲಿ ಶರೀಫರು ತಮ್ಮ self ಅಥವಾ ಮನಸ್ಸನ್ನು ಒಂದು ಮನೆಗೆ ಹೋಲಿಸಿ ಹಾಡಿದ್ದಾರೆ. ಈ ಮನೆಯ ಮಾಳಿಗೆ ಗಟ್ಟಿಯಾಗಿ ಉಳಿದಿಲ್ಲ, ಅದೀಗ ಸೋರುತ್ತಿದೆ. ಸೋರುವಿಕೆಗೆ ಅಜ್ಞಾನವೇ ಕಾರಣವೆಂದು ಶರೀಫರು ಮೊದಲಿನಲ್ಲಿಯೇ ಸಾರಿ ಬಿಡುತ್ತಾರೆ. ಈ ಅಜ್ಞಾನದ ಸ್ವರೂಪವೇನು? ಆತ್ಮಜ್ಞಾನವಿಲ್ಲದಿರುವದೇ ಅಜ್ಞಾನ! ಸೋರುವಿಕೆ ಎಂದರೇನು? ಮನೆಯನ್ನು ಸ್ವಚ್ಛವಾಗಿರಿಸಲು ಸಾಧ್ಯವಿಲ್ಲದಂತೆ, ಹೊರಗಿನ ಕಸಕಡ್ಡಿ, ಹುಳಹುಪ್ಪಡಿ ಇವೆಲ್ಲ ಮನೆಯ ಒಳಗೆ ಪ್ರವೇಶ ಪಡೆಯುವದು ಅಂದರೆ ವಿಕಾರಗಳು ಮನಸ್ಸನ್ನು ಪ್ರವೇಸಿಸುವದು.&lt;br /&gt;&lt;br /&gt;ಹಾಗಾದರೆ, ಈ ಮಾಳಿಗೆಯನ್ನು ಸರಿಪಡಿಸಲು ಶರೀಫರಿಗೆ ಇರುವ ತೊಂದರೆ ಏನು? ಈ ಹಾಡಿನ ಮೊದಲನೆಯ ನುಡಿಯಲ್ಲಿ ಶರೀಫರು ತಮ್ಮ ಅಸಹಾಯಕತೆಯನ್ನು ವಿವರಿಸಿದ್ದಾರೆ:&lt;br /&gt;&lt;br /&gt;ಸೋರುತಿಹದು ಮನಿಯ ಮಾಳಿಗಿ&lt;br /&gt;ದಾರುಗಟ್ಟಿ ಮಾಳ್ಪರಿಲ್ಲ&lt;br /&gt;ಕಾಳಕತ್ತಲೆಯೊಳಗೆ ನಾನು&lt;br /&gt;ಮೇಲಕೇರಿ ಮೆಟ್ಟಲಾರೆ ||&lt;br /&gt;&lt;br /&gt;ಸೋರುತ್ತಿರುವ ಮನೆಯ ಮಾಳಿಗೆಯ ದಾರು(=ಮರ=timber)ಅನ್ನು ಗಟ್ಟಿ ಮಾಡುವವರು ಯಾರೂ ಇಲ್ಲ. ಮನೆಯನ್ನು ಕಾಳಕತ್ತಲೆಯು ಆವರಿಸಿರುವದರಿಂದ, ಮೆಟ್ಟಲು ಹತ್ತಿ, ಮಾಳಿಗೆಯನ್ನು ಏರಲು ಶರೀಫರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಇವರು ಮೇಲೆ ಏರುವದು ಹೇಗೆ? ಮೇಲ್ಮುದ್ದಿಯ ತೊಲೆ ಹಾಗೂ ಜಂತಿಗಳನ್ನು ಸರಿಪಡಿಸುವದು ಹೇಗೆ? &lt;br /&gt;&lt;br /&gt;ಎರಡನೆಯ ನುಡಿಯಲ್ಲಿ ಶರೀಫರು ಈ ಮಾಳಿಗೆಯು ಎಷ್ಟರಮಟ್ಟಿಗೆ ನಾದುರಸ್ತ ಆಗಿದೆ ಎನ್ನುವದನ್ನು ವರ್ಣಿಸಿದ್ದಾರೆ:&lt;br /&gt;&lt;br /&gt;ಮುರುಕು ತೊಲೆಯು ಹುಳುಕು ಜಂತಿ&lt;br /&gt;ಕೊರೆದು ಸರಿದು ಕೀಲ ಸಡಲಿ&lt;br /&gt;ಹರಕ ಚಪ್ಪರ ಜೇರು ಗಿಂಡಿ&lt;br /&gt;ಮೇಲಕೇರಿ ಮೆಟ್ಟಲಾರೆ  ||&lt;br /&gt;&lt;br /&gt;ಈ ಮನೆಯ ಮಾಳಿಗೆಯ ತೊಲೆ ಮುರಿದಿದೆ; ಜಂತಿಗೆ ಹುಳುಕು ಹತ್ತಿದೆ; ಹುಳ ಕೊರೆದದ್ದರಿಂದ ಜಂತಿ ಹಾಗೂ ತೊಲೆಗಳನ್ನು ಜೋಡಿಸುವ ಕೀಲಗಳು ಸಡಿಲುಗೊಂಡಿವೆ.ಅವುಗಳ ಮೇಲೆ ಹೊದಿಸಿದ ಚಪ್ಪರ ಹರಿದಿದೆ. ಬೆಳಕು ಬರಲೆಂದು ನಿರ್ಮಿಸಲಾದ ಜೀರುಗಿಂಡಿಯು (=ಸಣ್ಣ ಬೆಳಕಿಂಡಿಯು) ಹಾಳಾಗಿ ಹೋಗಿದೆ. ಅರ್ಥಾತ್ ಮಾಳಿಗೆ ಪೂರ್ಣವಾಗಿ ನಾದುರಸ್ತ ಆಗಿದೆ. &lt;br /&gt;ಮಾಳಿಗೆಯ ಸಂಕೇತದ ಮೂಲಕ ಶರೀಫರು ತಮ್ಮ ಮನಸ್ಸೂ ಸಹ ಈ ಮಾಳಿಗೆಯಂತೆ ನಾದುರಸ್ತ ಆಗಿದೆ. ತಮ್ಮ ಮನಸ್ಸಿಗೆ ಬೆಳಕನ್ನು ಕೊಡುವ ಬೆಳಕಿಂಡಿ ಹಾಳಾಗಿ ಹೋಗಿದ್ದರಿಂದ ಒಳಗೆಲ್ಲ ಕತ್ತಲೆ ಕವಿದಿದೆ ಎಂದು ಹೇಳುತ್ತಿದ್ದಾರೆ. ಆದರೇನು, ಶರೀಫರಿಗೆ ದುರಸ್ತಿಗಾಗಿ ಮೇಲಕ್ಕೆ ಹತ್ತುವದೇ ಅಸಾಧ್ಯವಾಗಿದೆ. &lt;br /&gt;ಈ ರೀತಿಯಾಗಿ ಮಾಳಿಗೆಯು ನಾದುರಸ್ತ ಆಗಿದ್ದರ ಪರಿಣಾಮವೇನು ಎನ್ನುವದನ್ನು ಶರೀಫರು ಮೂರನೆಯ ನುಡಿಯಲ್ಲಿ ಹೀಗೆ ವರ್ಣಿಸಿದ್ದಾರೆ:&lt;br /&gt;&lt;br /&gt;ಕರಕಿ ಹುಲ್ಲು ಕಸವು ಹತ್ತಿ&lt;br /&gt;ದುರಿತ ಭವದಿ ಇರಬಿ ಮುತ್ತಿ&lt;br /&gt;ಜಲದಿ ಭರದಿ ತಿಳಿಯ ಮಣ್ಣು&lt;br /&gt;ಒಳಗೆ ಹೊರಗೆ ಏಕವಾಗಿ ||&lt;br /&gt;&lt;br /&gt;ಮೇಲ್ಮುದ್ದಿಯು ಕೆಟ್ಟು ಹೋಗಿ, ತೇವಾಂಶ ಜಾಸ್ತಿಯಾಗಿದ್ದರಿಂದ ಅಲ್ಲಿ ಕರಕಿ ಹುಲ್ಲು ಬೆಳೆದು ಬಿಟ್ಟಿದೆ. ಕರಕಿಯು ಬಹಳ ಗಟ್ಟಿಯಾದ ಹುಲ್ಲಿನ ಜಾತಿ. ಎಷ್ಟು ಕಿತ್ತಿ ಒಗೆದರೂ ನಿರ್ಮೂಲವಾಗುವದಿಲ್ಲ. ಅದೇ ರೀತಿಯಾಗಿ, ಶರೀಫರ ಮನಸ್ಸಿನಲ್ಲಿಯೂ ಸಹ ವಿಷಯಗಳೆಂಬ ವಿಕಾರಗಳು ಕರಕಿ ಹುಲ್ಲಿನಂತೆ ಗಟ್ಟಿಯಾಗಿ ಬೆಳೆದು ನಿಂತಿವೆ. (‘ಕಸವು ಹತ್ತಿ’ ಎನ್ನುವದನ್ನು ‘ಗಟ್ಟಿಯಾಗಿ’ ಅಥವಾ ‘ಕಸಕಡ್ಡಿ ಬೆಳೆದು’ ಎನ್ನುವ ಎರಡೂ ಅರ್ಥಗಳಲ್ಲಿ ತಿಳಿಯಬಹುದು.) ಇಂತಹ ವಿಕಾರಗಳು ಇದ್ದಲ್ಲಿ ಈ ಭವದ ದುರಿತಗಳು ಅಂದರೆ ಸಂಸಾರದ ಕೇಡುಗಳು, ಇರುವೆಗಳು ಮುತ್ತಿಕೊಳ್ಳುವಂತೆ ಮುತ್ತಿಕೊಳ್ಳುತ್ತವೆ. ಕಸವನ್ನು ತೆಗೆದು ಹಾಕದ ಹೊರತು, ಇರುವೆಗಳು ಹೋಗುವದಿಲ್ಲ. ಇರುವೆಗಳು ಮುತ್ತಿದ್ದರಿಂದ ಮೇಲ್ಮುದ್ದಿಯ ಮಣ್ಣೆಲ್ಲ ಏಕರೂಪವಾಗಿ ಬಿಟ್ಟಿದೆ. ಅದೇ ರೀತಿಯಾಗಿ, ಸಂಸಾರದ ಕೇಡುಗಳಿಂದ ಶರೀಫರ ಮನೋದ್ರವ್ಯವೆಲ್ಲ ಏಕರೂಪವಾಗಿ ವಿಕಾರಗೊಂಡಿದೆ.&lt;br /&gt;&lt;br /&gt;ಆದರೆ, ಶರಿಫರು ಎದೆಗುಂದಿಲ್ಲ. ಅವರಿಗೆ ಗುರುಕರುಣೆಯು ಲಭಿಸುವ ಧೈರ್ಯವಿದೆ. ತಮ್ಮ ಗೆಳೆತಿಗೆ ಶರೀಫರು ಈ ಭರವಸೆಯನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ.&lt;br /&gt;&lt;br /&gt;ಕಾಂತೆ ಕೇಳೆ ಕರುಣದಿಂದ&lt;br /&gt;ಬಂತೆ ಕಾಣೆ ಹುಬ್ಬಿ ಮಳೆಯು&lt;br /&gt;ಈಗ ಶಿಶುವಿನಾಳ ಗ್ರಾಮಕ&lt;br /&gt;ಮೇಘರಾಜ ಒಲಿದು ಬಂದ ||&lt;br /&gt;&lt;br /&gt;ಶರೀಫರು ಯಾರಿಗೆ ‘ಕಾಂತೆ’ ಎಂದು ಹೇಳುತ್ತಿದ್ದಾರೆ? ಅವರ ಅನೇಕ ಕವನಗಳು ಈ ಕಾಂತೆಗೆ ಸಂಬೋಧಿತವಾಗಿವೆ. ಕಾಂತೆ ಎಂದರೆ ಆಪ್ತ ಗೆಳತಿ ಎಂದು ತಿಳಿಯಬಹುದು. ತಮ್ಮ ಮನದ ಮಾತುಗಳನ್ನು ಯಾರಿಗೆ ಹೇಳಬಹುದೊ ಅಂತಹ confidante ಈ ಕಾಂತೆ. ತಮ್ಮ ಅಂತರಾತ್ಮಕ್ಕೇ ಶರೀಫರು ಕಾಂತೆ ಎಂದು ಕರೆಯುತ್ತಿದ್ದಾರೆ ಎನ್ನಬಹುದು.&lt;br /&gt;ಹುಬ್ಬಿ ಮಳೆಯು ಶ್ರಾವಣ ಮಾಸದಲ್ಲಿ ಬರುತ್ತದೆ. ಶ್ರಾವಣ ಮಾಸವೆಂದರೆ ಮಳೆ ಧೋಧೋ ಎಂದು ಸುರಿಯುವ ಕಾಲ. ಗುರುಕಾರುಣ್ಯವೂ ಸಹ ಶರೀಫರಿಗೆ ಪೂರ್ಣವಾಗಿ ಒಲಿದು ಬರಲಿದೆ ಎನ್ನುವದರ ಸೂಚನೆಯನ್ನು ಶರೀಫರು ಇಲ್ಲಿ ನೀಡುತ್ತಿದ್ದಾರೆ. ಅದರ ಪೂರ್ವಸೂಚನೆಯಾಗಿ ಶಿಶುವಿನಾಳ ಗ್ರಾಮಕ್ಕೆ ಮೋಡಗಳು ಒಲಿದು ಬಂದಿವೆ ಎಂದು ಶರೀಫರು ಹೇಳುತ್ತಿದ್ದಾರೆ. &lt;br /&gt;&lt;br /&gt;ಈ ರೀತಿಯಾಗಿ ಶರೀಫರ ಈ ಹಾಡು ಸತ್-ವಿಶ್ವಾಸದೊಂದಿಗೆ ಮುಕ್ತಾಯವಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-4326439614207485883?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/4326439614207485883/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=4326439614207485883' title='46 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/4326439614207485883'/><link rel='self' type='application/atom+xml' href='http://www.blogger.com/feeds/5939841257923965225/posts/default/4326439614207485883'/><link rel='alternate' type='text/html' href='http://sallaap.blogspot.com/2009/06/blog-post.html' title='ಸೋರುತಿಹದು ಮನಿಯ ಮಾಳಿಗಿ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>46</thr:total></entry><entry><id>tag:blogger.com,1999:blog-5939841257923965225.post-7391011983326173201</id><published>2009-05-28T18:55:00.008+05:30</published><updated>2009-05-28T19:22:15.899+05:30</updated><title type='text'>ಇವ ನಮ್ಮವ</title><content type='html'>ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣ ಚಳವಳಿಯು ಕರ್ನಾಟಕದ ಇತಿಹಾಸದಲ್ಲಿಯೆ ಅತ್ಯಂತ ಮಹತ್ವದ ಸಾಂಸ್ಕೃತಿಕ ಘಟನೆಯಾಗಿದೆ. ಈ ಘಟನೆಯ ಕೇಂದ್ರವ್ಯಕ್ತಿಗಳಲ್ಲಿ  ಬಸವಣ್ಣನವರು ಅಗ್ರಗಣ್ಯರು. ಬಸವಣ್ಣನವರ ವ್ಯಕ್ತಿತ್ವದಿಂದ ಬೆರಗುಗೊಂಡು, ಪ್ರಭಾವಿತರಾಗಿ ಅವರ ಬಗೆಗೆ ಸಾಹಿತ್ಯ ರಚಿಸಿದವರು ಅನೇಕರು. ಅವರ ಜೀವನಚರಿತ್ರೆಯನ್ನು ಕನ್ನಡದಲ್ಲಿ ರಚಿಸಿದವರಲ್ಲಿ  ಹರಿಹರನು ಮೊದಲಿಗನು. ಆಧುನಿಕರಲ್ಲಿ,  ದ. ರಾ. ಬೇಂದ್ರೆಯವರು ‘ತಲೆದಂಡ’ ಎನ್ನುವ ನಾಟಕವನ್ನು ರಚಿಸಿದರೂ ಸಹ ಅದು ಪ್ರಕಾಶನಗೊಳ್ಳಲಿಲ್ಲ.   ಆಬಳಿಕ ಅ.ನ.ಕೃಷ್ಣರಾಯರು ‘ಜಗಜ್ಯೋತಿ ಬಸವೇಶ್ವರ’ ನಾಟಕವನ್ನು ರಚಿಸಿದರೆ, ಪುಟ್ಟಸ್ವಾಮಿಗಳು ‘ಕಲ್ಯಾಣ ಕ್ರಾಂತಿ’ ಕಾದಂಬರಿಯನ್ನು ಬರೆದರು. ಶರಣ ಚಳುವಳಿಯನ್ನು ಸಾಮಾಜಿಕ ದೃಷ್ಟಿಕೋನದಿಂದ ಅರ್ಥೈಸಲು ಪ್ರಯತ್ನಿಸಿ  ಲಂಕೇಶ ಹಾಗೂ ಶಿವಪ್ರಕಾಶ ಅವರು ‘ಸಂಕ್ರಾಂತಿ’ ಹಾಗು ’ಮಹಾಚೈತ್ರ’ ನಾಟಕಗಳನ್ನು ಬರೆದರು. ಗಿರೀಶ ಕಾರ್ನಾಡರು ತಾವು ರಚಿಸಿದ ನಾಟಕಕ್ಕೆ, ಬೇಂದ್ರೆಯವರ ಅನುಮತಿಯೊಂದಿಗೆ  ’ತಲೆದಂಡ’ ಎನ್ನುವ ಹೆಸರನ್ನೇ ಬಳಸಿಕೊಂಡರು.&lt;br /&gt;&lt;br /&gt;ಶ್ರೀ ವ್ಯಾಸ ದೇಶಪಾಂಡೆಯವರ  “ಇವ ನಮ್ಮವ ” ನಾಟಕವು ಈ ಸರಣಿಯಲ್ಲಿಯೆ ಇತ್ತೀಚಿನ ಆದರೆ ಅತ್ಯಂತ ಭಿನ್ನವಾದ ನಾಟಕ. ೨೦೦೬ನೆಯ ಇಸವಿಯಲ್ಲಿ ರಚಿತವಾದ ಈ ನಾಟಕವು ಈವರೆಗೆ ಅನೇಕ ರಂಗಪ್ರಯೋಗಗಳನ್ನೂ ಕಂಡಿದೆ.&lt;br /&gt;&lt;br /&gt;“ಇವ ನಮ್ಮವ ” ನಾಟಕವು ಕನ್ನಮಾರಿ ಎನ್ನುವ ಕಳ್ಳನೊಬ್ಬನು ಬಸವಣ್ಣನ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿ, ಸಿಕ್ಕಿಬಿದ್ದು, ಆ ಬಳಿಕ ಪರಿವರ್ತನೆಗೊಂಡು ಶರಣನಾದವನ ಕತೆಯನ್ನು ಆಧರಿಸಿದೆ. ಆದರೆ ಇದಿಷ್ಟೇ ಕತೆಯ ಮೂಲಕ ಲೇಖಕರು ಆ ಕಾಲದ ಸಾಮಾಜಿಕ, ಆರ್ಥಿಕ ಹಾಗು ರಾಜಕೀಯ ವಿಶ್ಲೇಷಣೆಯನ್ನು ಸಮಗ್ರವಾಗಿ ಮಾಡಿದ್ದಾರೆ. ಇದಲ್ಲದೆ ಆ ಕಾಲದ ಜನಸಾಮಾನ್ಯರ, ಶರಣಸಂಕುಲದ, ದುಡ್ಡುಳ್ಳವರ ಹಾಗೂ ಆಡಳಿತವರ್ಗದ ಅರ್ಥಪೂರ್ಣ ವಿಶ್ಲೇಷಣೆಯೂ ಇಲ್ಲಿದೆ. (ಆ ವಿಶ್ಲೇಷಣೆಯು ಇಂದಿಗೂ ಹಾಗೂ ಎಂದೆಂದಿಗೂ ನಮ್ಮೆಲ್ಲ ಸಮಾಜಗಳಿಗೆ ಅನ್ವಯಿಸುವಂತಿದೆ!)&lt;br /&gt;&lt;br /&gt;&lt;span style="font-weight:bold;"&gt;ನಾಟಕದ ಪಾತ್ರಗಳು&lt;/span&gt;:&lt;br /&gt;ಕನ್ನಮಾರಿ:&lt;br /&gt;ನಾಟಕವನ್ನು ಮೊದಲಿನಿಂದ ಕೊನೆಯವರೆಗೂ ವ್ಯಾಪಿಸಿಕೊಂಡ ಕನ್ನಮಾರಿಯು ಈ ನಾಟಕದ ಮಹತ್ವದ ಪಾತ್ರ. ಆದರೂ ಆತ ನಾಟಕದ ನಾಯಕನಲ್ಲ. ನಾಟಕದ ಬೆಳವಣಿಗೆಯ ದೃಷ್ಟಿಯಿಂದ ನಾಟಕದ ಪ್ರತಿಯೊಂದು ಚಿಕ್ಕ ಪಾತ್ರವೂ ಇಲ್ಲಿ ಮಹತ್ವದ ಪಾತ್ರವೇ. ಆದರೆ ನಾಟಕದ ನಾಯಕಪಟ್ಟ ಲಭ್ಯವಾಗುವದು ಬಸವಣ್ಣನಿಗೇ.&lt;br /&gt;&lt;br /&gt;ಈವರೆಗೆ, ಕನ್ನಮಾರಿಯು ರಚಿಸಿದ ಮೂರು ವಚನಗಳು ಲಭ್ಯವಾಗಿವೆ. ಆತನ ಎರಡು ವಚನಗಳನ್ನು ಲೇಖಕರು ಈ ನಾಟಕದಲ್ಲಿ ಬಳಸಿಕೊಂಡಿದ್ದಾರೆ. ನಾಟಕದ ಆರಂಭದಲ್ಲಿಯೇ ಕನ್ನಮಾರಿಯು ತನ್ನ ಬಂಟರೊಡನೆ ರಂಗಪ್ರವೇಶ ಮಾಡುತ್ತ, ತನ್ನ ಕನ್ನಗಾರಿಕೆಯನ್ನು ಸಮರ್ಥಿಸುವ ತರ್ಕವನ್ನು ಪ್ರೇಕ್ಷಕಕರ ಎದುರಿಗೆ ಸಾರುತ್ತಾನೆ. ಬಸವಣ್ಣನವರು ಒಂದು ಧ್ರುವವಾದರೆ, ಕನ್ನಮಾರಿಯು ವಿರುದ್ಧ ಧ್ರುವ. ಕನ್ನಮಾರಿಯ ವಿಚಾರ ಹಾಗೂ ತರ್ಕಗಳನ್ನು ಎದುರಿಸುವದು ಸರಳವಲ್ಲ. ಕಲ್ಯಾಣರಾಜ್ಯವನ್ನೇ ಕಳ್ಳರ ರಾಜ್ಯವೆಂದು ಕರೆಯುತ್ತಾನೀತ. &lt;br /&gt;ರಾಜ, ಆತನ ಅಧಿಕಾರಿಗಳು, ಸಮಾಜದ ಶ್ರೇಷ್ಠಿಗಳು ಇವರೆಲ್ಲ ಹಗಲುಗಳ್ಳರು, ಬಲುಗಳ್ಳರು ಎನ್ನುವದು ಇವನ ಅಭಿಪ್ರಾಯ. ಇವರೆಲ್ಲರೂ ದುಡಿಯುವ ಬಡವರನ್ನು ಶೋಷಿಸುತ್ತಾರೆ. ತಾನು ಉಳ್ಳವರ ಸಂಪತ್ತನ್ನು ಇಲ್ಲದವರಲ್ಲಿ ಹಂಚುತ್ತೇನೆ ಎನ್ನುವದು ಇವನ ಸಮರ್ಥನೆ!&lt;br /&gt;ಸಮಾಜದ ವಿವಿಧ ಸ್ತರಗಳ ಜನತೆಯೊಡನೆ ಈತ ಮಾಡುವ ಸಂಭಾಷಣೆ ಹಾಗೂ ಮಂಡಿಸುವ ತರ್ಕಗಳ ಮೂಲಕ ಈತನ ವ್ಯಕ್ತಿತ್ವದ ಅನಾವರಣವಾಗುತ್ತದೆ. ಅನುಭವ ಮಂಟಪದಲ್ಲಿಯ ಶರಣರಿಗೇ ಎದುರಾಡಬಲ್ಲ ಧಾರ್ಷ್ಟ್ಯ ಈತನದು.  &lt;br /&gt;ಕನ್ನಮಾರಿಯ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಬಸವಣ್ಣನವರ ವ್ಯಕ್ತಿತ್ವವು ಬೆಳಗಿದೆ. ಕನ್ನಮಾರಿಗೆ ಗೊತ್ತಿರುವ ತರ್ಕ ಹಾಗೂ ವಿಚಾರವೆಲ್ಲ ಬಸವಣ್ಣನವರಿಗೂ ಗೊತ್ತಿದೆ. ಅವರೂ ಸಹ ಕಲ್ಯಾಣಪ್ರಭುತ್ವವನ್ನು ಕಳ್ಳರ ಪ್ರಭುತ್ವವೆಂದೇ ಕರೆಯುತ್ತಾರೆ. ಆದರೆ ಕೇವಲ  ತರ್ಕದಿಂದ ಸಮಾಜವನ್ನು ಸುಧಾರಿಸಲು ಸಾಧ್ಯವಿಲ್ಲವೆನ್ನುವದು ಅವರಿಗೆ ಗೊತ್ತಿದೆ. &lt;br /&gt;&lt;br /&gt;ನಾಟಕದ ಆರಂಭದಲ್ಲಿ,  ಮೊದಲಿಗೆ ಕನ್ನಮಾರಿಯ ಕೈಯಲ್ಲಿ ಸಿಗುವವರು ಭೋಳೇ ಜಂಗಮರು. ಅವರ ಭೋಳೇತನವನ್ನು ಹಂಗಿಸಿ ಈತ ಮಾತನಾಡುತ್ತಾನೆ. ಅವರೋ ಬಸವಣ್ಣನನ್ನು ಪವಾಡಪುರುಷನೆಂದು ಭಾವಿಸಿದವರು. ವಚನಗಳನ್ನು ಸಾರುವದರ ಮೂಲಕ ಕೆಡುಕರನ್ನು ಸುಧಾರಿಸಬಹುದೆನ್ನುವ ನಂಬಿಕೆ ಇಟ್ಟುಕೊಂಡವರು. ಜಂಗಮವೃತ್ತಿಯನ್ನೇ ಹೊಟ್ಟೆಪಾಡಿನ ಕಾಯಕ ಮಾಡಿಕೊಂಡವರು! ಹಾಗೂ ಪ್ರಸಂಗ ಬಂದಾಗ ಪ್ರಭುತ್ವಕ್ಕೆ ದಂಡನಮಸ್ಕಾರವನ್ನೂ ಹಾಕಬಲ್ಲವರು. &lt;br /&gt;&lt;br /&gt;ತನ್ನನ್ನು ಹುಡುಕುತ್ತಿರುವ ಸೈನಿಕರಿಂದ ತಪ್ಪಿಸಿಕೊಳ್ಳಲು, ಕನ್ನಮಾರಿಯು ಈ ಜಂಗಮರನ್ನೇ ಠಕ್ಕತನದಿಂದ ಕಟ್ಟಿಹಾಕಿ ಅವರೆಲ್ಲರ ವಸ್ತ್ರಭೂಷಣಗಳನ್ನು ಅಪಹರಿಸುವನು. ತಮ್ಮ ಸುರಕ್ಷತೆಯ ಉದ್ದೇಶದಿಂದ ಕನ್ನಮಾರಿ ಹಾಗೂ ಅವನ ಬಂಟರು ಶರಣರ ವೇಷದಲ್ಲಿ ಬಸವಣ್ಣನ ಮಹಾಮನೆಗೆ ತೆರಳುತ್ತಿರುವಾಗ ಅವರಿಗೆ ಭೆಟ್ಟಿಯಾಗುವಳು ಒಬ್ಬ ಹುಲ್ಲು ಹೊರುವ ಹೆಣ್ಣುಮಗಳು. ಸಮಾಜದ ಸಾಂಪ್ರದಾಯಕ ವ್ಯವಸ್ಥೆಯಲ್ಲಿ ತನ್ನ ಕೆಳಸ್ತರವನ್ನು ಒಪ್ಪಿಕೊಂಡು ಬಾಳುತ್ತಿರುವ ಈಕೆ  ಬಸವಣ್ಣ ತನ್ನನ್ನು ಮೇಲೆತ್ತಿದ ರೀತಿಯನ್ನು  ಕನ್ನಮಾರಿಗೆ ಹೇಳಿದಾಗ, ಆತ ಇವರೆಲ್ಲ ಮರಳು ಜನ ಎಂದು   ಅಪಹಾಸ್ಯ ಮಾಡುತ್ತಾನೆ.&lt;br /&gt;&lt;br /&gt;ತನ್ನನ್ನು ಹುಡುಕುತ್ತಿರುವ ಸೈನಿಕರಿಂದ ತಪ್ಪಿಸಿಕೊಳ್ಳಲು ಕನ್ನಮಾರಿ ಬಸವಣ್ಣನ ಮಹಾಮನೆಗೇ ಬರುತ್ತಾನೆ. ಅಲ್ಲಿ ಅನುಭವ ಮಂಟಪದಲ್ಲಿ ಶರಣರು ದೈನಂದಿನ ಚರ್ಚೆಯನ್ನು ನಡೆಸಿರುತ್ತಾರೆ. ಕನ್ನಮಾರಿ ತನ್ನ ತಾರ್ಕಿಕ ಅಹಂಭಾವದಲ್ಲಿ, ಅವರಿಗೆ ಉದ್ಧಟ ಪ್ರಶ್ನೆಗಳನ್ನು ಕೇಳುತ್ತಾನೆ.&lt;br /&gt;ಇದಿಷ್ಟು ಕನ್ನಮಾರಿಯ ಮೊದಲ ವ್ಯಕ್ತಿತ್ವ.&lt;br /&gt;ಇಂತಹ ಕನ್ನಮಾರಿ ಶರಣನಾಗಿ ಪರಿವರ್ತಿತನಾಗುವದು ರೋಚಕವಾದ ಘಟನೆ.&lt;br /&gt;ಕನ್ನಮಾರಿಯ ಮಾತುಗಳಲ್ಲಿಯೇ ಹೇಳುವದಾದರೆ :-&lt;br /&gt;“ ಕಳ್ಳರು ಯಾರು, ಕಳ್ಳರ ಕಳ್ಳರು ಯಾರು, ಬಲುಗಳ್ಳರು ಯಾರಂತ ನಾನು ನಿಮ್ಮ ಮುಂದೆ ಒಗಟು ಇಟ್ಟೆ. ಬಸವೇಶ್ವರ, ಇದು ಕಳ್ಳರ ನಗರ. ಕಳ್ಳರ ನಗರದಲ್ಲಿ ನಾನು ಕಳ್ಳರ ಕಳ್ಳನಾಗಿದ್ದೆ. ಕದೀಲಿಕ್ಕೆ ಬಂದ ನನ್ನನ್ನು ನೀವು ನೆಟ್ಟನೇ ನುಂಗಿ ನಿಮ್ಮ ಹೊಟ್ಟೆಯೊಳಗೆ ಅರಗಿಸಿಕೊಂಡು ಬಿಟ್ರಿ. ನೀವೇ ಬಲುಗಳ್ಳರು!..”&lt;br /&gt;&lt;br /&gt;ಬಿಜ್ಜಳ:&lt;br /&gt;ಬಿಜ್ಜಳನು ಕಲ್ಯಾಣರಾಜ್ಯದ ಪ್ರಭು. ಬಸವಣ್ಣನ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದಾಗಿ ರಾಜ್ಯಾಡಳಿತ ಸುಸೂತ್ರವಾಗಿ ನಡೆಯುತ್ತಿರುವದರಿಂದ ಈತನಿಗೆ ಬಸವಣ್ಣ ಬೇಕು. ಬಸವಣ್ಣ ರಾಜ್ಯದ ಮಂತ್ರಿಯಾಗಿ ಉಳಿಯಲೇ ಬೇಕು. ಅಲ್ಲದೆ ಬಸವಣ್ಣನನ್ನು ಆಡಳಿತದಲ್ಲಿ ಬಲವಂತವಾಗಿ ಇಟ್ಟುಕೊಳ್ಳಲು ಈತನಿಗೆ ಮತ್ತೊಂದು ಕಾರಣವಿದೆ. ಬಸವಣ್ಣನಿಗೇ ಬೇಕಾಗಿರದಿದ್ದರೂ ಸಹ ಆತ ಪ್ರಭುತ್ವಕ್ಕೆ ಹೊರತಾದ ಮತ್ತೊಂದು ಶಕ್ತಿಕೇಂದ್ರವಾಗಿರುವದನ್ನು ಬಿಜ್ಜಳ ಬಲ್ಲ. ಈ ಶಕ್ತಿಕೇಂದ್ರವನ್ನು ಜಾಣತನದಿಂದ ಸಂಭಾಳಿಸುವದು ಪ್ರಭುತ್ವದ ಹಿತದ ದೃಷ್ಟಿಯಿಂದ ಅವಶ್ಯವೆಂದು ಈತ ಅರಿತಿದ್ದಾನೆ. &lt;br /&gt;ಬಸವಣ್ಣನ ಬಗೆಗೆ ಬಿಜ್ಜಳ ಹೇಳುವ ಮಾತುಗಳು ಹೀಗಿವೆ:&lt;br /&gt;“…ಮಾರಾಯಾ ನಿನಗ ಯಾವ ಪದವಿನೂ ಬೇಕಾಗಿಲ್ಲ. ಇದು ನನಗ ಗೊತ್ತೈತಿ. ನಿನಗ ಪದವಿ ಯಾಕ ಬೇಕು? ನೀ ಎಲ್ಲಿ ಹೋಗಿ ನಿಲ್ಲತೀ ಅಲ್ಲಿ ದೀಪ ಬೆಳಗತಾರು; ಎಲ್ಲಿ ಹೋಗಿ ಕುಂದರತೀ ಅಲ್ಲಿ ಕಾಯಿ ಒಡೀತಾರು; ನೀ ಕಾಡು ಹೊಕ್ಕೊಂಡು ಮರದ ಕೆಳಗ ಕುಂತರೂ ಶರಣರ ಸಂತಿ ಅಲ್ಲೇ ನಡೀತೈತಿ….”&lt;br /&gt;&lt;br /&gt;ಬಸವಣ್ಣನನ್ನು ಮನಸಾ ಗೌರವಿಸುತ್ತಿದ್ದರೂ ಸಹ ಬಿಜ್ಜಳನು ಪ್ರಭುತ್ವಕ್ಕೆ ಅವಶ್ಯವಾದ ಕೋರೆಹಲ್ಲು ಹಾಗೂ ಹುಲಿಯುಗುರುಗಳನ್ನು ಬೆಳೆಸಿಕೊಂಡವನೇ. ವ್ಯವಸ್ಥೆಯ ರಕ್ಷಣೆಯ ಉದ್ದೇಶ ಹಾಗೂ ಅದಕ್ಕೆ ಬೇಕಾದ ಕ್ರೌರ್ಯ ಇವು ಬಿಜ್ಜಳನ ವ್ಯಕ್ತಿತ್ವದ  ಭಾಗಗಳಾಗಿವೆ. &lt;br /&gt;ತನ್ನ ದಂಡನಾಯಕ ಮಂಚಣ್ಣನಾಯಕನಿಗೆ ಬಿಜ್ಜಳನ್ನು ಕೊಡುತ್ತಿರುವ ಆದೇಶವನ್ನು ನೋಡಿರಿ:&lt;br /&gt;“…ಮಧ್ಯರಾತ್ರಿಗೆ ಸರಿಯಾಗಿ ನಾಕೂ ಕಡೆಯಿಂದ ಮಹಾಮನಿಗೆ ಮಿಂಚು ಹೊಡಧಾಂಗ ಮುತ್ತಿಗೆ ಹಾಕಬೇಕು……ಹೊರಗಿನ ಸುತ್ತಿನ್ಯಾಗ ಬ್ಯಾಟಿ ನಾಯಿಗಳನ್ನು ಬಿಡಿರಿ, ಬಿಲ್ಲಿನವರನ್ನು ಮರದ ಮ್ಯಾಲ ಏರಸರಿ. ಎರಡು ಕಾಲು ಓಡ್ತಿರೋದು ಕಂಡ್ರ ಸಾಕು, ಬಾಣ ಹೊಡೆದು ಭೂಮಿಗೆ ಬೀಳಿಸತಕ್ಕದ್ದೆಂದು ಕಟ್ಟಪ್ಪಣೆ ಮಾಡ್ರಿ….”&lt;br /&gt;&lt;br /&gt;ಶರಣರು:&lt;br /&gt;ಶರಣರಲ್ಲಿ ಭೋಳೇ ಜನರು ಇದ್ದಂತಯೇ, ಬೌದ್ಧಿಕವಾಗಿ ಹಾಗು ಆಧ್ಯಾತ್ಮಿಕವಾಗಿ ಎತ್ತರದ ಮಟ್ಟವನ್ನು ಏರಿದವರೂ ಇದ್ದರು. ಅನುಭವ ಮಂಟಪದ ನಿರ್ವಾಹಕರೆಂದು ಇವರನ್ನು ಕರೆಯಬಹುದು. ಬಸವಣ್ಣನ ಹೊರತಾಗಿಯೂ, ಶರಣಚಳುವಳಿಯನ್ನು ಸಾರ್ಥಕಗೊಳಿಸಬಲ್ಲ ಸಾಮರ್ಥ್ಯ ಉಳ್ಳವರು. ಶರಣನ ವೇಷದಲ್ಲಿಯ ಕನ್ನಮಾರಿಯ ಉದ್ದಟತನದಿಂದ ಇವರಲ್ಲಿ ಕೆಲವರು ವಿಚಲಿತರಾದರೆ, ಮುಂದಾಳುಗಳು ಮಾತ್ರ ಎಲ್ಲರನ್ನೂ ಶಾಂತ ಮಾಡಬಲ್ಲವರು. &lt;br /&gt;&lt;br /&gt;ಬಸವಣ್ಣ:&lt;br /&gt;ಈಗಾಗಲೇ ರಚಿತವಾದ ಸಾಹಿತ್ಯದಲ್ಲಿ ಬಸವಣ್ಣನು ರಾಜ್ಯದ ಉನ್ನತ ಅಧಿಕಾರಿಯಂತೆ ಕಾಣುವ ವ್ಯಕ್ತಿತ್ವಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ.  ನಾಟಕಗಳಲ್ಲಿಯೂ ಸಹ ಆತ ಮಂತ್ರಿಯ ಪೋಷಾಕನ್ನು ಧರಿಸಿ ರಂಗದ ಮೇಲೆ ಬರುವದೇ ಜನಪ್ರಿಯವಾಗಿದೆ. ಆದರೆ ಈ ನಾಟಕದಲ್ಲಿ ಬಸವಣ್ಣನು ಸಾಮಾನ್ಯರೊಡನೆ ಸಮಾನನಾಗಿ ಇರಬಯಸುವ  ವ್ಯಕ್ತಿ. &lt;br /&gt;&lt;br /&gt;ನಾಟಕದ ಮೊದಲಲ್ಲಿಯೆ  ಆತ ಕೆಳ ಸ್ತರದ ಹೆಣ್ಣುಮಗಳೊಬ್ಬಳಿಗೆ ಹುಲ್ಲು ಹೊರಿಸುವದನ್ನು, ಅವಳೊಡನೆ ಆತ್ಮೀಯವಾಗಿ ಸಂಭಾಷಿಸುವದನ್ನು ಹಾಗೂ ಅವಳಿಗೆ ಲಿಂಗಧಾರಣೆ ಮಾಡುವದನ್ನು flashbackನಲ್ಲಿ ತೋರಿಸಲಾಗಿದೆ.&lt;br /&gt;&lt;br /&gt;ಆನಂತರ ಬಸವಣ್ಣನ ಉಲ್ಲೇಖವಾಗುವದು ಬಿಜ್ಜಳನ ಮಾತುಗಳಲ್ಲಿ:&lt;br /&gt;“ಆತ ಮೊದಲೇ ಮಹಾ ತಲೆತಿರುಕ. …………..ಅಲ್ಲಾ ಮಂತ್ರಿಪದವಿ ಬ್ಯಾಡಾ ಅನ್ನೋ ತಲೆತಿರುಕ ಮತ್ತೊಬ್ಬನದಾನೇನು ಈ ದೇಶದೊಳಗ?”&lt;br /&gt;&lt;br /&gt;ಹುಲ್ಲು ಹೊರುವ ಹೆಣ್ಣುಮಗಳೊಡನೆ ಆತ್ಮೀಯವಾಗಿ ಮಾತನಾಡುವಾಗ, ಕನ್ನಮಾರಿಯ ಪರವಾಗಿ ಶರಣರೊಡನೆ ಮಾತನಾಡುವಾಗ, ಬಿಜ್ಜಳನ ದಂಡನಾಯಕನು ತಂದ ಆದೇಶವನ್ನು ಧಿಕ್ಕರಿಸುವಾಗ, ತನ್ನ ಹೆಂಡತಿಯ ಉಪಾಯಕ್ಕೆ ಅಸಮಾಧಾನ ವ್ಯಕ್ತಪಡಿಸುವಾಗ ಬಸವಣ್ಣನ ವ್ಯಕ್ತಿತ್ವ ಪ್ರೇಕ್ಷಕರೆದುರಿಗೆ ಹೊಳೆಯುತ್ತದೆ.&lt;br /&gt;ಎಲ್ಲಕ್ಕಿಂತಲೂ ಮುಖ್ಯವಾಗಿ, ತನ್ನ ಅಪೂರ್ಣ ವಚನವೊಂದರ ಕೊನೆಯ ಸಾಲನ್ನು ಆತ ತನ್ನ ಹೆಂಡತಿ ಗಂಗಾಂಬಿಕೆಗೆ ಪ್ರೀತಿಯಿಂದ ಪೂರ್ಣಗೊಳಿಸಿ ಹೇಳುವ ಸನ್ನಿವೇಶವು ಬಸವಣ್ಣನ ಆದರ್ಶವನ್ನು ಅತ್ಯಂತ ಸಮರ್ಥ ರೀತಿಯಲ್ಲಿ ತೋರಿಸುತ್ತದೆ ಎನ್ನಬಹುದು.&lt;br /&gt;&lt;br /&gt;&lt;span style="font-weight:bold;"&gt;ನಾಟಕದ ಕಥಾನಕ&lt;/span&gt;:&lt;br /&gt;ನಾಟಕ ಪ್ರಾರಂಭವಾಗುವದು ಬೆಳಗಿನ ಸಮಯದಲ್ಲಿ. ಬಸವಣ್ಣನ ರಂಗಪ್ರವೇಶವಾಗುವದು ಸಂಜೆಯಲ್ಲಿ (flash back ಹೊರತುಪಡಿಸಿ), ಅಂದರೆ ನಾಟಕದ ಕೊನೆಯ ಭಾಗದಲ್ಲಿ. &lt;br /&gt;ಅಲ್ಲಿಯವರೆಗೂ ಕನ್ನಮಾರಿ ಹಾಗೂ ಅವನನ್ನು ಹಿಡಿಯಲೆತ್ನಿಸುತ್ತಿರುವ ಬಿಜ್ಜಳನ  ಸೈನಿಕರೇ ರಂಗವನ್ನು ವ್ಯಾಪಿಸಿದ್ದಾರೆ. &lt;br /&gt;ರಂಗದ ಮೇಲೆ ಪ್ರಾಸಂಗಿಕವಾಗಿ ಕಾಣಿಸಿಕೊಳ್ಳುವ ಸಾಮಾನ್ಯ ಬಹುಜನರು ಪ್ರಭುತ್ವಕ್ಕೆ ಹೆದರುವ, ಪ್ರಭುತ್ವ ಎಸೆಯುವ ರೊಟ್ಟಿಯ ತುಣುಕುಗಳಿಗೆ ಆಸೆ ಪಡುವ ಜನತೆ. ಇವರು ಅನಾದಿ ಕಾಲದಿಂದಲೂ ಹೀಗೇ ಇದ್ದವರು. ಬಸವಣ್ಣನ ಕಾಲದಲ್ಲೂ ಹಾಗೇ ಇದ್ದರು. ಈಗಲೂ ಹಾಗೇ ಇದ್ದಾರೆ. ಅದರಂತೆಯೇ ರಂಗದ ಮೇಲೆ ಕಾಣಿಸಿಕೊಳ್ಳುವ ಶ್ರೇಷ್ಠಿಗಳು ವ್ಯವಸ್ಥೆಯ ಮುಂದುವರಿಕೆಯಲ್ಲಿಯೇ ಆಸಕ್ತಿ ಉಳ್ಳವರು.&lt;br /&gt;&lt;br /&gt;ಕನ್ನಮಾರಿಯು ಅನುಭವ ಮಂಟಪದಲ್ಲಿ ಶರಣರ ಜೊತೆಗೆ ಸೇರಿಕೊಂಡಿರುವದು  ಬಿಜ್ಜಳನ ಗುಪ್ತಚಾರರಿಗೆ ಗೊತ್ತಾಗಲು ತಡವಾಗುವದಿಲ್ಲ. ಮಧ್ಯರಾತ್ರಿಯ ಸಮಯದಲ್ಲಿ ಬಸವಣ್ಣನವರ ಮಹಾಮನೆಗೆ ಸೈನಿಕರು ಮುತ್ತಿಗೆ ಹಾಕುತ್ತಾರೆ. ಕನ್ನಮಾರಿ ತಮ್ಮೊಳಗೇ ಇದ್ದದ್ದು  ಬಸವಣ್ಣನ ಹೆಂಡತಿ ಗಂಗಾಂಬಿಕೆಯ ಅರಿವಿಗೂ ಬಂದಿರುತ್ತದೆ. ಅವನನ್ನು ಹಿಡಿದು ಹಾಕಲು ಗಂಗಾಂಬಿಕೆ ಉಪಾಯವೊಂದನ್ನು ರೂಪಿಸುತ್ತಾಳೆ. ಬಂಗಾರದ ತನ್ನ ಒಡವೆಗಳನ್ನು ಗುಪ್ತವಾಗಿ ನೆಲವಿನಲ್ಲಿ ಇಟ್ಟಿರುವದಾಗಿ ಕನ್ನಮಾರಿಗೆ ನಂಬಿಕೆ ಬರುವಂತೆ ನಟಿಸುತ್ತಾಳೆ. ಕನ್ನಮಾರಿ ಹಾಗೂ ಅವನ ಬಂಟರು ಕಳ್ಳತನ ಮಾಡುತ್ತಿರುವಾಗ ಶರಣರ ಕೈಯಲ್ಲಿ ಸಿಕ್ಕು ಬೀಳುತ್ತಾರೆ.&lt;br /&gt;&lt;br /&gt;ಇಲ್ಲಿಯವರೆಗೆ ಬಸವಣ್ಣ ಎಲ್ಲಿದ್ದ? ಗಂಗಾಂಬಿಕೆಯು ತನ್ನ ಉಪಾಯದ ಅಂಗವಾಗಿ ಬಂಗಾರದ ಒಡವೆಗಳನ್ನು ಧರಿಸಿರುತ್ತಾಳೆ. ತನ್ನ ಹೆಂಡತಿ ಬಂಗಾರ ಧರಿಸಿರುವದು ಬಸವಣ್ಣನಿಗೆ ಸಹ್ಯವಾಗುವದಿಲ್ಲ.  ಆತ ವ್ಯಥಿತನಾಗಿ, ದಾಸೋಹದಲ್ಲಿರುವದನ್ನು ಬಿಟ್ಟು ತನ್ನ ಅರುಹಿನ ಮನೆಗೆ ಹೋಗಿ ಬಿಟ್ಟಿರುತ್ತಾನೆ. ಇದು ಗಂಗಾಂಬಿಕೆಗೆ ಅರ್ಥವಾಗುವದಿಲ್ಲ. ಬೆಳಿಗ್ಗೆ ಒಂದು ವಚನವನ್ನು ಅರ್ಧ ರಚನೆ ಮಾಡಿದವರು ಎಲ್ಲಿ ಹೋದರು? ‘ನೀರಿಗೆ ನೈದಿಲೆಯೆ ಶೃಂಗಾರ…..’ ಎಂದು ಅರ್ಧ ವಚನ ಹೇಳಿದವರು ಆ ವಚನ ಪೂರ್ತಿಗೊಳಿಸಲು ಹೋದರೆ? ಎಂದುಕೊಳ್ಳುತ್ತಾಳೆ. ಆದರೆ ಬಸವಣ್ಣನನ್ನು ಸೂಕ್ಷ್ಮವಾಗಿ ಗಮನಿಸಿದ್ದ ನಾಗವ್ವೆ ಮಾತ್ರ ‘ಶಟಗೊಂಡವರ ಹಂಗ ದುಡುದುಡು ಹೋದಾ…’ ಎನ್ನುತ್ತಾಳೆ.&lt;br /&gt;&lt;br /&gt;ಬಸವಣ್ಣನನ್ನು ಅರುಹಿನ ಮನೆಯಿಂದ ಕರೆದುಕೊಂಡು ಬಂದಾಗ ಕನ್ನಮಾರಿಯನ್ನು ಹಿಡಿದದ್ದಕ್ಕಾಗಿ ಶರಣರೆಲ್ಲ ಸಂತೋಷದಲ್ಲಿ ಮುಳುಗಿದ್ದರು. ಮಹಾಕಳ್ಳ ಕನ್ನಮಾರಿಯನ್ನು ರಾಜನಿಗೆ ಒಪ್ಪಿಸಬೇಕು ಎನ್ನುವದೇ ಎಲ್ಲ ಶರಣರ ಅಭಿಪ್ರಾಯ. ಬಸವಣ್ಣ ಅದಕ್ಕೆ ಒಪ್ಪುವದಿಲ್ಲ. &lt;br /&gt;&lt;br /&gt;ಕನ್ನಮಾರಿಯ ತರ್ಕವನ್ನಾಗಲಿ, ಶರಣರ ತರ್ಕವನ್ನಾಗಲಿ , ಪ್ರಭುತ್ವದ ತರ್ಕವನ್ನಾಗಲಿ ಬಸವಣ್ಣನು ಒಪ್ಪುವವನಲ್ಲ. ಅಷ್ಟೇ ಏಕೆ, ಗಂಗಾಂಬಿಕೆಯ ಸ್ತ್ರೀಧನದ ತರ್ಕವನ್ನೂ ಆತ ಕಡೆಗಣಿಸುತ್ತಾನೆ. ಕನ್ನಮಾರಿಗೆ ಆಶ್ರಯ ಕೊಟ್ಟರೆ ಬಸವಣ್ಣನೂ ಅಪರಾಧಿಯೇ ಆಗುತ್ತಾನೆ ಎನ್ನುವ ಮಾತಿಗೂ ಆತ ಬೆಲೆ ಕೊಡುವದಿಲ್ಲ.ಬಿಜ್ಜಳನ ಸೇನಾಪತಿಗೆ ಬಸವಣ್ಣನು ಹೇಳುವ ಮಾತುಗಳಿವು:&lt;br /&gt;"ದೇಶಕ್ಕೊಂದು ಶಾಸನ ಐತಿ ನಿಜ.ಆದರ ಶಾಸನಕ್ಕಂಜಿ ನನ್ನ ಅಂತರಾತ್ಮ ಒಪ್ಪದಿರುವಂಥಾ ಯಾವ ಕೆಲಸವನ್ನೂ ನಾನು ಮಾಡಲಾರೆ."&lt;br /&gt;&lt;br /&gt;ಕನ್ನಮಾರಿಯ ಜೀವ  ಉಳಿಸಲು ಆತನನ್ನು ತನ್ನ ಅಂದರೆ ಮಂತ್ರಿಯ ಮುತ್ತಿನ ಪಲ್ಲಕ್ಕಿಯಲ್ಲಿ, ಮಂತ್ರಿಯ ಕಿರೀಟ ತೊಡಸಿ, ಗಂಗಾಂಬಿಕೆಯ ಎಲ್ಲ ಒಡವೆಗಳನ್ನೂ ಆತನಿಗೇ ಕೊಟ್ಟು ಆತನನ್ನು ಪಾರು ಮಾಡುತ್ತಾನೆ. &lt;br /&gt;ಆ ಸಮಯದಲ್ಲಿ ಬಸವಣ್ಣನು ಅರ್ಧ ರಚಿಸಿದ ತನ್ನ ವಚನವನ್ನು ಪೂರ್ತಿಗೊಳಿಸಿ ಗಂಗಾಂಬಿಕೆಗೆ ಹೇಳುವ ಭಾಗವು ನಾಟಕದ ಉತ್ತುಂಗಭಾಗವೆನ್ನಬಹುದು.&lt;br /&gt;&lt;br /&gt;ಬಸವಣ್ಣನ ತರ್ಕವು ಬುದ್ಧಿಯಿಂದ ಬಂದದ್ದಲ್ಲ, ಅದು ಆತನ ಹೃದಯದಿಂದ ಹೊಮ್ಮಿದ್ದು ಎನ್ನುವದು ಇತರರಿಗೆಲ್ಲ ಆಗ ಅರ್ಥವಾಗುತ್ತದೆ. ಬಸವಣ್ಣ ಬಯಸುವ ಸಮಾಜದ ಆದರ್ಶವೂ ಆ ವಚನದಿಂದಲೇ ಅರಿವಾಗುತ್ತದೆ.&lt;br /&gt;&lt;br /&gt;ನಾಟಕದ ಕೊನೆಯ ದೃಶ್ಯದಲ್ಲಿ ಬಿಜ್ಜಳನ ದಂಡನಾಯಕನು ಬಸವಣ್ಣನ ಸೆರೆ ಹಿಡಿಯಲು ಸನ್ನದ್ಧನಾಗಿ ಬರುತ್ತಾನೆ. ಅದೇ ಸಮಯದಲ್ಲಿ ಬಿಜ್ಜಳನು ಕನ್ನಮಾರಿಯೊಂದಿಗೆ ಅಲ್ಲಿಗೆ ಬರುತ್ತಾನೆ. ಯಾಕೆಂದರೆ ಕನ್ನಮಾರಿಯು ತನ್ನ ಜೀವ ಉಳಿಸಿದ ಬಸವಣ್ಣನ ಜೀವವು ಅಪಾಯದಲ್ಲಿರುವದನ್ನು ಅರಿತುಕೊಂಡು, ತಾನೇ ಸ್ವತಃ ಬಿಜ್ಜಳನ ಅರಮನೆಗೆ ತೆರಳಿ, ಅಲ್ಲಿ ತನ್ನನ್ನೇ ಒಪ್ಪಿಸಿಕೊಂಡಿರುತ್ತಾನೆ.&lt;br /&gt;&lt;br /&gt;ಕನ್ನಮಾರಿಯ ಬಿಡುಗಡೆಯಾಗುತ್ತದೆ ಹಾಗು ಆತನೂ ಸಹ ಶರಣಜೀವನಕ್ಕೆ ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ.&lt;br /&gt;ಇದಿಷ್ಟು ನಾಟಕದ ಕಥಾನಕ.&lt;br /&gt;&lt;br /&gt;&lt;span style="font-weight:bold;"&gt;ನಾಟಕದ ವೈಶಿಷ್ಟ್ಯಗಳು&lt;/span&gt;:&lt;br /&gt;ಕೇವಲ ಕಳ್ಳನೊಬ್ಬನು ಶರಣನಾದ ಕತೆಯನ್ನು ಹೇಳುವ ನಾಟಕವಲ್ಲವಿದು. ಕಳ್ಳನನ್ನು ಶರಣನನ್ನಾಗಿ ಪರಿವರ್ತಿಸಿದ ಬಸವಣ್ಣನ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಮಾಡಿದ ಪ್ರಯತ್ನವು ಇಲ್ಲಿದೆ. ಬಸವಣ್ಣನ ವ್ಯಕ್ತಿತ್ವ ಎಂತಹದು?&lt;br /&gt;ಅಂಗುಲಿಮಾಲಾನನ್ನು ಪರಿವರ್ತಿಸಿದ ಬುದ್ಧನ ವ್ಯಕ್ತಿತ್ವವೆ? ಅಥವಾ ಸಮಾಜಸುಧಾರಕನ ವ್ಯಕ್ತಿತ್ವವೆ?&lt;br /&gt;ಬಸವಣ್ಣನ ಬಗೆಗೆ ಬರೆದ ಲೇಖಕರೆಲ್ಲ ಆತನನ್ನು ಅರಿತುಕೊಳ್ಳಲು ಪ್ರಯತ್ನಿಸಿ ಬರೆದವರೇ.&lt;br /&gt;&lt;br /&gt;ವ್ಯಾಸ ದೇಶಪಾಂಡೆಯವರು ಇಲ್ಲಿ ಬಸವಣ್ಣನ ವ್ಯಕ್ತಿತ್ವವನ್ನು ಇತರ ಪಾತ್ರಗಳ ಮೂಲಕ ಅರ್ಥೈಸಲು ಪ್ರಯತ್ನಿಸಿದ್ದಾರೆ. &lt;br /&gt;ಕನ್ನಮಾರಿ vs ಬಸವಣ್ಣ , ಬಿಜ್ಜಳ vs ಬಸವಣ್ಣ , ಶರಣರು vs ಬಸವಣ್ಣ , ಕೊನೆಗೆ ಗಂಗಾಂಬಿಕೆ vs ಬಸವಣ್ಣ.&lt;br /&gt;&lt;br /&gt;ಜೊತೆಜೊತೆಗೇ ಆ ಸಮಯದ ಸಮಾಜದ ವ್ಯವಸ್ಥೆ, ದುಡಿವ ವರ್ಗದ ಶೋಷಣೆ, ಪ್ರಭುತ್ವದ ರಾಜಕೀಯ ಇವೆಲ್ಲ ನಾಟಕದಲ್ಲಿ ಪ್ರಾಸಂಗಿಕವಾಗಿ ಬಂದಿವೆ. ಇಂತಹ ವ್ಯವಸ್ಥೆಗೆ ಒಂದು ಪ್ರತಿವ್ಯವಸ್ಥೆ ಇದೆಯೆ?&lt;br /&gt;ಆಧುನಿಕ ಭಾರತದಲ್ಲಿ,ಗಾಂಧೀಜಿ, ವಿನೋಬಾ, ಜಯಪ್ರಕಾಶ ನಾರಾಯಣ ಇವರೆಲ್ಲ ಇದಕ್ಕಾಗಿ ಪ್ರಯತ್ನಿಸಿದವರೆಂದು ನಾವು ಬಲ್ಲೆವು. &lt;br /&gt;&lt;br /&gt;ಇಲ್ಲಿ ಬರುವ ಕನ್ನಮಾರಿ ಹಳೆಯ ಕಾಲದ Robin Hood ಹಾಗೂ ಈ ಕಾಲದ ನಕ್ಸಲೀಯರನ್ನು ಸ್ವಲ್ಪ ಮಟ್ಟಿಗೆ ಹೋಲುತ್ತಾನೆ ಎನ್ನಬಹುದಾದರೂ ಲೇಖಕರು ಇಂತಹ ಸುಳಿವುಗಳು ನುಸಳದಂತೆ ಪ್ರಯತ್ನಪೂರ್ವಕವಾಗಿ ನಾಟಕವನ್ನು ರಚಿಸಿದ್ದಾರೆ. ಅದರಂತೆಯೆ ಮಾರ್ಕ್ಸಿಸ್ಟ್ ಗುರುತುಗಳನ್ನೂ ಸಹ ಇಲ್ಲಿ ಸುಳಿಯಗೊಟ್ಟಿಲ್ಲ.&lt;br /&gt;(ಕಮ್ಯುನಿಸ್ಟ ಅರ್ಥವ್ಯವಸ್ಥೆಯ ಪ್ರತಿಪಾದಕನಾದ ಮಾರ್ಕ್ಸನನ್ನು ಬಸವಣ್ಣನಿಗೆ ಹೋಲಿಸುವದು ದೊಡ್ಡ ತಪ್ಪು. ಏಕೆಂದರೆ ಮಾರ್ಕ್ಸನು State Ownershipಅನ್ನು ಹೇಳುತ್ತಿದ್ದ ಹಾಗೂ ಆಧ್ಯಾತ್ಮವನ್ನು ತಿರಸ್ಕರಿಸಿದ್ದ.)&lt;br /&gt;ಬಸವಣ್ಣನವರು ಮಾನವ ಘನತೆಯನ್ನು ಸಾಮಾಜಿಕ ಸಮಾನತೆಯನ್ನು, ಕಾಯಕದ ಮಹತ್ವವನ್ನು ಹಾಗೂ ಆಧ್ಯಾತ್ಮಿಕ ಅವಶ್ಯಕತೆಯನ್ನು ಜೀವಿಸಿ ತೋರಿಸಿದವರು. ಈ ಎಲ್ಲ ಅಂಶಗಳು ೫೩ ಪುಟಗಳ ಈ ಚಿಕ್ಕ ನಾಟಕದಲ್ಲಿ ಸಮರ್ಥವಾಗಿ ಬಂದಿವೆ.&lt;br /&gt;&lt;br /&gt;ಎರಡನೆಯದಾಗಿ ಬಸವಣ್ಣನವರ ಈ ಆದರ್ಶಸಮಾಜದ ಅಂಗವ್ಯಕ್ತಿಗಳು ಯಾರು ಅನ್ನುವದನ್ನೂ ಸಹ ನಾಟಕವು ಸ್ಪಷ್ಟಪಡಿಸುತ್ತದೆ. ಶರಣಚಳವಳಿಯು ಕೇವಲ ಕೆಳಸ್ತರದವರ ಚಳವಳಿಯಲ್ಲ ಅಥವಾ ಕೇವಲ ಚಿಂತಕರ ಚಳವಳಿಯೂ ಅಲ್ಲ. ಇದೊಂದು ಸರ್ವಸಮನ್ವಯ ಚಳವಳಿ. ಈ ಆದರ್ಶ ಸಮಾಜಕ್ಕೆ ಯಾರೂ ಹೊರತಲ್ಲ. ಇದರಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಅದಕ್ಕೆಂದೇ ಈ ನಾಟಕದ ಶೀರ್ಷಿಕೆ: “ಇವ ನಮ್ಮವ”.&lt;br /&gt;&lt;br /&gt;ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಇದು ಐತಿಹಾಸಿಕ ನಾಟಕವೂ ಹೌದು ಹಾಗೂ ಸಾಮಾಜಿಕ ನಾಟಕವೂ ಹೌದು ಎನ್ನುವದು ಸ್ಪಷ್ಟವಾಗುತ್ತದೆ. ಆದುದರಿಂದ ಇದನ್ನು ಐತಿಹಾಸಿಕ-ಸಾಮಾಜಿಕ ನಾಟಕವೆಂದು ಕರೆಯಬಹುದೇನೊ?&lt;br /&gt;&lt;br /&gt;ಈ ನಾಟಕ ಪ್ರಾರಂಭವಾಗುವದು ಬೆಳಗಿನ ಸಮಯದಲ್ಲಿ , ಮುಕ್ತಾಯವಾಗುವದು ಮರುದಿನದ ಬೆಳಗಿನಲ್ಲಿ. ಹುಲ್ಲು ಹೊರುವ ಹೆಣ್ಣುಮಗಳು ಬಸವಣ್ಣನ ಜೊತೆಗೆ ಮಾತನಾಡುವ flashback ಹೊರತುಪಡಿಸಿ ನಾಟಕದ ಕಾಲ ಒಂದೇ ದಿನಮಾನದ್ದು.&lt;br /&gt;ಸರಳ ಆಡುನುಡಿಯ ಸಂಭಾಷಣೆ ನಾಟಕದ ಸೊಬಗನ್ನು ಹೆಚ್ಚಿಸಿದೆ.&lt;br /&gt;ನಾಟಕದ ಅಂತರಾಳ ಎಷ್ಟೇ ಗಂಭೀರವಾಗಿದ್ದರೂ ಸಹ ಸನ್ನಿವೇಶಗಳು ಹಾಗೂ ಸಂಭಾಷಣೆಗಳು ಸಹಜ ವಿನೋದವನ್ನು ಹೊಮ್ಮಿಸುತ್ತವೆ.  ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎನ್ನುವ ಆಶಾಭಾವವನ್ನು  ಹೊಮ್ಮಿಸುವ ಈ ನಾಟಕವು ಬಸವಣ್ಣನವರ ಬಗೆಗೆ ರಚಿಸಲಾದ ಉಳಿದೆಲ್ಲ ದುರಂತ ನಾಟಕಗಳಿಗಿಂತ ಮನಸ್ಸನ್ನು ತಟ್ಟುತ್ತದೆ.&lt;br /&gt;&lt;br /&gt;ಈ ನಾಟಕಕ್ಕೆ ಒಂದು ಮಿತಿಯೂ ಇದೆ. ಕಿರಿದರೊಳ್ ಪಿರಿದರ್ಥವಂ ಹೇಳುವಾಗ ಹುಟ್ಟುವ ಮಿತಿ ಅದು. ನಾಟಕದ ವಸ್ತು ಎಷ್ಟೇ ಜಟಿಲವಾಗಿದ್ದರೂ ಸಹ, ರಚನೆ ಸರಳವಾಗಿದೆ. ಇದು ಈ ನಾಟಕದ ಅನಿವಾರ್ಯತೆ ಹಾಗೂ ಮಿತಿ.&lt;br /&gt;ಒಟ್ಟಿನಲ್ಲಿ ಕನ್ನಡದ ಶ್ರೇಷ್ಠ ನಾಟಕಗಳಲ್ಲಿ ಇದು ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು.&lt;br /&gt;……………………………………………………………………………….&lt;br /&gt;ಟಿಪ್ಪಣಿ: ವ್ಯಾಸ ದೇಶಪಾಂಡೆಯವರ ಬಗೆಗೆ ಹೆಚ್ಚಿನ ಮಾಹಿತಿಯನ್ನು &lt;br /&gt;http://kn.wikipedia.org/wiki/%E0%B2%B5%E0%B3%8D%E0%B2%AF%E0%B2%BE%E0%B2%B8_%E0%B2%A6%E0%B3%87%E0%B2%B6%E0%B2%AA%E0%B2%BE%E0%B2%82%E0%B2%A1%E0%B3%86 ದಲ್ಲಿ ಪಡೆಯಬಹುದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-7391011983326173201?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/7391011983326173201/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=7391011983326173201' title='28 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/7391011983326173201'/><link rel='self' type='application/atom+xml' href='http://www.blogger.com/feeds/5939841257923965225/posts/default/7391011983326173201'/><link rel='alternate' type='text/html' href='http://sallaap.blogspot.com/2009/05/blog-post_28.html' title='ಇವ ನಮ್ಮವ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>28</thr:total></entry><entry><id>tag:blogger.com,1999:blog-5939841257923965225.post-1030308491122378527</id><published>2009-05-20T20:41:00.004+05:30</published><updated>2009-05-26T11:17:49.307+05:30</updated><title type='text'>ತುಂಬಿ ಬಂದಿತ್ತು</title><content type='html'>ಬಸವಣ್ಣನ ಜೀವನದ ಕೊನೆಯ ದಿನಗಳಿಗೆ ಸಂಬಂಧಿಸಿದಂತೆ, ಬೇಂದ್ರೆಯವರು ’ತಲೆದಂಡ’ ಎನ್ನುವ ನಾಟಕವನ್ನು ರಚಿಸಿದ್ದರು. ಬಸವಣ್ಣನವರ ಸಮಾಧಿಯ ಕೆಲಸ ನಡೆದಿರುವಾಗ ಅಲ್ಲಿಗೆ ಬಂದ ಮುದುಕ ಜಂಗಮನೊಬ್ಬನು ಈ ಹಾಡನ್ನು ಹೇಳುವನು.&lt;br /&gt;ಈ ಹಾಡನ್ನು ಸ್ವತಃ ಬೇಂದ್ರೆಯವರೇ  ಏಕತಾರಿಯ ಹಿನ್ನೆಲೆಯಲ್ಲಿ ೧೯೪೭ರಲ್ಲಿ ಹಾಡಿದ್ದರು. ಅದು HMV ಕಂಪನಿಯಿಂದ ಮುದ್ರಿತವಾಯಿತು.&lt;br /&gt;ಅನೇಕ ವರ್ಷಗಳ ನಂತರ, ಗಿರೀಶ ಕಾರ್ನಾಡರು ಬಸವಣ್ಣನ ಬಗೆಗೆ ತಾವೂ ಒಂದು ನಾಟಕ ರಚಿಸಿದರು ಹಾಗೂ ಬೇಂದ್ರೆಯವರ ಅನುಮತಿಯನ್ನು ಪಡೆದುಕೊಂಡು ತಮ್ಮ ನಾಟಕಕ್ಕೆ ‘ತಲೆದಂಡ’ ಎಂದು ಹೆಸರು ಕೊಟ್ಟರು. &lt;br /&gt;ಕವನದ ಪೂರ್ತಿಪಾಠ ಹಿಗಿದೆ:&lt;br /&gt;……………………………………………………………..&lt;br /&gt;ತುಮ್  ತುಮ್  ತುಮ್ ತುಮ್  ತುಮ್ ತುಮ್ ತುಮ್ ತುಮ್ &lt;br /&gt;ತುಂಬಿ ಬಂದಿತ್ತ ತಂಗೀ&lt;br /&gt;ತುಂಬಿ ಬಂದಿತ್ತು ||ಪಲ್ಲವಿ||&lt;br /&gt;&lt;br /&gt;೧&lt;br /&gt;ಬೆಳಕಿಗಿಂತ ಬೆಳ್ಳಗೆ ಇತ್ತ&lt;br /&gt;ಗಾಳಿಗಿಂತ ತೆಳ್ಳಗೆ ಇತ್ತ&lt;br /&gt;ಜಡಿಯಿಂದಿಳಿದ ಗಂಗಿ ಹಾಂಗ&lt;br /&gt;ಚಂಗನೆ ನೆಗೆದಿತ್ತ&lt;br /&gt;ಮೈಯೊಳಗಿರುವ ಮೂಲಿಮೂಲಿಗೂ&lt;br /&gt;ಮೂಡಿ ಬಂದಿತ್ತ&lt;br /&gt;ಅಡಿಮುಡಿಗೂಡಿ ನಡುವಂತೆಲ್ಲಾ&lt;br /&gt;ಮುಳುಗಿಸಿ ಬಿಟ್ಟಿತ್ತ ತಂಗೀ&lt;br /&gt;ತುಂಬಿ ಬಂದಿತ್ತು || ತುಮ್ ತುಮ್……&lt;br /&gt;&lt;br /&gt;೨&lt;br /&gt;ಹೂವಿಗಿರುವ ಕಂಪು ಇತ್ತ&lt;br /&gt;ಹಾಡಿಗಿರುವ ಇಂಪು ಇತ್ತ&lt;br /&gt;ಜೀವದ ಮಾತು ಕಟ್ಟಿಧಾಂಗ&lt;br /&gt;ಎದ್ಯಾಗ ನಟ್ಟಿತ್ತ&lt;br /&gt;ವರ್ಮದ ಮಾತು ಆಡಿಧಾಂಗ &lt;br /&gt;ಮರ್ಮಕ ಮುಟ್ಟಿತ್ತ&lt;br /&gt;ಬೆಳಕಿಗೆ ಮರಳಿ ಕಮಲವರಳಿ&lt;br /&gt;ಜೇನ ಬಿಟ್ಟಿತ್ತ ತಂಗೀ&lt;br /&gt;ತುಂಬಿ ಬಂದಿತ್ತು || ತುಮ್ ತುಮ್……&lt;br /&gt;&lt;br /&gt;೩&lt;br /&gt;ಕಾಲದ್ಹಾಂಗ ಕಪ್ಪಗಿತ್ತ&lt;br /&gt;ಸಾವಿನ್ಹಾಂಗ ತೆಪ್ಪಗಿತ್ತ&lt;br /&gt;ಹದ್ದು ಬಂದು ಹಾವಿನ ಮ್ಯಾಲೆ&lt;br /&gt;ಎರಗಿದಂತಿತ್ತ&lt;br /&gt;ಇರುಳ ಮಬ್ಬಿನ್ಯಾಗ ಹಗಲಿನ ಬೆಳಕು&lt;br /&gt;ಕರಗಿದಂತಿತ್ತ&lt;br /&gt;ಗುಂಗು ಹಿಡಿದು ತಂಗಿದಾಗ&lt;br /&gt;ತುಂಬಿ ನಿಂತಿತ್ತ ಈಗ&lt;br /&gt;ತುಳಿಕಿ ಹೋಗಿತ್ತ&lt;br /&gt;ತಂಗೀ ತುಂಬಿ ಬಂದಿತ್ತು || ತುಮ್ ತುಮ್……&lt;br /&gt;…………………………………………………………………………………….&lt;br /&gt;ಬೇಂದ್ರೆಯವರು ರಚಿಸಿದ ಈ ಕವನಕ್ಕೆ ಬಸವಣ್ಣನಿಂದ ಹಾಗೂ ಅಲ್ಲಮಪ್ರಭುವಿನಿಂದ ಪ್ರೇರಣೆ ದೊರೆತಿರಬಹುದು.&lt;br /&gt;ಬಸವಣ್ಣನವರೇ ರಚಿಸಿದ ವಚನವೊಂದು ಹೀಗಿದೆ: &lt;br /&gt;&lt;br /&gt;ವಚನದಲ್ಲಿ ನಾಮಾಮೃತ ತುಂಬಿ&lt;br /&gt;ನಯನದಲ್ಲಿ ನಿಮ್ಮ ಮೂರುತಿ ತುಂಬಿ&lt;br /&gt;ಮನದಲ್ಲಿ ನಿಮ್ಮ ನೆನಹು ತುಂಬಿ&lt;br /&gt;ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ&lt;br /&gt;ಕೂಡಲಸಂಗಮದೇವಾ&lt;br /&gt;ನಿಮ್ಮ ಚರಣಕಮಲದೊಳಗಾನು ತುಂಬಿ.&lt;br /&gt;&lt;br /&gt;ಅಲ್ಲಮಪ್ರಭುವಿನ  ವಚನ ಈ ರೀತಿಯಾಗಿದೆ:&lt;br /&gt;&lt;br /&gt;ಗಿಡದ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು, ತುಂಬಿ ನೋಡಾ!&lt;br /&gt;ಆತುಮ ತುಂಬಿ ತುಂಬಿ ನೋಡಾ!&lt;br /&gt;ಪರಮಾತುಮ ತುಂಬಿ ತುಂಬಿ ನೋಡಾ!&lt;br /&gt;ಗುಹೇಶ್ವರ ಲಿಂಗಕ್ಕೆರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ!!&lt;br /&gt;&lt;br /&gt;ಅಲ್ಲಮಪ್ರಭು, ಅಕ್ಕಮಹಾದೇವಿ ಹಾಗೂ ನವೋದಯ ಕಾಲದ ಸಾಹಿತಿಯಾದ ಮಧುರಚೆನ್ನರನ್ನು ಕನ್ನಡದಲ್ಲಿ ಶ್ರೇಷ್ಠ ಅನುಭಾವಸಾಹಿತ್ಯವನ್ನು ನೀಡಿದವರೆಂದು ಗುರುತಿಸಬಹುದು. &lt;br /&gt;&lt;br /&gt;ಅಲ್ಲಮಪ್ರಭುವಿನ  ವಚನವು ಗಿಡವನ್ನು ಪ್ರಪಂಚಕ್ಕೆ ಹಾಗೂ ಗಿಡದ ಮೇಲಿರುವ ತುಂಬಿಯನ್ನು ಆತ್ಮಕ್ಕೆ ಹೋಲಿಸುತ್ತದೆ.  ಆತ್ಮದ ವಿಕಸನ ಹಾಗೂ ಪರಮಾತ್ಮದ ಆನಂದವನ್ನು ಅಲ್ಲಮಪ್ರಭುಗಳು ಈ ವಚನದಲ್ಲಿ ಬಣ್ಣಿಸಿದ್ದಾರೆ. &lt;br /&gt;&lt;br /&gt;ಬೇಂದ್ರೆಯವರು ತಮ್ಮ  ಕವನದಲ್ಲಿ ಬಸವಣ್ಣ ಹಾಗೂ ಅಲ್ಲಮಪ್ರಭುವಿನ ವಚನಗಳಲ್ಲಿಯ ತುಂಬಿಯ ಹೋಲಿಕೆಯನ್ನು ಅನುಕರಿಸಿಲ್ಲ. ಆದರೆ ಆ ಪದವನ್ನು ಬಳಸುವದಕ್ಕೆ ಈ ವಚನಗಳಿಂದ ಪ್ರೇರಣೆಯನ್ನು ಪಡೆದಿರಬಹುದು.&lt;br /&gt;&lt;br /&gt;ವೀರಶೈವ ಆಂದೋಲನ ಜಗತ್ತಿನ ಅತ್ಯಂತ ಮಹತ್ವದ ಆಂದೋಲನಗಳಲ್ಲಿ ಒಂದು. ಇದರ ಕಾರ್ಯಕ್ಷೇತ್ರ ಕನ್ನಡ ನಾಡಾಗಿತ್ತಷ್ಟೆ. ಈ ಆಂದೋಲನದ ಕೇಂದ್ರವ್ಯಕ್ತಿಯಾದ ಬಸವೇಶ್ವರರ ಬಗೆಗೆ ಶರಣರಿಗೆ ಇದ್ದಂತಹ ಭಾವನೆಗಳನ್ನು ಈ ಹಾಡಿನಲ್ಲಿ ವಿವರಿಸಲಾಗಿದೆ. &lt;br /&gt;ಆಧುನಿಕ ಕಾಲದಲ್ಲಿ ಮಹಾತ್ಮಾ ಗಾಂಧಿಯವರು ‘ಅಹಿಂಸಾಮೂರ್ತಿ’ ಎಂದು ಗುರುತಿಸಲ್ಪಟ್ಟಿದ್ದರು. ಅದರಂತೆ ವೀರಶೈವ ಆಂದೋಲನದ ಕಾಲದಲ್ಲಿ ಬಸವಣ್ಣನವರು ಯಾವ ರೀತಿಯಲ್ಲಿ ಗುರುತಿಸಲ್ಪಟ್ಟಿದ್ದರು? ಬೇಂದ್ರೆಯವರು ಜಂಗಮನೋರ್ವನ ಹಾಡಿನ ಮೂಲಕ ಕಲ್ಯಾಣದ ಜನರ ಮನೋಭಾವಗಳನ್ನು ತೋರಿಸಿದ್ದಾರೆ. ಈ ಹಾಡಿನ ಮೂರು ನುಡಿಗಳಲ್ಲಿ ಆ ಜಂಗಮನು ಬಸವಣ್ಣನವರ ವ್ಯಕ್ತಿತ್ವವನ್ನು, ಸಾಧನೆಯನ್ನು ಹಾಗೂ ಅವರ ಕೊನೆಯನ್ನು ವರ್ಣಿಸುತ್ತಾನೆ.&lt;br /&gt;ಮೊದಲನೆಯ  ನುಡಿಯನ್ನು  ನೋಡಿರಿ:&lt;br /&gt;&lt;br /&gt;ಬೆಳಕಿಗಿಂತ ಬೆಳ್ಳಗೆ ಇತ್ತ&lt;br /&gt;ಗಾಳಿಗಿಂತ ತೆಳ್ಳಗೆ ಇತ್ತ&lt;br /&gt;ಜಡಿಯಿಂದಿಳಿದ ಗಂಗಿ ಹಾಂಗ&lt;br /&gt;ಚಂಗನೆ ನೆಗೆದಿತ್ತ&lt;br /&gt;ಮೈಯೊಳಗಿರುವ ಮೂಲಿಮೂಲಿಗೂ&lt;br /&gt;ಮೂಡಿ ಬಂದಿತ್ತ&lt;br /&gt;ಅಡಿಮುಡಿಗೂಡಿ ನಡುವಂತೆಲ್ಲಾ&lt;br /&gt;ಮುಳುಗಿಸಿ ಬಿಟ್ಟಿತ್ತ ತಂಗೀ&lt;br /&gt;ತುಂಬಿ ಬಂದಿತ್ತು || ತುಮ್ ತುಮ್……&lt;br /&gt;&lt;br /&gt;ಬಸವಣ್ಣನವರು ಕನ್ನಡನಾಡು ಕಂಡ ಮಹಾಪುರುಷರು. ಅಧ್ಯಾತ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಇವರದು ಮಹತ್ತಮ ವ್ಯಕ್ತಿತ್ವ. ಬಸವಣ್ಣನವರ ಒಳಗೆ ಅರಳಿದ ಸೂಕ್ಷ್ಮ ದೈವೀ ಚೈತನ್ಯವನ್ನು ಬಣ್ಣಿಸಲು ನಿಸರ್ಗದ ಚೈತನ್ಯಗಳಾದ ಬೆಳಕು, ಗಾಳಿ ಹಾಗೂ ಗಂಗೆ ಇವುಗಳನ್ನೇ ಪ್ರತೀಕಗಳಾಗಿ ಬಳಸುವದು ಸಹಜ. ಆದುದರಿಂದಲೇ  ಇಲ್ಲಿ ಹಾಡುತ್ತಿರುವ ಜಂಗಮನು  ಈ ಸೂಕ್ಷ್ಮ ಚೈತನ್ಯವು ಬೆಳಕಿಗಿಂತಲೂ ಬೆಳ್ಳಗೆ ಇತ್ತು ಹಾಗೂ ಗಾಳಿಗಿಂತಲೂ ತೆಳ್ಳಗೆ ಇತ್ತು ಎಂದು ಬಣ್ಣಿಸುತ್ತಿದ್ದಾನೆ. ಬೆಳಕು ಜ್ಞಾನವನ್ನು ಕೊಡುತ್ತದೆ, ಗಾಳಿ ನಿಮಗೆ ತಿಳಿಯದಂತೇ ನಿಮ್ಮನ್ನು ಆವರಿಸುತ್ತದೆ ಹಾಗು ನಿಮ್ಮ ಪ್ರಾಣಕ್ಕೆ ಆಧಾರವಾಗಿದೆ. ಗಂಗೆ ಜೀವಿಗಳ ಕೊಳೆಯನ್ನು ತೊಳೆದು ಅವರನ್ನು ಪಾವನಗೊಳಿಸುವಳು. ಬಸವಣ್ಣನವರ  ಲೋಕಕಲ್ಯಾಣಕರ ವ್ಯಕ್ತಿತ್ವವು ಬೆಳಕು, ಗಾಳಿ ಹಾಗೂ ಗಂಗೆಯಂತೆ ಪರಿಶುದ್ಧವಾಗಿದೆ, ಅಲ್ಲದೆ ಸಮಾಜಕ್ಕೆ ಒಳಿತನ್ನು ಮಾಡಿದೆ. ಈ ರೂಪಕವು ಬಸವಣ್ಣನವರ ಆಧ್ಯಾತ್ಮಿಕ ವ್ಯಕ್ತಿತ್ವವನ್ನು  ವರ್ಣಿಸುವಂತೆ, ಅವರ ಸಾಮಾಜಿಕ ವ್ಯಕ್ತಿತ್ವವನ್ನೂ  ಸಹ ವರ್ಣಿಸುತ್ತದೆ.&lt;br /&gt;&lt;br /&gt;ಬಸವಣ್ಣನವರ ಒಳಗಿದ್ದ ದೈವೀ ಚೈತನ್ಯವು  ಶಿವನ ಜಡೆಯಲ್ಲಿದ್ದ ಗಂಗೆ ಧುಮ್ಮಿಕ್ಕುವಂತೆ ಬಸವಣ್ಣನವರ ಸೂಕ್ಷ್ಮ ನಾಡಿಗಳಲ್ಲೆಲ್ಲ ಧುಮುಕಿ, ಅವರನ್ನು ಅಡಿಯಿಂದ ಮುಡಿಯವರೆಗೆ ಶಿವಮಯವನ್ನಾಗಿಸಿತು. ಅವರ ವ್ಯಕ್ತಿತ್ವವು ಈ ದೈವೀ ಚೈತನ್ಯದಿಂದ ತುಂಬಿಕೊಂಡಿತು.&lt;br /&gt;&lt;br /&gt;ಎರಡನೆಯ ನುಡಿಯಲ್ಲಿ ಬಸವಣ್ಣನವರ ಈ ಮಹಾಚೈತನ್ಯವು ಯಾವ ರೀತಿಯಲ್ಲಿ ಜನರನ್ನು, ಶರಣರನ್ನು ಪ್ರಭಾವಿಸುತ್ತಿತ್ತು ಎನ್ನುವದನ್ನು ಹೇಳಲಾಗಿದೆ:&lt;br /&gt;&lt;br /&gt;ಹೂವಿಗಿರುವ ಕಂಪು ಇತ್ತ&lt;br /&gt;ಹಾಡಿಗಿರುವ ಇಂಪು ಇತ್ತ&lt;br /&gt;ಜೀವದ ಮಾತು ಕಟ್ಟಿಧಾಂಗ&lt;br /&gt;ಎದ್ಯಾಗ ನಟ್ಟಿತ್ತ&lt;br /&gt;ವರ್ಮದ ಮಾತು ಆಡಿಧಾಂಗ &lt;br /&gt;ಮರ್ಮಕ ಮುಟ್ಟಿತ್ತ&lt;br /&gt;ಬೆಳಕಿಗೆ ಮರಳಿ ಕಮಲವರಳಿ&lt;br /&gt;ಜೇನ ಬಿಟ್ಟಿತ್ತ ತಂಗೀ&lt;br /&gt;ತುಂಬಿ ಬಂದಿತ್ತು || ತುಮ್ ತುಮ್……&lt;br /&gt;&lt;br /&gt;ಬೆಳಕು, ಗಾಳಿ ಹಾಗೂ ಗಂಗೆ ಇವು ನಕಾರಾತ್ಮಕ ಗುಣಗಳನ್ನು ನಿವಾರಿಸುತ್ತವೆ. ಅಷ್ಟಾದರೆ ಸಾಕೆ? ಸಕಾರಾತ್ಮಕ ಗುಣಗಳೂ ಸಹ ಬೇಕಲ್ಲವೆ? ಎರಡನೆಯ ನುಡಿಯಲ್ಲಿ ಬಸವಣ್ಣನವರ ಆಚಾರ-ವಿಚಾರಗಳು ಜನರನ್ನು ಸಕಾರಾತ್ಮಕವಾಗಿ ಪ್ರಭಾವಿಸುವ ರೀತಿಯನ್ನು ಹೇಳಲಾಗಿದೆ. ಹೂವಿನ ಕಂಪಿನಂತೆ, ಹಾಡಿನ ಇಂಪಿನಂತೆ ಅವರ ಆಚಾರ-ವಿಚಾರಗಳು ಜನರನ್ನು ಪ್ರಭಾವಿಸುತ್ತಿದ್ದವು.&lt;br /&gt;ಅವರ ಮಾತುಗಳು ಕಾಲಹರಣದ ಮಾತುಗಳಾಗಲೀ, ಮನೋರಂಜನೆಯ ಮಾತುಗಳಾಗಲೀ ಆಗಿರಲಿಲ್ಲ. (‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವ ವಚನವನ್ನು ನೆನಪಿಸಿಕೊಳ್ಳಿರಿ.) ಹೃದಯದ ಒಳಗಿಂದ ಹೊರಬರುವ ನೈಜವಾದ ಮಾತುಗಳು ಅವು. ಹೀಗಾಗಿ ಅವು ಕೇಳುಗರ ಮನಕ್ಕೆ ತಟ್ಟುತ್ತಿದ್ದವು. ಹೂವಿನ ಕಂಪಿನಂತೆ ಹಾಗೂ ಹಾಡಿನ ಇಂಪಿನಂತೆ ಅವರ ಮಾತುಗಳು ಮನಸ್ಸನ್ನು ಉಲ್ಲಾಸಗೊಳಿಸುತ್ತಿದ್ದವು, ಅರಳಿಸುತ್ತಿದ್ದವು. ಬಸವಣ್ಣನವರೇ ಹೇಳಿದಂತೆ, ಅವರ ವಚನಗಳಲ್ಲಿ ನಾಮಾಮೃತ ತುಂಬಿದೆ, ಈ ಅಮೃತಪಾನ ಮಾಡುವ ತುಂಬಿ ಅವರು. ಈ ವಚನಗಳ ಕಂಪು ಹಾಗೂ ಇಂಪು ಎಲ್ಲೆಡೆ ಹರಡಿವೆ, ತುಂಬಿಕೊಂಡಿವೆ.&lt;br /&gt;&lt;br /&gt;ಈ ನುಡಿಯಲ್ಲಿಯ ಒಂದು ಸಾಲು, “ವರ್ಮದ ಮಾತು ಆಡಿಧಾಂಗ ಮರ್ಮಕ ಮುಟ್ಟಿತ್ತ” ಎನ್ನುವದು ವಿಚಿತ್ರವಾಗಿ ತೋರಬಹುದು. ವರ್ಮ ಎಂದರೆ ವಿರೋಧ ಹಾಗೂ ದ್ವೇಷ. ಬಸವಣ್ಣನವರು ಇಂತಹ ಮಾತುಗಳನ್ನು ಆಡಬಹುದೆ ಎನ್ನುವ ಸಂಶಯ ಬರಬಹುದು. ಆದರೆ ಇಂತಹ ಮಾತುಗಳು ತಪ್ಪು ನಡತೆಯವರಿಗಾಗಿ ಇರುತ್ತಿದ್ದವು. &lt;br /&gt;ಉದಾಹರಣೆಗಾಗಿ:&lt;br /&gt;(೧) ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,&lt;br /&gt;ಅನ್ಯರಿಗೆ ಅಸಹ್ಯಪಡಬೇಡ………………………&lt;br /&gt;(೨) ಛಲ ಬೇಕು ಶರಣಂಗೆ ಪರಧನವನೊಲೆನೆಂಬ,&lt;br /&gt;ಛಲ ಬೇಕು ಶರಣಂಗೆ ಪರಸತಿಯನೊಲೆನೆಂಬ……&lt;br /&gt;ಈ ವಚನಗಳು ತಪ್ಪುಗಾರರ ಎದೆಗೆ ನಟ್ಟರೆ ಆಶ್ಚರ್ಯವಿಲ್ಲ.&lt;br /&gt;&lt;br /&gt;ಬೆಳಕಿಗೆ ಮುಖ ಮಾಡಿದ ಕಮಲವು ಅರಳಿರುವಂತೆ ಅವರದು ಜ್ಞಾನಸೂರ್ಯನಿಂದ ಅರಳಿದಂತಹ ಮನಸ್ಸು. ಆ ಕಮಲದಲ್ಲಿರುವದು ಉತ್ತಮ ವಿಚಾರ ಹಾಗೂ ಆಚಾರಗಳ ಜೇನು. ಅವರು ಸಮಾಜಕ್ಕೆ ಕೊಡುವದು ಇಂತಹ ಜೇನನ್ನು. ಈ ಪರಿಶುದ್ಧ ಆಚಾರ-ವಿಚಾರಗಳ ಇಂಪು, ಕಂಪು ಹಾಗೂ ಜೇನು ಬಸವಣ್ಣನವರ ವ್ಯಕ್ತಿತ್ವವನ್ನೆಲ್ಲ  ತುಂಬಿ ಹೊರಸೂಸಿದ್ದವು ಎಂದು ಜಂಗಮನು ಹೇಳುತ್ತಿದ್ದಾನೆ.&lt;br /&gt;&lt;br /&gt;ಮೂರನೆಯ ನುಡಿಯಲ್ಲಿ, ಬಸವಣ್ಣನವರ ಕೊನೆಯನ್ನು ವರ್ಣಿಸಲಾಗಿದೆ.&lt;br /&gt;&lt;br /&gt;ಕಾಲದ್ಹಾಂಗ ಕಪ್ಪಗಿತ್ತ&lt;br /&gt;ಸಾವಿನ್ಹಾಂಗ ತೆಪ್ಪಗಿತ್ತ&lt;br /&gt;ಹದ್ದು ಬಂದು ಹಾವಿನ ಮ್ಯಾಲೆ&lt;br /&gt;ಎರಗಿದಂತಿತ್ತ&lt;br /&gt;ಇರುಳು ಮಬ್ಬಿನ್ಯಾಗ ಹಗಲಿನ ಬೆಳಕು&lt;br /&gt;ಕರಗಿದಂತಿತ್ತ&lt;br /&gt;ಗುಂಗು ಹಿಡಿದು ತಂಗಿದಾಗ&lt;br /&gt;ತುಂಬಿ ನಿಂತಿತ್ತ ಈಗ&lt;br /&gt;ತುಳಿಕಿ ಹೋಗಿತ್ತ&lt;br /&gt;ತಂಗೀ ತುಂಬಿ ಬಂದಿತ್ತು || ತುಮ್ ತುಮ್……&lt;br /&gt;&lt;br /&gt;ಬಸವಣ್ಣನವರ ಕೊನೆಯದಿನಗಳು ಸಾಮಾಜಿಕವಾಗಿ ಭಯಂಕರ ದಿನಗಳು. &lt;br /&gt;ಕಾಲ ಅಂದರೆ ಎಲ್ಲವನ್ನೂ ನಾಶಗೊಳಿಸುವ ಕಾಲಪುರುಷ. ಆತನು ಎಲ್ಲ ಬಣ್ಣಗಳನ್ನೂ ನುಂಗಿಹಾಕುವ ಕಪ್ಪು ಬಣ್ಣದವನು. ಜೀವಿಗಳ ಆಪೋಶನವನ್ನು ಸಾವು  ಮೌನವಾಗಿ ತೆಗೆದುಕೊಳ್ಳುತ್ತದೆ. ಆದುದರಿಂದ ’ಕಾಲಧಾಂಗ ಕಪ್ಪಗಿತ್ತ, ಸಾವಿನ್ಹಾಂಗ ತೆಪ್ಪಗಿತ್ತ’ ಎಂದು ಜಂಗಮನು ಹೇಳುತ್ತಿದ್ದಾನೆ. ಬಸವಣ್ಣನವರ ಕೊನೆಯ ದಿನಗಳಲ್ಲಿ ನಡೆದ ಸಾಮಾಜಿಕ ವಿಪ್ಲವವು ’ಹದ್ದು ಹಾವಿನ ಮೇಲೆ ಎರಗುವಂತೆ’ ಕ್ರೂರವೂ, ಕ್ಷಿಪ್ರವೂ ಆಗಿತ್ತು!&lt;br /&gt;ಸಮಾಜದ ಮೇಲೆ ಮತ್ತೆ ಕತ್ತಲೆ ಆವರಿಸಿತು. ಸುಧಾರಣೆಯ ಹಗಲಿನ ಬೆಳಕು ವಿಪ್ಲವದ ಇರುಳಿನ ಮಬ್ಬಿನಲ್ಲಿ ಮತ್ತೆ ಕರಗಿತು! (ಇರುಳು ಶಾಶ್ವತವಲ್ಲ ಎನ್ನುವ ತಿಳಿವಳಿಕೆ ಇಲ್ಲಿ ಮನೋಗತವಾಗಿದೆ.)&lt;br /&gt;&lt;br /&gt;ಸಾಮಾಜಿಕ ಹಾಗು ಆಧ್ಯಾತ್ಮಿಕ ಸುಧಾರಣೆಯಲ್ಲಿ ಬಸವಣ್ಣನವರು ಒಂದೇ ಮನಸ್ಸಿನಿಂದ ನಿರತರಾಗಿದ್ದರು. ಈ ಕ್ರಿಯೆಯನ್ನು ‘ಗುಂಗು ಹಿಡಿದು ತಂಗಿದಾಗ’ ಎಂದು ಬಣ್ಣಿಸಲಾಗಿದೆ. ಗುಂಗಿ ಹುಳವು ಅಂದರೆ ಭ್ರಮರವು ಒಂದೇ ಧ್ವನಿಯನ್ನು ಹೊರಡಿಸುತ್ತ ಹಾರುತ್ತಿರುತ್ತದೆ. ಬಸವಣ್ಣನವರದೂ ಸಹ ಅದರಂತೇ ಒಂದೇ ಧ್ವನಿ. ಅದು ಶಿವಾಚಾರದ ಧ್ವನಿ. ಶಿವಾಚಾರವನ್ನು ತುಂಬಿಕೊಂಡ ಅವರ ವ್ಯಕ್ತಿತ್ವವು ತುಂಬಿದ ಕೊಡವಾಗಿತ್ತು. ಆ ತುಂಬಿದ ಚೈತನ್ಯಜಲ ವಿಪ್ಲವ ಸಮಯದಲ್ಲಿ ತುಳುಕಿ ಹೋಯಿತು.&lt;br /&gt;&lt;br /&gt;ಈ ಮೂರೂ ನುಡಿಗಳಲ್ಲಿ ಕೊನೆಯ ಚರಣವಾಗಿ ‘ತುಂಬಿ ಬಂದಿತ್ತು’ ಎನ್ನುವ ಪಲ್ಲವಿಯನ್ನು ಬಳಸಲಾಗಿದೆ.&lt;br /&gt;ಮೊದಲನೆಯ ನುಡಿಯು ಬಸವಣ್ಣನವರ ವ್ಯಕ್ತಿತ್ವವನ್ನು ವರ್ಣಿಸುವದರಿಂದ, ಅಲ್ಲಿ ‘ತುಂಬಿ ಬಂದಿತ್ತು’ ಎನ್ನುವದು ಅವರ ಪರಿಪೂರ್ಣತೆಯನ್ನು ತೋರಿಸುತ್ತದೆ.&lt;br /&gt;ಎರಡನೆಯ ನುಡಿಯಲ್ಲಿ ಈ ಪರಿಪೂರ್ಣ ವ್ಯಕ್ತಿತ್ವವು ಸಾಮಾಜಿಕ ಕಾರ್ಯದಲ್ಲಿ ತುಂಬಿಕೊಂಡಿರುವದನ್ನು ತೋರಿಸುತ್ತದೆ.&lt;br /&gt;ಮೂರನೆಯ ನುಡಿಯಲ್ಲಿ ತುಂಬಿ ಎನ್ನುವದು ಭ್ರಮರವನ್ನು ಹಾಗೂ ‘ತುಂಬಿ ಬಂದಿತ್ತು’ ಎನ್ನುವದು ‘ಕಾಲವು ತುಂಬಿ ಬಂದಿತ್ತು’ ಎನ್ನುವದನ್ನು ಸೂಚಿಸುತ್ತದೆ.&lt;br /&gt;&lt;br /&gt;&lt;a href="http://kaadabeladingalu.blogspot.com/"&gt;ಕಾಡಬೆಳದಿಂಗಳಿನ&lt;/a&gt; &lt;span style="font-weight:bold;"&gt;ಗೋದಾವರಿ&lt;/span&gt;ಯವರು ತಮ್ಮ ಪ್ರತಿಕ್ರಿಯೆಯಲ್ಲಿಈ ಕವನದಲ್ಲಿಯ ವಿಶೇಷ  ಗೂಢಾರ್ಥವನ್ನು ಈ ರೀತಿ ತಿಳಿಸಿದ್ದಾರೆ:&lt;br /&gt;ಬಸವಣ್ಣನು ವ್ಯಕ್ತಿಯಲ್ಲ, ಒಂದು ಅಭಿವ್ಯಕ್ತಿ ಅಲ್ಲವೇ? &lt;br /&gt;"ಬೆಳಕಿಗಿಂತ ಬೆಳ್ಳಗೆ ಇತ್ತ&lt;br /&gt;ಗಾಳಿಗಿಂತ ತೆಳ್ಳಗೆ ಇತ್ತ" ಎನ್ನುತ್ತಾ ಬಸವಣ್ಣ ಎಂಬ ಶಕ್ತಿ ದೇಶಕಾಲಗಳನ್ನು ಮೀರಿದ ಬಗೆಗೆ (ಬೇಂದ್ರೆಯವರು) ಹೇಳುತ್ತಾರೆ.. &lt;br /&gt;&lt;br /&gt;ಅಂತೆಯೇ ಕೊನೆಯಲ್ಲಿ &lt;br /&gt;"ಕಾಲದ್ಹಾಂಗ ಕಪ್ಪಗಿತ್ತ&lt;br /&gt;ಸಾವಿನ್ಹಾಂಗ ತೆಪ್ಪಗಿತ್ತ" ಎಂದು ಕಾಲದ ದುರ್ನಿರೀಕ್ಷ್ಯವನ್ನೂ ಹೇಳುತ್ತಾರೆ..&lt;br /&gt;&lt;br /&gt;ಆರಂಭ ಬೆಳಕಿನಂತೆ, ಜಟೆಯಿಂದ ಇಳಿವ ಗಂಗೆಯಂತೆ ಚುರುಕು.. ಆದರೆ ಅಂತ್ಯದಲ್ಲಿ ಬೆಳಕು ಕರಗಿದಂತೆ ಈ ಚಟುವಟಿಕೆಗಳೆಲ್ಲ ಕಳೆದು ತೆಪ್ಪಗಾಗಿ ಹೋಗುತ್ತದೆ!!!&lt;br /&gt;.................................................&lt;br /&gt;ಬೇಂದ್ರೆಯವರ ಕವನಗಳು ತಮ್ಮ ಗುಟ್ಟುಗಳನ್ನು  ಅಷ್ಟು ಸುಲಭವಾಗಿ ಬಿಟ್ಟುಕೊಡುವದಿಲ್ಲ, ಅಲ್ಲವೆ? ಗೋದಾವರಿಯವರಿಗೆ ಧನ್ಯವಾದಗಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-1030308491122378527?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/1030308491122378527/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=1030308491122378527' title='28 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/1030308491122378527'/><link rel='self' type='application/atom+xml' href='http://www.blogger.com/feeds/5939841257923965225/posts/default/1030308491122378527'/><link rel='alternate' type='text/html' href='http://sallaap.blogspot.com/2009/05/blog-post_20.html' title='ತುಂಬಿ ಬಂದಿತ್ತು'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>28</thr:total></entry><entry><id>tag:blogger.com,1999:blog-5939841257923965225.post-8590864295210297834</id><published>2009-05-06T14:48:00.011+05:30</published><updated>2009-05-11T23:50:20.034+05:30</updated><title type='text'>ಅಷ್ಟು ಪ್ರೀತಿ ಇಷ್ಟು ಪ್ರೀತಿ</title><content type='html'>‘ಸಖೀಗೀತ’ದಲ್ಲಿ ಬೇಂದ್ರೆಯವರು ತಮ್ಮ ಹೆಂಡತಿಯನ್ನು ‘ವಿಧಿ ತಂದ ವಧು’ ಎಂದು ಬಣ್ಣಿಸಿದ್ದಾರೆ. ಅದೇ ರೀತಿಯಲ್ಲಿ ಅವರ ಹೆಂಡತಿ ಲಕ್ಷ್ಮೀಬಾಯಿಯವರಿಗೆ ಬೇಂದ್ರೆ ‘ವಿಧಿ ತಂದ ವರ’ ಆಗಿರಲಿಕ್ಕೆ ಸಾಕು. ಮದುವೆಯಾದಾಗ ಬೇಂದ್ರೆಯವರಿಗೆ ೨೩ ವರ್ಷ ವಯಸ್ಸು. ಲಕ್ಷ್ಮೀಬಾಯಿ ಕೇವಲ ಹದಿಮೂರು ವರ್ಷದ ಹುಡುಗಿ.ಇತರ ಹುಡುಗಿಯರಿಗೆ ಇರುವಂತೆ ಈ ಹುಡುಗಿಗೂ ತನ್ನ ಸಂಸಾರದ ಬಗೆಗೆ ಬಣ್ಣ ಬಣ್ಣದ ಕನಸುಗಳು ಇದ್ದಿರಬಹುದು.&lt;br /&gt;&lt;br /&gt;ಬೇಂದ್ರೆಯವರು ೧೯೨೬ರಲ್ಲಿ ‘ಸ್ವಧರ್ಮ’ ಪತ್ರಿಕೆಯ ಹಾಗೂ ೧೯೨೯ರಲ್ಲಿ ‘ಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾಗಿದ್ದರು. ಇವರು ಬರೆದ ‘ನರಬಲಿ’ ಕವನಕ್ಕಾಗಿ ಬ್ರಿಟಿಶ್ ಸರಕಾರವು ಇವರನ್ನು ೧೯೩೨ರಲ್ಲಿ ಹಿಂಡಲಗಿಯ ಜೇಲಿಗೆ ಕಳುಹಿಸಿತು. ಕೆಲ ಕಾಲ ಮುಗದ ಎನ್ನುವ ಹಳ್ಳಿಯಲ್ಲಿ ದಿಗ್ಬಂಧನದಲ್ಲಿರಿಸಿತು. ಆರು ವರ್ಷಗಳ ವರೆಗೆ ಇವರಿಗೆ ಯಾರೂ ಯಾವುದೇ ನೌಕರಿಯನ್ನು ಕೊಡಕೂಡದೆಂದು ನ್ಯಾಯಾಲಯವು ಆಜ್ಞೆ ಹೊರಡಿಸಿತ್ತು. ಆರು ವರ್ಷಗಳವರೆಗೆ ಬೇಂದ್ರೆಯವರು ನಿರುದ್ಯೋಗಿಯಾಗಿ ಉಳಿಯಬೇಕಾಯಿತು. ಬಳಿಕ ೧೯೩೮ರಲ್ಲಿ ಮಾಸ್ತಿಯವರು ಬೇಂದ್ರೆಯವರನ್ನು ‘ಜೀವನ’ ಪತ್ರಿಕೆಯ ಸಂಪಾದಕರನ್ನಾಗಿ ಮಾಡಿದರು.&lt;br /&gt;&lt;br /&gt;ಈ ನಡುವಿನ ಅವಧಿಯಲ್ಲಿ ಬೇಂದ್ರೆಯವರು ಪುಣೆಯಲ್ಲಿ ಎಮ್. ಏ. ಪದವಿಯನ್ನು ಪಡೆದರು. ‘ಗರಿ’ ,‘ಮೂರ್ತಿ’, ’ಕಾಮಕಸ್ತೂರಿ’, ‘ಸಖೀಗೀತ’, ‘ನಾದಲೀಲೆ’ ಹಾಗೂ ‘ಉಯ್ಯಾಲೆ’ ಕವನಸಂಕಲನಗಳನ್ನು ಪ್ರಕಟಿಸಿದರು. ಸಾಹಿತ್ಯಸಮ್ಮೇಳನಗಳಲ್ಲಿ ಭಾಗವಹಿಸಿದರು. ಅವರ ಕೀರ್ತಿಸೂರ್ಯನು ನಡುನೆತ್ತಿಗೇರಿದನು. ಆದರೆ ಸಂಸಾರತಾಪದಲ್ಲಿ ಬೆಂದವರು ಇವರ ಧರ್ಮಪತ್ನಿ.&lt;br /&gt;&lt;br /&gt;ಇಂತಹ ಸಹನಾಲಕ್ಷ್ಮಿಯ ಬಗೆಗೂ ಬೇಂದ್ರೆಯವರಿಗೆ ಸಹನೆ ಇರಲಿಲ್ಲ. &lt;br /&gt;ಎಲ್ಲ ಹೆಂಡತಿಯರು ಅಪೇಕ್ಷಿಸುವಂತೆ ಇವಳೂ ಸಹ ಒಡವೆ ಕೊಡಿಸಲು ಬೇಂದ್ರೆಯವರನ್ನು ಯಾವಾಗಲೋ ಕೇಳಿದ್ದಾಳು. ಈ ಕವಿಪುಂಗವರು ಅವಳಿಗೆ ಕೇವಲ ಕವನಗಳ ಒಡವೆಗಳನ್ನಷ್ಟೇ ತೊಡಿಸಿದರು !&lt;br /&gt;“ಆತ ಕೊಟ್ಟ ವಸ್ತು, ಒಡವೆ &lt;br /&gt;ನನಗೆ ಅವಗೆ ಗೊತ್ತು&lt;br /&gt;ತೋಳುಗಳಿಗೆ ತೋಳಬಂದಿ&lt;br /&gt;ಕೆನ್ನೆತುಂಬ ಮುತ್ತು.”&lt;br /&gt;&lt;br /&gt;ಬೇಂದ್ರೆಯವರಿಗೆ ತನ್ನ ಕಾವ್ಯಾಲಂಕಾರದ ಮಿತಿ ಗೊತ್ತಿರಲಿಲ್ಲ ಎಂದಲ್ಲ. &lt;br /&gt;ಅವರೇ ತಮ್ಮ ಮತ್ತೊಂದು ಕವನದಲ್ಲಿ&lt;br /&gt;“ ನೀನು ಕೊಡುವೆ ನನಗೆ ದವನ&lt;br /&gt;ನಾನು ಕೊಡುವೆ ನಿನಗೆ ಕವನ&lt;br /&gt;……………………..” &lt;br /&gt;ಎಂದೆಲ್ಲ ಹೇಳುತ್ತ ತಮ್ಮ ಕವನಕ್ಕೆ &lt;br /&gt;“ಬರಿಯ ಮಾತಿನ ಪೋಣಿಕೆ” ಎಂದು ಬಣ್ಣಿಸಿದ್ದಾರೆ.&lt;br /&gt;&lt;br /&gt;ಬಹುಶ: ‘ಒಂದು ಮುತ್ತಿನ ಸರವನ್ನಾದರೂ ಕೊಡಿಸಿ’ ಎಂದು ಹೆಂಡತಿ ಆಗ್ರಹಪಡಿಸಿದಾಗ, ಈ ಕವಿ ಒಂದು ಉದ್ದವಾದ ಕವನವನ್ನೇ ಹೊಸೆದು ಹೆಂಡತಿಗೆ ಕೊಟ್ಟರು. ಬೇಂದ್ರೆಯವರಿಗೆ ದುಡ್ಡಿನ ಅಭಾವ ಇದ್ದಿರಬಹುದು , ಆದರೆ ಕಲ್ಪನೆಯ ಅಭಾವ ಎಂದೂ ಇರಲಿಲ್ಲ. ಅನಂತ ಕಲ್ಪನಾಸಾಮ್ರಾಜ್ಯದ ಸಾರ್ವಭೌಮರವರು.&lt;br /&gt;‘ಪ್ರೀತಿಯನ್ನು  (ಒಡವೆಗಳಿಂದ) ಅಳೆಯಬೇಡ’ ಎಂದು ಹೇಳುವ ಬೇಂದ್ರೆಯವರ ಕವನದ ಪೂರ್ಣಪಾಠ ಹೀಗಿದೆ:&lt;br /&gt;&lt;br /&gt;ಅಷ್ಟು ಪ್ರೀತಿ ಇಷ್ಟು ಪ್ರೀತಿ--&lt;br /&gt;ಎಣಿಸಿ ಕಷ್ಟಬಡದಿರು&lt;br /&gt;ಒಲೆದು ಒಲಿಸಿ ಸುಖವಿರು&lt;br /&gt;ಎಷ್ಟೆಯಿರಲಿ ಅಷ್ಟೆ ಮಿಗಿಲು---ತಮ್ಮ ಕಿರಣ ತಮಗೆ ಹಗಲು ;&lt;br /&gt;ಉಳಿದ ಬೆಳಕು ಕತ್ತಲು.&lt;br /&gt;ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು&lt;br /&gt;ಉಳಿದ ಲೋಕ ಹಿತ್ತಲು.&lt;br /&gt;&lt;br /&gt;ಮುತ್ತಿನೆಕ್ಕಸರವನಿಕ್ಕೆ&lt;br /&gt;ಮುದ್ದಿಗೆ ಕಳೆಕಟ್ಟಿತೆ ?&lt;br /&gt;ತೊಯ್ದ ಎವೆಗೆ ಮುದ್ದನಿಡಲು&lt;br /&gt;ಮುದ್ದಿಗೆ ಅದು ತಟ್ಟಿತೆ ? &lt;br /&gt;ಕುದಿದ ಬಂದ ಕಂಬನಿಯಲು &lt;br /&gt;ಕಂಪು ಬರದೆ ಬಿಟ್ಟಿತೆ ?&lt;br /&gt;&lt;br /&gt;ಮುತ್ತು ರತುನ ಹೊನ್ನು ಎಲ್ಲ&lt;br /&gt;ಕಲ್ಲು ಮಣ್ಣ ವೈಭವಾ&lt;br /&gt;ಎಲವೊ ಹುಚ್ಚು ಮಾನವಾ&lt;br /&gt;ಒಂದು ಷೋಕು---ಬರಿಯ ಝೋಕು&lt;br /&gt;ಬದುಕಿನೊಂದು ಜಂಬವು&lt;br /&gt;ಒಲವೆ ಮೂಲ ಬಿಂಬವು.&lt;br /&gt;&lt;br /&gt;ಸಪ್ತ ನಾಕ ಸಪ್ತ ನರಕ&lt;br /&gt;ಅದರ ಬೆಳಕು ಕತ್ತಲು&lt;br /&gt;ಮನ್ವಂತರ ತನ್ವಂತರ&lt;br /&gt;ಅದರ ಕೋಟೆ ಕೊತ್ತಲು&lt;br /&gt;ಸಿಂಹಾಸನವನೇರಿ ಕುಳಿತೆ ;&lt;br /&gt;ತೊಡೆಗೆ ತೊಡೆಯ ಹಚ್ಚಿದೆ&lt;br /&gt;ಸರಿಯೆ, ಒಲಿದ ತೋಳಿಗಿಂತ&lt;br /&gt;ಅದರೊಳೇನು ಹೆಚ್ಚಿದೆ?&lt;br /&gt;&lt;br /&gt;ಎದೆಯ ಕಣ್ಣ ಮುಚ್ಚಿಕೊಂಡು&lt;br /&gt;ಏಕೊ ಏನೊ ಮೆಚ್ಚಿದೆ&lt;br /&gt;ಮರದ ಅಡಿಗೆ ಗುಡಿಸಲಿರಲಿ&lt;br /&gt;ಅಲ್ಲೆ ಒಲವು ಮೆರೆಯದೇ&lt;br /&gt;ನಲಿವು ಮೇರೆವರಿಯದೇ?&lt;br /&gt;................................................&lt;br /&gt;&lt;br /&gt;ಬೇಂದ್ರೆಯವರ ಹೆಂಡತಿ ಒಂದು ಲೌಕಿಕ ವಸ್ತುವನ್ನು ಆಸೆಪಟ್ಟು ಕೇಳಿದಾಗ, ಬೇಂದ್ರೆಯವರು ಅದಕ್ಕೊಂದು philosophic ಸಂದೇಶವನ್ನು ನೀಡುತ್ತಿದ್ದಾರೆ. ಮೊದಲನೆಯ ನುಡಿಯನ್ನು ನೋಡಿರಿ :&lt;br /&gt;&lt;br /&gt;ಅಷ್ಟು ಪ್ರೀತಿ ಇಷ್ಟು ಪ್ರೀತಿ--&lt;br /&gt;ಎಣಿಸಿ ಕಷ್ಟಬಡದಿರು&lt;br /&gt;ಒಲೆದು ಒಲಿಸಿ ಸುಖವಿರು&lt;br /&gt;ಎಷ್ಟೆಯಿರಲಿ ಅಷ್ಟೆ ಮಿಗಿಲು---ತಮ್ಮ ಕಿರಣ ತಮಗೆ ಹಗಲು ;&lt;br /&gt;ಉಳಿದ ಬೆಳಕು ಕತ್ತಲು.&lt;br /&gt;ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು&lt;br /&gt;ಉಳಿದ ಲೋಕ ಹಿತ್ತಲು.&lt;br /&gt;&lt;br /&gt;ಪ್ರೀತಿಯ ಮಡದಿಯೆ, ನನಗೆ ನಿನ್ನಲ್ಲಿರುವ ಪ್ರೀತಿಯನ್ನು  ಇಷ್ಟು , ಇಷ್ಟೇ  ಎಂದು ಎಣಿಸಿ ಕಷ್ಟಪಡಬೇಡ. (ಇಲ್ಲಿ ಎಣಿಸು ಎನ್ನುವದಕ್ಕೆ ಎರಡು ಅರ್ಥಗಳಿವೆ. ಎಣಿಸು=counting ಎನ್ನುವದು ಒಂದು ಅರ್ಥವಾದರೆ , ಎಣಿಸು=ಭಾವಿಸುವದು ಎನ್ನುವದು ಎರಡನೆಯ ಅರ್ಥ.)&lt;br /&gt;ನನಗೆ ಒಲೆದು ಎಂದರೆ ನನ್ನಲ್ಲಿ ಅನುರಕ್ತಳಾಗು ; ಒಲಿಸಿ ಎಂದರೆ ನನ್ನನ್ನು ಒಲಿಸಿಕೊಳ್ಳು ಅರ್ಥಾತ್ ನನ್ನ ಒಲವನ್ನು (ಕಷ್ಟಪಟ್ಟು) ಸಂಪಾದಿಸಿಕೊ , ಹಾಗೂ ಸುಖದಿಂದಿರು !&lt;br /&gt;&lt;br /&gt;ಕವಿಯು ಪ್ರೀತಿಯ ಈ ವ್ಯಾಪಾರದ ಎಲ್ಲಾ ಭಾರವನ್ನು ಹೆಂಡತಿಯ ಮೇಲೆ ಹಾಕುತ್ತಿದ್ದಾನೆ. ನೀನು ಒಡವೆಯನ್ನು ಕೇಳದೇ ನನ್ನ ಪ್ರೀತಿಯನ್ನು ಪಡೆಯಲು ನೀನೇ ಪ್ರಯತ್ನ ಮಾಡು (!) ಎನ್ನುವದು ಈ ಕವಿಯ ಸಂದೇಶ.&lt;br /&gt;ಇಂತಹ ಸಂದೇಶಕ್ಕೆ ಕವಿ ಕೊಡುವ ತಾತ್ವಿಕ support ಈ ರೀತಿಯಾಗಿದೆ :&lt;br /&gt;“ಎಷ್ಟೆಯಿರಲಿ ಅಷ್ಟೆ ಮಿಗಿಲು ,&lt;br /&gt;ತಮ್ಮ ಕಿರಣ ತಮಗೆ ಹಗಲು ;ಉಳಿದ ಬೆಳಕು ಕತ್ತಲು.”&lt;br /&gt;&lt;br /&gt;ಪಾಲಿಗೆ ಬಂದದ್ದು ಪಂಚಾಮೃತ. ನಮ್ಮ ಹಣೆಯಲ್ಲಿ ಎಷ್ಟೇ ಸ್ವಲ್ಪವಿದ್ದರೂ ಅದನ್ನೇ ಬಹಳ ಎಂದು ತಿಳಿಯಬೇಕು. ಯಾಕೆಂದರೆ, “ತಮ್ಮ ಕಿರಣ ತಮಗೆ ಹಗಲು ;ಉಳಿದ ಬೆಳಕು ಕತ್ತಲು.”&lt;br /&gt;ನಮ್ಮ ಮನೆಯ ಕಿಡಕಿಯಿಂದ ಒಳಗೆ ತೂರಿದ ಸೂರ್ಯನ ಒಂದೇ ಕಿರಣವು ನಮ್ಮ ಕತ್ತಲೆ ಕೋಣೆಗೆ ಬೆಳಕು ನೀಡುವದೇ ಹೊರತು, ಇತರ ನಕ್ಷತ್ರಗಳ ಕಿರಣಗಳಿಂದ ನಮ್ಮ ಮನೆಗೆ ಹಗಲು ಸಿಗಲಾರದು. ಆ ಬೆಳಕು ನಮ್ಮ ಮಟ್ಟಿಗೆ ಕತ್ತಲೆಯೇ ಸೈ!&lt;br /&gt;(ನಿನ್ನ ಜೀವನದಲ್ಲಿ ಪ್ರೀತಿಯ ಬೆಳಕನ್ನು ಕಾಣಬೇಕಾಗಿದ್ದರೆ ಹುಚ್ಚು ಹಂಬಲಗಳನ್ನು ಬಿಟ್ಟುಬಿಟ್ಟು, ನಿನ್ನ ಕವೀಶ್ವರ ಪತಿ ಕೊಡುವ ಪ್ರೀತಿಯನ್ನಷ್ಟೇ ನೆಚ್ಚಿಕೊ!)&lt;br /&gt;&lt;br /&gt;ವರಕವಿಗಳು ತಮ್ಮ ಕಲ್ಪನಾಶಕ್ತಿಯ ಬಲದಿಂದ ಇನ್ನಿಷ್ಟು ಉದಾಹರಣೆಗಳನ್ನು ಸೃಷ್ಟಿಸುತ್ತಾರೆ:&lt;br /&gt;“ಬಿಟ್ಟಲ್ಲಿಯೆ ಬೀಡು &lt;br /&gt;ಮತ್ತೆ ಆಡಿದಲ್ಲಿ ಅಂಗಳು&lt;br /&gt;ಉಳಿದ ಲೋಕ ಹಿತ್ತಲು.”&lt;br /&gt;&lt;br /&gt;ಬೇರೆಯವರ ಅನುಕರಣೆ, ಅನುಸರಣೆ ಬೇಡ ; ನಾವು ಎಲ್ಲಿ ನಿಲ್ಲುತ್ತೇವೆಯೊ ಅದೇ ನಮ್ಮ ಬೀಡು , ಅದೇ ನಮ್ಮ ನೆಲೆ.  ನಾವು ಎಲ್ಲಿ ಆಡುತ್ತೇವೊ ಅದೇ ನಮ್ಮ ಮನೆಯ ಅಂಗಳು. &lt;br /&gt;“ ಅಲ್ಲಾ, ಉಳಿದವರು ಎಷ್ಟು ಚೆನ್ನಾಗಿರೊ ಬೀಡಿನಲ್ಲಿ ಇದ್ದಾರಲ್ಲಾ” ಎಂದು ಅವರ ಹೆಂಡತಿ ಏನಾದರೂ ಅನುಮಾನ ವ್ಯಕ್ತ ಪಡಿಸಿದರೆ, ವರಕವಿಗಳ ಉತ್ತರ ಅದಕ್ಕೂ ಸಿದ್ಧವಾಗಿದೆ :&lt;br /&gt;“ಉಳಿದ ಲೋಕ ಹಿತ್ತಲು.”&lt;br /&gt;(=ಅದೆಲ್ಲಾ ನಮ್ಮ ಹಿಂದೆ ಇರೋದು, ನಾವು ಅದನ್ನೆಲ್ಲ ನೋಡೋದು ಬೇಡ !)&lt;br /&gt;&lt;br /&gt;ಈ ರೀತಿಯಾಗಿ ಹೆಂಡತಿಗೆ general philosophyಯನ್ನು ಹೇಳಿ ಮುಗಿಸಿದ ಕವಿ, ತನ್ನ ಮಾತುಗಳಿಂದ ತಾನೇ ಕಸಿವಿಸಿಗೊಳ್ಳುತ್ತಾನೆ. ಆತನಿಗೆ ಗೊತ್ತು: ತನ್ನ ಹೆಂಡತಿಯ ಒಂದೇ ಒಂದು ಸಣ್ಣ ಹಂಬಲವನ್ನು ತಾನು ಪೂರೈಸುತ್ತಿಲ್ಲ ಎಂದು. ತನ್ನ ಮೇಲೆ ತನಗೇ ಬರುತ್ತಿರುವ ಕೋಪವನ್ನು ಈಗ ಆತ ಅವಳ ಮೆಲೆ ತಿರುಗಿಸುತ್ತಾನೆ. ಹತಾಶನಾದ ಗಂಡ ಹೆಂಡತಿಯ ಮೇಲೆ ಹರಿಹಾಯುವದು ಒಂದು ಸಾಮಾನ್ಯ ಸಂಗತಿ. ‘ಒಂದು ಮುತ್ತಿನ ಸರವನ್ನು ಪಡೆದು, ನೀನು ಏನು ಮಹಾ ಸಾಧಿಸಿಕೊಂಡಂತಾಯ್ತು’ ಎಂದು ಆತ ಅವಳ ಮೇಲೆ ಹಾರಾಡುತ್ತಾನೆ :&lt;br /&gt;&lt;br /&gt;ಮುತ್ತಿನೆಕ್ಕಸರವನಿಕ್ಕೆ&lt;br /&gt;ಮುದ್ದಿಗೆ ಕಳೆಕಟ್ಟಿತೆ ?&lt;br /&gt;ತೊಯ್ದ ಎವೆಗೆ ಮುದ್ದನಿಡಲು&lt;br /&gt;ಮುದ್ದಿಗೆ ಅದು ತಟ್ಟಿತೆ ? &lt;br /&gt;ಕುದಿದ ಬಂದ ಕಂಬನಿಯಲು &lt;br /&gt;ಕಂಪು ಬರದೆ ಬಿಟ್ಟಿತೆ ?&lt;br /&gt;&lt;br /&gt;ಮುತ್ತಿನ ಸರ ತೊಡಿಸುವದರಿಂದ ಮಾತ್ರ ಪ್ರೀತಿಗೆ ಕಳೆ ಬರುವದೆ? ನಿನ್ನ ಕಣ್ಣೀರಿನಿಂದ ತೊಯ್ದ ರೆಪ್ಪೆಗಳಿಗೆ ನಾನು ಮುತ್ತು ಕೊಟ್ಟರೆ, ಅದು ನಿನ್ನ ಪ್ರೀತಿಗೆ ತಟ್ಟಲಾರದೆ? ನಿನ್ನ ಕುದಿಯುತ್ತಿರುವ ಮನಸ್ಸು ಹೊರಚೆಲ್ಲಿದ ಕಂಬನಿಗಳಲ್ಲಿ ಸಹ ಒಲವಿನ ಕಂಪು ಇಲ್ಲವೆ?  ಗಂಡ ಹೆಂಡಿರಲ್ಲಿ ಪರಸ್ಪರ ಒಲವಿನ ಭಾವನೆಗಳೆ ಮುಖ್ಯವಲ್ಲವೆ?&lt;br /&gt;ಇದು ಕವಿಯು ದಾಂಪತ್ಯದ ನೆಲೆಗಟ್ಟಿನಲ್ಲಿ ಮಾಡುತ್ತಿರುವ argument.&lt;br /&gt;&lt;br /&gt;ಆದರೆ ಹೆಂಡತಿ ಮುಖವನ್ನು ಬೇರೆಡೆಗೆ ಹೊರಳಿಸಿ ಬಿಟ್ಟಿದ್ದಾಳೆ. Exasperated ಆದ ಕವಿ ಮಾನವ ಕುಲದ ಮೂರ್ಖತನಕ್ಕೆ ಬೇಸತ್ತು , ವ್ಯಥೆಪಟ್ಟು ಉದ್ಗರಿಸುತ್ತಾನೆ:&lt;br /&gt;&lt;br /&gt;ಮುತ್ತು ರತುನ ಹೊನ್ನು ಎಲ್ಲ&lt;br /&gt;ಕಲ್ಲು ಮಣ್ಣ ವೈಭವಾ&lt;br /&gt;ಎಲವೊ ಹುಚ್ಚು ಮಾನವಾ&lt;br /&gt;ಒಂದು ಷೋಕು---ಬರಿಯ ಝೋಕು&lt;br /&gt;ಬದುಕಿನೊಂದು ಜಂಬವು&lt;br /&gt;ಒಲವೆ ಮೂಲ ಬಿಂಬವು.&lt;br /&gt;&lt;br /&gt;ಈ precious stonesಗಳೆಲ್ಲ earthly glory ಮಾತ್ರ. ಅವು ಸತ್ಯವಲ್ಲ.&lt;br /&gt;(ಟಿಪ್ಪಣಿ : ರತ್ನಗಳು ಭೂಮಿಯ ಒಳಗಡೆ ಸಿಗುವದರಿಂದ ಅವುಗಳಿಗೆ “ಕಲ್ಲು ಮಣ್ಣ ವೈಭವಾ” ಎಂದು ಕರೆಯುವದು ಒಂದು ವ್ಯಂಗ್ಯೋಕ್ತಿ.)&lt;br /&gt;ಇದೆಲ್ಲ ಬರಿಯ ಶೋಕಿ, ಬರಿಯ ಡೌಲು , vanity of life.&lt;br /&gt;ಪ್ರೀತಿಯೇ ಸತ್ಯ, ಬೇರೆ ಎಲ್ಲ ಮಿಥ್ಯ.&lt;br /&gt;&lt;br /&gt;ಕವಿ ಮುಂದುವರಿದು ಸಂಪತ್ತಿನ ಸಂಭ್ರಮವನ್ನಷ್ಟೇ ಅಲ್ಲ, ಅಧಿಕಾರದ ವೈಭವವನ್ನೂ ಸಹ ತುಚ್ಛೀಕರಿಸುತ್ತಾನೆ. ಕೇವಲ ಭೂಮಿಯ ಒಡೆತನವಲ್ಲ, ಸಪ್ತಸ್ವರ್ಗ ಹಾಗೂ ಸಪ್ತನರಕಗಳನ್ನು ಒಳಗೊಂಡ ಇಂದ್ರಾಧಿಕಾರದ ವೈಭೋಗಕ್ಕೂ ಸಹ ಏನು ಬೆಲೆಯಿದೆ?&lt;br /&gt;&lt;br /&gt;ಸಪ್ತ ನಾಕ ಸಪ್ತ ನರಕ&lt;br /&gt;ಅದರ ಬೆಳಕು ಕತ್ತಲು&lt;br /&gt;ಮನ್ವಂತರ ತನ್ವಂತರ&lt;br /&gt;ಅದರ ಕೋಟೆ ಕೊತ್ತಲು&lt;br /&gt;ಸಿಂಹಾಸನವನೇರಿ ಕುಳಿತೆ ;&lt;br /&gt;ತೊಡೆಗೆ ತೊಡೆಯ ಹಚ್ಚಿದೆ&lt;br /&gt;ಸರಿಯೆ, ಒಲಿದ ತೋಳಿಗಿಂತ&lt;br /&gt;ಅದರೊಳೇನು ಹೆಚ್ಚಿದೆ?&lt;br /&gt;&lt;br /&gt;ಕವಿ ತಮ್ಮ ಹೆಂಡತಿಗೆ ಆಹ್ವಾನ ನೀಡುತ್ತಿದ್ದಾರೆ. ಇಂತಹ ಲೋಕಾಧಿಪತಿಯ ಹೆಂಡತಿಯಾಗಿ ನೀನೂ ಸಹ ಸಿಂಹಾಸನವನ್ನೇರಬಹುದು. ಸಾಮ್ರಾಟನ ತೊಡೆಗೆ ತೊಡೆ ಹಚ್ಚಿ ಕುಳಿತುಕೊಳ್ಳಬಹುದು. ಅವನ pomp and powerದಲ್ಲಿ ನೀನೂ ಭಾಗಿಯಾಗಬಹುದು. ಇದೆಲ್ಲ ಸರಿ, ಒಲಿದ ತೋಳುಗಳ ಅಪ್ಪುಗೆಗಿಂತ ಇದೆಲ್ಲ ಹೆಚ್ಚಿನದೆ?&lt;br /&gt;&lt;br /&gt;ಕವಿ ತನ್ನೆಲ್ಲ argumentಗಳನ್ನು ತನ್ನ ಅರ್ಧಾಂಗಿಗೆ ಹೇಳಿದ್ದಾನೆ. &lt;br /&gt;ಮುತ್ತಿನ ಹಾರಕ್ಕಿಂತ ಪತಿಯ ಪ್ರೇಮವೇ ಹೆಚ್ಚಿನದು ಎಂದು ಅವಳಿಗೆ ತಿಳಿಸಿದ್ದಾನೆ.&lt;br /&gt;ತನ್ನ ಹತಾಶೆ, ತನ್ನ ಅಸಹಾಯಕತೆಯನ್ನೆಲ್ಲ ಹೊರಕಕ್ಕಿ, ಆತನೀಗ ನಿರುಮ್ಮಳನಾಗಿದ್ದಾನೆ. &lt;br /&gt;ಇಂತಹ ಸಮಾಧಾನದ  ಸ್ಥಿತಿಯಲ್ಲಿ ಆತ ಅಂತರ್ಮುಖಿಯಾಗಿ ಏನನ್ನೊ ಧ್ಯಾನಿಸುತ್ತಾನೆ :&lt;br /&gt;&lt;br /&gt;ಎದೆಯ ಕಣ್ಣ ಮುಚ್ಚಿಕೊಂಡು&lt;br /&gt;ಏಕೊ ಏನೊ ಮೆಚ್ಚಿದೆ&lt;br /&gt;ಮರದ ಅಡಿಗೆ ಗುಡಿಸಲಿರಲಿ&lt;br /&gt;ಅಲ್ಲೆ ಒಲವು ಮೆರೆಯದೇ&lt;br /&gt;ನಲಿವು ಮೇರೆವರಿಯದೇ?&lt;br /&gt;&lt;br /&gt;ನಿಜ, ಒಲವಿನ ವೈಭವಕ್ಕೆ ಲೌಕಿಕ ಸಂಪತ್ತು ಬೇಕಾಗಿಲ್ಲ. ಪುಟ್ಟ ಗುಡಿಸಲಿನಲ್ಲಿಯೂ ಸಹ ಒಲವು ಹಾಗೂ ನಲಿವು ಮಹಾಪೂರದಂತೆ ಹರಿಯಬಲ್ಲವು ! &lt;br /&gt;ಹೆಂಡತಿಯ ಆಸೆಯನ್ನು ಪೂರೈಸಲಾಗದ ಬಡ ಕವಿಯು ಕಂಡ ಸತ್ಯವಿದು !&lt;br /&gt;&lt;br /&gt;&lt;a href="http://kannada-nudi.blogspot.com"&gt;ತೊದಲು ಮಾತಿನ&lt;/a&gt; &lt;span style="font-weight:bold;"&gt;ಶ್ರೀ ಕೇಶವ ಕುಲಕರ್ಣಿಯವರು&lt;/span&gt; ಈ ಕವನದ ಕೆಲವು ವೈಶಿಷ್ಟ್ಯಗಳನ್ನು ವಿವರಿಸಿದ್ದಾರೆ. ಅವು ಇಂತಿವೆ:&lt;br /&gt;೧:&lt;br /&gt;ಕವಿತೆ ಮೊದಲಿನಿಂದ ಕೊನೆಯವರೆಗೆ ನೋಡಲು ಒಂದೇ ತರಹದ ಛಂದಸ್ಸಿನಲ್ಲಿ ಬರೆಯಲ್ಪಟ್ಟಂತೆ ಕಂಡರೂ ನುಡಿಯಿಂದ ನುಡಿಗೆ ಶಬ್ದಗಳ ಬಳಕೆಯಲ್ಲಿ ಅದ್ಭುತ ಬದಲಾವಣೆಯಿದೆ. ಮೊದಲ ನುಡಿಯಲ್ಲಿ&lt;br /&gt;"ತಮ್ಮ ಕಿರಣ ತಮಗೆ ಹಗಲು ;&lt;br /&gt;ಉಳಿದ ಬೆಳಕು ಕತ್ತಲು.&lt;br /&gt;ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು&lt;br /&gt;ಉಳಿದ ಲೋಕ ಹಿತ್ತಲು."&lt;br /&gt;ಎಂಬ ಹೊಸ ರೂಪಕಗಳನ್ನು ಶಬ್ದಗಾರುಡಿಗ ಆರಾಮವಾಗಿ ತಂದು ನಿಲ್ಲಿಸುತ್ತಾರೆ.&lt;br /&gt;&lt;br /&gt;ಮುಂದಿನ ನುಡಿ ಬರೀ ಉತ್ತರಗಳನ್ನೇ ಹೇಳುವ ಪ್ರಶ್ನೆಗಳ ನುಡಿ.&lt;br /&gt;&lt;br /&gt;ಮೂರನೇ ನುಡಿಯ ಶಬ್ದ ಮತ್ತು ಭಾವಗಳಲ್ಲಿ ಬರೀ ಲೌಕಿಕತೆಯೇ ಇದೆ. ಶೋಕು, ಝೋಕು ಎಂಬ ಹೊಸಕನ್ನಡ ಪದಗಳು ಬರುತ್ತವೆ.&lt;br /&gt;&lt;br /&gt;ನಾಕನೇ ನುಡಿಯಲ್ಲಿ ಇದ್ದಕ್ಕಿದ್ದಂತೆ ಶಬ್ದಗಳೆಲ್ಲ ಪುರಾಣದ್ದಾಗುತ್ತವೆ. ಆದರೆ ತಟ್ಟನೇ "ತೊಡೆಗೆ ತೊಡೆಯ ಹಚ್ಚಿದೆ" ಎಂದು ಶುದ್ಧ ಕನ್ನಡ ಬಂದು ಆ ನುಡಿಯಲ್ಲಿ ಶಾಕ್ ಕೊಡುತ್ತದೆ.&lt;br /&gt;&lt;br /&gt;ಐದನೇ ನುಡಿ ಧ್ಯಾನದ ಸ್ಥಿತಿಯನ್ನು ತಲುಪುತ್ತದೆ.&lt;br /&gt;&lt;br /&gt;೨. "ತೊಡೆಗೆ ತೊಡೆಯ ಹಚ್ಚಿದೆ, ಸರಿಯೆ," ನನಗೆ ಎರಡು ಅರ್ಥ ಕೊಟ್ಟಿತು. ಒಂದು, ನೀವು ಬರೆದಂತೆ "ಸಾಮ್ರಾಟನ ತೊಡೆಗೆ ತೊಡೆ ಹಚ್ಚಿ ಕುಳಿತುಕೊಳ್ಳಬಹುದು.", ಇನ್ನೊಂದು ನನಗನಿಸಿದ್ದು, "ಕಾಮದ ಮದ (ತೊಡೆಗೆ ತೊಡೆ)ಕ್ಕಿಂತ ಪ್ರೀತಿ (ಒಲಿದ ತೋಳು) ಕವಿಗೆ ಮುಖ್ಯವಾಗುತ್ತದೆ.&lt;br /&gt;&lt;br /&gt;ಬೇಂದ್ರೆಯವರ ಕವನಗಳು ತಿಳಿದುಕೊಂಡಷ್ಟೂ ಹಿಗ್ಗುತ್ತಲೇ ಹೋಗುತ್ತವೆ! ಜೊತೆಗೆ ನಮ್ಮ ಹಿಗ್ಗೂ ಹೆಚ್ಚುತ್ತಲೇ ಹೋಗುತ್ತದೆ!&lt;br /&gt;*****************************************************&lt;br /&gt;[ ಟಿಪ್ಪಣಿ:&lt;br /&gt;ಕವಿಯ ಲಂಬಿತ ಉದಾಸ ಭಾವಕ್ಕೆ ತಕ್ಕಂತೆ ಹಾಗೂ ಅವನ ಲಂಬಿತ argumentಗಳಿಗೆ ಹೊಂದುವಂತೆ, ಕವನವು ಲಂಬಿತ ಛಂದಸ್ಸಿನಲ್ಲಿ ಇರುವದನ್ನು ಗಮನಿಸಬಹುದು.&lt;br /&gt;&lt;br /&gt;ಬೇಂದ್ರೆಯವರು  ೧೯೪೩ರಲ್ಲಿ  ಕಾಳಿದಾಸನ ‘ಮೇಘದೂತ ’ವನ್ನು ಕನ್ನಡಕ್ಕೆ ಅನುವಾದಿಸಿದರು. ಆ ಅನುವಾದದ ರಾಜಧನದಿಂದ ತಮ್ಮ ಹೆಂಡತಿಗೆ ಮುತ್ತಿನ ಏಕಾಕ್ಷಿ ಸರವನ್ನು ಕೊಡಿಸಿ ಅವಳ ಹಂಬಲವನ್ನು ಪೂರೈಸಿದರು.]&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-8590864295210297834?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/8590864295210297834/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=8590864295210297834' title='31 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/8590864295210297834'/><link rel='self' type='application/atom+xml' href='http://www.blogger.com/feeds/5939841257923965225/posts/default/8590864295210297834'/><link rel='alternate' type='text/html' href='http://sallaap.blogspot.com/2009/05/blog-post.html' title='ಅಷ್ಟು ಪ್ರೀತಿ ಇಷ್ಟು ಪ್ರೀತಿ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>31</thr:total></entry><entry><id>tag:blogger.com,1999:blog-5939841257923965225.post-104761080947009830</id><published>2009-04-26T19:03:00.005+05:30</published><updated>2009-04-27T00:51:49.787+05:30</updated><title type='text'>ಸಂಜೀಯ ಜಾವಿಗೆ</title><content type='html'>ಛಂದಸ್ಸು ಬೇಂದ್ರೆಯವರ ಕಾವ್ಯದ ಸಹಜವಾದ ಸಿದ್ಧಿಗಳಲ್ಲಿ ಒಂದು. ಬೇಂದ್ರೆಯವರು ಕವನವನ್ನು ಬರೆಯುತ್ತಿದ್ದಿಲ್ಲ ; ಕವನವು ಅವರ ಮನದಲ್ಲಿ ಮೂಡುತ್ತಿತ್ತು. ಒಂದು ಘಟನೆಯು ಅವರ ಮನದಲ್ಲಿ ಒಂದು ಭಾವವನ್ನು ಉದ್ದೀಪಿಸಿದ ಬಳಿಕ, ಆ ಭಾವಕ್ಕೆ ತಕ್ಕದಾದ ನಾದ ಹಾಗೂ ಛಂದಗಳೊಂದಿಗೆ  ಪ್ರಾಸಬದ್ಧ ಪದಗಳು ಅವರ ಮನದಿಂದ ಕವನರೂಪದಲ್ಲಿ ಹೊರಹೊಮ್ಮುತ್ತಿದ್ದವು. &lt;br /&gt;ಇದರ ಒಂದು ಶ್ರೇಷ್ಠ ಉದಾಹರಣೆ ಎಂದರೆ ‘ಪಾತರಗಿತ್ತಿ ಪಕ್ಕ’ ಎನ್ನುವ ಕವನ. &lt;br /&gt;&lt;br /&gt;ಪಾತರಗಿತ್ತಿಯು ಎಷ್ಟು ಕ್ಷಿಪ್ರವಾಗಿ ರೆಕ್ಕೆಗಳನ್ನು ಬಡೆಯುವದೊ,  ಅಷ್ಟೇ ಕ್ಷಿಪ್ರವಾದ metre ಈ ಕವನಕ್ಕಿದೆ. ಪಾತರಗಿತ್ತಿಯು ಕ್ಷಣಾರ್ಧದಲ್ಲಿ ಎಲ್ಲೆಲ್ಲಿ ಸುತ್ತಾಡುವದೊ, ಈ ಕವನ ಸಹ ಅದೇ ವೇಗದಲ್ಲಿ ಎಲ್ಲೆಲ್ಲೊ ಸುತ್ತಾಡುತ್ತದೆ. (ಕಲ್ಪನೆಯ ರೆಕ್ಕೆಗಳ ಮೂಲಕ ಹಾರಾಡಿದರೂ ಸಹ ಬೇಂದ್ರೆಯವರ ಕವನ ವಾಸ್ತವದ ನೆಲೆಗಳನ್ನು ಬಿಡುವದಿಲ್ಲ.)&lt;br /&gt;ಇಂತಹದೇ ಸಹಜ ಛಂದಸ್ಸಿನ ಮತ್ತೊಂದು ಕವನ : “ಸಂಜೀಯ ಜಾವಿಗೆ ”.&lt;br /&gt;&lt;br /&gt;ಮೂರೂಸಂಜೆಯ ಹೊತ್ತಿನಲ್ಲಿ ಬೇಂದ್ರೆಯವರು ತಮ್ಮ ಮನೆಯ ಮುಂಭಾಗದಲ್ಲಿ ಕುಳಿತುಕೊಂಡಿದ್ದಾರೆ. ಅವರ ಪುಟ್ಟ ಮಗಳು ಮಂಗಲಾ ನೀರು ತರುವವರ ಜೊತೆಗೆ ತಾನೂ ಸಹ ಬಾವಿಗೆ ಹೊರಟಿದ್ದಾಳೆ. ಆ ಕಾಲದಲ್ಲಿ ನೀರನ್ನು ಕೆರೆ ಅಥವಾ ಬಾವಿಯಿಂದಲೇ ತರಬೇಕಾಗಿತ್ತು. ಹೊತ್ತು ಮೂಡುವ ಮುನ್ನ ಹಾಗೂ ಹೊತ್ತು ಮುಳುಗುವ ಸಮಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು. &lt;br /&gt;&lt;br /&gt;ಈ ಪುಟ್ಟ ಬಾಲೆ, ಪುಟ್ಟ ಬಿಂದಿಗೆ ಹೊತ್ತುಕೊಂಡು ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತ ನೀರು ತರಲು ಹೊರಟಾಗ, ಬೇಂದ್ರೆಯವರಿಗೆ ವಿನೋದವೆನಿಸಿದೆ. ಅವರು ಅವಳ ಚಲನವಲನವನ್ನು ಕೌತುಕದಿಂದ ಗಮನಿಸುತ್ತಿದ್ದಾರೆ. ಅವಳ ಪುಟ್ಟ ಹೆಜ್ಜೆಗಳ ತಾಳಕ್ಕೆ ತಕ್ಕಂತೆ ಅವರ ಮನದಲ್ಲಿ ಕವನ ಮೂಡುತ್ತಿದೆ. &lt;br /&gt;ಕವನದ ಪೂರ್ತಿಪಾಠ ಇಂತಿದೆ:&lt;br /&gt;&lt;br /&gt;ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||&lt;br /&gt;ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||&lt;br /&gt;ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||&lt;br /&gt;ಒಲಿದಾಡೊ ರೀತಿಗೆ | ಹಾಡ್ಯಾನೊ ಗೀತಿಗೆ ||&lt;br /&gt;ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||&lt;br /&gt;&lt;br /&gt;ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ ||&lt;br /&gt;ಕಿರಗೀಯ ನೀರಿಗೆ | ಒದೆಯೂತ ದಾರಿಗೆ ||&lt;br /&gt;ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ ||&lt;br /&gt;ಏನಾರ ನಡಿಗೆ | ಯಾವೂರ ಹುಡಿಗೆ ||&lt;br /&gt;ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||&lt;br /&gt;&lt;br /&gt;ಎರಡೂನು ಸಾಲಿಗೆ | ಹಾದ್ಯುದ್ದ ಬೇಲಿಗೆ ||&lt;br /&gt;ಗುಲಬಾಕ್ಷಿ ಮಲ್ಲಿಗೆ | ಕೇಳತಾವ ಕಲ್ಲಿಗೆ ||&lt;br /&gt;“ ಕಳಸೋದೆ ನೀರಿಗೆ | ಇಂಥ ಸುಕುಮಾರಿಗೆ ||&lt;br /&gt;ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||&lt;br /&gt;ಸಂಜೀಯ ಜಾವಿಗೆ | ಬಂದ್ಯಲ್ಲ ಬಾವಿಗೆ || &lt;br /&gt;&lt;br /&gt;ಮಾತೀಗು ಆಚೆಗೆ | ಮೀರಿದ್ದ ನಾಚಿಗೆ ||&lt;br /&gt;ಮುಸುಕ್ಯಾವ ಹೂವಿಗೆ | ಬಂದೀಯೆ ಬಾವಿಗೆ ||&lt;br /&gt;ಗಿಲುಕೆಂಬೊ ಬಳಿಗೆ | ಕೆಲಸೊಂದೊ ಗಳಿಗೆ ||&lt;br /&gt;ಗೆಳತೇರ ಒಂದಿದೆ | ಸೇದಿದೆ ಬಿಂದಿಗೆ ||&lt;br /&gt;ಸಂಜೀಯ ಜಾವಿಗೆ | ಬಂದೀಯೆ ಬಾವಿಗೆ ||&lt;br /&gt;&lt;br /&gt;ಮೂಗಿನ ನೇರಿಗೆ | ಹೊರಳೀದೆ ಊರಿಗೆ ||&lt;br /&gt;ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ ||&lt;br /&gt;ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ ||&lt;br /&gt;ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ ||&lt;br /&gt;ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ || &lt;br /&gt;&lt;br /&gt;ಒಂದೇನೆ ಬಾರಿಗೆ | ಹೋದೆ ಸೀ-ನೀರಿಗೆ ||&lt;br /&gt;ಬೆವರೀನ ಸಾರಿಗೆ | ತಂದೀದಿ ಯಾರಿಗೆ ||&lt;br /&gt;ಇಬ್ಬನಿ ಹೂವಿಗೆ | ನಸುಕಿನ ಜಾವಿಗೆ ||&lt;br /&gt;ಮುತ್ತ್ಹನಿ ಮಾರಿಗೆ | ಮುತ್ತ್ಯಾವೊ ನಾರಿಗೆ ||&lt;br /&gt;ಸಂಜೀಯ ಜಾವಿಗೆ | ಹೋಗಿಯು ಬಾವಿಗೆ ||&lt;br /&gt;&lt;br /&gt;ಕೆಲಸಾನ ಆಟಿಗೆ | ಮಾಡುವ ಸೂಟಿಗೆ |&lt;br /&gt;ಹಸನಾದ ಧರತಿಗೆ | ಮೆಚ್ಚಿದೆ ಗರತಿಗೆ ||&lt;br /&gt;ಕುಣಿಸಿದೆ ಇಂದಿಗೆ | ಕಣ್ಬಿಟ್ಟ ಮಂದಿಗೆ ||&lt;br /&gt;ನೀವಾಳಿ ದಿಟ್ಟಿಗೆ | ಕಣ್ಣೆಲ್ಲ ಒಟ್ಟಿಗೆ ||&lt;br /&gt;ಸಂಜೀಯ ಜಾವಿಗೆ | ಹೋಗಿದ್ದ್ಯೆ ಬಾವಿಗೆ ||&lt;br /&gt;&lt;br /&gt;ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||&lt;br /&gt;ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||&lt;br /&gt;ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||&lt;br /&gt;ಒಲಿದಾಡೊ ರೀತಿಗೆ | ಹಾಡ್ಯಾನ ಗೀತಿಗೆ ||&lt;br /&gt;ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||&lt;br /&gt;vvvvvvvvvvvvvvvvvvvvvvvvvvvvvvvvvvvvvvvvvvvvvvv&lt;br /&gt;&lt;br /&gt;ಪುಟ್ಟ ಮಂಗಲೆಯನ್ನು ಎತ್ತಿಕೊಂಡು ಆಡುವದರಿಂದ  ತಂದೆಗೆ ಸಂತೋಷ ಉಕ್ಕುತ್ತದೆ.  ಅವಳನ್ನು ಆತ ಎತ್ತಿ ಎತ್ತಿ ಕುಣಿಸುತ್ತಾನೆ. ಇಬ್ಬರ ಮನಸ್ಸೂ ಆನಂದದ ಆಸೆಯಲ್ಲಿ ಅರಳುತ್ತದೆ. ಕುಣಿಸುವಾಗ ಈತ ಮಾಡುವ ‘ಊ ಊ’ ರಾಗದ ದನಿಗೆ ತಕ್ಕಂತೆ ಅವಳು ತೂಗುತ್ತಾಳೆ. ಒಬ್ಬರಿಗೊಬ್ಬರು ಮಮತೆಯಿಂದ ಸ್ಪಂದಿಸುತ್ತಾರೆ. ಈ ಸ್ಪಂದನದಿಂದ ಉದ್ದೀಪ್ತನಾದ ಕವಿಯಲ್ಲಿ ಹಾಡು ಮೂಡುತ್ತದೆ.&lt;br /&gt;&lt;br /&gt;“ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||&lt;br /&gt;ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||&lt;br /&gt;ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||&lt;br /&gt;ಒಲಿದಾಡೊ ರೀತಿಗೆ | ಹಾಡ್ಯಾನೊ ಗೀತಿಗೆ ||&lt;br /&gt;ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||”&lt;br /&gt;&lt;br /&gt;ಇಂತಹ ಕಾವ್ಯೋದ್ದೀಪನಕ್ಕೆ ಕಾರಣಳಾಗುವ ಈ ಮಗಳು , ಮಂಗಳೆ ಇದೀಗ ಮೂರೂಸಂಜೆಯ ಹೊತ್ತಿನಲ್ಲಿ ನೀರು ತರಲು ಬಾವಿಗೆ ಹೊರಟಿದ್ದಾಳೆ.&lt;br /&gt;ಈ ಪುಟ್ಟ ಬಾಲೆ ನಡೆಯುತ್ತಿರುವ ಪರಿಯಾದರೂ ಎಂತಹದು? ಅವಸರದಲ್ಲಿ  ಧಾವಿಸುತ್ತಿರುವದರಿಂದ ತಾನು ಉಟ್ಟುಕೊಂಡ ಕಿರಿಗೆ (=ಸಣ್ಣ ಸೀರೆ)ಯ ನಿರಿಗೆಗಳನ್ನು ಅವಳು ಚಿಮ್ಮುತ್ತಿದ್ದಾಳೆ. ಈ ಕಿರಿಗೆ ಸಹ ಅವಳಿಗೆ ದೊಡ್ಡದೇ ಆಗಿದೆ. ಅದು ಅವಳ ಅಂಗಾಲುಗಳನ್ನು ದಾಟಿ, ನೆಲವನ್ನು ಸ್ಪರ್ಷಿಸುತ್ತದೆ. ಆದುದರಿಂದ ಕವಿ ಇದನ್ನು ‘ಒದೆಯೂತ ದಾರಿಗೆ’ ಎಂದು ಬಣ್ಣಿಸುತ್ತಾನೆ. &lt;br /&gt;&lt;br /&gt;“ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ ||&lt;br /&gt;ಕಿರಗೀಯ ನೀರಿಗೆ | ಒದೆಯೂತ ದಾರಿಗೆ ||&lt;br /&gt;ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ ||&lt;br /&gt;ಏನಾರ ನಡಿಗೆ | ಯಾವೂರ ಹುಡಿಗೆ ||&lt;br /&gt;ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||”&lt;br /&gt;&lt;br /&gt;ಅದರಂತೆ ಅವಳ ಗೆಜ್ಜೆಗಳು ಅವಳ ಹೆಜ್ಜೆಗೆ ತಾಕುತ್ತಿವೆ. ಈ ಪುಟ್ಟ ಚೆಲುವಿಯನ್ನು  ಕಂಡ ಕವಿಗೆ ತನ್ನ ಮಗಳಲ್ಲಿಯೇ ಹೊಸದೊಂದು ಸೌಂದರ್ಯ ಕಾಣುತ್ತದೆ. She appears to him as a beautiful stranger! ಅಗಾಧಪಟ್ಟುಕೊಂಡ ಕವಿ, “ಏನಾರ ನಡಿಗೆ, ಯಾವೂರ ಹುಡಿಗೆ!” ಎಂದು ಉದ್ಗಾರವೆತ್ತುತ್ತಾನೆ.&lt;br /&gt;&lt;br /&gt;ಇವಳು ಹೋಗುತ್ತಿರುವ ಕಿರುದಾರಿಯ ಎರಡೂ ಬದಿಗೆ ಬೇಲಿ ಹಬ್ಬಿದೆ. ಆ ಬೇಲಿಯಲ್ಲಿ , ಬಾವಿಯ ಸನಿಹದಲ್ಲಿ  ಗುಲಬಾಕ್ಷಿ ಹಾಗು ಕಾಡುಮಲ್ಲಿಗೆ ಬೆಳೆದಿವೆ. ಅವೂ ಸಹ ಈ ಬಾಲೆಯನ್ನು ನೋಡುತ್ತವೆ. ತಂದೆಯಲ್ಲಿ ಕೌತುಕವನ್ನು ಹುಟ್ಟಿಸಿದ ಈ ದೃಶ್ಯವು ಹೂವುಗಳಲ್ಲಿ ಕನಿಕರವನ್ನು ಹುಟ್ಟಿಸಿದೆ. ನೈಸರ್ಗಿಕ ವಸ್ತುಗಳಲ್ಲಿ ಹುಟ್ಟುವ ಅನುಕಂಪ ಭಾವನೆಯು, ಮನುಷ್ಯರಲ್ಲಿ ಹುಟ್ಟಲಾರದೇನೊ?&lt;br /&gt;&lt;br /&gt;“ಎರಡೂನು ಸಾಲಿಗೆ | ಹಾದ್ಯುದ್ದ ಬೇಲಿಗೆ ||&lt;br /&gt;ಗುಲಬಾಕ್ಷಿ ಮಲ್ಲಿಗೆ | ಕೇಳತಾವ ಕಲ್ಲಿಗೆ ||&lt;br /&gt;“ ಕಳಸೋದೆ ನೀರಿಗೆ | ಇಂಥ ಸುಕುಮಾರಿಗೆ ||&lt;br /&gt;ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||&lt;br /&gt;ಸಂಜೀಯ ಜಾವಿಗೆ | ಬಂದ್ಯಲ್ಲ ಬಾವಿಗೆ || ”&lt;br /&gt;&lt;br /&gt;ಹೂವು ಮೃದುತ್ವದ ಪ್ರತೀಕ. ಕಲ್ಲು ಕಾಠಿಣ್ಯದ ಪ್ರತೀಕ. &lt;br /&gt;(‘ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ’ ಎನ್ನುವ ಕಾಳಿದಾಸನ ವಾಕ್ಯವನ್ನು ನೆನಪಿಸಿಕೊಳ್ಳಿ.) ಕಲ್ಲುಮನಸ್ಸಿನ  ಕಲ್ಲನ್ನೇ ಈ ಹೂವುಗಳು ಕೇಳುತ್ತವೆ:&lt;br /&gt;“ ಕಳಸೋದೆ ನೀರಿಗೆ , ಇಂಥ ಸುಕುಮಾರಿಗೆ ? ಅದೂ ಸಹ ಇಂತಹ ಮುಚ್ಚಂಜೆಯ ವೇಳೆಯಲ್ಲಿ? ”&lt;br /&gt;ಈ ಪ್ರಶ್ನೆಗೆ ಆ ಕಲ್ಲು ಸಹ ಕರಗಿರಬಹುದೆ?&lt;br /&gt;&lt;br /&gt;ಕಾಲವನ್ನು ಗುರುತಿಸಲು ಮನುಷ್ಯರಿಗೆ ಕಾಲಯಂತ್ರವೆನ್ನುವ ಸಾಧನವಿದೆ. ಮರ, ಗಿಡ, ಹೂವು ಮೊದಲಾದ ನೈಸರ್ಗಿಕ ವಸ್ತುಗಳು ಕಾಲವನ್ನು ಹೇಗೆ ಗುರುತಿಸುತ್ತಿವೆ?&lt;br /&gt;“ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||&lt;br /&gt;ಮೂರೂಸಂಜೆಯ ನಾಲಿಗೆ (=ಮುಳುಗುತ್ತಿರುವ ಸೂರ್ಯಕಿರಣಗಳು) ಇವಳ ಅಂಗಾಲನ್ನು ಸ್ಪರ್ಶಿಸುತ್ತಿವೆ. ಇದು ಹೊತ್ತು ಮುಳುಗುವ ಸಮಯ. ಇಂತಹ ಸಮಯದಲ್ಲಿ ಯಾರಾದರೂ ಇಂತಹ ಪುಟ್ಟ ಹುಡುಗೆಯನ್ನು ನೀರು ತರಲು ಕಳಿಸಬಹುದೆ?&lt;br /&gt;ತಮ್ಮ ಪ್ರಶ್ನೆಗೆ ಉತ್ತರಿಸುವರಾರೂ ಇಲ್ಲವೆಂದು ಆ ಹೂವುಗಳು ಆ ಹುಡುಗೆಯನ್ನೇ ಕೇಳುತ್ತವೆ:&lt;br /&gt;“ಯಾಕವ್ವಾ, ಸಂಜೀಯ ಜಾವಿಗೆ  ಬಂದ್ಯಲ್ಲ ಬಾವಿಗೆ ? ”&lt;br /&gt;&lt;br /&gt;ಯಾರಿಂದಲೂ ಉತ್ತರ ಸಿಗದಿದ್ದಾಗ, ಆ ಹೂವುಗಳು ತಮ್ಮ ಮಾತಿಗಾಗಿ ತಾವೇ ನಾಚಿಕೊಳ್ಳುತ್ತವೆ. (ಹೂವುಗಳು ನಾಚಿಕೊಳ್ಳುವದೆಂದರೇನು? ಕೆಲವು ಹೂವುಗಳು ಸಂಜೆಯಾದಾಗ ಮುಚ್ಚಿಕೊಳ್ಳುತ್ತವೆ.) ಮೃದು ಸ್ವಭಾವದ ಆ ಹೂವುಗಳ ನಾಚಿಗೆಯ ಭಾವನೆಯು ಮಾತಿನಲ್ಲಿ ಹೇಳಲು ಸಾಧ್ಯವಾಗದಂತಹದು. (ಅದಕ್ಕಾಗಿಯೇ ಅವು ಮುಚ್ಚಿಕೊಳ್ಳುವದು.)&lt;br /&gt;&lt;br /&gt;“ಮಾತೀಗು ಆಚೆಗೆ | ಮೀರಿದ್ದ ನಾಚಿಗೆ ||&lt;br /&gt;ಮುಸುಕ್ಯಾವ ಹೂವಿಗೆ | ಬಂದೀಯೆ ಬಾವಿಗೆ ||&lt;br /&gt;ಗಿಲುಕೆಂಬೊ ಬಳಿಗೆ | ಕೆಲಸೊಂದೊ ಗಳಿಗೆ ||&lt;br /&gt;ಗೆಳತೇರ ಒಂದಿದೆ | ಸೇದಿದೆ ಬಿಂದಿಗೆ ||&lt;br /&gt;ಸಂಜೀಯ ಜಾವಿಗೆ | ಬಂದೀಯೆ ಬಾವಿಗೆ ||”&lt;br /&gt;&lt;br /&gt;ಈ ಬಾಲೆಯಾದರೊ ಬಳೆಗಳನ್ನು ಗಿಲುಕೆನ್ನಿಸುತ್ತ, ಒಂದೇ ಗಳಿಗೆಯಲ್ಲಿ ತನ್ನ ಜೊತೆಗಾತಿಯರೊಡನೆ ನೀರು ಸೇದಿಕೊಂಡು, ತನ್ನ ಬಿಂದಿಗೆಯನ್ನು ತುಂಬಿಕೊಂಡು ಈಗ ಮರಳಿ ಹೋಗುತ್ತಿದ್ದಾಳೆ !&lt;br /&gt;&lt;br /&gt;“ಮೂಗಿನ ನೇರಿಗೆ | ಹೊರಳೀದೆ ಊರಿಗೆ ||&lt;br /&gt;ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ ||&lt;br /&gt;ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ ||&lt;br /&gt;ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ ||&lt;br /&gt;ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ || ”&lt;br /&gt;&lt;br /&gt;ಮರಳುತ್ತಿರುವ ಈ ಬಾಲೆಯ ತಲೆಯ ಮೇಲೆ ಇರುವದು ಬಿಂದಿಗೆ &lt;br /&gt;ಹಾಗೂ ಕಾಲಲ್ಲಿ ಇರುವದು ಅಂದಿಗೆ ; ಈ ವರ್ಣನೆಯನ್ನು ಆಪಾದಮಸ್ತಕ ವರ್ಣನೆ ಎನ್ನಬಹುದಲ್ಲವೆ?&lt;br /&gt;ತಲೆಯ ಮೇಲಿನ ಬಿಂದಿಗೆಯು ತುಂ ತುಂ ಎಂದು ಧ್ವನಿಸುತ್ತಿದ್ದರೆ, ಕಾಲೊಳಗಿನ ಅಂದಿಗೆಗಳು ಝಣ್ ಝಣ್ ಎನ್ನುತ್ತಿವೆ. ಬಿಂದಿಗೆಯ ಹಾಗೂ ಅಂದಿಗೆಯ ಧ್ವನಿಗಳು ಸಮತಾಳದಲ್ಲಿ ಸಂವಾದಿಯಾಗಿ ಹೊಂದಿಕೊಂಡಿವೆ !&lt;br /&gt;&lt;br /&gt;ಕುಡಿಯಲು  ಸಿಹಿನೀರು ತರಲು ಹೋದ ಬಾಲೆ ಒಂದು ಸಾರಿಗೆ ನೀರು ತಂದಳು. ಅಷ್ಟೇ ಸಾಕು, ಅವಳ ಮುಖದ ಮೇಲೆಲ್ಲ ಬೆವರಿನ ಹನಿಗಳು ಮೂಡಿವೆ. ತಂದೆಯ ಕಣ್ಣಿಗೆ ಇದು ಮುಂಜಾವಿನಲ್ಲಿ ಹೂವಿಗೆ ಮುಸುಕಿದ ಇಬ್ಬನಿಯಂತೆ ಕಾಣುವದು. ಈ ಬೆವರಿನ ಹನಿಗಳು ಮುತ್ತಿನ ಹನಿಗಳಂತೆ ಅವನಿಗೆ ಕಾಣುವವು.&lt;br /&gt;&lt;br /&gt;“ಒಂದೇನೆ ಬಾರಿಗೆ | ಹೋದೆ ಸೀ-ನೀರಿಗೆ ||&lt;br /&gt;ಬೆವರೀನ ಸಾರಿಗೆ | ತಂದೀದಿ ಯಾರಿಗೆ ||&lt;br /&gt;ಇಬ್ಬನಿ ಹೂವಿಗೆ | ನಸುಕಿನ ಜಾವಿಗೆ ||&lt;br /&gt;ಮುತ್ತ್ಹನಿ ಮಾರಿಗೆ | ಮುತ್ತ್ಯಾವೊ ನಾರಿಗೆ ||&lt;br /&gt;ಸಂಜೀಯ ಜಾವಿಗೆ | ಹೋಗಿಯು ಬಾವಿಗೆ ||”&lt;br /&gt;&lt;br /&gt;ಸಂಜೆಯ ಸಮಯದಲ್ಲಿ ನೀರು ತಂದರೂ ಸಹ, ಮುಂಜಾನೆಯ ಇಬ್ಬನಿಗಳು ಮುಖದಲ್ಲಿ ಕಾಣುತ್ತಿವೆಯಲ್ಲ ಎಂದು ಅವನಿಗೆ ಅಚ್ಚರಿಯಾಗುತ್ತಿದೆ. ತನ್ನ ಮಗಳ ಮೊಗವು ಮುಂಜಾನೆಯ ಹೂವಿನಂತೆ ಯಾವಾಗಲೂ fresh ಆಗಿಯೇ ಇರುವದು ಎಂದು ಅವನ ಭಾವನೆಯೆ?&lt;br /&gt;&lt;br /&gt;ಆಟವಾಡುವ ವಯಸ್ಸಿನ ಬಾಲೆ ಇವಳು. ಇವಳಿಗೆ ಕೆಲಸವೆಲ್ಲವೂ ಆಟವೇ! ಈ ಪುಟ್ಟ ಗರತಿಯ ಇಂತಹ ಅಚ್ಚುಕಟ್ಟಾದ ವಿಧಾನವನ್ನು ತಂದೆ ಮೆಚ್ಚಿಕೊಳ್ಳುತ್ತಾನೆ. ಅವನ ಮನಸ್ಸು ಕುಣಿಯುತ್ತದೆ. ಈ ಆಟವನ್ನು ನೋಡಿದ ಜನರೂ ಅನೇಕರು. ಅವರ ‘ಕಣ್ಣು’ ಇವಳಿಗೆ ತಾಕಬಾರದಲ್ಲ ! ಅದಕ್ಕಾಗಿ ತಂದೆ ಇವಳಿಗೆ ನೀವಾಳಿಸುತ್ತಾನೆ.&lt;br /&gt;&lt;br /&gt;“ಕೆಲಸಾನ ಆಟಿಗೆ | ಮಾಡುವ ಸೂಟಿಗೆ |&lt;br /&gt;ಹಸನಾದ ಧರತಿಗೆ | ಮೆಚ್ಚಿದೆ ಗರತಿಗೆ ||&lt;br /&gt;ಕುಣಿಸಿದೆ ಇಂದಿಗೆ | ಕಣ್ಬಿಟ್ಟ ಮಂದಿಗೆ ||&lt;br /&gt;ನೀವಾಳಿ ದಿಟ್ಟಿಗೆ | ಕಣ್ಣೆಲ್ಲ ಒಟ್ಟಿಗೆ ||&lt;br /&gt;ಸಂಜೀಯ ಜಾವಿಗೆ | ಹೋಗಿದ್ದ್ಯೆ ಬಾವಿಗೆ ||”&lt;br /&gt;&lt;br /&gt;ಕವಿ ತನ್ನ ಸವಿ ಅನುಭವವನ್ನು ಮತ್ತೆ ನೆನಪಿಸಿಕೊಳ್ಳುತ್ತಾನೆ.&lt;br /&gt;“ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||&lt;br /&gt;ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||&lt;br /&gt;ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||&lt;br /&gt;ಒಲಿದಾಡೊ ರೀತಿಗೆ | ಹಾಡ್ಯಾನ ಗೀತಿಗೆ ||&lt;br /&gt;ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||”&lt;br /&gt;&lt;br /&gt;ಮೊದಲನೆಯ ನುಡಿಯು ಕೊನೆಯ ನುಡಿಯಂತೆಯೇ ಕಾಣುತ್ತಿದೆ. ಆದರೆ ಮೊದಲನೆಯ ನುಡಿಯ ನಾಲ್ಕನೆಯ ಸಾಲಿನಲ್ಲಿ “ ಹಾಡ್ಯಾನೊ ಗೀತಿಗೆ  ” ಎನ್ನುವ ಉಲ್ಲಾಸಮಯ ಪ್ರಾರಂಭವಿದ್ದರೆ, ಕೊನೆಯ ನುಡಿಯ ನಾಲ್ಕನೆಯ ಸಾಲಿನಲ್ಲಿ “ ಹಾಡ್ಯಾನ ಗೀತಿಗೆ ” ಎನ್ನುವ ಮಂಗಲಮುಕ್ತಾಯವಿದೆ.&lt;br /&gt;&lt;br /&gt;ಬೇಂದ್ರೆಯವರ ಈ ಕವನದ ಎರಡು ವೈಶಿಷ್ಟ್ಯಗಳನ್ನು ಇಲ್ಲಿ ಗಮನಿಸಬಹುದು.&lt;br /&gt;ಮೊದಲನೆಯದು ಸಹಜ ಛಂದಸ್ಸು , ಅಂದರೆ ಕಾವ್ಯದ contentಗೆ ಹೊಂದಿಕೊಳ್ಳುವ metre.&lt;br /&gt;ಎರಡನೆಯದು, ನಿಸರ್ಗದ ವಸ್ತುಗಳಾದ ಹೂವು , ಕಲ್ಲು ಇತ್ಯಾದಿಗಳೊಡನೆ ಕವನ ಹೊಂದಿದ ತಾದಾತ್ಮ್ಯ.&lt;br /&gt;ಈ ಕವನವು ಕೇವಲ ಪುಟ್ಟ ಬಾಲೆಯ ಬಗೆಗಿನ ಕವನವಲ್ಲ. ಇದು ನಿಸರ್ಗವಸ್ತುಗಳ ಬಗೆಗಿನ ಕವನವೂ ಹೌದು.&lt;br /&gt;ಅಂತೆಯೇ ಕವನ ಮುಗಿದ ಬಳಿಕವೂ ಸಹ ಕೆಳಗಿನ ಸಾಲುಗಳು ನಮ್ಮ ಮನಸ್ಸಿನಲ್ಲಿ ರಿಂಗಣಿಸುತ್ತಲೇ ಉಳಿದು ಬಿಡುತ್ತವೆ:&lt;br /&gt;“ಗುಲಬಾಕ್ಷಿ, ಮಲ್ಲಿಗೆ  ಕೇಳತಾವ ಕಲ್ಲಿಗೆ&lt;br /&gt;ಕಳಸೋದೆ ನೀರಿಗೆ, ಇಂಥ ಸುಕುಮಾರಿಗೆ ?”&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-104761080947009830?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/104761080947009830/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=104761080947009830' title='29 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/104761080947009830'/><link rel='self' type='application/atom+xml' href='http://www.blogger.com/feeds/5939841257923965225/posts/default/104761080947009830'/><link rel='alternate' type='text/html' href='http://sallaap.blogspot.com/2009/04/blog-post_26.html' title='ಸಂಜೀಯ ಜಾವಿಗೆ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>29</thr:total></entry><entry><id>tag:blogger.com,1999:blog-5939841257923965225.post-826547310875321526</id><published>2009-04-10T17:53:00.001+05:30</published><updated>2009-04-10T22:46:56.999+05:30</updated><title type='text'>ಮದುವೆಯ ಮಮತೆಯ ಕರೆಯೋಲೆ</title><content type='html'>&lt;span style="font-style:italic;"&gt;ಆತ್ಮೀಯರೆ,&lt;br /&gt;ನಮ್ಮ ಮಗಳು &lt;/span&gt;&lt;br /&gt;&lt;span style="font-weight:bold;"&gt;ಕುಮಾರಿ ಚಂದ್ರಲಾ &lt;/span&gt;&lt;br /&gt;&lt;span style="font-style:italic;"&gt;ಇವಳ ವಿವಾಹವನ್ನು, &lt;/span&gt;&lt;br /&gt;&lt;span style="font-weight:bold;"&gt;ಚಿ|| ಪವನ &lt;/span&gt;&lt;br /&gt;(ಧಾರವಾಡದ ಡಾ^. ಪ್ರಹ್ಲಾದ ಛೆಬ್ಬಿ ಇವರ ಸುಪುತ್ರ)&lt;br /&gt;ಇವರ ಜೊತೆ  &lt;br /&gt;&lt;span style="font-weight:bold;"&gt;ದಿ: ೧೯-೦೪-೨೦೦೯ರಂದು&lt;/span&gt; ಜರುಗಿಸಲು&lt;br /&gt;ನಿಶ್ಚಯಿಸಲಾಗಿದೆ.&lt;br /&gt;&lt;br /&gt;ವಿವಾಹ ಸಮಾರಂಭದಲ್ಲಿ ತಾವು ಉಪಸ್ಥಿತರಿದ್ದು&lt;br /&gt;ನಮ್ಮ ಸಂತೋಷದಲ್ಲಿ ಭಾಗಿಯಾಗಲು  ಪ್ರಾರ್ಥಿಸುತ್ತೇವೆ.&lt;br /&gt;ದಯವಿಟ್ಟು ಬನ್ನಿರಿ.&lt;br /&gt;&lt;br /&gt;&lt;span style="font-weight:bold;"&gt;ವಿವಾಹ ಸ್ಥಳ: ದೈವಜ್ಞ ಸಮುದಾಯ ಭವನ, &lt;br /&gt;ಬೆಂಗಳೂರು-ಪುಣೆ ರಸ್ತೆ, ಧಾರವಾಡ&lt;br /&gt;ಮುಹೂರ್ತ: ಮಧ್ಯಾಹ್ನ ೧೨:೨೭ ಗಂಟೆ&lt;/span&gt;&lt;br /&gt;&lt;br /&gt;ತಮ್ಮ ಆತ್ಮೀಯ&lt;br /&gt;&lt;span style="font-style:italic;"&gt;-ವನಮಾಲಾ &lt;br /&gt;-ಸುನಾಥ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-826547310875321526?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/826547310875321526/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=826547310875321526' title='28 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/826547310875321526'/><link rel='self' type='application/atom+xml' href='http://www.blogger.com/feeds/5939841257923965225/posts/default/826547310875321526'/><link rel='alternate' type='text/html' href='http://sallaap.blogspot.com/2009/04/blog-post.html' title='ಮದುವೆಯ ಮಮತೆಯ ಕರೆಯೋಲೆ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>28</thr:total></entry><entry><id>tag:blogger.com,1999:blog-5939841257923965225.post-7502810968931103038</id><published>2009-03-30T13:59:00.006+05:30</published><updated>2009-03-30T16:32:57.168+05:30</updated><title type='text'>ಪ್ರಕೃತಿಯ ಯುಗಾದಿ</title><content type='html'>ಯುಗಾದಿಯು ಋತುಚಕ್ರದ ಆದಿಬಿಂದು. ಇದು ವಸಂತ ಋತುವಿನ, ಚೈತ್ರಮಾಸದ ಪ್ರಾರಂಭವಾಗಿದೆ. ಮನುಜನು ತನ್ನ ಬುದ್ಧಿಶಕ್ತಿಯ ಆಧಾರದಿಂದ, ಪೃಥ್ವಿ ಹಾಗು ಚಂದ್ರರ ಚಲನೆಯನ್ನು ಗುಣಿಸಿ, ಯುಗಾದಿಯ ಆರಂಭವನ್ನು ಕ್ಷಣದವರೆಗೂ ನಿರ್ಧರಿಸುತ್ತಾನೆ.&lt;br /&gt;&lt;br /&gt;ಮನುಜನ ಹೊರತಾದ ನಿಸರ್ಗಕ್ಕೆ ಮನುಜನಂತಹ ಬುದ್ಧಿಶಕ್ತಿಗಿಂತ ಬೇರೊಂದು ರೂಪದ ಬುದ್ಧಿಶಕ್ತಿ ಇದೆ. ಮನುಜನ ಬುದ್ಧಿಶಕ್ತಿಗೆ conscious intelligence ಎಂದು ಕರೆಯಬಹುದಾದರೆ, ನಿಸರ್ಗದ ಬುದ್ಧಿಶಕ್ತಿಗೆ unconscious intelligence ಎಂದು ಕರೆಯಬಹುದು.(?) ನಿಸರ್ಗದ unconscious intelligence ಎದುರಿಗೆ ಮನುಜನ  conscious intelligence ನಗಣ್ಯ. ನಿಸರ್ಗವು ಯುಗಾದಿಯನ್ನು ಗುರುತಿಸುವ ಬಗೆಯೇ ಬೇರೆ. ಅದು ಮನುಜನ ಬುದ್ಧಿಗೆ ನಿಲುಕಲಾರದು.&lt;br /&gt;&lt;br /&gt;ಅಂಬಿಕಾತನಯದತ್ತರು ತಮ್ಮ ‘ಯುಗಾದಿ’ ಕವನದಲ್ಲಿ ಸೃಷ್ಟಿಕ್ರಮವು ಪುನರಾವರ್ತಿಸುವ ಬಗೆಯನ್ನು ಬಣ್ಣಿಸುತ್ತಿದ್ದಾರೆ. ಯುಗಾದಿಯೊಡನೆ ನಿಸರ್ಗವು ಹೊಸ ರೂಪವನ್ನು ತಾಳುವ ರೀತಿಯನ್ನು ವರ್ಣಿಸುತ್ತಾರೆ. ಅವರು ಬಣ್ಣಿಸುವ ಯುಗಾದಿಯು ಪ್ರಕೃತಿಯ ಯುಗಾದಿ, ಇದು ಮನುಜರ ಯುಗಾದಿಯಲ್ಲ. &lt;br /&gt; &lt;br /&gt;‘ಯುಗಾದಿ’ ಕವನದ ಪೂರ್ಣಪಾಠ ಹೀಗಿದೆ:&lt;br /&gt;&lt;br /&gt;ಯುಗಯುಗಾದಿ ಕಳೆದರೂ &lt;br /&gt;ಯುಗಾದಿ ಮರಳಿ ಬರುತಿದೆ.&lt;br /&gt;ಹೊಸ ವರುಷಕೆ ಹೊಸ ಹರುಷವ&lt;br /&gt;ಹೊಸತು ಹೊಸತು ತರುತಿದೆ.&lt;br /&gt;&lt;br /&gt;ಹೊಂಗೆ ಹೂವ ತೊಂಗಲಲ್ಲಿ&lt;br /&gt;ಭೃಂಗದ ಸಂಗೀತ ಕೇಲಿ&lt;br /&gt;ಮತ್ತೆ ಕೇಳಬರುತಿದೆ.&lt;br /&gt;ಬೇವಿನ ಕಹಿ ಬಾಳಿನಲ್ಲಿ&lt;br /&gt;ಹೂವಿನ ನಸುಗಂಪು ಸೂಸಿ&lt;br /&gt;ಜೀವಕಳೆಯ ತರುತಿದೆ.&lt;br /&gt;&lt;br /&gt;ಕಮ್ಮನೆ ಬಾಣಕ್ಕೆ ಸೋತು&lt;br /&gt;ಜುಮ್ಮನೆ ಮಾಮರವು ಹೂತು&lt;br /&gt;ಕಾಮಗಾಗಿ ಕಾದಿದೆ.&lt;br /&gt;ಸುಗ್ಗಿ ಸುಗ್ಗಿ ಸುಗ್ಗಿ ಎಂದು&lt;br /&gt;ಹಿಗ್ಗಿ ಗಿಳಿಯ ಸಾಲು ಸಾಲು&lt;br /&gt;ತೋರಣದೊಲು ಕೋದಿದೆ.&lt;br /&gt;&lt;br /&gt;ವರುಷಕೊಂದು ಹೊಸತು ಜನ್ಮ&lt;br /&gt;ಹರುಷಕೊಂದು ಹೊಸತು ನೆಲೆಯು&lt;br /&gt;ಅಖಿಲ ಜೀವಜಾತಕೆ!&lt;br /&gt;ಒಂದೆ ಒಂದು ಜನ್ಮದಲ್ಲಿ&lt;br /&gt;ಒಂದೆ ಬಾಲ್ಯ ಒಂದೆ ಹರೆಯ&lt;br /&gt;ನಮಗದಷ್ಟೆ ಏತಕೆ?&lt;br /&gt;&lt;br /&gt;ನಿದ್ದೆಗೊಮ್ಮೆ ನಿತ್ಯ ಮರಣ&lt;br /&gt;ಎದ್ದ ಸಲ ನವೀನ ಜನನ&lt;br /&gt;ನಮಗೆ ಏಕೆ ಬಾರದೊ?&lt;br /&gt;ಎಲೆ ಸನತ್ಕುಮಾರದೇವ!&lt;br /&gt;ಸಲೆ ಸಾಹಸಿ ಚಿರಂಜೀವ!&lt;br /&gt;ನಿನಗೆ ಲೀಲೆ ಸೇರದೋ?&lt;br /&gt;&lt;br /&gt;ಯುಗಯುಗಾದಿ ಕಳೆದರೂ &lt;br /&gt;ಯುಗಾದಿ ಮರಳಿ ಬರುತಿದೆ.&lt;br /&gt;ಹೊಸ ವರುಷಕೆ ಹೊಸ ಹರುಷವ&lt;br /&gt;ಹೊಸತು ಹೊಸತು ತರುತಿದೆ.&lt;br /&gt;ನಮ್ಮನಷ್ಟೆ ಮರೆತಿದೆ!&lt;br /&gt;. . . . . . . . . .. . . . . . .. . . . . . . .  .. . . . . . . . . . . . . . . &lt;br /&gt;ಸೂರ್ಯ,ಭೂಮಿ ಹಾಗು ಚಂದ್ರರ ಸೃಷ್ಟಿಯಾದ ನಂತರ ಅನೇಕ ಕೋಟಿ ಯುಗಗಳು ಕಳೆದು ಹೋಗಿವೆ. ಪ್ರತಿ ವರ್ಷದ ಆದಿಯಲ್ಲಿ ನಾವು ಯುಗಾದಿ ಎಂದು ಕರೆಯುವ ದಿನವು ಪುನರಾವರ್ತನೆಗೊಳ್ಳುತ್ತದೆ. ಪ್ರತಿ ಸಲವೂ ಈ ವರ್ಷಾರಂಭವು  ನಿಸರ್ಗದಲ್ಲಿ ಹೊಸ ಹರ್ಷವನ್ನು ತರುತ್ತದೆ. ಅದನ್ನು ಬೇಂದ್ರೆ ಹೀಗೆ ಹೇಳುತ್ತಾರೆ:&lt;br /&gt;&lt;br /&gt;ಯುಗಯುಗಾದಿ ಕಳೆದರೂ &lt;br /&gt;ಯುಗಾದಿ ಮರಳಿ ಬರುತಿದೆ.&lt;br /&gt;ಹೊಸ ವರುಷಕೆ ಹೊಸ ಹರುಷವ&lt;br /&gt;ಹೊಸತು ಹೊಸತು ತರುತಿದೆ.&lt;br /&gt;&lt;br /&gt;ವಸಂತ ಋತುವಿನ  ಪ್ರಕೃತಿಯನ್ನು ಗಮನಿಸಿ:&lt;br /&gt;ಸಸ್ಯಸಂಕುಲವೆಲ್ಲ ಬಣ್ಣ ಬಣ್ಣದ,ಬಗೆಬಗೆಯ ಸುವಾಸನೆಯ ಹೊಸ ಹೂವುಗಳಿಂದ ಶೋಭಿಸತೊಡಗುತ್ತದೆ. ಪ್ರಕೃತಿಯು ಹೊಸ ಉಲ್ಲಾಸದಿಂದ ತುಂಬುತ್ತದೆ. ನಿಸರ್ಗದಲ್ಲಿ ಹೊಸ ಸಂಭ್ರಮವಿದೆ. ಈ ನವೋಲ್ಲಾಸಕ್ಕೊಂದು ಕಾರಣವಿರಬೇಕಲ್ಲವೆ? ಈ ಕಾರಣವೆಂದರೆ ನಿಸರ್ಗದ ಮೂಲ ಬಯಕೆ ಅರ್ಥಾತ್ ಹೊಸ ಸಂತಾನದ ಉತ್ಪತ್ತಿ.&lt;br /&gt;&lt;br /&gt;ಚಿಕ್ಕ ಕೂಸನ್ನು ನೋಡಿದಾಗ ಎಲ್ಲರಿಗೂ ಆ ಕೂಸಿನ ಮೇಲೆ ಪ್ರೀತಿ ಹುಟ್ಟುತ್ತದೆ. &lt;span style="font-weight:bold;"&gt;ಈ ಕೂಸೇ ‘ಹೊಸ ಹರುಷ’!&lt;/span&gt; ನಿಸರ್ಗದಲ್ಲಿಯ ಸಸ್ಯಸಂಕುಲವು ಹೊಸ ಹೂವನ್ನು ಬಿಡುವುದರೊಂದಿಗೆ ಸಂತಾನೋತ್ಪತ್ತಿಯನ್ನು ಪ್ರಾರಂಭಿಸುತ್ತವೆ. ಆದುದರಿಂದ ಇದು ಹೊಸ ಹರುಷ!&lt;br /&gt;ಬೇಂದ್ರೆ ಈ ಮಾತನ್ನು ಮುಂದಿನ ನುಡಿಯಲ್ಲಿ ಹೀಗೆ ಹೇಳಿದ್ದಾರೆ:&lt;br /&gt;&lt;br /&gt;ಹೊಂಗೆ ಹೂವ ತೊಂಗಲಲ್ಲಿ&lt;br /&gt;ಭೃಂಗದ ಸಂಗೀತ ಕೇಲಿ&lt;br /&gt;ಮತ್ತೆ ಕೇಳಬರುತಿದೆ.&lt;br /&gt;ಬೇವಿನ ಕಹಿ ಬಾಳಿನಲ್ಲಿ&lt;br /&gt;ಹೂವಿನ ನಸುಗಂಪು ಸೂಸಿ&lt;br /&gt;ಜೀವಕಳೆಯ ತರುತಿದೆ.&lt;br /&gt;&lt;br /&gt;ಪರಾಗಸ್ಪರ್ಷಕ್ಕಾಗಿ ಭೃಂಗಗಳನ್ನು ಆಹ್ವಾನಿಸಲು ಹೊಂಗೆ ಹೂವು ಗೊಂಚಲು ಗೊಂಚಲಾಗಿ ಹೂವುಗಳನ್ನು ಸುರಿಸುತ್ತದೆ. ದುಂಬಿಗಳ ಗುಂಗುಂಗಾನ ಈ ವರುಷವೂ ಪುನರಾವರ್ತಿಸುತ್ತಿದೆ.  ಇಡೀ ವರುಷವೆಲ್ಲ ಕಹಿಯಾದ ಎಲೆ ಹಾಗೂ ಕಹಿಯಾದ ಕಾಯಿಗಳನ್ನೇ ಇಟ್ಟುಕೊಂಡ ಬೇವಿನ ಮರವು ಯುಗಾದಿಯಂದು ನಸುಕಂಪಿನ ಹೂವನ್ನು ಪಡೆದಿದೆ. ಹೀಗಾಗಿ ಅದಕ್ಕೂ ಸಹ ಒಂದು ಹೊಸ ಜೀವಕಳೆ ಬಂದಿದೆ!&lt;br /&gt;&lt;br /&gt;ಈ ಸಂದರ್ಭದಲ್ಲಿ  ಮತ್ತೊಂದು ಮಾತನ್ನು ಗಮನಿಸಬೇಕು. ಕವಿ ಎಂದು ಯಾರನ್ನು ಕರೆಯಬೇಕು? ಚೆಲುವನ್ನು ಕಾಣುವವನೇ ಕವಿ. ಆತ ಚರಾಚರ ಸೃಷ್ಟಿಯಲ್ಲಿಯ ಎಂಥಾ ಸಣ್ಣ ಕಣದಲ್ಲಿಯ ಚೆಲುವನ್ನೂ ಗಮನಿಸಿ ಸಂತೋಷಪಡುತ್ತಾನೆ. ಬೇಂದ್ರೆಯವರಿಗೆ ತಮ್ಮ ಹಿತ್ತಲಿನ, ತಮ್ಮ ಸುತ್ತಲಿನ ಹೊಂಗೆ, ಬೇವು, ಹುಣಸಿಯ ಮರ ಎಲ್ಲವೂ ಸಂತೋಷವನ್ನು ನೀಡುತ್ತವೆ. ಹುಣಸಿಯ ಮರವನ್ನು ನೆವ ಮಾಡಿ ಅವರು ಹೇಳಿದ ಕವನದ ಪ್ರಸಿದ್ಧ ಸಾಲುಗಳು ಹೀಗಿವೆ:&lt;br /&gt;“ಕವಿಗೇನು ಬೇಕs?&lt;br /&gt;ಹೂತ ಹುಣಸಿಮರ ಸಾಕs!”&lt;br /&gt;&lt;br /&gt;ವಸಂತ ಋತುವಿನ ಆದಿಯಲ್ಲಿ ಗಿಡ, ಮರ, ಬಳ್ಳಿಗಳು ಹೂವುಗಳಿಂದ ಕಂಗೊಳಿಸುವ ಕಾರಣವನ್ನು ಕವಿ ಹೀಗೆ ಹೇಳುತ್ತಾರೆ:&lt;br /&gt;ಕಮ್ಮನೆ ಬಾಣಕ್ಕೆ ಸೋತು&lt;br /&gt;ಜುಮ್ಮನೆ ಮಾಮರವು ಹೂತು&lt;br /&gt;ಕಾಮಗಾಗಿ ಕಾದಿದೆ.&lt;br /&gt;&lt;br /&gt;ಈ ಮೇಲಿನ ಮೂರು ಸಾಲುಗಳು  ಕವಿಯ ಅಸಾಮಾನ್ಯ ಕಲ್ಪನೆಯಯಿಂದಾಗಿ ಹೊರಹೊಮ್ಮಿವೆ.&lt;br /&gt;ಕಾಮದೇವನ ಬಿಲ್ಲಿಗೆ ಕಬ್ಬಿನ ದಂಡ ಹಾಗು ದುಂಬಿಗಳ ಹೆದೆ ಇರುತ್ತದೆ. ಅವನು ಉಪಯೋಗಿಸುವದು ಐದು ತರಹದ ಹೂವಿನ ಬಾಣಗಳನ್ನು. ಇಂತಹ ಕಮ್ಮನೆಯ (=sweet) ಬಾಣಕ್ಕೆ ಸೋಲದ ಜೀವಿ ಉಂಟೆ? &lt;br /&gt;ಇಲ್ಲಿ ಕಾಮದೇವನು ನಿಸರ್ಗವನ್ನು ಸೋಲಿಸಿಲ್ಲ ; ನಿಸರ್ಗವು ತಾನಾಗಿಯೆ ಕಾಮದೇವನಿಗೆ ಸೋತಿದೆ ; ಕಾಮದೇವನ ಬಾಣ ತಗುಲಿದೊಡನೆಯೆ, ಮಾವಿನ ಮರವು ಪುಳಕಗೊಂಡಿದೆ ; ಆ ಪುಳಕವು ಹೂವುಗಳಾಗಿ ಹೊರಹೊಮ್ಮಿದೆ.&lt;br /&gt;ಈ ಕಲ್ಪನೆಗೆ ಅದ್ಭುತ ಕಲ್ಪನೆ ಎನ್ನಲೇ ಬೇಕು. &lt;br /&gt;On the touch of Cupid’s arrow, the captive mango tree thrilled into flowers ಎನ್ನುವ ಸಾಲುಗಳನ್ನು ಜಗತ್ತಿನ ಯಾವ ಕವಿಯೂ ಹೇಳಿರಲಿಕ್ಕಿಲ್ಲ!&lt;br /&gt;&lt;br /&gt;ಈ ರೀತಿಯಾಗಿ ಬೇಂದ್ರೆಯವರು ಬೇವು ಮಾವುಗಳೆಲ್ಲ (--ಅಹಾ! ಕಹಿ ಹಾಗೂ ಸಿಹಿಯಾದ ಮರಗಳ ಜೊತೆಯೆ!--) ಪುಷ್ಪವತಿಯರಾಗಿ ಕಾಮದೇವನಿಗಾಗಿ ಕಾಯುತ್ತಿರುವದನ್ನು ಹೇಳುತ್ತಾರೆ.&lt;br /&gt;ಪುಷ್ಪವತಿಯಾದ ಸಸ್ಯಸಂಕುಲವು ಫಲವತಿಯಾಗಿ ಸಾರ್ಥಕ್ಯವನ್ನು ಪಡೆಯಬೇಕಾದರೆ ಪಕ್ಷಿಸಂಕುಲದ ನೆರವು ಬೇಕು. ಹಣ್ಣುಗಳ ಸುಗ್ಗಿಯ ಮುನ್ಸೂಚನೆಯನ್ನು  ಪಡೆದ ಪಕ್ಷಿಸಂಕುಲವು ಗಿಡಮರಗಳಿಗೆ ಮುಗಿಬೀಳುತ್ತವೆ. &lt;br /&gt;ಸುಗ್ಗಿ ಸುಗ್ಗಿ ಸುಗ್ಗಿ ಎಂದು&lt;br /&gt;ಹಿಗ್ಗಿ ಗಿಳಿಯ ಸಾಲು ಸಾಲು&lt;br /&gt;ತೋರಣದೊಲು ಕೋದಿದೆ.&lt;br /&gt;ಮಾಮರವು ಇನ್ನೂ ಹಣ್ಣು ಬಿಟ್ಟಿಲ್ಲ. ಆದರೆ ಹಣ್ಣಿನ ಸುಗ್ಗಿ ಇನ್ನೇನು ಬಂದೇ ಬಿಟ್ಟಿತು ಎಂದು ಹಿಗ್ಗುತ್ತ ಗಿಳಿಗಳ ಸಾಲುಗಳು ಮಾಮರವನ್ನು ಆಶ್ರಯಿಸಿವೆ. ಗಿಳಿಗಳ ಈ ಸಾಲುಗಳು ಕವಿಗೆ ತೋರಣದಂತೆ ಕಾಣುತ್ತವೆ.  ಆದರೆ ಇದು ಕಾಮದೇವನನ್ನು ಸ್ವಾಗತಿಸುವ ತೋರಣ.&lt;br /&gt;&lt;br /&gt;ಈ ರೀತಿಯಾಗಿ ನಿಸರ್ಗವೆಲ್ಲ (--ಮನುಜನನ್ನು ಹೊರತುಪಡಿಸಿ--) ಹೊಸ ವರ್ಷದೊಡನೆ ಹೊಸ ಜನ್ಮ ತಾಳಿ ಸಂಭ್ರಮಿಸುತ್ತದೆ. ಹಳೆಯ ನೆಲೆಯನ್ನು ಕಳಚಿ ಹಾಕಿ, ಹರ್ಷದ ಹೊಸ ನೆಲೆಯನ್ನು ಪಡೆಯುತ್ತದೆ. ಪ್ರತಿ ವರುಷದಲ್ಲೂ ಪ್ರಕೃತಿಯು ಹೊಸ ಬಾಲ್ಯ ಹಾಗು ಹೊಸ ಯೌವನವನ್ನು ಪಡೆಯುತ್ತದೆ. &lt;br /&gt;ಆದರೆ, ಮನುಜನ ಸ್ಥಿತಿ ಹೇಗಿದೆ?&lt;br /&gt;&lt;br /&gt;ವರುಷಕೊಂದು ಹೊಸತು ಜನ್ಮ&lt;br /&gt;ಹರುಷಕೊಂದು ಹೊಸತು ನೆಲೆಯು&lt;br /&gt;ಅಖಿಲ ಜೀವಜಾತಕೆ!&lt;br /&gt;ಒಂದೆ ಒಂದು ಜನ್ಮದಲ್ಲಿ&lt;br /&gt;ಒಂದೆ ಬಾಲ್ಯ ಒಂದೆ ಹರೆಯ&lt;br /&gt;ನಮಗದಷ್ಟೆ ಏತಕೆ?&lt;br /&gt;&lt;br /&gt;ಮನುಜಕುಲಕ್ಕೆ ಮಾತ್ರ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಹಾಗೂ ಒಂದೇ ಯೌವನ! ನಮಗೂ ಸಹ ನಿದ್ದೆಯು ನಮ್ಮ ಹಳತನ್ನು ಕಳೆದೊಗೆದು, ಎಚ್ಚರವಾದೊಡನೆ ಹೊಸ ಜೀವನವನ್ನು ಕೊಡುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!&lt;br /&gt;ನಿದ್ದೆಗೊಮ್ಮೆ ನಿತ್ಯ ಮರಣ&lt;br /&gt;ಎದ್ದ ಸಲ ನವೀನ ಜನನ&lt;br /&gt;ನಮಗೆ ಏಕೆ ಬಾರದೊ?&lt;br /&gt;&lt;br /&gt;ಕವಿಯು ಕಾಮದೇವನನ್ನು (=ಸನತ್ಕುಮಾರನನ್ನು) ಪ್ರಶ್ನಿಸುತ್ತಾನೆ.&lt;br /&gt;‘ಕಾಮದೇವಾ, ನೀನು ಚಿರಂಜೀವಿ, ನೀನು ಸಾಹಸಿ. ನಿನ್ನಂಥವನು ಮನುಜರಿಗೂ ಸಹ ಇಂತಹ ವೈಭೋಗ ಕೊಡಬೇಕಾಗಿತ್ತು. ಕೊಡದಿರುವ ಕಾರಣವೇನು? ನಿನಗೆ ಲೀಲೆ (=play) ಸೇರದೊ?’&lt;br /&gt;ಎಲೆ ಸನತ್ಕುಮಾರದೇವ!&lt;br /&gt;ಸಲೆ ಸಾಹಸಿ ಚಿರಂಜೀವ!&lt;br /&gt;ನಿನಗೆ ಲೀಲೆ ಸೇರದೋ?&lt;br /&gt;&lt;br /&gt;ಕವಿಯು ಪ್ರಕೃತಿಯ ಹಾಗು ಮನುಜರ ನಡುವಿನ ಈ ಕಂದರವನ್ನು ನೆನೆದು ವಿಷಾದಿಸುತ್ತಾನೆ:&lt;br /&gt;ಯುಗಯುಗಾದಿ ಕಳೆದರೂ &lt;br /&gt;ಯುಗಾದಿ ಮರಳಿ ಬರುತಿದೆ.&lt;br /&gt;ಹೊಸ ವರುಷಕೆ ಹೊಸ ಹರುಷವ&lt;br /&gt;ಹೊಸತು ಹೊಸತು ತರುತಿದೆ.&lt;br /&gt;ನಮ್ಮನಷ್ಟೆ ಮರೆತಿದೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-7502810968931103038?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/7502810968931103038/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=7502810968931103038' title='32 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/7502810968931103038'/><link rel='self' type='application/atom+xml' href='http://www.blogger.com/feeds/5939841257923965225/posts/default/7502810968931103038'/><link rel='alternate' type='text/html' href='http://sallaap.blogspot.com/2009/03/blog-post_30.html' title='ಪ್ರಕೃತಿಯ ಯುಗಾದಿ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>32</thr:total></entry><entry><id>tag:blogger.com,1999:blog-5939841257923965225.post-378852991100811459</id><published>2009-03-18T23:43:00.003+05:30</published><updated>2009-03-18T23:55:46.928+05:30</updated><title type='text'>ಹಿತ್ತಲಲ್ಲಿಯ ಹೂವು</title><content type='html'>ಚಾರ್ಲಿ ಚಾಪ್ಲಿನ್ ! &lt;br /&gt;ಈತ ಚಿತ್ರಜಗತ್ತು ಕಂಡ ಅದ್ಭುತ ಕಲಾವಿದ! ಅವನು ನನ್ನ ನೆಚ್ಚಿನ ಕಲಾವಿದನೂ ಹೌದು.  &lt;br /&gt;The Kid, Modern Times, The Great Dictator ಮೊದಲಾದ ಅಭಿಜಾತ  ಚಲನಚಿತ್ರಗಳನ್ನು  ನಿರ್ಮಿಸಿದ ಹೆಗ್ಗಳಿಕೆ ಅವನದು. ಅಭಿನಯ ಹಾಗೂ ನಿರ್ದೇಶನ ಇವೆರಡರಲ್ಲೂ ಸರ್ವೋಚ್ಚನಾದ ಸವ್ಯಸಾಚಿ ಈತ.&lt;br /&gt;ಇವನಂತೆಯೇ ಅನೇಕ ಪಾಶ್ಚಾತ್ಯ ಚಿತ್ರನಿರ್ಮಾಪಕರು ಹಾಗೂ ನಟ, ನಟಿಯರೂ ಸಹ ನನ್ನ ನೆಚ್ಚಿನವರಾಗಿದ್ದಾರೆ. Alfred Hitchcock, Ingmar Bergman, Steven Spielberg, Sophia Loren  ಇವರೂ ನನ್ನ ಹೃದಯದಲ್ಲಿ ಸ್ಥಾನ ಪಡೆದವರೇ.&lt;br /&gt;ಇತ್ತೀಚೆಗೆ &lt;a href="http://chitrakavana.blogspot.com"&gt; ಶ್ರೀ ಅಮರರು&lt;/a&gt; ಕಳಿಸಿಕೊಟ್ಟ ಇರಾಣಿ ಚಿತ್ರಗಳನ್ನು ನೋಡಿದ ಬಳಿಕ ಮಜೀದ ಮಜೀದಿ ನನಗೆ ತುಂಬ ಇಷ್ಟವಾದರು. ಇವರೆಲ್ಲರ ಪ್ರತಿಮೆಗಳು ನನ್ನ ಹೃದಯರಂಗದಲ್ಲಿ ಪ್ರತಿಷ್ಠಾಪಿತವಾಗಿವೆ. &lt;br /&gt;&lt;br /&gt;ಕನ್ನಡೇತರ ಭಾರತೀಯ ಚಿತ್ರರಂಗದಲ್ಲಿ ಸತ್ಯಜಿತ ರಾಯ, ಶ್ಯಾಮ ಬೆನೆಗಲ್, ಕಮಲಹಾಸನ್, ನಾಸಿರುದ್ದೀನ ಶಾ, ಅನುಪಮ ಖೇರ, ಶಬಾನಾ ಆಜ್ಮಿ, ಇವರು ನನಗೆ ಇಷ್ಟರಾದವರು. &lt;br /&gt;ಇವರೆಲ್ಲರ ಪ್ರತಿಮೆಗಳನ್ನು ನಮ್ಮ ಕರಾವಳಿಯ ಕಡಲ ದಂಡೆಯ ಮೇಲೆ ಸ್ಥಾಪಿಸಿದರೆ ನನಗೆ ಖುಶಿಯಾಗುವದರಲ್ಲಿ ಸಂದೇಹವಿಲ್ಲ. ಆದರೆ ಸಂಪೂರ್ಣ ಖುಶಿಯಾದೀತೆ? &lt;br /&gt;&lt;br /&gt;ಉತ್ತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಕನ್ನಡಿಗರಿಗೆ ಪರಮೋಚ್ಚ ಕಲಾವಿದರನ್ನು ಹಾಗೂ ಸಾಹಿತಿಗಳನ್ನು ಕೊಟ್ಟಿವೆ. ದಕ್ಷಿಣ ಕನ್ನಡ ಜಿಲ್ಲೆ ಎಂದ ತಕ್ಷಣ ನೆನಪಾಗುವವರು ಶಿವರಾಮ ಕಾರಂತರು. ಸಾಹಿತ್ಯ, ಯಕ್ಷಗಾನ, ವಿಜ್ಞಾನ ಮೊದಲಾದ ಅನೇಕ ವಿಷಯಗಳಲ್ಲಿ ಶಿವರಾಮ ಕಾರಂತರನ್ನು ಮೀರಿಸುವವರು ಸಿಗುವದು ದುಸ್ಸಾಧ್ಯ. ಕರ್ನಾಟಕಕ್ಕೆ ಶಿವರಾಮ ಕಾರಂತರು ಕೊಟ್ಟ ಕೊಡುಗೆಯನ್ನು ಬಹುಶಃ ಯಾರೂ ಕೊಟ್ಟಿಲ್ಲ. &lt;br /&gt;&lt;br /&gt;ತಮ್ಮ ಜಮೀನನ್ನೆಲ್ಲ ರೈತರಿಗೆ ಕೊಟ್ಟುಬಿಟ್ಟ , ಕಾರ್ಮಿಕರಿಗಾಗಿ ಜೀವವನ್ನು ತೇಯ್ದ , ಚುಟುಕುಬ್ರಹ್ಮರೆಂದು ಖ್ಯಾತಿವೆತ್ತ, ಉತ್ತರ ಕನ್ನಡ ಜಿಲ್ಲೆಯ ಶ್ರೀ ದಿನಕರ ದೇಸಾಯಿಯವರ ಕೊಡುಗೆಯ ಬಗೆಗೆ ಏನು ಹೇಳಲಾದೀತು? ಶ್ರೀ ಜವಾಹರಲಾಲ ನೆಹರೂರು “ನನ್ನ ಚಿತಾಭಸ್ಮವನ್ನು ವಿಮಾನದ ಮೂಲಕ ಭಾರತದ ಎಲ್ಲೆಡೆ ಹಾರಿಸಿರಿ” ಎಂದು ತಮ್ಮ ಮೃತ್ಯುಪತ್ರದಲ್ಲಿ ಬರೆದಿದ್ದರು. ಇದಕ್ಕೂ ಅನೇಕ ವರ್ಷ ಮೊದಲೇ ಶ್ರೀ ದಿನಕರ ದೇಸಾಯಿ ತಮ್ಮ ಕವನದಲ್ಲಿ ಹಾಡಿದ್ದರು:&lt;br /&gt;“ನನ್ನ ದೇಹದ ಬೂದಿ ಹಾರಿ ಬಿಡಿ ಗಾಳಿಯಲಿ…”&lt;br /&gt;&lt;br /&gt;ಶ್ರೀ ಗೋವಿಂದ ಪೈ, ಶ್ರೀ ಪಂಜೆ ಮಂಗೇಶರಾಯರು ಇಂತಹ ಶ್ರೇಷ್ಠ ಸಾಹಿತಿಗಳು ದಕ್ಷಿಣ ಕನ್ನಡ ಜಿಲ್ಲೆಯವರು. ಕಾಸರಗೋಡು ತಾಲೂಕು ಕೇರಳದಲ್ಲಿಯೇ ಉಳಿದಿದ್ದರೂ ಸಹ ಕಯ್ಯಾರ  ಕಿಞ್ಞಿಣ್ಣ ರೈಯವರನ್ನು ಇದೇ ಪಂಕ್ತಿಯಲ್ಲಿ ಸೇರಿಸಬೇಕು.&lt;br /&gt;&lt;br /&gt;ಯಕ್ಷಗಾನದ ಶ್ರೇಷ್ಠ ಕಲಾವಿದ ಕೆರೆಮನೆ ಶಂಭು ಹೆಗಡೆ ಯಾವ ಜಿಲ್ಲೆಯವರು?&lt;br /&gt;ಅಖಿಲ ಭಾರತದಲ್ಲಿ ಖ್ಯಾತಿ ಪಡೆದ ರಂಗಕರ್ಮಿ  ಬಿ.ವ್ಹಿ.ಕಾರಂತ ಯಾವ ಜಿಲ್ಲೆಯವರು?&lt;br /&gt;ಭಾರತೀಯ ಚಿತ್ರರಂಗದಲ್ಲಿ ಶ್ರೇಷ್ಠರಾದ ಗಿರೀಶ ಕಾರಂತ(=ಕಾಸರವಳ್ಳಿ) ಯಾವ ಜಿಲ್ಲೆಯವರು?&lt;br /&gt;ವಿಶ್ವಸುಂದರಿ, Bollywood ತಾರಾಮಣಿ ಐಶ್ವರ್ಯಾ ರೈ ಹಾಗೂ ಶಿಲ್ಪಾ ಶೆಟ್ಟಿ ಇವರ ತವರುಮನೆ ಎಲ್ಲಿವೆ?&lt;br /&gt;ವಿಶ್ವದ ಅತ್ಯುತ್ತಮ ಚಿತ್ರಕಾರರಲ್ಲಿ ಒಬ್ಬರಾದ ಕೆ.ಕೆ.ಹೆಬ್ಬಾರ ಎಲ್ಲಿಯವರು?&lt;br /&gt;ಹೀಗೇ ಅನೇಕ ರಂಗಗಳಲ್ಲಿ ಖ್ಯಾತರಾದವರು ನಮ್ಮ ಕನ್ನಡ ಜಿಲ್ಲೆಯವರು.&lt;br /&gt;&lt;br /&gt;ಈ ಶ್ರೇಷ್ಠರಲ್ಲಿ ಯಾರದಾದರೂ ಪ್ರತಿಮೆ ಕರಾವಳಿಯಲ್ಲಿದೆಯೆ?&lt;br /&gt;ನಮ್ಮದೇ ಹಿತ್ತಲಲ್ಲಿಯ ಹೂವು ಎಷ್ಟೇ ಸುಗಂಧಭರಿತವಾಗಿದ್ದರೂ, ನಾವು ಪಕ್ಕದ ಮನೆಯ ಹೂವನ್ನೇ ಬಯಸುತ್ತೇವೆ, ಏಕೆ?&lt;br /&gt;&lt;br /&gt;ಚಾರ್ಲಿ ಚಾಪ್ಲಿನ್ನನ ಪ್ರತಿಮೆಯನ್ನು ಕರಾವಳಿಯಲ್ಲಿ ಸ್ಥಾಪಿಸಬೇಕೊ, ಬೇಡೋ ಎನ್ನುವ ಚರ್ಚೆ ನಡೆಯುತ್ತಿರುವಾಗ, ನನ್ನ ಮನಸ್ಸು  ನಮ್ಮ ಮನೆಯ ಹಿತ್ತಲಿನ ಹೂವುಗಳನ್ನು ನೆನಪಿಸಿಕೊಂಡಿತು.&lt;br /&gt;ನಿಮ್ಮ ಖಾಸಗಿ ಜಮೀನಿನಲ್ಲಿ ನೀವು ಯಾರದಾದರೂ ಪ್ರತಿಮೆಯನ್ನು  ಸ್ಥಾಪಿಸಿಕೊಳ್ಳಿ. ಸಾರ್ವಜನಿಕ ಭೂಮಿಯಲ್ಲಿ ಪ್ರತಿಮೆ ಸ್ಥಾಪಿಸುವದಾದರೆ, ಆ ನೆಲದ ಶ್ರೇಷ್ಠರಿಗೆ ಆದ್ಯತೆ ಸಿಗಬೇಕು. ಉದಾಹರಣೆಗೆ ಮೈಸೂರಿನಲ್ಲಿ ಶೇಕ್ಸಪಿಯರನ ಪ್ರತಿಮೆ ಸ್ಥಾಪಿಸುವ ಮೊದಲು ಕೈಲಾಸಂ ಪ್ರತಿಮೆಯ ಸ್ಥಾಪನೆಯಾಗಬೇಕು.&lt;br /&gt;ಇದು ತಪ್ಪು ಎನ್ನುವಿರಾ?&lt;br /&gt;&lt;br /&gt;ಕೆಲವರು ವಿಶ್ವಮಾನವರಿರುತ್ತಾರೆ. ಅಂಥವರಿಗೆ ಎಲ್ಲಿಯೇ ಆಗಲಿ, ಪ್ರಥಮ ಆದ್ಯತೆ ದೊರೆತರೆ ತಪ್ಪಿಲ್ಲ. ಉದಾಹರಣೆಗೆ ಅಬ್ರಾಹಮ್ ಲಿಂಕನ್. ಲಿಂಕನ್ ಏಕೆ ಅತ್ಯುತ್ತಮ ಮಾನವನೆಂದರೆ ಆತ ಸತ್ಯಕ್ಕಾಗಿ, ಮಾನವತೆಗಾಗಿ ತನ್ನವರ ವಿರುದ್ಧವೇ ಹೋರಾಡಿದವನು.&lt;br /&gt;&lt;br /&gt;ಆದರೆ ಚಾರ್ಲಿ ಚಾಪ್ಲಿನ್?&lt;br /&gt;ನಮ್ಮ ಹಿತ್ತಲಿನ ಗಂಧಭರಿತ ಹೂವುಗಳಿಗಿಂತ ಈ ಹೂವು ಹೆಚ್ಚಿನದೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-378852991100811459?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/378852991100811459/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=378852991100811459' title='38 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/378852991100811459'/><link rel='self' type='application/atom+xml' href='http://www.blogger.com/feeds/5939841257923965225/posts/default/378852991100811459'/><link rel='alternate' type='text/html' href='http://sallaap.blogspot.com/2009/03/blog-post_18.html' title='ಹಿತ್ತಲಲ್ಲಿಯ ಹೂವು'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>38</thr:total></entry><entry><id>tag:blogger.com,1999:blog-5939841257923965225.post-5839977641862433658</id><published>2009-03-13T19:23:00.005+05:30</published><updated>2009-03-13T19:44:18.780+05:30</updated><title type='text'>ಸಮಾಜ ಹಾಗು ಸಂಸ್ಕೃತಿ</title><content type='html'>ಈ ಭೂಮಿಯ ಮೇಲೆ ಬದಕುತ್ತಿರುವ ಅನೇಕ ಜೀವಸಂಕುಲಗಳಿಗೆ ಗುಂಪು ಕಟ್ಟಿಕೊಂಡು ಇರುವದು ಒಂದು ಅನಿವಾರ್ಯತೆಯಾಗಿದೆ. ಈ ಗುಂಪುಜೀವನವೇ ಮೊಟ್ಟಮೊದಲ ಸಮಾಜವ್ಯವಸ್ಥೆ. ಇಂತಹ ಸಮಾಜವ್ಯವಸ್ಥೆಯ ಮೂಲ ಉದ್ದೇಶಗಳು ಮೂರು. ಮೊದಲನೆಯದು ಈ ಸಮಾಜದಲ್ಲಿಯ ಜೀವಿಗೆ ಸಮಾಜದ ಹೊರಗಿನ ಪ್ರಾಣಿಗಳಿಂದ ಸಂರಕ್ಷಣೆ ನೀಡುವದು. ಎರಡನೆಯ ಉದ್ದೇಶ  ಆಹಾರಪೂರೈಕೆ. ಮೂರನೆಯ ಉದ್ದೇಶ ಈ ಜೀವ ಸಂಕುಲದ ಮುಂದುವರಿಕೆ. ಈ ಎಲ್ಲ ಉದ್ದೇಶಗಳನ್ನು ಆ ಒಂದು ಸಮಾಜ ತನ್ನದೇ ಆದ ರೀತಿಯಲ್ಲಿ ವ್ಯವಸ್ಥಿತಗೊಳಿಸುತ್ತದೆ. ಇಂತಹ ಪ್ರಾಣಿಸಮಾಜಕ್ಕೆ ಪ್ರಾಥಮಿಕ ಸಮಾಜ ಅಥವಾ Primary Society ಎಂದು ಕರೆಯಬಹುದೇನೊ?&lt;br /&gt;&lt;br /&gt;ಆದಿಮಾನವನ ಕಾಲದಲ್ಲಿಯ ಮನುಷ್ಯಸಮಾಜವು ಪ್ರಾಣಿಸಮಾಜಕ್ಕಿಂತ ಹೆಚ್ಚಿಗೆ ಭಿನ್ನವಾಗಿರಲಿಕ್ಕಿಲ್ಲ. ಆದಿಮಾನವರ ಈ ಗುಂಪನ್ನು Primary Societyಯ ಮುಂದಿನ ಹೆಜ್ಜೆಯಾದ Primitive Society ಎಂದು ಕರೆಯಬಹುದು. ಸಂರಕ್ಷಣೆ, ಆಹಾರಪೂರೈಕೆ ಹಾಗೂ ಸಂತಾನ ಇವೇ ಮೂರು ಉದ್ದೇಶಗಳು ಆದಿಮಾನವರ ಗುಂಪುಗಳ ಪರಮಾರ್ಥಗಳಾಗಿದ್ದವು. ಗುಂಪುಗಳಲ್ಲಿ ದೈಹಿಕವಾಗಿ ಬಲಿಷ್ಠನಾದವನೇ ಗುಂಪಿನ ನಾಯಕನಾಗುತ್ತಿದ್ದ. ಕಾಲಕ್ರಮೇಣ ಉತ್ಕ್ರಾಂತಿಯ ಪಥದಲ್ಲಿ ನಡೆದ ಮಾನವಸಮಾಜದಲ್ಲಿ ಅನೇಕ ಬದಲಾವಣೆಗಳು ಜರುಗಿದವು.  ಬೆಂಕಿ ಹಾಗು ಚಿಕ್ಕಪುಟ್ಟ ಆಯುಧಗಳ ಸಂಶೋಧನೆಗಳಿಂದಾಗಿ ಮಾನವನಿಗೆ ಹೆಚ್ಚಿನ ಸಂರಕ್ಷಣೆ ಹಾಗೂ ಹೆಚ್ಚಿನ ಸೌಲಭ್ಯಗಳು ದೊರಕಲಾರಂಭಿಸಿದವು. Primateಗಳ ಭಿನ್ನಕುಲಗಳಲ್ಲಿ ಮಾನವನಿಗೆ ‘Tool using Primate’ ಎನ್ನುವ ಹೆಗ್ಗಳಿಕೆ ದೊರೆಯಿತು. ಇದರ ಪರಿಣಾಮವು ಒಳ್ಳೆಯದೇ ಆಯಿತು ಎಂದು ಹೇಳಲಾಗುವದಿಲ್ಲ. ಮಾನವರ ಗುಂಪುಗಳಲ್ಲೇ ಅಂತರ್ಯುದ್ಧಗಳು ಜರುಗಲಾರಂಭಿಸಿದವು. ಇದರಿಂದಾಗಿ ಪಾಳೆಯಗಾರಿಕೆ ಪ್ರಾರಂಭವಾಯಿತು.  ಈ ರೀತಿಯಾಗಿ ಪಾಳೆಯಗಾರಿಕೆ ಸಮಾಜ (Feudal Society) ಹಾಗೂ ಯಜಮಾನಸಂಸ್ಕೃತಿ (Feudal culture) ಎಲ್ಲೆಡೆ ಪ್ರತಿಷ್ಠಿತವಾದವು.&lt;br /&gt;&lt;br /&gt;ಸಮಾಜವು ತನ್ನ ಅಂಗಜೀವಿಯನ್ನು ರಕ್ಷಿಸಬೇಕಾದರೆ, ಮೊದಲು ಆ ಸಮಾಜವೇ ಸುರಕ್ಷಿತವಾಗಿರಬೇಕು ಆದುದರಿದ ಆ ಸಮಾಜದ ಎಲ್ಲ ಅಂಗಜೀವಿಗಳು ಒಟ್ಟಾಗಿ ಆ ಸಮಾಜವನ್ನು ರಕ್ಷಿಸಬೇಕಾಗುತ್ತದೆ. (ಧರ್ಮೋ ರಕ್ಷತಿ ರಕ್ಷಿತಃ). ಈ ಕಾರಣದಿಂದಾಗಿಯೇ ಸಮಾಜವು ತನ್ನ ಅಂಗಜೀವಿಗಳ ಮೇಲೆ ಕಟ್ಟುಪಾಡುಗಳನ್ನು ಹಾಕಬೇಕಾಗುತ್ತದೆ.  ತನ್ನ ಅಂಗಜೀವಿಯು ಯಾವ ರೀತಿಯಿಂದ ವರ್ತಿಸಬೇಕು, ಯಾವ ರೀತಿಯ ವರ್ತನೆಯಿಂದ ಅಂಗಜೀವಿಗೆ ಹಾಗೂ ಸಮಾಜಕ್ಕೆ ಒಳಿತಾಗುವದು ಎನ್ನುವದನ್ನು ನಿರ್ಧರಿಸುವ ಕಟ್ಟುಪಾಡುಗಳೇ ಆ ಸಮಾಜದ ಸಂಸ್ಕೃತಿ ಹಾಗೂ ಆದರ್ಶ ಎಂದು ಹೇಳಬಹುದು.&lt;br /&gt;&lt;br /&gt;‘ಅಂಗಜೀವಿ ಹುಟ್ಟಿನಿಂದ ಸ್ವತಂತ್ರನು; ಆತ ಯಾರ ಮಾತನ್ನು ಯಾತಕ್ಕೆ ಕೇಳಬೇಕು? ಅತನ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ’ ಇವೆಲ್ಲ ಮಾತುಗಳು ಸಮಾಜದ ಕಟ್ಟುಗಳನ್ನು ಶಿಥಿಲಗೊಳಿಸುವ ಮಾತುಗಳು. ಇದರರ್ಥ ಸಮಾಜದ ಕಟ್ಟುಪಾಡುಗಳು, ಸಮಾಜದ ಅಂತರ್-ವ್ಯವಸ್ಥೆ ಯಾವಾಗಲೂ ಸರಿಯಾಗಿಯೇ ಇರುತ್ತದೆ ಎಂದಲ್ಲ. ‘ಸಮಾಜ ಕೊ ಬದಲ್ ಡಾಲೊ’ ಎನ್ನುವ ಕೂಗು ಅನೇಕ ಸಲ ಸರಿಯಾಗಿಯೂ ಇರಬಹುದು.&lt;br /&gt;&lt;br /&gt;ಸಂಸ್ಕೃತಿ ಎನ್ನುವದು ಸಂಸ್ಕರಿಸು ಎನ್ನುವ ಮೂಲಧಾತುವಿನಿಂದ ಬಂದಿದೆ. ಉತ್ತಮವಾದ ಉತ್ಪನ್ನವನ್ನು, ಉಪಯುಕ್ತವಾದ ಉತ್ಪನ್ನವನ್ನು ನೀಡುವದಕ್ಕಾಗಿ ಕಚ್ಚಾ ಪದಾರ್ಥವನ್ನು ಸಂಸ್ಕರಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ಸಮಾಜದ ಅಂಗಜೀವಿಗಳನ್ನು ಉತ್ತಮರಾದ ಹಾಗೂ ಉಪಯುಕ್ತರಾದ ಮಾನವರನ್ನಾಗಿ ಮಾಡಲು ಸಂಸ್ಕಾರದ ಅವಶ್ಯಕತೆ ಇದೆ. ಈ ಅಂಗಜೀವಿಗಳು ಕೇವಲ ಸಮಾಜಕ್ಕೆ ಉಪಯುಕ್ತರಾದರೆ ಸಾಲದು, ಅವರ ವೈಯಕ್ತಿಕ ಜೀವನವೂ ಸಹ ಸಾರ್ಥಕತೆಯನ್ನು ಪಡೆಯಬೇಕು.  ಈ ರೀತಿಯಾಗಿ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಮಂಗಲಕರ ಫಲವನ್ನು ಕೊಡುವದೇ ಉತ್ತಮ ಸಂಸ್ಕೃತಿಯಾಗಿದೆ. ಇದರ counter ideal ಅಂದರೆ regimented society. ಈ regimentation ಅನ್ನು ಪ್ರಭುತ್ವದ ಶಾಸನದ ಮೂಲಕ (ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಇದ್ದಂತೆ) ಅಥವಾ ಧಾರ್ಮಿಕ ಶಾಸನದ ಮೂಲಕ (ಅರೇಬಿಯನ್ ರಾಷ್ಟ್ರಗಳಲ್ಲಿ ಇದ್ದಂತೆ) ಸಾಧಿಸಬಹುದು.&lt;br /&gt;&lt;br /&gt;ಭಾರತೀಯ ಸಮಾಜ, ಪಾಶ್ಚಿಮಾತ್ಯ ಸಮಾಜ ಹಾಗೂ ಅರೇಬಿಯನ್ ಸಮಾಜ ಎನ್ನುವ ಮೂರು ಸಮಾಜಗಳು ತಮ್ಮ ಅಂಗಜೀವಿಗಳಿಗೆ ಏನು ಕೊಟ್ಟಿವೆ, ಪ್ರತಿಯಾಗಿ ಈ ಅಂಗಜೀವಿಗಳು ತಮ್ಮ ಸಮಾಜಕ್ಕೆ  ಏನನ್ನು ಕೊಟ್ಟಿವೆ ಹಾಗೂ ಈ ಸಮಾಜಗಳ ರಕ್ಷಣೆ ಯಾವ ರೀತಿಯಿಂದ ಆಗುತ್ತಿದೆ ಎನ್ನುವ ಅಧ್ಯಯನ ಕುತೂಹಲಕಾರಿಯಾಗಿದೆ ಹಾಗೂ ಭಾರತೀಯ ಸಮಾಜವು ಬದಲಾಗುತ್ತಿರುವಂತಹ ಈ ಸಮಯದಲ್ಲಿ ಅವಶ್ಯವೂ ಆಗಿದೆ.&lt;br /&gt;&lt;br /&gt;ಸ್ಥೂಲವಾಗಿ ಈ ಮೂರು ಸಮಾಜಗಳನ್ನು  ಈ ರೀತಿಯಾಗಿ ವರ್ಗೀಕರಿಸಬಹುದು.&lt;br /&gt;(೧) ಪಾಶ್ಚಿಮಾತ್ಯ ಸಮಾಜ: Liberal ಹಾಗು permissive society.&lt;br /&gt;(೨) ಅರೇಬಿಯನ್ ಸಮಾಜ: Repressive society.&lt;br /&gt;(೩) ಭಾರತೀಯ ಸಮಾಜ: Deteriorating society!&lt;br /&gt;&lt;br /&gt;ಈ ಮೂರು ಸಮಾಜಗಳಲ್ಲಿ ಭಾರತೀಯ ಸಮಾಜವು ಅತ್ಯಂತ ಹಳೆಯದು. ಕಾಲಕಾಲಕ್ಕೆ ತಕ್ಕಂತೆ ಈ ಸಮಾಜ ಬದಲಾಗುತ್ತಲೇ ನಡೆದಿದೆ ಮತ್ತು ಆಧುನಿಕ ವಿಚಾರಗಳನ್ನು ಮೈಗೂಡಿಸಿಕೊಳ್ಳುವದರಲ್ಲಿ ಇದು ಹಿಂದೆ ಬಿದ್ದಿಲ್ಲ.&lt;br /&gt;ಇಂತಹ ಭಾರತೀಯ ಸಮಾಜದ ವಿವಿಧ ಮಜಲುಗಳ ಅಧ್ಯಯನ ಮಾಡುವದೇ ಒಂದು ಆಸಕ್ತಿಕಾರಕ ವಿಷಯ.&lt;br /&gt;&lt;br /&gt;ಸನಾತನ ಭಾರತೀಯ ಸಮಾಜವು ಒಂದು ಸಂಕೀರ್ಣ ಸಮಾಜವಾಗಿತ್ತು. ಈ ಸಮಾಜವು ನಾಲ್ಕು ವರ್ಣಗಳನ್ನು ಆಧರಿಸಿತ್ತು. ಜ್ಞಾನಸಂಪಾದನೆಯು ಬ್ರಾಹ್ಮಣ ವರ್ಣದ ಉದ್ದೇಶವಾದರೆ, ಶತ್ರುಗಳಿಂದ ಸಮಾಜವನ್ನು ರಕ್ಷಿಸುವದು ಕ್ಷತ್ರಿಯವರ್ಣದ ಹೊಣೆಗಾರಿಕೆಯಾಗಿತ್ತು. ಅರ್ಥವ್ಯವಸ್ಥೆಯು ವೈಶ್ಯವರ್ಣದ ಜವಾಬುದಾರಿಯಾಗಿತ್ತು. ಶೂದ್ರವರ್ಣದವರದು  ಉತ್ಪಾದನಾ ಕಾರ್ಯ.&lt;br /&gt;&lt;br /&gt;ಇಂತಹ ಭೇದಗಳನ್ನು ಅಂದರೆ ಜಾತಿಗಳನ್ನು ಹುಟ್ಟಿನ ಆಧಾರದ ಮೇಲೆ ಮಾಡಬಾರದಾಗಿತ್ತು ಎನ್ನುವದು ಆಧುನಿಕರ ವಾದ. ಈ ವಾದ ಸರಿಯಾದದ್ದೇ. ಇದು ಸಾಮಾಜಿಕ ಅಸಮಾನತೆಯನ್ನು ನಿರ್ಮಿಸಿದ್ದದ್ದು ಸತ್ಯವೇ.&lt;br /&gt;ಆದರೆ, ಈ ವ್ಯವಸ್ಥೆಗೆ ಅನೇಕ ಅನುಕೂಲತೆಗಳೂ ಇದ್ದವು. ಹತ್ತುಸಾವಿರ ವರ್ಷಗಳ ಹಿಂದೆ ಅಕ್ಷರಗಳು ಇನ್ನೂ ಹುಟ್ಟಿರಲಿಲ್ಲ. ಜ್ಞಾನಸಂಪಾದನೆಯ ಹಾದಿ ಅತ್ಯಂತ ಕಠಿಣವಾಗಿತ್ತು. ಜ್ಞಾನಪ್ರಸಾರಕ್ಕಂತೂ ಸೌಲಭ್ಯಗಳು ಇರಲೇ ಇಲ್ಲ. ನಿಷ್ಠುರವಾದ  ಶಬ್ದಪಠಣದಿಂದ  ಮಾತ್ರ ಜ್ಞಾನದ ಸಂಪಾದನೆ ಹಾಗೂ ಸಂಗ್ರಹ ಸಾಧ್ಯವಾಗುತ್ತಿತ್ತು. ಇದನ್ನು ಸಾಧಿಸಲು ಇದ್ದಂತಹ ಒಂದೇ ಉಪಕರಣವೆಂದರೆ ಆನುವಂಶಿಕ ಜ್ಞಾನದಾನ. &lt;br /&gt;ಕೇವಲ ಗಣಿತಶಾಸ್ತ್ರ, ಖಗೋಲಶಾಸ್ತ್ರದಂತಹ abstract knowledge ಮಾತ್ರವಲ್ಲ, ಶಿಲ್ಪಶಾಸ್ತ್ರ, ಬಡಿಗತನ, ನೇಕಾರಿಕೆ, ಕಮ್ಮಾರಿಕೆ, ಒಕ್ಕಲುತನ ಮೊದಲಾದ ಎಲ್ಲ ತರಹದ professional knowledge ಸಹ ಈ ತರಹದ ಆನುವಂಶಿಕ ಜ್ಞಾನದಾನದಿಂದ ವಂಶಪಾರಂಪರ್ಯವಾಗಿ ಮುಂದಿನ ಪೀಳಿಗೆಗೆ ಸಾಗಿಸಲ್ಪಡುತ್ತಿದ್ದವು. &lt;br /&gt;ಈಗ ಶಾಲೆ, ಕಾ^ಲೇಜು, ವಿಶ್ವವಿದ್ಯಾಲಯಗಳಲ್ಲಿ ಸಾಧ್ಯವಾಗದೇ ಇದ್ದದ್ದು, ಆಗ ಸಾಧ್ಯವಾಗಿದ್ದು ಈ ಕಾರಣಕ್ಕಾಗಿ. &lt;br /&gt;&lt;br /&gt;(ಒಂದು ಸ್ವಾರಸ್ಯದ ಸಂಗತಿ: ಪುರಾತನ ಭಾರತದಲ್ಲಿ ಉತ್ಪನ್ನವಾದ ಜ್ಞಾನವು  ಆಧುನಿಕ ಭಾರತದಲ್ಲಿ ಉತ್ಪನ್ನವಾದ ಜ್ಞಾನದ ಅನೇಕ ಮಡಿಯಾಗಿದೆ. ಅಷ್ಟೇ ಏಕೆ, ಆಧುನಿಕ ಪ್ರಪಂಚದಲ್ಲಿ ಉತ್ಪನ್ನವಾದ ಜ್ಞಾನಕ್ಕಿಂತಲೂ ಇದರ ಮೌಲ್ಯವು ಅನೇಕ ಪಟ್ಟು ಹೆಚ್ಚಿನದೆಂದು ಹೇಳಬಹುದು.) &lt;br /&gt;&lt;br /&gt;ನಮ್ಮ ಮಾಜಿ ರಾಷ್ಟ್ರಪತಿ ಡಾ^. ಕಲಾಮ್ ಅವರು ಭವಿಷ್ಯದ ಭಾರತೀಯ ಸಮಾಜವು ಜ್ಞಾನಾಧಾರಿತ ಸಮಾಜ (Knowledge Society) ಆಗಬೇಕೆಂದು ಹಂಬಲಿಸುತ್ತಾರೆ. &lt;br /&gt;ನಮ್ಮ ಪುರಾತನ ಭಾರತೀಯ ಸಮಾಜವು ಕೇವಲ ಜ್ಞಾನಾಧಾರಿತ ಸಮಾಜವಾಗಲೀ, ಕೇವಲ ಭೌತಿಕ ವೈಭವದ ಸಮಾಜವಾಗಲೀ ಆಗಿರಲಿಲ್ಲ. ತನ್ನ ಅಂಗಜೀವಿಗಳ ಸಂಪೂರ್ಣ ಏಳ್ಗೆ ಯಾವುದರಿಂದ ಸಾಧ್ಯವಾಗುವದು ಎನ್ನುವದರ ಚಿಂತನೆಯನ್ನೂ ಈ ಸಮಾಜ ಮಾಡಿತು. ಅದರ ಫಲವೇ ಭಾರತೀಯ ಸಮಾಜವು ಉಪದೇಶಿಸುವ ನಾಲ್ಕು ಪುರುಷಾರ್ಥಗಳು: ಧರ್ಮ, ಅರ್ಥ, ಕಾಮ, ಮೋಕ್ಷ. &lt;br /&gt;&lt;br /&gt;ಈ ಪುರುಷಾರ್ಥಗಳನ್ನು ಸಾಧಿಸಲು ಅವಶ್ಯವಿರುವ ನಾಲ್ಕು ಆಶ್ರಮಗಳನ್ನು ಭಾರತೀಯ ಸಮಾಜವು ತನ್ನ ಅಂಗಜೀವಿಗಳ  ಮೇಲೆ ವಿಧಿಸಿತು. ಆ ನಾಲ್ಕು ಆಶ್ರಮಗಳೆಂದರೆ: ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ.&lt;br /&gt;ಇವೆಲ್ಲವೂ  ಭಾರತೀಯ ಸಮಾಜವು ತನ್ನ ಅಂಗಜೀವಿಗಳ ಸರ್ವಾಂಗೀಣ ಉತ್ಕರ್ಷಕ್ಕಾಗಿ ರೂಪಿಸಿದ ಸಂಸ್ಕೃತಿ. ಇದೇ ಪುರಾತನ ಭಾರತೀಯ ಸಮಾಜದ ಆದರ್ಶ.&lt;br /&gt;&lt;br /&gt;ಈ ಸಾಂಸ್ಕೃತಿಕ ಆದರ್ಶದ ಹಾಗು ಇಂತಹ ಸಮಾಜದ  ಸಂರಕ್ಷಣೆಯನ್ನು ಎರಡು ವಿಧಗಳಲ್ಲಿ ಮಾಡಲಾಯಿತು.&lt;br /&gt;(೧) ರಾಜಕೀಯ ಆಡಳಿತೆಯ ಮೂಲಕ&lt;br /&gt;(೨) ನೈತಿಕ/ಧಾರ್ಮಿಕ ಆಡಳಿತೆಯ ಮೂಲಕ&lt;br /&gt;&lt;br /&gt;ಯಾವುದೇ ಸಮಾಜದಲ್ಲಿ ಆಗಲಿ, ಪ್ರಭುತ್ವವು ಶಕ್ತವಾಗಿದ್ದರೆ ಮಾತ್ರ ಆ ಸಮಾಜಕ್ಕೆ ಸಂರಕ್ಷಣೆ ದೊರೆಯುತ್ತದೆ. ಪುರಾತನ ಭಾರತದಲ್ಲಿರುವ ಸಶಕ್ತ ರಾಜಪ್ರಭುತ್ವಗಳಿಂದಾಗಿಯೇ, ಈ ಸಮಾಜವು ಸುರಕ್ಷಿತವಾಗಿ ನಿಂತುಕೊಂಡು, ಸರ್ವಾಂಗೀಣ ಏಳ್ಗೆಯನ್ನು  ಸಾಧಿಸಿತೆಂದು ಹೇಳಬಹುದು. ಇಂತಹ ಅರಸರಲ್ಲಿ ಶ್ರೀರಾಮಚಂದ್ರನಂತಹ ಮಹಾರಾಜನು ತನ್ನ ಆದರ್ಶದಿಂದಾಗಿ ಅವತಾರಪುರುಷನಾದನು. ಉಜ್ಜಯನಿಯ ವಿಕ್ರಮರಾಜನು ದಂತಕಥೆಯಾದನು. ಈ ರಾಜರುಗಳ ಕತೆ ಕೇಳಿದವರಿಗೆ ಪುರಾಣಕಾಲದಲ್ಲಿ ಶಾಸನವು ಕರುಣೆಯಿಂದ ಕೂಡಿತ್ತು ಎಂದು ಭಾಸವಾಗುತ್ತದೆ. ಆದರೆ ಧಾರ್ಮಿಕ ಕಟ್ಟುಪಾಡುಗಳು ಮಾತ್ರ ಕಠೋರವಾಗಿದ್ದವು. &lt;br /&gt;ಈ ರೀತಿಯ ರಾಜಕೀಯ ಶಾಸನ ಹಾಗೂ ಧಾರ್ಮಿಕ ಕಟ್ಟಳೆಗಳ ಮೂಲಕ ಪುರಾತನ ಭಾರತೀಯ ಸಮಾಜವು ಸಂರಕ್ಷಿಸಲ್ಪಟ್ಟಿತ್ತು.&lt;br /&gt;&lt;br /&gt;ಈ ಸಮಾಜದಲ್ಲಿ ದೋಷಗಳು ಇರಲಿಲ್ಲವೆಂದಲ್ಲ. ಹೆಣ್ಣುಮಕ್ಕಳಿಗೆ ಹಾಗೂ ಶೂದ್ರರಿಗೆ ಈ ಸಮಾಜದಲ್ಲಿ ಯಾವ ಅಧಿಕಾರವೂ ಇರಲಿಲ್ಲ. ದಾಸವ್ಯವಸ್ಥೆಯು (=ಗುಲಾಮಗಿರಿಯು) ಈ ಸಮಾಜದಲ್ಲಿ ವ್ಯಾಪಕವಾಗಿತ್ತು.&lt;br /&gt;ಸತ್ಯಹರಿಶ್ಚಂದ್ರನ ಕತೆಯೇ ಇದಕ್ಕೆ ದೊಡ್ಡ ಉದಾಹರಣೆ. ಹರಿಶ್ಚಂದ್ರನು ತನ್ನ ಹೆಂಡತಿ ಹಾಗೂ ಮಗನನ್ನು ದುಡ್ಡಿಗಾಗಿ ಮಾರಿದ್ದು, ತನ್ನನ್ನೂ ಮಾರಿಕೊಂಡಿದ್ದು ದಾಸವ್ಯವಸ್ಥೆಯ ಉದಾಹರಣೆಯಾಗಿದೆ. ಯಾವಾಗಲೂ ಧರ್ಮದ ಜಿಜ್ಞಾಸೆಯಲ್ಲಿಯೇ ಮುಳುಗಿರುತ್ತಿದ್ದ ಧರ್ಮರಾಜನು ದ್ರೌಪದಿಯನ್ನು ಜೂಜಿನಲ್ಲಿ ಪಣವಾಗಿಟ್ಟು ದಾಸಿಯನ್ನಾಗಿ ಮಾಡಿದ ಕತೆಯೂ ಸಹ ದಾಸವ್ಯವಸ್ಥೆಯ ಉದಾಹರಣೆಯೇ ಸೈ.&lt;br /&gt;&lt;br /&gt;ಬಲಿಷ್ಠ ರಾಜಪ್ರಭುತ್ವದಿಂದ ಹಾಗೂ ನೈತಿಕ ಕಟ್ಟುಪಾಡುಗಳಿಂದ ಸಂರಕ್ಷಿಸಲ್ಪಟ್ಟ ಈ  ಸಮಾಜವು ಕಾಲಾಂತರದಲ್ಲಿ ತನ್ನ ಅಂತರ್ವೈರುಧ್ಯಗಳಿಂದಾಗಿಯೇ ಮುರಿದು ಬೀಳಲಾರಂಭಿಸಿತು. ಭಗವಾನ್ ಬುದ್ಧನ ಚಿಂತನೆಗಳಿಂದಾಗಿ ಸಮಾಜದಲ್ಲಿ ಬದಲಾವಣೆಗಳು ಕಾಣಲಾರಂಭಿಸಿದವು. ಈತನ ತಂದೆಯಾದ, ಕಪಿಲವಸ್ತುವಿನ ರಾಜನಾದ ಶುದ್ಧೋದನ ನೀಡಿದ ರಾಜಾಶ್ರಯದಿಂದಾಗಿ, ಬುದ್ಧಧರ್ಮವು ಮೊದಮೊದಲು ಒಂದು ಚಿಕ್ಕ ಪ್ರದೇಶದಲ್ಲಿ ನೆಲೆಗೊಂಡಿತು. ಬಳಿಕ ಚಕ್ರವರ್ತಿ ಅಶೋಕನ ರಾಜಾಶ್ರಯ ಪಡೆದ ಬುದ್ಧಧರ್ಮವು ಭಾರತದ ಒಳಗಡೆ ಹಾಗೂ ಹೊರಗಡೆ ವ್ಯಾಪಕ ನೆಲೆಯನ್ನು ಹೊಂದಿತು.&lt;br /&gt;&lt;br /&gt;ಕರ್ನಾಟಕದಲ್ಲಿಯೂ ಸಹ ವೀರಶೈವ ಶರಣರ ಮೂಲಕ ನಡೆದ ಚಳುವಳಿಯು ಸಮಾಜದಲ್ಲಿ ಬದಲಾವಣೆಗಳನ್ನು ತರುವ ಉದ್ದೇಶದಿಂದ ಮಾಡಿದ ಚಳುವಳಿಯೇ ಸೈ. ಇವೆಲ್ಲ ಆಂದೋಲನಗಳು ಸಮಾಜವ್ಯವಸ್ಥೆಯನ್ನು ಬದಲಿಸಲು ಹೊರಟಂತಹ ಕ್ರಾಂತಿಕಾರಿ ಚಳುವಳಿಗಳೇ ಹೊರತು, ಸಮಾಜವನ್ನು ಮುರಿದೊಗೆಯಲು ಮಾಡಿದ ಆಂದೋಲನಗಳಲ್ಲ.&lt;br /&gt;&lt;br /&gt;ಈ ಪುರಾತನ ಭಾರತೀಯ ಸಮಾಜವ್ಯವಸ್ಥೆಗೆ ಅಂತಹ ಬಲವಾದ ಧಕ್ಕೆ ಬಿದ್ದದ್ದು ಪರಕೀಯರ ಆಕ್ರಮಣದಿಂದ. ಪ್ರಪ್ರಥಮವಾಗಿ ಒಬ್ಬ ಅರೇಬಿಯನ್ ರಾಜ, ಆ ಬಳಿಕ ಮಂಗೋಲರು, ಪರ್ಶಿಯನ್ನರು ಹಾಗೂ ತುರುಕರು ಭಾರತದಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು. ಈ ಪ್ರಭುಗಳು ಭಾರತೀಯ ಸಮಾಜದ ಆರ್ಥಿಕ,ಆಡಳಿತಾತ್ಮಕ, ಸಾಮಾಜಿಕ , ಸಾಂಸ್ಕೃತಿಕ ಹಾಗೂ ಧಾರ್ಮಿಕ ವ್ಯವಸ್ಥೆಯನ್ನು ತಮ್ಮ ತವರಿನ ಸಂಕೇತಗಳ ಮೂಲಕ ಬದಲಾಯಿಸಿ ಬಿಟ್ಟರು. ಅವರ ರಾಜಕೀಯ ಮುಂದುವರಿಕೆಗೆ ಇದು ಅವಶ್ಯಕವಾಗಿತ್ತು. ಆದರೆ ಭಾರತೀಯ ಸಮಾಜದ ಮೇಲೆ ಇದರ ದುಷ್ಪರಿಣಾಮವು ಘೋರವಾಗಿತ್ತು. &lt;br /&gt;&lt;br /&gt;ಮೊದಲನೆಯದಾಗಿ ಭಾರತದಲ್ಲಿ  ಜ್ಞಾನೋತ್ಪಾದನೆಯ ಪ್ರಕ್ರಿಯೆ ಸ್ಥಗಿತವಾಯಿತು. &lt;br /&gt;ಎರಡನೆಯದಾಗಿ ಮತಾಂತರಿತರು ತಾವು ಭಾರತದ ಮಕ್ಕಳೆನ್ನುವ  identityಯನ್ನೇ ಮರೆತುಬಿಟ್ಟು ತಮ್ಮ ಮೂಲಸಂಸ್ಕೃತಿಯನ್ನು ತುಚ್ಛೀಕರಿಸಲಾರಂಭಿಸಿದರು.ಭಾರತೀಯ  ಸಂಸ್ಕೃತಿಯು ತನಗಿಂತ ಕೆಳದರ್ಜೆಯ ಪರಕೀಯ ಪ್ರಭುತ್ವದ ಸಂಸ್ಕೃತಿಗೆ ಸಲಾಮು ಹೊಡೆಯತೊಡಗಿತು. &lt;br /&gt;&lt;br /&gt;ಎರಡನೆಯದಾಗಿ ಪುರಾತನ ಭಾರತೀಯ ಸಂಸ್ಕೃತಿಗೆ ರಾಜಕೀಯ ಆಶ್ರಯ ತಪ್ಪಿಹೋಯಿತು. ಪುರಾತನ ಭಾರತೀಯ ಸಂಸ್ಕೃತಿ ಶಿಥಿಲವಾದಂತಹ ಈ ಸಮಯದಲ್ಲಿಯೇ ಭಾರತದಲ್ಲಿ  ಬ್ರಿಟಿಶರ ಪ್ರಭುತ್ವ ಸ್ಥಾಪನೆಯಾಯಿತು.&lt;br /&gt;ಬ್ರಿಟಿಶ್ ಆಡಳಿತೆಯು ಭಾರತದ ಸಾಂಸ್ಕೃತಿಕ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿತು. ಭಾರತೀಯ ಸಂಸ್ಕೃತಿಯ ಅನೇಕ ದುಷ್ಟ ಪದ್ಧತಿಗಳು ಬದಲಾದದ್ದೇನೊ ನಿಜ. ಉದಾಹರಣೆಗೆ ಸತಿ ಪದ್ಧತಿಯನ್ನು ಬ್ರಿಟಿಶರೇ ತೆಗೆದು ಹಾಕಿದರು. ಬಳಿಕ ಭಾರತೀಯರೇ ಶಾಸನದ ಮೂಲಕ ಬಹುಪತ್ನಿತ್ವವನ್ನು, ಬಾಲ್ಯವಿವಾಹವನ್ನು ತೆಗೆದುಹಾಕಿದರು. ಆಧುನಿಕ ಸೌಲಭ್ಯಗಳು ದೊರೆತಿದ್ದರಿಂದ, ಸಾರ್ವಜನಿಕ ಶಿಕ್ಷಣ ಲಭ್ಯವಾಯಿತು. ಹೀಗಾಗಿ ಜ್ಞಾನಸಂಪಾದನೆಯು ಸಾರ್ವತ್ರಿಕವಾಯಿತು. ಹೆಣ್ಣುಮಕ್ಕಳಲ್ಲಿ ಪ್ರಗತಿಯಾಗತೊಡಗಿತು. ಅವರಿಗೆ ಶಿಕ್ಷಣ ದೊರೆಯತೊಡಗಿತು  ಹಾಗೂ ಹೆಣ್ಣುಮಕ್ಕಳ ಆರ್ಥಿಕ ಸ್ವಾವಲಂಬನ ಸಾಧ್ಯವಾಯಿತು.  &lt;br /&gt;ಇದೆಲ್ಲ ನಿಜ; ಆದರೆ ಭಾರತದಲ್ಲಿ ಆದ ಈ ಎಲ್ಲ ಬದಲಾವಣೆಗಳಿಂದ  ಸಾಂಸ್ಕೃತಿಕ ಉನ್ನತಿಯಾಗಿದೆಯೋ ಅಥವಾ ಅವನತಿಯಾಗಿದೆಯೊ?&lt;br /&gt;&lt;br /&gt;ಇಂದಿನ ಭಾರತೀಯ ಸಮಾಜದಲ್ಲಿ ಆದಂತಹ ಒಳ್ಳೆಯ ಸಂಗತಿಗಳೆಂದರೆ ಇವು:&lt;br /&gt;ಜಾತ್ಯಾಧಾರಿತ ಸಾಮಾಜಿಕ ಅಸಮಾನತೆ ಕಡಿಮೆಯಾಗತೊಡಗಿದೆ. ಶಿಕ್ಷಣ ಹಾಗೂ ಉದ್ಯೋಗ ರಂಗಗಳಲ್ಲಿ  ಎಲ್ಲರಿಗೂ ಮುಕ್ತ ಅವಕಾಶ ಲಭ್ಯವಿದೆ. ಸ್ತ್ರೀಯರ ಮೇಲೆ ಹೇರಲಾದ ಕಠೋರ ಧಾರ್ಮಿಕ, ಸಾಮಾಜಿಕ ನಿಷೇಧಗಳು ಕಡಿಮೆಯಾಗಿವೆ. ಸ್ತ್ರೀ ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಸ್ವಾವಲಂಬಿಯಾಗಿದ್ದಾಳೆ.&lt;br /&gt;&lt;br /&gt;ಇನ್ನು ಭಾರತೀಯ ಸಮಾಜದಲ್ಲಿ ಆದಂತಹ ಕೆಡುಕಿನ ಸಂಗತಿಗಳೇನು?&lt;br /&gt;ಮುಖ್ಯವಾಗಿ ಭಾರತೀಯ ಸಮಾಜವು Insensitive Society ಆಗಿ ಪರಿವರ್ತನೆಗೊಂಡಿದೆ. &lt;br /&gt;ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಭಾರತದಲ್ಲಿ ತಮ್ಮ ಸಾಮಾಜಿಕ ಜೀವನವನ್ನು  ಪ್ರಾರಂಭಿಸುವ ಮೊದಲು, ತಮ್ಮ ಗುರುವಾದ ಗೋಖಲೆಯವರ ಸಲಹೆಯ ಮೇರೆಗೆ ಭಾರತದಲ್ಲಿ ಪ್ರಯಾಣ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಅವರು ಒಂದು ಗುಡಿಸಿಲಿಗೆ ಭೆಟ್ಟಿ ಕೊಟ್ಟರು. ಗುಡಿಸಿಲಿನಲ್ಲಿರುವ ಹೆಣ್ಣುಮಗಳು ತನ್ನಲ್ಲಿದ್ದ ಒಂದೇ ಸೀರೆಯನ್ನು ಒಗೆದು ಗುಡಿಸಿಲಿನ ಬಾಗಿಲಿಗೆ ಒಣಗು ಹಾಕಿ, ತಾನು ಒಳಗೆ ಬತ್ತಲೆಯಾಗಿ ಕುಳಿತಿದ್ದಳು. ಹೀಗಾಗಿ ಅವಳು ಹೊರಗೆ ಬರಲಿಲ್ಲ. ತನ್ನವರೆಲ್ಲರೂ ಅರೆಬತ್ತಲೆ ಇರುವಾಗ ತಾನು ಒಳ್ಳೆಯ ವಸ್ತ್ರಗಳನ್ನು ಧರಿಸಿಕೊಳ್ಳಬಹುದೆ ಎಂದು ಗಾಂಧೀಜಿಯವರ ಅಂತರಂಗ ಶೋಕಿಸಿತು. ಅವರು ಮುಂಡುಧೋತರ ಹಾಗೂ ಅಂಗವಸ್ತ್ರವನ್ನು ಮಾತ್ರ ಧರಿಸಲು ಈ ಘಟನೆ ಪ್ರೇರಣೆ ನೀಡಿತು.&lt;br /&gt;ಇದು ಮಹಾತ್ಮರ sensitivity.&lt;br /&gt;&lt;br /&gt;ಹೋ ಚಿ ಮಿನ್ಹರು ಉತ್ತರ ವ್ಹಿಯೆಟ್ ನಾಮ್‍ದ ಅಧ್ಯಕ್ಷರಾದ ಮೇಲೂ ಸಹ ಗುಡಿಸಿಲಿನಲ್ಲಿಯೇ ವಾಸಿಸುತ್ತಿದ್ದರೆಂದು ಕೇಳಿದ್ದೇನೆ.ಅದರಂತೆ, ಪುರಾತನ ಚೀನಾದ ಮಹಾ ತತ್ವಜ್ಞಾನಿಯಾದ ಕಾಂ^ಗ್ ಫೂಜಿ (Confucius)ನುಡಿದ ಒಂದು ಮಾತು ನಮಗೆ ಅತ್ಯಂತ ಸಂಗತವಾಗಿದೆ: It is a shame to be poor when the country is rich ; it is a shame to be rich when the country is poor.&lt;br /&gt;&lt;br /&gt;ಆದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ನಮ್ಮ ರಾಜಕಾರಣಿಗಳು ಸಾಮಾಜಿಕ sensitivityಯನ್ನು ಕಸ ಗೂಡಿಸುವಂತೆ ಗುಡಿಸಿ ಬಿಸಾಕಿದರು.&lt;br /&gt;Power corrupts and absolute power corrupts absolutely ಎಂದು ಹೇಳುತ್ತಾರೆ.&lt;br /&gt;ನಮ್ಮ ರಾಜಕಾರಣಿಗಳು corrupt ಆಗಲು ಅರ್ಧ ನಿಮಿಷ ಕೂಡ ಬೇಕಾಗಲಿಲ್ಲ!&lt;br /&gt;ಇದು ಭಾರತೀಯ ಸಮಾಜದ ಅವನತಿಯ ಕಥೆಯ ಪ್ರಾರಂಭ.&lt;br /&gt;ಇದಕ್ಕೆ ಕಾರಣವೇನು?&lt;br /&gt;&lt;br /&gt;ಬ್ರಿಟಿಶ್ ಆಡಳಿತದಿಂದಾಗಿ ಭಾರತೀಯರು ತಮ್ಮ ಸನಾತನ ಧರ್ಮದಲ್ಲಿದ್ದ ಅನೇಕ ಅರ್ಥಹೀನ ಕಟ್ಟಳೆಗಳನ್ನು ಗಮನಿಸಲಾರಂಭಿಸಿದರು. ಅವುಗಳನ್ನು ಕಿತ್ತೆಸೆಯುವ ಕಾರ್ಯವನ್ನೂ ಮಾಡಿದರು. ಇದು ಒಳ್ಳೆಯದೇ ಆಯಿತು. ಆದರೆ ಧಾರ್ಮಿಕ ಕಟ್ಟುಪಾಡುಗಳು ರೂಪಿಸುವ ನೈತಿಕ ಪ್ರಜ್ಞೆಯೂ ಇದರೊಡನೆಯೇ ಹೊರಟು ಹೋಯಿತು. ತರ್ಕದ ಆಧಾರದ ಮೇಲೆ ಧರ್ಮವನ್ನು ವಿರೋಧಿಸಿದವರು, ಧರ್ಮವು ಕೊಡುವ ನೈತಿಕ ಪ್ರಜ್ಞೆಯನ್ನು ಎಲ್ಲಿಂದ ತರಬೇಕೆನ್ನುವದನ್ನು ವಿಚಾರಿಸಲಿಲ್ಲ.&lt;br /&gt;&lt;br /&gt;ಇತ್ತೀಚೆಗಂತೂ ಅಮೇರಿಕನ್ ವಾಣಿಜ್ಯ ಸಂಸ್ಕೃತಿ ಹಾಗೂ ಅದರಿಂದ ಪ್ರೇರಿತರಾದ ಭಾರತೀಯರು ನಮ್ಮ ಸಂಸ್ಕೃತಿಯನ್ನು commercialise ಮಾಡಿದರು. Maximum Exploitation ಅನ್ನುವದೇ ನಮ್ಮ ಧ್ಯೇಯವಾಕ್ಯವಾಯಿತು.  Exploitation ಮಾಡಲು ಏನಿಲ್ಲ ನಮ್ಮಲ್ಲಿ? ಬೇಕಾದಷ್ಟು ಭೂಗತ ಸಂಪತ್ತು, ಬೇಕಾದಷ್ಟು ನಿಸರ್ಗ ಸಂಪತ್ತು ನಮ್ಮಲ್ಲಿದೆ. ಅವನ್ನು ರಫ್ತು ಮಾಡಬಹುದು. ಮನೆಕೆಲಸ ಮಾಡಲು ನಮ್ಮ ತರುಣಿಯರನ್ನು ಹಾಗೂ ಇಟ್ಟಿಗೆ ಹೊರಲು ನಮ್ಮ ತರುಣರನ್ನು ಮಧ್ಯಪ್ರಾಚ್ಯಕ್ಕೆ ರಫ್ತು ಮಾಡಬಹುದು. &lt;br /&gt;ಬುದ್ಧಿವಂತರನ್ನು  I.T. ಕೆಲಸ ಮಾಡಲು ಅಮೇರಿಕೆಗೆ ರಫ್ತು ಮಾಡಬಹುದು. &lt;br /&gt;&lt;br /&gt;ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ: ಅಮೇರಿಕೆಯಲ್ಲಿಯೂ ಸಹ Commercial Culture ಇದೆ. ಆದರೆ ಈ ಸಂಸ್ಕೃತಿಯ ದುರಂತಗಳು ನಮ್ಮನ್ನು ಬಾಧಿಸಿದಂತೆ ಅವರನ್ನೇಕೆ ಬಾಧಿಸುತ್ತಿಲ್ಲ?&lt;br /&gt;ಅದಕ್ಕೆ ಉತ್ತರ ಹೀಗಿದೆ: ಅಮೇರಿಕದಲ್ಲಿ ಶಾಸನದ ಆಡಳಿತ ತುಂಬಾ ಶಕ್ತಿಶಾಲಿಯಾಗಿದೆ. ಭಾರತದಲ್ಲಿ ಶಾಸನದ ಆಡಳಿತಕ್ಕೆ ಬಲವೇ ಇಲ್ಲ. &lt;br /&gt;ನಾವು ಮೊದಲೇ ಚರ್ಚಿಸಿದಂತೆ, ಸಮಾಜದ ಅಂಗಜೀವಿಗಳು ಸಮಾಜ ವಿಧಿಸಿದ ಚೌಕಟ್ಟಿನೊಳಗೇ ಜೀವಿಸಬೇಕಾದರೆ ಶಾಸನದ ಆಡಳಿತ ಅಥವಾ/ಮತ್ತು ಧಾರ್ಮಿಕ ಆಡಳಿತ ಶಕ್ತಿಶಾಲಿಯಾಗಿರಬೇಕು. ಅಮೇರಿಕದಲ್ಲಿ ಕ್ರಿಶ್ಚಿಯನ್ ಚರ್ಚ ಎಷ್ಟರ ಮಟ್ಟಿಗೆ ಶಕ್ತಿಶಾಲಿಯಾಗಿದೆಯೋ ಗೊತ್ತಿಲ್ಲ; ಆದರೆ ಶಾಸನದ ಆಡಳಿತ ಮಾತ್ರ ಸರ್ವಶಕ್ತವಾಗಿದೆ. ಹೀಗಾಗಿ ಎಷ್ಟೇ ವೈಯಕ್ತಿಕ  ಸ್ವಾತಂತ್ರ್ಯವಿದ್ದರೂ ಸಹ ಅಮೆರಿಕದ ಸಮಾಜವು ಶಾಸನದ ಚೌಕಟ್ಟಿನ ಒಳಗೆ ಸುರಕ್ಷಿತವಾಗಿ ಉಳಿದಿದೆ. &lt;br /&gt;&lt;br /&gt;ಆದರೆ ಭಾರತದಲ್ಲಿ ಒಳ್ಳೆಯ ಶಾಸನಗಳನ್ನು ಮಾಡಲು, ಆ ಶಾಸನಗಳನ್ನು ಭಾರತೀಯರೆಲ್ಲರಿಗೂ ಅನ್ವಯಿಸಲು ನಮ್ಮ ಪ್ರಭುಗಳು ಹೆದರುತ್ತಾರೆ. ಬಲಶಾಲಿಯಾದ ಪ್ರಜಾಭಾಗಗಳಿಗೆ ಈ ದೇಶದಲ್ಲಿ ಯಾವ ಕಾನೂನನ್ನೂ ಮಾಡುವಂತಿಲ್ಲ ; ಮಾಡಿದರೂ ಅದು ಅನ್ವಯಿಸುವದಿಲ್ಲ!&lt;br /&gt;&lt;br /&gt;ಭಾರತೀಯ ಶಾಸನವು ನಿರ್ಬಲವಾಗಲು ಕಾರಣವೇನು?&lt;br /&gt;ಅನೇಕ ವರ್ಷಗಳ ಹಿಂದೆ ಮಾನವಶಾಸ್ತ್ರಜ್ಞರು ಮಂಗಗಳ ಮೇಲೆ ಹಾಗೂ ಇಲಿಗಳ ಮೇಲೆ ಕೆಲವು ಪ್ರಯೋಗಗಳನ್ನು ಮಾಡಿದರು. ದಟ್ಟ ಅರಣ್ಯಪ್ರದೇಶದಲ್ಲಿರುವ, ಒಂದೇ ಬಲಶಾಲಿ ನಾಯಕನಿರುವ ಮಂಗಗಳ ಗುಂಪು , ಅರೆಬರೆ ಅರಣ್ಯಪ್ರದೇಶದಲ್ಲಿರುವ ಸಮಾನ ಬಲಶಾಲಿಗಳಾದ ಮಂಗಗಳ ಗುಂಪು ಹಾಗೂ ಆಹಾರದ ಕೊರತೆಯಿರುವ ನಿರ್ಬಲ ನಾಯಕತ್ವದ ಮಂಗಗಳ ಗುಂಪು ಹೀಗೆ ಮೂರು ಗುಂಪುಗಳನ್ನು ಆರಿಸಿ ಅವುಗಳ ಅಭ್ಯಾಸ ಮಾಡಲಾಯಿತು. (ಎರಡನೆಯ ಗುಂಪಿಗಾಗಿ ಧಾರವಾಡದ ಬಳಿಯ ಅರಣ್ಯಪ್ರದೇಶವನ್ನು ಆರಿಸಲಾಗಿತ್ತು!)&lt;br /&gt;ಬಲಶಾಲಿ ನಾಯಕತ್ವ ಹಾಗೂ ದಟ್ಟ ಅರಣ್ಯದಲ್ಲಿರುವ ಮಂಗಗಳ ಗುಂಪು ಈ ಎಲ್ಲ ಗುಂಪುಗಳಲ್ಲಿಯ ಶ್ರೇಷ್ಠ ಗುಂಪಾಗಿ ಹೊರಹೊಮ್ಮಿತು ಮತ್ತು ಮೂರನೆಯ ಗುಂಪು ಕನಿಷ್ಠ ಗುಂಪಾಗಿ ಹೊರಹೊಮ್ಮಿತು ಎಂದು ಹೇಳಬೇಕಾಗಿಲ್ಲ.&lt;br /&gt;&lt;br /&gt;ಇದೇ ತರ್ಕವನ್ನು ನಮ್ಮ ಭಾರತಕ್ಕೆ ಅನ್ವಯಿಸಿ ನೋಡೋಣ:&lt;br /&gt;ಭಾರತದಲ್ಲಿ ಮಿತಿಮೀರಿದ ಜನಸಂಖ್ಯೆ ಇದೆ. ಇದು ಆಹಾರದ ಕೊರತೆ ಇರುವ ಅರಣ್ಯಪ್ರದೇಶವನ್ನು ಹೋಲುತ್ತದೆ.&lt;br /&gt;ಬಲಶಾಲಿಯಾದ ನಾಯಕತ್ವ ನಮ್ಮಲ್ಲಿ ಇಲ್ಲ. ನಾಯಕರಾಗಲು ಬಯಸುವವರು ತಮ್ಮ ಸ್ಥಾನಬಲದ ಮೂಲಕ ದೇಶವನ್ನು ಲೂಟಿ ಮಾಡಲು ಬಯಸುತ್ತಾರೆ. ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುವ ಒಂದೇ ಉದ್ದೇಶದಿಂದ ಜಾತಿಜಾತಿಗಳಲ್ಲಿ ವೈಷಮ್ಯ ಬೆಳೆಸುತ್ತಾರೆ. ಇವರಿಂದ ಶಾಸನದ ಅಥವಾ ನೈತಿಕತೆಯ ಪ್ರಭುತ್ವವನ್ನು ಅಪೇಕ್ಷಿಸುವದು ಸಾಧ್ಯವಿಲ್ಲ. ಮಿತಿಮೀರಿದ ಜನಸಂಖ್ಯೆ ಹಾಗೂ ನಿರ್ಬಲ, ಅನೈತಿಕ ನಾಯಕತ್ವ ಹೊಂದಿದ ಪ್ರಜಾಪ್ರಭುತ್ವವುಳ್ಳ ಎಲ್ಲಾ ದೇಶಗಳದೂ ಇದೇ ಹಣೆಬರಹ. ಉದಾಹರಣೆಗೆ ಪಾಕಿಸ್ತಾನ, ಬಂಗ್ಲಾದೇಶ ಹಾಗೂ ಶ್ರೀಲಂಕಾ.&lt;br /&gt;&lt;br /&gt;ಆದರೆ ಅಮೇರಿಕದಲ್ಲಿ ಶಕ್ತಿಶಾಲಿ (ಪ್ರಜಾ)ಪ್ರಭುತ್ವವಿರುವದರಿಂದ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಧಾರ್ಮಿಕ ಕಟ್ಟಲೆಗಳ ನಿರಂಕುಶಾಧಿಕಾರವಿರುವದರಿಂದ, ಅಲ್ಲಿಯ ಸಮಾಜಗಳು ಸ್ಥಿರವಾಗಿ ನಿಂತಿವೆ ಎಂದು ಹೇಳಬಹುದು. ಅಮೇರಿಕದ ಸಮಾಜವು ವೈಯಕ್ತಿಕ ಮಹದಾಧಿಕಾರದ ನಾಡಾದರೆ, ಮಧ್ಯಪ್ರಾಚ್ಯದ ಸಮಾಜವು ಧಾರ್ಮಿಕ ಮಹದಾಧಿಕಾರದ ನಾಡು. ಆದರೆ ಈ ಎರಡೂ ನಾಡುಗಳಲ್ಲಿ ಇರುವ ಸ್ಥಿರತೆ ಭಾರತದಲ್ಲಿ ಉಳಿದಿಲ್ಲ ಎನ್ನುವದು ಖೇದದ ಸಂಗತಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5939841257923965225-5839977641862433658?l=sallaap.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sallaap.blogspot.com/feeds/5839977641862433658/comments/default' title='Post Comments'/><link rel='replies' type='text/html' href='https://www.blogger.com/comment.g?blogID=5939841257923965225&amp;postID=5839977641862433658' title='26 Comments'/><link rel='edit' type='application/atom+xml' href='http://www.blogger.com/feeds/5939841257923965225/posts/default/5839977641862433658'/><link rel='self' type='application/atom+xml' href='http://www.blogger.com/feeds/5939841257923965225/posts/default/5839977641862433658'/><link rel='alternate' type='text/html' href='http://sallaap.blogspot.com/2009/03/blog-post.html' title='ಸಮಾಜ ಹಾಗು ಸಂಸ್ಕೃತಿ'/><author><name>sunaath</name><uri>http://www.blogger.com/profile/13386371953472087631</uri><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='12146559576203434470'/></author><thr:total xmlns:thr='http://purl.org/syndication/thread/1.0'>26</thr:total></entry><entry><id>tag:blogger.com,1999:blog-5939841257923965225.post-3481159227239811089</id><published>2009-02-28T14:46:00.012+05:30</published><updated>2009-07-05T17:40:46.019+05:30</updated><title type='text'>ಕೃಷ್ಣ ಗೋಪಾಳ ಜೋಶಿ--ಅಗ್ನಿಸಂದೇಶ</title><content type='html'>ಯಾರಿಗೆ ತನ್ನ ಇತಿಹಾಸ ಗೊತ್ತಿರುವದಿಲ್ಲವೊ, ಅವನಿಗೆ ಭವಿಷ್ಯವೂ ಇರುವದಿಲ್ಲ ಎಂದು ಹೇಳಬಹುದು. ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಈ ಮಾತು ಸರಿಯಾಗಿ ಅನ್ವಯಿಸುತ್ತದೆ. ದೇಶದ ಒಳಿತಿಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಅನೇಕ ವ್ಯಕ್ತಿಗಳು ನಮ್ಮ ನಡುವೆಯೇ ಇದ್ದೂ ನಮಗೆ ಅದರ ಅರಿವೇ ಇಲ್ಲದವರಂತೆ ನಾವು ಬದಕುತ್ತಿದ್ದೇವೆ.&lt;br /&gt;&lt;br /&gt;ಶ್ರೀ ಕೃಷ್ಣ ಗೋಪಾಳ ಜೋಶಿಯವರನ್ನು ನಾನು ಮೊದಲ ಸಲ ನೋಡಿದ್ದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ೧೪ ವರ್ಷಗಳ ಬಳಿಕ. ಆಗ ಇವರು ೫೨ ವರ್ಷದವರು. ಧಾರವಾಡದ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಮುಖ್ಯಾಧ್ಯಾಪಕರಾಗಿದ್ದರು. ಸುಮಾರು ಆರಡಿ ಎತ್ತರದ ದೃಢಕಾಯ, ತಲೆಗೆ ಗಾಂಧಿ ಟೊಪ್ಪಿಗೆ, ಶಿಸ್ತು ಹಾಗೂ ಮಮತೆಗಳನ್ನು ಸೂಸುವ ಮುಖಭಾವ. &lt;br /&gt;ಈ ವ್ಯಕ್ತಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವ್ಯಕ್ತಿ ಎಂದು ಆ ಶಾಲೆಯ ವಿದ್ಯಾರ್ಥಿಗಳಿಗಾಗಲೀ, ಅಲ್ಲಿಯ ಅನೇಕ ಶಿಕ್ಷಕರಿಗಾಗಲೀ ಗೊತ್ತೇ ಇರಲಿಲ್ಲ.&lt;br /&gt;&lt;br /&gt;ಕೃಷ್ಣ ಗೋಪಾಳ ಜೋಶಿಯವರು ಬಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಸಾಮಾನ್ಯ ಶಕೆ ೧೯೦೯ರಲ್ಲಿ ಜನಿಸಿದರು. ಏಳನೆಯ ಇಯತ್ತೆಯಲ್ಲಿ ತೇರ್ಗಡೆಯಾದ ಬಳಿಕ, ಇವರು ವೈದಿಕೀ ವೃತ್ತಿ ಮಾಡಿಕೊಂಡಿರಲಿ ಎನ್ನುವದು ಇವರ ಹಿರಿಯರ ಅಭಿಪ್ರಾಯವಾಗಿತ್ತು. ಆದರೆ ಕೃಷ್ಣ ಜೋಶಿಯವರದು ಬಾಲ್ಯದಿಂದಲೂ ಸಾಹಸದ ಸ್ವಭಾವ. ಮನೆ ಬಿಟ್ಟು ವಿಜಾಪುರಕ್ಕೆ  ಓಡಿ ಹೋದರು. ಮಲ ಅಕ್ಕನ ಮನೆಯಲ್ಲಿ ಇದ್ದುಕೊಂಡು, ವಾರಾನ್ನ ಹಚ್ಚಿಕೊಂಡು ವಿದ್ಯಾಭ್ಯಾಸ ಸಾಗಿಸಿದರು.&lt;br /&gt;&lt;br /&gt;ವಿಜಾಪುರದಲ್ಲಿ ಇವರ ಪಾಲಕರು ತೀರಿಕೊಂಡಿದ್ದರಿಂದ ಮಲ ಅಕ್ಕನ ಜೊತೆಗೆ ಇವರೆಲ್ಲ ಧಾರವಾಡಕ್ಕೆ ಬರಬೇಕಾಯಿತು. ಅಲ್ಲಿ ಕರ್ನಾಟಕ ಹಾಯ್‍ ಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಇದು ಜೋಶಿಯವರ ಜೀವನದಲ್ಲಿಯ turning point.&lt;br /&gt;&lt;br /&gt;ಕರ್ನಾಟಕ ಹಾಯ್‍ಸ್ಕೂಲ ಎಂದರೆ ಸ್ವಾತಂತ್ರ್ಯ ಹೋರಾಟಗಾರರ ಕಮ್ಮಟವಾಗಿತ್ತು.  ಶಿನೋಳಿಕರ ಎನ್ನುವ ತರುಣ ವಿಜ್ಞಾನಿ ಬೆಂಗಳೂರಿನಲ್ಲಿಯ ತಾತಾ ವಿಜ್ಞಾನ ಕೇಂದ್ರದಲ್ಲಿಯ ತಮ್ಮ ಆಕರ್ಷಕ ವೈಜ್ಞಾನಿಕ ಹುದ್ದೆಯನ್ನು ತ್ಯಜಿಸಿ, ಈ ಶಾಲೆಯ ಮುಖ್ಯಾಧ್ಯಾಪಕರಾಗಲು ಬಂದಿದ್ದರು. ಇದಲ್ಲದೆ ಧಾರವಾಡದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾದ ಡಾ^. ಕಬ್ಬೂರ, ಶ್ರೀ ದ.ಪ. ಕರಮರಕರ (--ಇವರು ಸ್ವಾತಂತ್ರ್ಯಾನಂತರ ಕೇಂದ್ರ ಸರಕಾರದಲ್ಲಿ ಉಪಸಚಿವರಾಗಿದ್ದರು--), ಶ್ರೀ ಮುಧೋಳಕರ ಇವರೆಲ್ಲ ಈ ಸಂಸ್ಥೆಯ ಕಾರ್ಯಕರ್ತರು. “ಗುದ್ಲಿ ಪಾರ್ಟಿ” ಎನ್ನುವ ಗುಂಪೊಂದನ್ನು ನಿರ್ಮಿಸಿಕೊಂಡು ಇವರೆಲ್ಲ ತಮ್ಮ ಕೈಗಳಿಂದಲೇ ಶಾಲೆಗೆ ಅವಶ್ಯಕವಿರುವ ಕಾರ್ಯಗಳನ್ನು ನಿರ್ವಹಿಸಿದ್ದಾರೆ. (ಖ್ಯಾತ ಸಾಹಿತಿ ಹಾಗೂ ಕೇಂದ್ರ ಸರಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದ ಶ್ರೀ ಗಂಗಾಧರ ಚಿತ್ತಾಳರು ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದರು. ಅವರೂ ಸಹ ಇಂತಹ ಸಾಂಸ್ಕೃತಿಕ-ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರೇ. ಶ್ರೀ ಚಿತ್ತಾಳರು ಆಗಿನ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮುಂಬಯಿ ಪ್ರಾಂತಕ್ಕೆ ಪ್ರಥಮರಾಗಿ ಉತ್ತೀರ್ಣರಾದರು.)&lt;br /&gt;&lt;br /&gt;ಕೃಷ್ಣ ಗೋಪಾಳ ಜೋಶಿಯವರು ಈ ಧುರೀಣರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ೧೯೨೮ರಲ್ಲಿ ಡಾ^. ನಾ.ಸು. ಹರ್ಡೀಕರರ ಸೇವಾದಳ ಕಾರ್ಯಕರ್ತರಾಗಿ ಸೇವಾದಳ ಶಿಬಿರದಲ್ಲಿ ಭಾಗವಹಿಸಿದರು. &lt;br /&gt;&lt;br /&gt;ಎಪ್ರಿಲ್ ೧೯೩೦ರಲ್ಲಿ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಯಿತು. ಜೋಶಿಯವರು ಹಾಗೂ ಹೋರಾಟಕ್ಕಿಳಿದ ಇತರ ತರುಣರು ಸುಮಾರು ೪೦ ಕಿಲೊಮೀಟರ ದೂರದ ಬೆಣ್ಣಿಹಳ್ಳಕ್ಕೆ ಹೋಗಿ, ಉಪ್ಪು ತಯಾರಿಸಿ ತಂದು ಧಾರವಾಡದಲ್ಲಿ ಹಂಚಿದರು.&lt;br /&gt;&lt;br /&gt;೧೯೩೧ರಲ್ಲಿ ಅಸಹಕಾರ ಚಳುವಳಿ ತಾರಕಕ್ಕೇರಿತು. ತಮ್ಮ ಜೊತೆಗಾರರೊಂದಿಗೆ ವಿದೇಶಿ ವಸ್ತ್ರಗಳ ವಿರುದ್ಧ ಪಿಕೆಟಿಂಗ್ ಪ್ರಾರಂಭಿಸಿದರು. ಅದೇ ಕಾಲದಲ್ಲಿ ಸೆರೆ-ಸಿಂದಿ ಅಂಗಡಿಗಳಿಗೆ ಬಹಿಷ್ಕಾರ ಹಾಕಲಾಯಿತು. ಜೋಶಿಯವರು ಹಾಗೂ ಜೊತೆಗಾರರು ಸಿಂದಿ ಅಂಗಡಿಗಳ ಎದುರಿಗೆ ಪಿಕೆಟಿಂಗ ಚಾಲೂ ಮಾಡಿದರು. ಅಷ್ಟೇ ಅಲ್ಲದೆ, ಶಿಂದಿಯ ಉತ್ಪಾದನೆಯನ್ನೇ ನಿಲ್ಲಿಸುವ ಉದ್ದೇಶದಿಂದ ಸಿಂದಿ ಮರಗಳನ್ನು ಕಡಿದು ಹಾಕತೊಡಗಿದರು. ಧಾರವಾಡದ ಜಕ್ಕಣಿ ಬಾವಿಯ ಬಳಿಯಲ್ಲಿ ನಡೆದ ಪಿಕೆಟಿಂಗ ಸಮಯದಲ್ಲಿ ಜರುಗಿದ ಪೋಲೀಸ್ ಗೋಳೀಬಾರಿನಲ್ಲಿ ಮಲಿಕಸಾಬ ಎನ್ನುವ ಹುಡುಗನ ಬಲಿದಾನವಾಯಿತು.&lt;br /&gt;&lt;br /&gt;&lt;br /&gt;೧೯೩೧ರಲ್ಲಿ, ಶ್ರೀ ಕರಮರಕರರು ಅಂಕೋಲಾ ತಾಲೂಕಿನಲ್ಲಿ ಕರನಿರಾಕರಣೆ ಚಳುವಳಿಯನ್ನು ಸಂಘಟಿಸಿದರು. ಜೋಶಿಯವರು ಅಲ್ಲಿ ಅವರ ಸಹಾಯಕರಾಗಿ ಕೆಲಸ ಮಾಡಿದರು. ಅಂಕೋಲಾ ತಾಲೂಕಿನ ಈ ಕರನಿರಾಕರಣ ಚಳುವಳಿಯನ್ನು ಸರದಾರ ವಲ್ಲಭಭಾಯಿ ಪಟೇಲರು ಬಾರ್ಡೋಲಿಯಲ್ಲಿ ಸಂಘಟಿಸಿದ ಚಳುವಳಿಗೆ ಹೋಲಿಸಲಾಗುತ್ತದೆ. ಅಂಕೋಲಾ ತಾಲೂಕಿನ ಭೂಮಾಲೀಕರು ಹಾಗೂ ಗೇಣಿದಾರರು ಒಟ್ಟಾಗಿಯೇ ಈ ಚಳುವಳಿಯಲ್ಲಿ ಭಾಗವಹಿಸಿದರು. ಪೋಲೀಸರಿಂದ ಕ್ರೂರ ಅತ್ಯಾಚಾರಗಳು ಜರುಗಿದವು. ಆದರೆ ಅಂಕೋಲೆಯ ಜನತೆ ಎಲ್ಲವನ್ನೂ ಸಹಿಸಿಕೊಂಡು, ಕೆಚ್ಚಿನಿಂದ ಬ್ರಿಟಿಶರ ವಿರುದ್ಧ ಹೋರಾಡಿತು. &lt;br /&gt;&lt;br /&gt;ಧಾರವಾಡದಿಂದ ದ.ಪ.ಕರಮರಕರ, ಭಾಲಚಂದ್ರ ಘಾಣೇಕರ, ಕೆ.ಜಿ.ಜೋಶಿಯವರು ಕಾರ್ಯಕರ್ತರಾಗಿ ಬಂದಿದ್ದರು. ಇವರೊಡನೆ ಸೂರ್ವೆಯ ಬೊಮ್ಮಣ್ಣ ನಾಯಕರು, ಕಣಗಿಲದ ಬೊಮ್ಮಾಯ ತಿಮ್ಮಣ್ಣ ನಾಯಕರು, ಹಿಚಕಡದ ಹಮ್ಮಣ್ಣ ನಾಯಕರು ಮತ್ತು ಬೀರಣ್ಣ ನಾಯಕರು ಕೈಗೂಡಿಸಿದ್ದರು. ಕೊನೆಗೊಮ್ಮೆ ಜೋಶಿಯವರ ಹಾಗೂ ಶ್ರೀ ಕರಮರಕರರ ಬಂಧನವಾಯಿತು. ಜೋಶಿಯವರಿಗೆ ೧೧ ತಿಂಗಳ ಸಶ್ರಮ ಶಿಕ್ಷೆಯಾಯಿತು. ಅಹ್ಮದನಗರದ ವಿಸಾಪುರ ಜೇಲಿನಲ್ಲಿ ಇವರನ್ನು ಇಡಲಾಯಿತು. &lt;br /&gt;&lt;br /&gt;ವಿಸಾಪುರದಿಂದ ಬಂದ ಬಳಿಕ ಜೋಶಿಯವರು ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಮತ್ತೆ ವಿದ್ಯಾರ್ಥಿಯಾಗಿ ಸೇರಿಕೊಂಡರು. ೧೯೩೪ರಲ್ಲಿ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೩೮ರಲ್ಲಿ ಕರ್ನಾಟಕ ಕಾ^ಲೇಜಿನಿಂದ  ಬಿ.ಏ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ಬಳಿಕ ಕಾಂದೀವಲಿಯ ಶಾರೀರಕ ಶಿಕ್ಷಣ ಕಾ^ಲೇಜಿನಲ್ಲಿ ಒಂದು ವರ್ಷ ಕಲಿತು, ೧೯೩೯ರಲ್ಲಿ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಶಾರೀರಕ ಶಿಕ್ಷಕರೆಂದು ಕೆಲಸ ಮಾಡಹತ್ತಿದರು.&lt;br /&gt;&lt;br /&gt;೧೯೪೨ರಲ್ಲಿ ಗಾಂಧೀಜಿಯವರ “Quit India” ಘೋಷಣೆ ಹೊರಬಿದ್ದಿತು. ಜೋಶಿಯವರು ಮತ್ತೇ ಅಂಕೋಲೆಗೆ ಮರಳಿದರು. &lt;br /&gt;ಅಲ್ಲಿ ಶ್ರೀ ದಯಾನಂದ ಪ್ರಭು ಹಾಗೂ ಬೀರಣ್ಣ ನಾಯಕರ ಜೊತೆಗೆ ಹೋರಾಟದ ರೂಪು ರೇಷೆಗಳು ಸಿದ್ಧವಾದವು. ಬ್ರಿಟಿಶ ಆಡಳಿತದ ಸಂಪರ್ಕಜಾಲವನ್ನು ಕಡಿದು ಹಾಕುವ ಉದ್ದೇ